ಬೆಂಗಳೂರು : ಇಂಧನ ಸಚಿವ ಕೆ.ಜೆ ಜಾರ್ಜ್ ಇಂದು ಶಕ್ತಿ ಯೋಜನೆಯ ಕಾರ್ಯಾರಂಭ ಕಾರ್ಯಕ್ರಮದಲ್ಲಿ ಭಾಗಿಯಾದ್ರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಾರಿಗೆ ಮತ್ತ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಇತರೆ ಸಚಿವರು ಹಾಗೂ ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
![](https://pratidhvani.com/wp-content/uploads/2023/06/WhatsApp-Image-2023-06-11-at-2.13.33-PM-1-1024x768.jpeg)
ವಿಧಾನಸೌಧದ ಆವರಣದಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಸೌಕರ್ಯವನ್ನು ಒದಗಿಸುವ ಬಹುನಿರೀಕ್ಷಿತ ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು. ಶಕ್ತಿ ಯೋಜನೆ ಲೋಗೋ, ಸ್ಟಿಕರ್ ಹಾಗೂ ಕಾರ್ಡ್ಗಳನ್ನು ಅನಾವರಣಗೊಳಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಯೋಜನೆಗೆ ಚಾಲನೆಗೆ ನೀಡಿದ್ರು.
![](https://pratidhvani.com/wp-content/uploads/2023/06/WhatsApp-Image-2023-06-11-at-2.13.32-PM-1-1024x573.jpeg)
ಈ ಮೂಲಕ ಕಾಂಗ್ರೆಸ್ ತನ್ನ ಮೊದಲ ಗ್ಯಾರಂಟಿಯನ್ನು ಜನರಿಗೆ ತಲುಪಿಸಿದಂತಾಗಿದೆ. ನುಡಿದಂತೆ ನಡೆಯುತ್ತೇವೆ ಎಂದು ಹೇಳಿರುವ ಕಾಂಗ್ರೆಸ್ ಸರ್ಕಾರ ತನ್ನ ಮೊದಲ ಮಾತು ಉಳಿಸಿಕೊಂಡಿದ್ದು ಶೀಘ್ರದಲ್ಲಿಯೇ ಉಳಿದ ನಾಲ್ಕು ಯೋಜನೆಗಳಿಗೆ ಚಾಲನೆ ನೀಡಲಿದೆ.
![](https://pratidhvani.com/wp-content/uploads/2023/06/WhatsApp-Image-2023-06-11-at-2.13.33-PM-1024x768.jpeg)