ಮೈಸೂರು : ಕಾಂಗ್ರೆಸ್ಗೆ ಗುಡ್ ಬೈ ಹೇಳಿ ಜೆಡಿಎಸ್ ಸೇರ್ಪಡೆಗೊಂಡ ಬಳಿಕ ರಘು ಆಚಾರ್ ಇದೇ ಮೊದಲ ಬಾರಿಗೆ ಹುಣಸೂರಿಗೆ ಭೇಟಿ ನೀಡಿದ್ದಾರೆ. ಶಾಸಕ ಜಿ.ಟಿ ದೇವೇಗೌಡ ಜೊತೆಯಲ್ಲಿ ಹುಣಸೂರಿಗೆ ಭೇಟಿ ನೀಡಿದ ರಘು ಆಚಾರ್ಗೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತ ಕೋರಿದ್ರು.
ಡಿ.ದೇವರಾಜ ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ದೇವರಾಜ ಅರಸು ಹುಟ್ಟೂರು ಕಲ್ಲಹಳ್ಳಿಗೆ ಭೇಟಿ ನೀಡಿದ ರಘು ಆಚಾರ್ ಡಿ.ದೇವರಾಜ ಅರಸು ಸಮಾಧಿಗೆ ಪೂಜೆ ಸಲ್ಲಿಸಿದರು. ಈ ವೇಳೆ ರಘು ಆಚಾರ್ ಬೆಂಬಲಿಗರು ಅವರ ಪರವಾಗಿ ಘೋಷಣೆ ಕೂಗಿದ್ರು.
ದೇವರಾಜು ಅರಸು ಕರ್ಮಭೂಮಿಯಲ್ಲಿ ನಿಂತು ಬೆಂಬಲಿಗರಿಗೆ ರಘು ಆಚಾರ್ ವಾರ್ನಿಂಗ್ ನೀಡಿದ್ದಾರೆ. ಇದು ನನ್ನ ಮರ್ಯಾದೆ ಪ್ರಶ್ನೆ, ಯಾರಾದ್ರೂ ಕಾಂಗ್ರೆಸ್ಗೆ ಮತ ಹಾಕಿದ್ರೆ ಅವರನ್ನು ಓಡಿಸಿಬಿಡ್ತೀನಿ ಅಂತಾ ಸಮುದಾಯದ ಜನತೆಗೆ ಎಚ್ಚರಿಕೆ ನೀಡಿದ್ರು. ದೇವರಾಜ ಅರಸುರಿಂದ ಮಾತ್ರ ಹಿಂದುಳಿದ ವರ್ಗದ ಜನರಿಗೆ ನ್ಯಾಯ ದೊರಕಿದೆ. ಇದೇ ಕಾರಣಕ್ಕೆ ನಾನು ಹಿಂದಿನಿಂದಲೂ ಇಲ್ಲಿಗೆ ಬಂದು ಹೋಗ್ತಿದ್ದೇನೆ. ಕಾಂಗ್ರೆಸ್ನಲ್ಲಿ ಈಬಾರಿ ಹಿಂದುಳಿದ ಜಾತಿಯ ಯಾರಿಗೂ ಟಿಕೆಟ್ ಸಿಕ್ಕಿಲ್ಲ. ನಾನು ಸದಾ ಹಿಂದುಳಿದ ವರ್ಗದ ಪರವಾಗಿ ನಿಂತವನು ಎಂದು ಹೇಳಿದ್ರು.