ಹುಬ್ಬಳ್ಳಿ : ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಕಳೆದ ಕೆಲವು ದಿನಗಳಿಂದ ಟ್ರೋಲಿಗರ ಬಾಯಿಗೆ ಆಹರವಾಗುತ್ತಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಮತಯಾಚನೆ ಮಾಡಿದ ಶಿವಣ್ಣ ಟ್ರೋಲಿಗರಿಗೆ ಖಡಕ್ ಉತ್ತರ ನೀಡಿದ್ದಾರೆ.

ಜಗದೀಶ್ ಶೆಟ್ಟರ್ ಪರವಾಗಿ ಮಾಡಿದ ಕ್ಯಾಂಪೇನ್ಗೆ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ನಾನು ಪ್ರಚಾರ ಮಾಡುತ್ತಿರುವ ಬಗ್ಗೆ ಟ್ರೋಲ್ ಮಾಡುವವರಿಗೆ ಹೇಳೋಕೆ ನನಗೇನೂ ಇಲ್ಲ. ಆದರೆ ಅವರನ್ನೊಮ್ಮೆ ಅವರೇ ಪ್ರಶ್ನೆ ಮಾಡಿಕೊಳ್ಳಲಿ ಎಂದಿದ್ದಾರೆ.
ಇಂದು ರೋಡ್ಶೋನಲ್ಲಿ ಇಷ್ಟೆಲ್ಲ ಜನ ಬಂದಿದ್ದರು. ಅವೆಲ್ಲ ಟ್ರೋಲ್ ಮಾಡಲು ಬಂದಿದ್ದರಾ..? ಅಲ್ಲಿದ್ದವರು ಕೇವಲ ಕಾಂಗ್ರೆಸ್ನವರು ಮಾತ್ರವಲ್ಲ, ಬಿಜೆಪಿ , ಪಕ್ಷೇತರ ಎಲ್ಲರೂ ಇದ್ದರು . ಪ್ರತಿಯೊಬ್ಬ ವ್ಯಕ್ತಿಗೂ ಅವನದ್ದೇ ಆದ ವ್ಯಕ್ತಿತ್ವ ಇರುತ್ತದೆ. ಯಾರನ್ನೋ ದ್ವೇಷಿಸಬೇಕು ಅಂತಾ ನಾವಿಲ್ಲಿ ಬಂದಿಲ್ಲ ಎಂದು ಹೇಳಿದ್ದಾರೆ.