ಬಿಜೆಪಿಯಲ್ಲಿ ( BJP ) ವಿಪಕ್ಷ ನಾಯಕN (Opposition leader ) ಹಾಗೂ ರಾಜ್ಯಧ್ಯಕ್ಷ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಕಾಡೋದಕ್ಕೆ ಪ್ರಾರಂಭವಾಗಿದೆ. ಇದರ ನಡುವೆ ಬಿಜೆಪಿಯ ಹಲವು ನಾಯಕರು ಈಗಾಗ್ಲೆ ನಮ್ಮನ್ನೆ ವಿಪಕ್ಷ ನಾಯಕನ್ನನ್ನಾಗಿ ಆಯ್ಕೆ ಮಾಡಬೇಕು ಎಂದು ಲಾಭಿಯನ್ನ ನಡೆಸೋದಕ್ಕೆ ಪ್ರಾರಂಭ ಮಾಡಿದ್ದಾರೆ. ಆದರೆ ಇದ್ಯಾವುದು ಕೂಡ ಬಿಜೆಪಿಯಲ್ಲಿ ಈಗ ನಡೆಯುತ್ತಿಲ್ಲ. ಯಾಕಂದ್ರೆ ಸದ್ಯದ ಮಾಹಿತಿಯ ಪ್ರಕಾರ ಕೇಂದ್ರದ ನಾಯಕರ ( Central Leaders ) ಲೆಕ್ಕಚಾರವೇ ಬೇರೆಯದ್ದಾಗಿದೆ.
ಹೌದು ಲೋಕಸಭಾ ಅಧಿವೇಶನದಲ್ಲಿ ( Parliament Session ) ಬ್ಯುಸಿಯಾಗಿದ್ದ ಕೇಂದ್ರ ಬಿಜೆಪಿ ನಾಯಕರು, ಅಧಿವೇಶನ ಮುಗಿಯುತ್ತಿದ್ದಂತೆ ಲೋಕಸಭೆ ಹಾಗೂ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆಗೆ ( Election ) ಬೇಕಾದ ತಯಾರಿಯನ್ನ ಈ ತಿಂಗಳ ಅಂತ್ಯದೊಳಗೆ ಆರಂಭಿಸಲಿದ್ದಾರೆ. ಈ ಅವಧಿಯ ಮಧ್ಯದಲ್ಲಿ ಕರ್ನಾಟಕದ ಮುಂದಿನ ವಿಪಕ್ಷ ನಾಯಕ ಯಾರು ಹಾಗೂ ರಾಜ್ಯಧ್ಯಕ್ಷ ಯಾರಾಗಬೇಕು ಅನ್ನೋದನ್ನ ಅತೀ ಶೀಘ್ರದಲ್ಲಿ ನಿರ್ಧಾರ ಮಾಡುವ ಸಾಧ್ಯತೆ ಇದೆ ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗ್ತಾ ಇದೆ.
ಲೋಕಸಭೆ ಅಧಿವೇಶನ ಸಮಯದಲ್ಲೇ ಕೇಂದ್ರ ನಾಯಕರನ್ನು ಭೇಟಿ ಮಾಡಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಈಗ ಕೇಂದ್ರದ ನಾಯಕರು ಇದೇ ಉತ್ತರವನ್ನ ನೀಡಿದ್ದಾರೆ ಎನ್ನಲಾಗುತ್ತಿದೆ. ಬಸವರಾಜ ಬೊಮ್ಮಾಯಿ ಭೇಟಿ ವೇಳೆ ಆಗಸ್ಟ್ 15ರ ಬಳಿಕ ವಿಧಾನಸಭೆ ವಿಪಕ್ಷ ನಾಯಕನನ್ನು ಆಯ್ಕೆ ಮಾಡುವ ಭರವಸೆಯನ್ನ ನೀಡಿದ್ದಾರೆ ಎನ್ನಲಾಗುತ್ತಿದೆ.
ವಿಪಕ್ಷ ನಾಯಕನ ಆಯ್ಕೆ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಹೊಸಬರ ನೇಮಕಕ್ಕೆ ಚಿಂತನೆ ನಡೆಸಲಾಗಿದ್ದು, ಆ ಮೂಲಕ ಮುಂಬರುವ ಲೋಕಸಭಾ ಚುನಾವಣೆಗೂ ರೂಪುರೇಷೆ ಸಿದ್ದಪಡಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷದ ವಿರುದ್ಧ ಸಂಘಟಿತ ಹೋರಾಟ ನಡೆಸಲು ಪಕ್ಷದ ನಾಯಕರಿಗೆ ಸೂಚನೆ ಸೂಚನೆಯನ್ನ ಕೂಡ ನೀಡಲಾಗಿರುವ ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್ ಶಾಸಕರ ಅಸಮಾಧಾನ, ಕೃಷಿ ಅಧಿಕಾರಿಗಳು ಸಚಿವ ಚಲುವರಾಯಸ್ವಾಮಿ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆದಿರುವ ವಿಚಾರಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹಣಿಯಲು ರಾಜ್ಯ ಬಿಜೆಪಿಗೆ ರಣತಂತ್ರ ರೂಪಿಸಲು ಕಾಂಗ್ರೆಸ್ ನಾಯಕರಿಗೆ ಸಲಹೆಯನ್ನ ಕೂಡ ನೀಡಲಾಗಿದೆ ಎನ್ನಲಾಗುತ್ತಿದೆ.