ದೇವನಹಳ್ಳಿ : ರಾಜ್ಯದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ಅಲರ್ಟ್ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಎಂಟ್ರಿ ನೀಡಿದ್ದಾರೆ. ಇಂದು ದೇವನಹಳ್ಳಿಯಲ್ಲಿ ರೋಡ್ ಶೋ ನಡೆಸಬೇಕಿದ್ದ ಬಿಜೆಪಿ ಚಾಣಕ್ಯನಿಗೆ ವರುಣ ಅಡ್ಡಿ ಮಾಡಿದ್ದು ರೋಡ್ ಶೋ ರದ್ದಾಗಿದೆ.
ಇನ್ನು ಇದರ ನಡುವೆಯೇ ಅಮಿತ್ ಶಾ ರೋಡ್ ಶೋ ಕಾರ್ಯಕ್ರಮಕ್ಕೆ ಆಗಮಿಸಿದ್ದವರ ವಾಹನ ಅಪಘಾತಕ್ಕೆ ಒಳಗಾದ ಪರಿಣಾಮ 11 ಮಂದಿ ಗಾಯಗೊಂಡ ಘಟನೆಯು ದೇವನಹಳ್ಳಿ ತಾಲೂಕಿನ ಕುರುಬರಕುಂಟೆ ಎಂಬಲ್ಲಿ ಸಂಭವಿಸಿದೆ.
ಅಪಘಾತಕ್ಕೆ ಒಳಗಾದವರು ದೊಡ್ಡಚೀಮನಹಳ್ಳಿ ಗ್ರಾಮದವರು ಎನ್ನಲಾಗಿದ್ದು ಇವರೆಲ್ಲ ಟಾಟಾ ಏಸ್ ವಾಹನದಲ್ಲಿ ರೋಡ್ ಶೋ ನೋಡಲು ಆಗಮಿಸಿದ್ದರು ಎನ್ನಲಾಗಿದೆ.