• Home
  • About Us
  • ಕರ್ನಾಟಕ
Tuesday, January 13, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಸಾಮಾಜಿಕ ವ್ಯಾಧಿಗೆ ಕಾನೂನಾತ್ಮಕ ಚಿಕಿತ್ಸೆ ಸಾಧ್ಯವೇ ?-ಭಾಗ 2

ನಾ ದಿವಾಕರ by ನಾ ದಿವಾಕರ
July 17, 2023
in ಅಂಕಣ, ಅಭಿಮತ
0
ಸಾಮಾಜಿಕ ವ್ಯಾಧಿಗೆ ಕಾನೂನಾತ್ಮಕ ಚಿಕಿತ್ಸೆ ಸಾಧ್ಯವೇ ? – ಭಾಗ 1
Share on WhatsAppShare on FacebookShare on Telegram

ಸಹಬಾಳ್ವೆಯ ಸಂಯಮ  ಕಳೆದುಕೊಂಡಿರುವ ಸಮಾಜದಲ್ಲಿ ʼ ಸೌಜನ್ಯ ʼ ಕಾಣುವುದಾದರೂ ಹೇಗೆ ?

ADVERTISEMENT

ಸಾಮಾಜಿಕ ಅಂತಃಸಾಕ್ಷಿಯ ಪ್ರಶ್ನೆ

ಒಂದು ಪ್ರಬುದ್ಧ ಸಮಾಜ ನೋಡಬೇಕಿರುವುದು ಈ ಪಾತಕ ಕೃತ್ಯಗಳನ್ನು ಸೃಷ್ಟಿಸುವಂತಹ ವಾತಾವರಣದತ್ತ ಅಲ್ಲವೇ ? ಹತ್ಯೆಗಿಂತಲೂ ಘೋರವಾಗಿ ಮೃತ ದೇಹವನ್ನು ತುಂಡರಿಸಿ ಎಸೆಯುವ ಪ್ರಕರಣಗಳು ದೆಹಲಿಯ ಶ್ರದ್ಧಾ ವಾಲ್ಕರ್‌ ಘಟನೆಯ ನಂತರ ಹೆಚ್ಚಾಗುತ್ತಿರುವುದನ್ನು ಅತಿಸೂಕ್ಷ್ಮತೆಯಿಂದ ಗಮನಿಸಬೇಕಾದ ಜವಾಬ್ದಾರಿ ಸಮಾಜದ ಮೇಲಿದೆ. ಹಾಗೆಯೇ ಯುವ ಸಮೂಹವು ಮಾರಣಾಂತಿಕ ಆಯುಧಗಳನ್ನು ಬಳಸುವ ಪ್ರವೃತ್ತಿಯೂ ಹೆಚ್ಚಾಗುತ್ತಿರುವುದನ್ನೂ ಗಮನಿಸಬೇಕಿದೆ.  ಸಾಂಸ್ಥಿಕವಾಗಿ ಒಂದು ನಿರ್ದಿಷ್ಟ ಧರ್ಮದ ಉಳಿವಿಗಾಗಿ ಹೋರಾಡಲು ಸಜ್ಜಾಗುವ ಯುವ ಮನಸುಗಳು ಅದೇ ಧರ್ಮದ ತಾತ್ವಿಕ ಮೂಲ ನೆಲೆಗಳನ್ನು ಉಲ್ಲಂಘಿಸುತ್ತಿರುವುದನ್ನು ಕಂಡೂ ಕಾಣದಂತೆ ಸಮಾಜ ಮೌನವಾಗಿದೆ. ಈ ಯುವ ಮನಸುಗಳನ್ನು ನೆಟ್ಟಾರು, ಇದ್ರಿಸ್‌ ಪಾಷ, ಹರ್ಷ, ವೇಣುಗೋಪಾಲ್‌ ಅವರ ಹತ್ಯೆಗಳ ಹಿಂದೆ ಗುರುತಿಸಬಹುದಾಗಿದೆ. ಇಂತಹ ಒಂದು ವಿಕೃತ ಮನಸ್ಥಿತಿಯಿಂದಲೇ ಇಡೀ ಸಮಾಜವೇ ಹಿಂಸಾತ್ಮಕ ಮಾರ್ಗ ಹಿಡಿಯುವ ವಿದ್ಯಮಾನಗಳನ್ನು ಸಮಕಾಲೀನ ಚರಿತ್ರೆಯಲ್ಲೇ ಜಗತ್ತಿನ ಇತರೆಡೆ ಗುರುತಿಸಬಹುದು.

ಧರ್ಮ ರಕ್ಷಣೆಗಾಗಿ ನಡೆಯುವ ಹತ್ಯೆಗಳನ್ನು ಸಮರ್ಥಿಸಿಕೊಳ್ಳುವ ಯಾವುದೇ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯಗಳನ್ನೂ ಸಹ ಸಮರ್ಥಿಸಿಕೊಳ್ಳಲು ಅದೇ ಸಾಂಸ್ಥಿಕ ಧರ್ಮದ ನೆರಳಲ್ಲೇ ಸೃಷ್ಟಿಯಾಗುವ ಪಿತೃಪ್ರಧಾನತೆ ಮತ್ತು ಪುರುಷಾಧಿಪತ್ಯವೂ ನೆರವಾಗುತ್ತದೆ. ಹಾಗಾಗಿಯೇ ನಾವು ಯಾವುದೇ ಕೋಮುಗಲಭೆಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣಗಳನ್ನೂ ಹೆಚ್ಚಾಗಿ ಕಾಣುತ್ತೇವೆ. ಬಿಲ್ಕಿಸ್‌ ಬಾನೋ ಪ್ರಕರಣದಲ್ಲಿ ಪಾತಕಿಗಳಿಗೆ ಸಮ್ಮಾನ ನೀಡುವ ಸಮಾಜವೇ ಮತ್ತೊಂದೆಡೆ ಮಗದೊಂದು ರೂಪದಲ್ಲಿ ಸೌಜನ್ಯ ಪ್ರಕರಣದಲ್ಲೂ ಜೀವಂತವಾಗಿರುತ್ತದೆ. ಪಿತೃಪ್ರಧಾನತೆ, ಸಾಮಾಜಿಕ-ಆರ್ಥಿಕ ಅಂತಸ್ತು ಮತ್ತು ಜಾತಿ-ಧರ್ಮ ಶ್ರೇಷ್ಠತೆಯ ತಾತ್ವಿಕ ಚಿಂತನೆಗಳೇ ದುರ್ಬಲರ ಅಥವಾ ಅಮಾಯಕರ ಮೇಲೆ ನಡೆಯುವ ಎಲ್ಲ ರೀತಿಯ ಅನ್ಯಾಯಗಳ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ಬಾಹ್ಯ ಸಮಾಜವೂ ಸಹ ಈ ಪ್ರವೃತ್ತಿಗೆ ಕುರುಡಾಗಿರುತ್ತದೆ.

ಇಂದಿಗೂ ನಮ್ಮ ಸಮಾಜದಲ್ಲಿ ಕಾಣಬಹುದಾದ ಜೀವಪರ ಮನಸುಗಳನ್ನು ಕಾಡಬೇಕಿರುವುದು ಈ ಪ್ರವೃತ್ತಿಯ ಉಗಮ, ಪೋಷಣೆ ಮತ್ತು ಅದರ ಹಿಂದಿನ ವಿಕೃತಿಗಳು. ಸಾಂಸ್ಥಿಕ ಧರ್ಮ ಅಥವಾ ಜಾತಿಯ ನೆಲೆಗಳನ್ನು ಸಂರಕ್ಷಿಸುವ ನೆಪದಲ್ಲಿ ಯುವ ಮನಸುಗಳನ್ನು ಹಿಂಸೆಗೆ ಪ್ರೇರೇಪಿಸುವುದರಿಂದ  ಒಂದು ಸಮಾಜ ತನ್ನ ಒಡಲನ್ನೇ ಸೀಳುವಂತಹ ದೊಡ್ಡ ಪಡೆಗಳನ್ನೇ ಸೃಷ್ಟಿಸಿಬಿಡುತ್ತದೆ. ಈ ಬೆಳವಣಿಗೆಯನ್ನು ನಿರ್ದಿಷ್ಟ ಸೈದ್ಧಾಂತಿಕ ಚೌಕಟ್ಟುಗಳಲ್ಲಿಟ್ಟು ನೋಡುವುದರ ಬದಲು ವಿಶಾಲ ಸಮಾಜದ ನೆಲೆಯಲ್ಲಿಟ್ಟು ಪರಾಮರ್ಶಿಸಿದಾಗ ನಮಗೆ ಈ ಎಲ್ಲ ಪಾತಕಿ ಕೃತ್ಯಗಳು ಒಂದು ಸಾಮಾಜಿಕ ವ್ಯಾಧಿಯಂತೆ ಕಾಣುತ್ತವೆ. ಈ ವ್ಯಾಧಿಯು ಉಲ್ಬಣಿಸುವಂತೆ ಮಾಡುವ ದುಷ್ಟ ಶಕ್ತಿಗಳು ಇರುವಂತೆಯೇ ಶಮನ ಮಾಡುವ ಮಾನವೀಯ ಮನಸುಗಳೂ ಇದ್ದೇ ಇವೆ. ಈ ಮಾನವೀಯ ಮನಸುಗಳು ತಮ್ಮ ಸಾಮುದಾಯಿಕ ಅಸ್ಮಿತೆಗಳನ್ನು ಕೊಡವಿಕೊಂಡು ಸಮಷ್ಟಿ ಪ್ರಜ್ಞೆಯೊಂದಿಗೆ ಮುನ್ನಡೆದಾಗ, ವ್ಯಾಧಿಯು ವ್ಯಸನವಾಗಿ ಪರಿಣಮಿಸುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ.

ಚಿಕಿತ್ಸಕ ಸಮಾಜದ ಅಗತ್ಯತೆ

ಸಾಮಾಜಿಕ ಅಪರಾಧಗಳನ್ನು ಸಾಂಸ್ಕೃತಿಕ ಚೌಕಟ್ಟಿನಲ್ಲಿಟ್ಟು ನೋಡುವುದರ ಬದಲು ನಮ್ಮ ನಿತ್ಯ ಬದುಕಿನ ವಾತಾವರಣದ ನಡುವೆಯೇ ಗುರುತಿಸಲು ಪ್ರಯತ್ನಿಸಿದಾಗ ಸಮಾಜದ ಆಂತರ್ಯದೊಳಗೇ ನಮಗೆ ಹಲವು ವಿಕೃತಿಗಳು ಕಂಡುಬರುತ್ತವೆ. ವಿಶಾಲ ನೆಲೆಯಲ್ಲಿ ಈ ವಿಕೃತಿಗಳನ್ನು ಪುರುಷಾಧಿಪತ್ಯ, ಮತಾಂಧತೆ, ಜಾತಿ ಶ್ರೇಷ್ಠತೆ ಮುಂತಾಗಿ ಗುರುತಿಸಬಹುದಾದರೂ, ಮಾನವ ಸಮಾಜವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಸದಸ್ಯನಲ್ಲೂ ಅಂತರ್ಗತವಾಗಿರಬಹುದಾದ ಮೌಲ್ಯಗಳನ್ನು ಉದ್ಧೀಪನಗೊಳಿಸುವ ಪ್ರಯತ್ನಗಳು ವರ್ತಮಾನದ ತುರ್ತು. ಈ ಮಾನವೀಯ ಮೌಲ್ಯಗಳಿಗೆ ಯಾವುದೇ ಧರ್ಮ-ಸಿದ್ಧಾಂತ-ತತ್ವಗಳಿಗಿಂತಲೂ ಹೆಚ್ಚಾಗಿ ನೆರವಾಗುವುದು ಮನುಜ ಪ್ರೀತಿ ಮತ್ತು ಜೀವಪರ ಚಿಂತನೆ. ಈ ಮೌಲ್ಯಗಳ ಬೀಜಗಳನ್ನು ನೆಡುವ ಕೆಲಸವನ್ನು ಇಡೀ ಸಮಾಜವೇ ಮಾಡಬೇಕಿದೆ.

ಕಾನೂನು ಮತ್ತು ಆಡಳಿತ ವ್ಯವಸ್ಥೆ ಪ್ರತಿಯೊಂದು ಅಪರಾಧವನ್ನೂ ಸಾಕ್ಷ್ಯಾಧಾರಗಳ ನೆಲೆಯಲ್ಲಿ ನಿಷ್ಕರ್ಷೆ ಮಾಡುತ್ತದೆ. ಅಲ್ಲಿ ಆರೋಪಿಗಳು ಅಪರಾಧಿಗಳಾಗಿ ಸಾಬೀತಾಗುವ ಸುದೀರ್ಘ ಪ್ರಕ್ರಿಯೆಯಲ್ಲಿ ಸತ್ಯ ಎಲ್ಲೊ ಮರೆಯಾಗಿಹೋಗುತ್ತದೆ. ಸೌಜನ್ಯ ಪ್ರಕರಣ ಇದನ್ನು ನಮ್ಮೆದುರು ಇಟ್ಟಿದೆ. ಆದರೆ ಸದಾ ಕಣ್ತೆರೆದಿರುವ ಸಮಾಜಕ್ಕೆ ಈ ಪಾತಕ ಕೃತ್ಯಗಳು ಏಕೆ ಸಂಭವಿಸುತ್ತವೆ ಎಂದು ಖಚಿತವಾಗಿಯೂ ತಿಳಿದಿರುತ್ತದೆ. ಸಾಮಾಜಿಕ ವ್ಯಾಧಿ ಎಂದೇ ಗುರುತಿಸಬಹುದಾದ ಈ ವಿಕೃತ ಮನಸ್ಥಿತಿಗೆ ಕಾರಣಗಳೂ ತಿಳಿದಿರುತ್ತದೆ. ಇದನ್ನು ಶಮನ ಮಾಡಲು ಕಾನೂನಾತ್ಮಕ ಮದ್ದು ಅರೆಯಲಾಗುವುದಿಲ್ಲ. ಸಮಾಜವೇ ಮದ್ದು ಕಂಡುಕೊಳ್ಳಬೇಕಿದೆ. ರಾಜಕೀಯ-ಸೈದ್ಧಾಂತಿಕ ಅಸ್ಮಿತೆ-ಒಲವುಗಳಿಂದಾಚೆಗೆ ನೋಡುವ ದಾರ್ಷ್ಟ್ಯವನ್ನು ಸಮಾಜವೊಂದು ಬೆಳೆಸಿಕೊಳ್ಳುವುದೇ ಆದರೆ ಹಾದಿ ತಪ್ಪುತ್ತಿರುವ ಯುವ ಸಮೂಹವನ್ನು, ಮೌಲಿಕವಾಗಿ ಅವನತಿಯತ್ತ ಸಾಗುತ್ತಿರುವ ಸಮಾಜವನ್ನು ಸರಿಪಡಿಸಲು ಸಾಧ್ಯವಾದೀತು.ಯಾರಿಗೂ ಸಲ್ಲದವಳಾಗಿರುವ ಸೌಜನ್ಯ ಬರ್ಬರ ಅತ್ಯಾಚಾರ-ಹತ್ಯೆಗೀಡಾದರೂ ಯಾವುದೇ ಅಸ್ಮಿತೆಗಳ ಸೋಂಕಿಲ್ಲದೆ ಅನಾಥೆಯಾಗಿಯೇ ಉಳಿದಿರುವುದೇ ನಮ್ಮ ಸಾಮಾಜಿಕ ವ್ಯಾಧಿಯ ಸಂಕೇತವಾಗಿಯೂ ಕಾಣುತ್ತದೆ. ಕಳೆದ ಒಂದು ದಶಕದಲ್ಲಿ ಧಾನಮ್ಮಳನ್ನೂ ಒಳಗೊಂಡಂತೆ ಹತ್ತು ಹಲವು ಜೀವಗಳು ಈ ವ್ಯಾಧಿಗೆ ಬಲಿಯಾಗಿವೆ. ಚಿಕಿತ್ಸಕ ಗುಣ ಹೊಂದಿರುವ ಯಾವುದೇ ಚಿಂತನಾ ವಾಹಿನಿ ಅಥವಾ ಸಮಾಜ ಈ ವ್ಯಾಧಿಯನ್ನು ಗುಣಪಡಿಸಲು ಸಾಧ್ಯ. ಆದರೆ ಕಲುಷಿತಗೊಂಡಿರುವ ಮನಸುಗಳಲ್ಲಿ ಮಾನವತೆಯ ಮೌಲ್ಯಗಳನ್ನು ಬಿತ್ತುವ, ಸಹಬಾಳ್ವೆ ಮತ್ತು ಸಮನ್ವಯದ ಸಂಯಮವನ್ನು ಮೂಡಿಸುವ ಬಹುದೊಡ್ಡ ಜವಾಬ್ದಾರಿಯೊಂದಿಗೆ ಇದನ್ನು ನಿಭಾಯಿಸಬೇಕಾಗುತ್ತದೆ. ಒಂದು ಸುಶಿಕ್ಷಿತ-ಆಧುನಿಕ-ನಾಗರಿಕತೆಯುಳ್ಳ ಸಮಾಜವಾಗಿ ನಾವು ಇದಕ್ಕೆ ಸಜ್ಜಾಗಿದ್ದೇವೆಯೇ ? ಉತ್ತರ ಶೋಧಿಸಬೇಕಿದೆ.

Tags: Indian Lawlaw and order situationsocial activistsocial Justicesocial problems
Previous Post

ಬಾಪೂಜಿ ಸೇವಾ ಕೇಂದ್ರದ ಮೂಲಕ ಗೃಹಜ್ಯೋತಿಗೆ 1 ಲಕ್ಷ ಜನ ನೋಂದಣಿ

Next Post

ಒಂದೇ ದಿನದಲ್ಲಿ ಹೆಚ್ಚು ತೆರಿಗೆ ಸಂಗ್ರಹಿಸಿದ ಗ್ರಾ.ಪಂ. ಸಿಬ್ಬಂದಿ, ಸಚಿವ ಪ್ರಿಯಾಂಕ್‌ ಖರ್ಗೆ ಶ್ಲಾಘನೆ

Related Posts

Top Story

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

by ಪ್ರತಿಧ್ವನಿ
January 13, 2026
0

ಬೆಂಗಳೂರು: ನಾನು ಎಂಎಲ್ಎ ಆದ ಮೇಲೆ ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಯಾವ ಜಾತಿ ಗಲಭೆ, ಜಾತಿ ರಾಜಕಾರಣ, ಪೊಲೀಸರ ಮೇಲೆ ಒತ್ತಡ, ಒತ್ತಾಯ ಮಾಡಿಲ್ಲ.ಕುವೆಂಪುರವರು ಹೇಳಿದಂತೆ ನಮ್ಮ...

Read moreDetails

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

January 13, 2026
ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

January 13, 2026
ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

January 12, 2026
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ: ಡಿ.ಕೆ. ಶಿವಕುಮಾರ್

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ: ಡಿ.ಕೆ. ಶಿವಕುಮಾರ್

January 12, 2026
Next Post
ಒಂದೇ ದಿನದಲ್ಲಿ ಹೆಚ್ಚು ತೆರಿಗೆ ಸಂಗ್ರಹಿಸಿದ ಗ್ರಾ.ಪಂ. ಸಿಬ್ಬಂದಿ, ಸಚಿವ ಪ್ರಿಯಾಂಕ್‌ ಖರ್ಗೆ ಶ್ಲಾಘನೆ

ಒಂದೇ ದಿನದಲ್ಲಿ ಹೆಚ್ಚು ತೆರಿಗೆ ಸಂಗ್ರಹಿಸಿದ ಗ್ರಾ.ಪಂ. ಸಿಬ್ಬಂದಿ, ಸಚಿವ ಪ್ರಿಯಾಂಕ್‌ ಖರ್ಗೆ ಶ್ಲಾಘನೆ

Please login to join discussion

Recent News

Top Story

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

by ಪ್ರತಿಧ್ವನಿ
January 13, 2026
Top Story

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

by ಪ್ರತಿಧ್ವನಿ
January 13, 2026
ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!
Top Story

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

by ಪ್ರತಿಧ್ವನಿ
January 13, 2026
ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ
Top Story

ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 13, 2026
ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
Top Story

ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
January 13, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

January 13, 2026

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

January 13, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada