• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಬಿಜೆಪಿ ಕಚೇರಿ ಬಳಿಯೇ ನೂತನ ಕಚೇರಿ ತೆಗೆದ ಬಿಜೆಪಿ ಮುಖಂಡ ಆಯನೂರು ಮಂಜುನಾಥ್

Any Mind by Any Mind
April 6, 2023
in Uncategorized
0
ಬಿಜೆಪಿ ಕಚೇರಿ ಬಳಿಯೇ ನೂತನ ಕಚೇರಿ ತೆಗೆದ ಬಿಜೆಪಿ ಮುಖಂಡ ಆಯನೂರು ಮಂಜುನಾಥ್
Share on WhatsAppShare on FacebookShare on Telegram

ADVERTISEMENT

ಶಿವಮೊಗ್ಗ: ಏ.೦೬: ಟಿಕೆಟ್ ಕೊಡಲಿ ಬಿಡಲಿ, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಆಯನೂರು ಸಿದ್ಧರಾಗುದ್ದಾರೆ. ಬಿಜೆಪಿ ಕಚೇರಿ ಬಳಿಯಲ್ಲೇ ಆಯನೂರು ಮಂಜುನಾಥ್ ನೂತನ ಕಚೇರಿ ಆರಂಭಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಆಯನೂರು ಮಂಜುನಾಥ್ ಪುನಃ ಈಶ್ವರಪ್ಪ ವಿರುದ್ಧ ಹರಿಹಾಯ್ದರು. ಸರ್ಕಾರಿ ಕಚೇರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಬಂದ್ ಆಗಿದೆ. ಇದರಿಂದ ನನ್ನನ್ನು ಭೇಟಿ ಮಾಡಲು ಬರುವವರಿಗೆ ತೊಂದರೆ ಆಗುತ್ತಿತ್ತು. ಕಚೇರಿ ಸ್ಥಳಾಂತರಕ್ಕೆ
ಬಹಳ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಚುನಾವಣೆಗೆ ಸ್ಪರ್ಧಿಸುವ ತಮ್ಮ ನಿಲುವು ಸರಿಯಿದೆ. ಶಿವಮೊಗ್ಗದಲ್ಲಿ ಶಾಂತಿ ಮಾತ್ರವಲ್ಲ. ನೆಮ್ಮದಿಯ ಅಗತ್ಯವಿದೆ ಎಂದು ಹೇಳಿ ಬೆಂಬಲಿಸಿದ್ದಾರೆ.

ಇದು ನನ್ನ ನಿರ್ಧಾರವನ್ನು ಬೆಂಬಲಿಸಿದಂತಾಗಿದೆ. ನಾನು ಇನ್ನೂ 2-3 ದಿನ ಕಾಯುತ್ತೇನೆ. ರಾಷ್ಟ್ರೀಯ ಪಕ್ಷಗಳು ಯಾರ್ಯಾರನ್ನು ಕಣಕ್ಕಿಳಿಸಲಿವೆ ಎಂಬುದನ್ನು ನೋಡುತ್ತೇನೆ. ಮುಂದಿನ ಕಾರ್ಯತಂತ್ರ ರೂಪಿಸಲು ಇದರಿಂದ ನೆರವಾಗುತ್ತದೆ. ನಾನು ಯಾರನ್ನು ಎದುರಿಸಬೇಕು ಎಂಬುದು ನನಗೆ ಗೊತ್ತಾಗುತ್ತದೆ. ಮುಂದಿನ ಚುನಾವಣಾ ವ್ಯೂಹ ರಚಿಸಲು ನೆರವಾಗುತ್ತದೆ. ಶಿವಮೊಗ್ಗದ ಪ್ರತಿನಿಧಿಯಾಗಬೇಕು ಎಂಬ ನನ್ನ ಉತ್ಕಟ ಇಚ್ಛೆ ಈಡೇರಿಸಿಕೊಳ್ಳಲು ಅನುಕೂಲವಾಗುತ್ತೆ. ಶಿವಮೊಗ್ಗ ಅಭ್ಯರ್ಥಿ ಈಶ್ವರಪ್ಪರನ್ನು ಬದಲಾಯಿಸಬೇಕು ಎಂದು ನಾನು ಬಲವಾಗಿ ಆಗ್ರಹಿಸಿದ್ದೇನೆ. ಈ ನಿಲುವು ಪ್ರಕಟ ಮಾಡಿದ ಮೇಲೆ ಬಿಜೆಪಿಯ ಅನೇಕರು ನನ್ನ ನಿಲುವನ್ನು ಬೆಂಬಲಿಸಿದ್ದಾರೆ. ನನ್ನ ನಡೆ ಬಿಜೆಪಿಯಲ್ಲಷ್ಟೇ ಅಲ್ಲ. ಕಾಂಗ್ರೆಸ್‌ ನಲ್ಲೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನನಗೆ ಬಿಜೆಪಿಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂದು ಖಚಿತವಾಗಿದೆ. ಹಾಗಾಗಿ ಪಕ್ಷೇತರನಾಗಿ ಸ್ಪರ್ಧಿಸುವುದು ನಿಶ್ಚಿತ. ನನ್ನ ವಿರೋಧಿಗಳು ಹರ್ಷನ ಕೊಲೆಯನ್ನು ನನ್ನ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಆರೋಪಿಸುತ್ತಿದ್ದಾರೆ. ನಾನು ಹರ್ಷನ ಕೊಲೆ ಸಂದರ್ಭದಲ್ಲಿ ಏನು ಮಾಡಿದ್ದೇನೆ ಎಂದು ನನಗೆ ಮಾತ್ರ ಗೊತ್ತು.. ಅದನ್ನು ಬೇರೆಯವರಿಗೆ ಹೇಳುವ ಅಗತ್ಯವಿಲ್ಲ. ಸಮಯ ಬಂದಾಗ ಅದಕ್ಕೆ ಸೂಕ್ತ ಉತ್ತರ ನೀಡುತ್ತೇನೆ. ಎಮೋಷನಲ್ ಆಗಿ ತೀರ್ಮಾನ ಮಾಡಲಾಗುವುದಿಲ್ಲ. ಜನರ ಮತ್ತು ಬೆಂಬಲಿಗರ ಭಾವನೆಗೂ ಬೆಲೆ ನೀಡಬೇಕು ಎಂದರು.

ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜಕೀಯ ಕಣದಿಂದ ನಿವೃತ್ತಿ ವಿಚಾರ.

ಈಶ್ವರಪ್ಪರಿಗೆ ಅವರು ಸೂಚನೆ ನೀಡಿರಬಹುದು. ಈಶ್ವರಪ್ಪ ಸುಧೀರ್ಘ ರಾಜಕೀಯದಿಂದ ನಿವೃತ್ತರಾಗಲು ಇದು ಪ್ರೇರಣೆ ಇರಬಹುದು. ಕಾಂಗ್ರೆಸ್‌ ನಾಯಕರೊಂದಿಗೆ ನಡೆದ ಚರ್ಚೆಯನ್ನು ನಾನು ಈಗ ಹೇಳಲು ಆಗುವುದಿಲ್ಲ. ಗುಜರಾತ್ ಮಾಡೆಲ್, ಮೋದಿ ಮಾಡೆಲ್ ಕರ್ನಾಟಕದಲ್ಲಿ ಜಾರಿಗೆ ಬಂದರೆ ಯಾವುದೇ ಗೊಂದಲವಿಲ್ಲ.ವಯಸ್ಸು, ಆರೋಪ, ಕುಟುಂಬ ರಾಜಕಾರಣದಿಂದ ರಾಜಕೀಯ ಕ್ಷೇತ್ರ ಮುಕ್ತವಾಗಬೇಕು ಎಂಬುದು ಮೋದಿ ಹಾಗೂ ಮಾಡೆಲ್. ಆದರೆ, ಕರ್ನಾಟಕದಲ್ಲಿ ಅಂತಹ ಲಕ್ಷಣಗಳು ಕಾಣುತ್ತಿಲ್ಲ. ಕರ್ನಾಟಕದಲ್ಲಿ ಬೇರೆಯದೇ ಮಾಡಲ್ ಇದೆ ಅನಿಸುತ್ತಿದೆ. ಹಾಗಾಗಿ ಮೋದಿ ಬಗ್ಗೆ ಮಾತನಾಡುವ ಮೊದಲು ಕೆಲವೊಂದು ಅರ್ಹತೆ ಗಳಿಸಿಕೊಳ್ಳುವುದು ಒಳ್ಳೆಯದು

ರಾವಣ ಮತ್ತು ಇಂದ್ರಜಿತು ಇವರಲ್ಲಿ ಮೊದಲು ಯಾರು ಯುದ್ಧಕ್ಕೆ ಬರುತ್ತಾರೆ ಎಂದು ನೋಡುತ್ತಿದ್ದೇನೆ. ಈಶ್ವರಪ್ಪ ಅಥವಾ ಅವರ ಮಗ ಕಾಂತೇಶ ಇವರಲ್ಲಿ ಯಾರು ಬರುತ್ತಾರೇ ನೋಡಬೇಕು. ನನ್ನ ಸವಾಲನ್ನು ಸ್ವೀಕರಿಸುತ್ತಾರೆ ಎಂಬ ನಂಬಿಕೆ ನನಗಿದೆ. ಇಂದ್ರಜಿತುವಿನಂತೆ ಕಾಂತೇಶ್ ಸಹ ಮಾಯಾಯುದ್ಧದಲ್ಲಿ ಸಿದ್ಧಹಸ್ತರಾಗಿದ್ದಾರೆ.
ಅಪ್ಪ-ಮಕ್ಕಳ ಚುನಾವಣೆಗೆ ಸ್ಫರ್ಧೆ ಮಾಡದೇ ಇದ್ದರೆ, ನನಗೆ ಮೊದಲ ಸುತ್ತಿನ ಜಯ ಸಿಕ್ಕಂತಾಗುತ್ತದೆ ಎಂದ ಆಯನೂರು.

