ಮಾಜಿ ಸಿಎಂ ಸಿದ್ದರಾಮಯ್ಯ(siddaramaiah) ಮತ್ತೆ ಸಿಎಂ(CM) ಆಗುತ್ತಾರೆ ಅನ್ನೋದು ಕನಸು ಅಂತ ಮಾಧ್ಯಮ ಸಂವಾದದಲ್ಲಿ BJP ಅಭ್ಯರ್ಥಿ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ. ಮೈಸೂರಿನ ಪತ್ರಿಕಾಭವನದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಅದು ಕಾಂಗ್ರೆಸ್ ಪಕ್ಷ, ಸಿದ್ದರಾಮಯ್ಯರನ್ನು ಸಿಎಂ ಮಾಡುವುದಿಲ್ಲ. ಅಮಿತ್ ಶಾ(amith shah) ಹೇಳಿದ್ದಾರೆ, ಸೋಮಣ್ಣಗೆ ದೊಡ್ಡ ಸ್ಥಾನ ಕೊಡುತ್ತೇವೆ ಅಂತಾ.
ಸಿದ್ದರಾಮಯ್ಯನವರೇ ಪರಮೇಶ್ವರ್, ಖರ್ಗೆ ಅವರಿಗೆ ಏನು ಮಾಡಿದ್ರಿ..? ಪ್ರಚಾರ ನಡೆಸಲು ಪರಮೇಶ್ವರ್, ಖರ್ಗೆ, ಡಿಕೆ ಶಿವಕುಮಾರ್(DK shivakumar) ಏಕೆ ಬಂದಿಲ್ಲ..? ಸಿಎಂ ಆಗುವ ಭ್ರಮೆಯಲ್ಲಿ ನಾನಿಲ್ಲ, ಅಭಿವೃದ್ಧಿ ಅಷ್ಟೇ ನನಗೆ ಮುಖ್ಯ. ಶಿವರಾಜ್ ಕುಮಾರ್,(shivaraj kumar) ರಾಜ್ ಕುಟುಂಬದ ಬಗ್ಗೆ ಗೌರವ ಇದೆ. ಆದ್ರೆ, ದುನಿಯಾ ವಿಜಿ, ಲೂಸ್ ಮಾದ, ರಮ್ಯಮ್ಮ ಇವರೆಲ್ಲಾ ಏಕೆ..? ಪ್ರಚಾರಕ್ಕೆ ಬರುವುದಿಲ್ಲ ಅಂದಿರಿ..? ಈಗ ಅವರನೆಲ್ಲಾ ಕರೆದು ತಂದ್ರಿ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ನನಗೆ ಅವಕಾಶ ಕೊಡಿ ಅಂತ ವಿ.ಸೋಮಣ್ಣ(V somanna) ಮಾಜಿ ಸಿಎಂ ಸಿದ್ದರಾಮಯ್ಯನವರ(siddaramaiah) ವಿರುದ್ಧ ಹರಿಹಾಯ್ದರು.