ಶಿವಮೊಗ್ಗ: ಏ.೦6: ಶಿವಮೊಗ್ಗದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಕೆ.ಎಸ್ ಈಶ್ವರಪ್ಪ ಮಾತನಾಡಿ ನಾಳೆ ನಾಡಿದ್ದು ಟಿಕೆಟ್ ಸಂಬಂಧ ಸಭೆಗಳಿದ್ದು ಏ.9ಕ್ಕೆ ಎಲ್ಲಾ ಕ್ಷೇತ್ರಗಳಿಗೂ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ ಎಂದರು.
ಆಯನೂರು ಮಂಜುನಾಥ್ ಟೀಕೆ- ಟಿಕೆಟ ಪೈಪೋಟಿ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ 224 ಕ್ಷೇತ್ರದಲ್ಲೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಆಗಿದೆ. ಪಕ್ಷದ ಕಾರ್ಯಕರ್ತರ ಅಭಿಪ್ರಾಯದಂತೆ ನನ್ನ ಹೆಸರು ಕೂಡಾ ಹೋಗಿದೆ. ಯಾರೋ ಟೀಕೆ ಮಾಡಿದರೇ ಅದಕ್ಕೆ ನಾನು ಬೆಲೆ ಕೊಡ್ಲಾ..?
ಫ್ರೇಂಡ್ಲಿ ಫೈಟ್ ಆಗಬೇಕು. ಕ್ರೀಡಾ ಮನೋಭಾವನೆಯಿಂದ ಸ್ಪರ್ಧೆ ಆಗಲಿ. ಚುನಾವಣೆ ಮುಗಿದ ಮೇಲೆ ಎಲ್ರೂ ಜನರ ಸೇವೆ ಮಾಡಲೇ ಬೇಕು. ಆಯನೂರು ವಿರುದ್ಧ ಏಕವಚನದಲ್ಲಿ ನಾನು ಟೀಕೆ ಮಾಡಿಲ್ಲ. ಅವರ ನಿರ್ಧಾರ ಅವರಿಗೆ ಬಿಟ್ಟಿದ್ದು. ಚುನಾವಣೆ ಸಮಯದಲ್ಲಿ ಇದು ನಡೆಯುತ್ತೆ. ಇದು ಪ್ರಜಾಪ್ರಭುತ್ವ.. ಅವರ ತತ್ವ – ಸಿದ್ದಾಂತ ಅವರು ನಿರ್ಧಾರ ಮಾಡಬಹುದು. ಅವರು ಪಕ್ಷದಲ್ಲೇ ಇದ್ದಾರೆ.. ಬಿಟ್ಟು ಹೋಗಿಲ್ಲ.. ಕರೆದು ಮಾತನಾಡೋರು ಮಾತನಾಡ್ತಾರೆ. ಪಟ್ಟಿಯನ್ನು ಏಕಾಏಕಿ ಬಿಡುಗಡೆ ಮಾಡಲ್ಲ.
ಜಾತಿ, ಧರ್ಮ, ನಾಯಕರ ಪ್ರಭಾವ ಆಧರಿಸಿ ಅಲ್ಲ. ಕಾರ್ಯಕರ್ತರ ಅಭಿಪ್ರಾಯದ ನಂತರ ಫೈನಲ್ ಅಗುತ್ತೆ. ಟಿಕೆಟ್ ಸಿಕ್ಕಿಲ್ಲ ಎಂದು ಬೇರೆ ಪಕ್ಷಕ್ಕೆ ಹೋಗೋರು ನಮ್ಮ ಕಾರ್ಯಕರ್ತರಲ್ಲ ಎಂದರು.

ಅಲೆಮಾರಿ ಸಿದ್ದರಾಮಯ್ಯ ಅವರು ಪದೇ ಪದೇ ಕ್ಷೇತ್ರದ ಬದಲಾವಣೆ ಮಾಡ್ತಾರೆ ; ಅವರು ಎಲ್ಲಿ ಹೋಗ್ತಾರೋ. ಎಲ್ಲಿ ಬರ್ತಾರೋ. ನಾನೇನು ಉತ್ತರ ಕೊಡಲಿ. ಯಾವುದೇ ಬದ್ಧತೆ ಇಲ್ಲ. ಕಾಂಗ್ರೆಸ್ ನ ನೀತಿ ನಿಯಮ ಸಿದ್ದುಗೆ ಇಲ್ಲ.ಸಿದ್ದರಾಮಯ್ಯ ಎಲ್ಲಿ ನಿಂತರೂ ಸೋಲು ಖಚಿತ. ಒಂದು ಎರಡು ಯಾಕೇ. ದಶ ದಿಕ್ಕಿನಲ್ಲಿ ಒಂದರಂತೇ 10 ಕ್ಷೇತ್ರದಲ್ಲಿ ನಿಲ್ಲಲಿ. ಗ್ರಹಚಾರಕ್ಕೆ ಯಾವುದಾದರೂ ಒಂದರಲ್ಲಿ ಗೆಲ್ಲಬಹುದು ಎಂದರು. ಚುನಾವಣೆಯಲ್ಲಿ ಗೆಲ್ಲುತ್ತಾರೋ ಇಲ್ವೋ ಗೊತ್ತಿಲ್ಲ. ಅವರು ಪಕ್ಷ ಬರುತ್ತೋ ಇಲ್ವೋ.. ಬಹುಮತ ಸಿಗುತ್ತೋ ಇಲ್ವೋ ಅನ್ನೋದೇ ಗೊತ್ತಿಲ್ಲ. ಹೀಗಿರುವಾಗ ತಾವೇ ಸಿಎಂ ಆಗುವುದಾಗಿ ಹೇಳಿಕೆ ನೀಡಲು ಅಧಿಕಾರ ಕೊಟ್ಟದ್ದು ಯಾರು….. ಅಧಿಕಾರವಿದ್ದಾಗ ಜಾತಿ, ಸಮಾಜ ಒಡೆಯುವ ಕೆಲಸ ಮಾಡಿದ್ರು. ಈಗ ಡಿಕೆಶಿ ಸಿಎಂ ಆಗುವುದಿಲ್ಲ ಎನ್ನುವ ಭವಿಷ್ಯ ಹೇಳಿದ್ದು ಯಾಕೇ.? ಜಾತಿ ಮೇಲೆ ಸಿಎಂ ಆಗುವುದಾಗಿ ಇಬ್ಬರು ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕೃತ ವಿರೋಧ ಪಕ್ಷವಾಗಿಯೂ ರಾಜ್ಯದಲ್ಲಿ ಉಳಿಸುವುದಿಲ್ಲ ಎಂದ ಈಶ್ವರಪ್ಪ.

ಕಳೆದ ಎರಡು ದಿನ ರಾಜ್ಯ ಚುನಾವಣೆ ಸಮಿತಿ ಸಭೆ ನಡೆಸಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರಮುಖ ಕಾರ್ಯಕರ್ತರು ಬಂದಿದ್ದರು. ಯಾರು ಅಭ್ಯರ್ಥಿ ಅಗಬೇಕು ಎಂದು ಮೊದಲು ವೋಟಿಂಗ್ ಮೂಲಕ ಕಳುಹಿಸಿದ್ದರು. ಅದನ್ನೆಲ್ಲಾ ಇಟ್ಟುಕೊಂಡು ಸಮಿತಿ ನಿರ್ಧಾರ ಮಾಡಿದೆ. ಚುನಾವಣೆ ಸಮಿತಿ ಉಸ್ತುವಾರಿಗಳು, ರಾಜ್ಯಾಧ್ಯಕ್ಷರು, ಸಿಎಂ, ಮಾಜಿ ಸಿಎಂ ಎಲ್ಲರೂ ಸೇರಿ ನಿರ್ಧಾರ ಮಾಡಿದ್ದಾರೆ. 224 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ತಯಾರು ಮಾಡಿ ಕಳುಹಿಸಲಾಗಿದೆ.
ಒಂದು ಕ್ಷೇತ್ರಕ್ಕೆ ಮೂರರಿಂದ ನಾಲ್ಕು ಜನ ಅಭ್ಯರ್ಥಿಗಳನ್ನು ರೆಡಿ ಮಾಡಿದ್ದಾರೆ. 7 ಮತ್ತು 8 ರಂದು ಎರಡು ದಿನಗಳ ಕಾಲ ದೆಹಲಿಯಲ್ಲಿ ಸಭೆ ನಡೆಸಿ, ತೀರ್ಮಾನ ಮಾಡಲಿದ್ದಾರೆ. ಇದೇ ತಿಂಗಳ 9 ರಂದು ಎಲ್ಲಾ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆಯಾಗಲಿದೆ ಎಂದರು.
ಸುದೀಪ್ ಬಿಜೆಪಿಗೆ ಬೆಂಬಲ- ಕಾಂಗ್ರೆಸ್ ವಿರೋಧ ವಿಚಾರ: ಅವರು ಯಾಕೇ ವಿರೋಧ ಮಾಡ್ತಾ ಇದ್ದಾರೆ ಎಂದು ಮೊದಲು ಹೇಳಲಿ. ಅವರು ಜನ- ಸಾಮಾನ್ಯರ ನಡುವೆ ಇರುವ ಚಿತ್ರನಟರು. ಅವರು ಮೋದಿ ಸರ್ಕಾರ, ಸಿಎಂ ಕಾರ್ಯ ಮೆಚ್ಚಿ ಬೆಂಬಲ ನೀಡುತ್ತಿದ್ದಾರೆ. ಸುಮ್ಮನೆ ವಿರೋಧ ಮಾಡುವವರನ್ನು ಜನರು ಸಹ ಗುರುತಿಸುತ್ತಿದ್ದಾರೆ. ಇದೇ ಸುದೀಪ್ ಕಾಂಗ್ರೆಸ್ ಗೆ ಬೆಂಬಲ ಕೊಟ್ಟಿದ್ರೇ ಏನು ಮಾಡ್ತಿದ್ರು….?
ಎಲ್ಲದಕ್ಕೂ ಕಾಂಗ್ರೆಸ್ ಟೀಕೆ ಮಾಡುತ್ತಿದೆ. ತುಂಬಾ ಅನ್ಯಾಯ ಇದು ಎಂದ ಈಶ್ವರಪ್ಪ.