Tags: 2023 electionassembly electionAyanur ManjunathBJPBJP GovernmentbjpkarnatakaBSYElection CommissionHDKJDSKarnataka ElectionKS EshwarappaPancharatna YatreShivamoggasiddaramaiahState Electionನರೇಂದ್ರ ಮೋದಿ
Previous Post

ದರ್ಶನ್ ಧ್ರುವನಾರಾಯಣ್‌ಗೆ ಒಂದು ಲಕ್ಷ ರೂ. ದೇಣಿಗೆ ಕೊಟ್ಟ ಬೆಂಬಲಿಗರು

Next Post

ಏ.9ಕ್ಕೆ ಬಿಜೆಪಿ ಟಿಕೆಟ್ ಘೋಷಣೆ : ನನ್ನ ಹೆಸರೂ ಪರಿಗಣನೆಗೆ‌ ಕಳುಹಿಸಲಾಗಿದೆ : ಈಶ್ವರಪ್ಪ

Related Posts

ಮಹಿಳಾ ಮೀಸಲಾತಿ ಮಸೂದೆ ಚರ್ಚೆ ನಡುವೆ ರಾಹುಲ್ ಗಾಂಧಿ ಹಾಸ್ಯ ಚಟಾಕಿ
Uncategorized

ಮಹಿಳಾ ಮೀಸಲಾತಿ ಮಸೂದೆ ಚರ್ಚೆ ನಡುವೆ ರಾಹುಲ್ ಗಾಂಧಿ ಹಾಸ್ಯ ಚಟಾಕಿ

by ಪ್ರತಿಧ್ವನಿ
April 17, 2026
0

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಮಹಿಳಾ ಮೀಸಲಾತಿ ಮಸೂದೆ ಮತ್ತು ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಕುರಿತ ಚರ್ಚೆ ಸಂಸತ್‌ನಲ್ಲಿ ತೀವ್ರಗೊಳ್ಳುತ್ತಿರುವ ನಡುವೆ, ಸದನದಲ್ಲಿ ರಾಜಕೀಯ ಗದ್ದಲದ ಜೊತೆಗೆ...

Read moreDetails
ಭದ್ರತಾ ಬೆದರಿಕೆ ಭೀತಿ: ಅಮೆರಿಕಾ ಮಾತುಕತೆ ವಿಫಲವಾದ ಬಳಿಕ ಇರಾನ್ ತಂಡದ ರಹಸ್ಯ ಪ್ರಯಾಣ

ಭದ್ರತಾ ಬೆದರಿಕೆ ಭೀತಿ: ಅಮೆರಿಕಾ ಮಾತುಕತೆ ವಿಫಲವಾದ ಬಳಿಕ ಇರಾನ್ ತಂಡದ ರಹಸ್ಯ ಪ್ರಯಾಣ

April 17, 2026
ಬೆಂಗಳೂರು ಜನಗಣತಿ ಕಾರ್ಯಕ್ಕೆ ಚಾಲನೆ: ಮನೆಮನೆ ಸಮೀಕ್ಷೆ ಆರಂಭ

ಬೆಂಗಳೂರು ಜನಗಣತಿ ಕಾರ್ಯಕ್ಕೆ ಚಾಲನೆ: ಮನೆಮನೆ ಸಮೀಕ್ಷೆ ಆರಂಭ

April 16, 2026
ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು

ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು

April 13, 2026
ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

April 11, 2026
Next Post
ಏ.9ಕ್ಕೆ ಬಿಜೆಪಿ ಟಿಕೆಟ್ ಘೋಷಣೆ : ನನ್ನ ಹೆಸರೂ ಪರಿಗಣನೆಗೆ‌ ಕಳುಹಿಸಲಾಗಿದೆ : ಈಶ್ವರಪ್ಪ

ಏ.9ಕ್ಕೆ ಬಿಜೆಪಿ ಟಿಕೆಟ್ ಘೋಷಣೆ : ನನ್ನ ಹೆಸರೂ ಪರಿಗಣನೆಗೆ‌ ಕಳುಹಿಸಲಾಗಿದೆ : ಈಶ್ವರಪ್ಪ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada