• Home
  • About Us
  • ಕರ್ನಾಟಕ
Thursday, July 10, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಆರ್​ಎಸ್​ಎಸ್​ ಕಚೇರಿಯಲ್ಲಿ ಸಿಎಂ ನಡೆಸಿದ ಸೀಕ್ರೆಟ್​ ಸಭೆಯ ಗುಟ್ಟು ಏನು ?

ಪ್ರತಿಧ್ವನಿ by ಪ್ರತಿಧ್ವನಿ
November 26, 2022
in ಕರ್ನಾಟಕ, ರಾಜಕೀಯ
0
ಆರ್​ಎಸ್​ಎಸ್​ ಕಚೇರಿಯಲ್ಲಿ ಸಿಎಂ ನಡೆಸಿದ ಸೀಕ್ರೆಟ್​ ಸಭೆಯ ಗುಟ್ಟು ಏನು ?
Share on WhatsAppShare on FacebookShare on Telegram

ಮುಖ್ಯಮಂತ್ರಿ ಬಸವಾರಾಜ ಬೊಮ್ಮಾಯಿ ಜನತಾದಳದಿಂದ ಬಿಜೆಪಿಗೆ ಸೇರ್ಪಡೆ ಆದವರು. ಜಾತ್ಯಾತಿತ ಹಿನ್ನಳೆ ಉಳ್ಳ ನಾಯಕ ಅನ್ನೋ ಕಾರಣಕ್ಕೆ ಆರಂಭದಲ್ಲಿ ಬಿಜೆಪಿ ನಾಯಕರೇ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ವಿರೋಧ ಮಾಡಿದ್ದರು. ಆರ್​ಎಸ್​ಎಸ್​ ಸಂಸ್ಕೃತಿಗೆ ಬಸವರಾಜ ಬೊಮ್ಮಾಯಿ ಒಗ್ಗಿಕೊಳ್ಳುವುದು ಕಷ್ಟ ಎನ್ನಲಾಗ್ತಿತ್ತು. ಆದರೆ ಇದೀಗ ನಿಧಾನವಾಗಿ ಆರ್​ಎಸ್​ಎಸ್​ ಸಂಸ್ಕೃತಿಗೆ ಸಿಎಂ ಒಗ್ಗಿಕೊಳ್ತಿದ್ದಾರೆ. ನಿನ್ನೆ ಬರೋಬ್ಬರಿ 2 ಗಂಟೆಗಳ ಕಾಲ ಸಿಎಂ ಕೇಶವಾ ಕೃಪಾದಲ್ಲಿ ಆರ್​ಎಸ್​ಎಸ್​ ನಾಯಕರ ಜೊತೆಗೆ ಸಮಾಲೋಚನೆ ನಡೆಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಚಿವರಾದ ಡಾ ಸುಧಾಕರ್​, ಆರ್​ ಅಶೋಕ್​, ಅಶ್ವತ್ಥ ನಾರಾಯಣ ಮುಂತಾದವರು ಸಾಥ್​ ನೀಡಿದ್ದರು. ಆದರೆ ಸಭೆಯಲ್ಲಿ ಯಾರೆಲ್ಲಾ ಆರ್​ಎಸ್​ಎಸ್​ ನಾಯಕರು ಇದ್ದರು..? ಏನೇಲ್ಲಾ ಚರ್ಚೆ ಆಯ್ತು ಅನ್ನೋ ಬಗ್ಗೆ ಎಲ್ಲಿಯೂ ಸೋರಿಕೆ ಆಗದಂತೆ ನೋಡಿಕೊಳ್ಳಲಾಗಿದೆ. 

ADVERTISEMENT

ರಾಜ್ಯ ಅಥವಾ ದೇಶದ ರಾಜಕಾರಣದಲ್ಲಿ ಆರ್​ಎಸ್​ಎಸ್​ ನೇರ ಪಾಲ್ಗೊಳ್ಳುವಿಕೆ ಇದೆ ಎನ್ನುವುದು ಕಾಂಗ್ರೆಸ್​ ಸದಾ ಮಾಡಿಕೊಂಡು ಬರುತ್ತಿರೋ ಆರೋಪ. ಆದರೆ ಸಂಘ ಪರಿವಾರ ಕೇವಲ ಸಲಹೆ ಸೂಚನೆಗಳನ್ನು ನೀಡುತ್ತದೆ. ಅಧಿಕಾರದಲ್ಲಿ ಆರ್​ಎಸ್​ಎಸ್​ ಸ್ವಯಂ ಸೇವಕರಿಗೆ ಕಿಂಚಿತ್ತು ಆಸಕ್ತಿ ಇಲ್ಲ ಎನ್ನುವುದು ಬಿಜೆಪಿ ನಾಯಕರ ಸಮರ್ಥನೆ. ಆದರೆ ಆಡಳಿತವನ್ನು ಹೇಗೆ ನಡೆಸಬೇಕು, ಯಾವ ಕಾನೂನು ಜಾರಿ ಮಾಡಬೇಕು. ಯಾರನ್ನು ಹೇಗೆ ನಿಯಂತ್ರಣ ಮಾಡಬೇಕು ಅನ್ನೋ ಇಂಚಿಂಚು ಮಾಹಿತಿಯು ಚಾಮರಾಜಪೇಟೆಯ ಕೇಶವಾ ಕೃಪಾ ಕಚೇರಿಯಿಂದಲೇ ಬರುತ್ತದೆ ಎನ್ನುವುದನ್ನು ಯಾರು ಅಲ್ಲಗಳೆಯುವಂತಿಲ್ಲ. ಇದೀಗ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ನಾಲ್ಕಾರು ವಿಚಾರಗಳ ಬಗ್ಗೆ ಚರ್ಚೆ ಆಗಿರಬಹುದು ಅಂತಾ ಊಹೆ ಮಾಡಲಾಗ್ತಿದೆ. ಆದರೆ ಬಿಜೆಪಿ ನಾಯಕರು ಹೇಳ್ತಿರೋ ಮಾತುಗಳು ಮಾತ್ರ ಬೇರೆಯದೇ ಇದೆ. 

ಮಂಗಳೂರು ಬಾಂಬ್​ ಬ್ಲಾಸ್ಟ್​ನಲ್ಲಿ ಕಾಂಗ್ರೆಸ್​ ಬೆಂಬಲ ನೀಡುತ್ತಿದೆ ಎನ್ನುವ ಹಾಗೆ ಪ್ರಕರಣವನ್ನು ಕಾಂಗ್ರೆಸ್​ ಕಡೆಗೆ ತಿರುಗಿಸಿ ರಾಜ್ಯದಲ್ಲಿ ಕಾಂಗ್ರೆಸ್​ಗೆ ಮುಜುಗರ ಮಾಡುವುದು. ಮತ್ತೊಂದು ಸ್ವತಃ ಬಿಜೆಪಿ ಸರ್ಕಾರವೇ ಮತದಾರರ ಪಟ್ಟಿಯಲ್ಲಿ ಕೆಲವು ಸಮುದಾಯದ ಜನರ ಹೆಸರನ್ನು ಡಿಲೀಟ್​ ಮಾಡಿಸಿದ್ದಾರೆ ಅನ್ನೋ ಆರೋಪದಿಂದ ಹೇಗೆ ಜಾರಿಕೊಳ್ಳಬೇಕು ಹಾಗು ಆ ಪ್ರಕರಣದಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ಯಾವ ರೀತಿಯ ಮಾಹಿತಿ ಕೊಡಬೇಕು ಅನ್ನೋ ಬಗ್ಗೆ ಸಲಹೆ ಸಿಕ್ಕಿರಬಹುದು ಎನ್ನಲಾಗ್ತಿದೆ. ಅದರ ಜೊತೆಗೆ ತೆಲಂಗಾಣದಲ್ಲಿ ಆಪರೇಷನ್​ ಕಮಲ ಮಾಡುವುದಕ್ಕೆ ಹೋಗಿದ್ದ ಆರ್​ಎಸ್​ಎಸ್​​ ನಾಯಕ ಹಾಗು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್​ ಸಂತೋಷ್​ಗೆ 2ನೇ ಬಾರಿ ಕೋರ್ಟ್​ ಸಮನ್ಸ್​ ನೀಡಿದೆ. ಈ ಪ್ರಕರಣದಲ್ಲಿ ಸಂತೋಷ್​ ಅವರನ್ನು ಬಚಾವ್​ ಮಾಡಲು ಇರುವ ಆಯ್ಕೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗ್ತಿದೆ. ಆದರೆ ಬಿಜೆಪಿ ನಾಯಕರು ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷದ ಬೆಳವಣಿಗೆ ಬಗ್ಗೆ ಚರ್ಚೆ ಆಗಿದೆ ಎನ್ನುತ್ತಿದ್ದಾರೆ. 

ಹಳೇ ಮೈಸೂರು ಪ್ರಾಂತ್ಯದಲ್ಲಿ ಗೆಲ್ಲಲು ಚಾಮರಾಜಪೇಟೆಯ RSS ಕಚೇರಿಯಲ್ಲಿ ನೀಲನಕ್ಷೆ ಜೊತೆಗೆ ಮಹತ್ವದ ಚರ್ಚೆ ನಡೆಸಲಾಗಿದೆ, ಸರ್ಕಾರದ ಆಡಳಿತ ಕಾರ್ಯಗಳ ಹೇಗಿರಬೇಕು..? ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವುದು ಹೇಗೆ..? ಸರ್ಕಾರದ ಪರವಾದ ಜ‌ನರ ಒಲವು ಮೂಡುವಂತೆ ಮಾಡುವುದಕ್ಕೆ ಏನೇನು ಮಾಡಬೇಕು..? ಹಳೇ ಮೈಸೂರು ಭಾಗದಲ್ಲೇ ಪಕ್ಷ ಬಲವರ್ಧನೆ ಮಾಡುವುದರಿಂದ 25 ರಿಂದ 30 ಕ್ಷೇತ್ರಗಳಲ್ಲಿ ಗೆಲ್ಲುವುದಕ್ಕೆ ಅವಕಾಶವಿದೆ. ವಿಪಕ್ಷಗಳ ಆರೋಪಗಳಿಗೆ ಪರಿಣಾಮಕಾರಿಯಾಗಿ ತಿರುಗೇಟು ನೀಡಿ. ಕಾಂಗ್ರೆಸ್‌ನ ಟಿಪ್ಪು ಪ್ರತಿಮೆ ವಿಚಾರವನ್ನೇ ಹಿಡಿದುಕೊಂಡು ಹೋರಾಟ ರೂಪಿಸುವುದು ಹೇಗೆ..? ಹಳೇ ಮೈಸೂರು ಭಾಗದಲ್ಲಿ ಹಿಂದೂ ಅಜೆಂಡಾವನ್ನು ಪ್ರಬಲವಾಗಿ ಬಳಸುವುದಕ್ಕೆ ಏನೆಲ್ಲಾ ಮಾಡಬೇಕು. ಸಂಘ ಏನು ಮಾಡುತ್ತೆ..? ಬಿಜೆಪಿ ಏನು ಮಾಡಬೇಕು ಅನ್ನೋ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲಾಗಿದೆ ಎನ್ನೋ ಮಾಹಿತಿ ಬಿಜೆಪಿ ಮೂಲಗಳಿಂದಲೇ ಸಿಕ್ಕಿದೆ. ಒಂದಂತೂ ಸತ್ಯ. ರಾಜ್ಯ ಹಾಗು ರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅನ್ನೋದಕ್ಕಿಂತ ಬಿಜೆಪಿ ಮಾತೃ ಸಂಸ್ಥೆ ಆರ್​ಎಸ್​ಎಸ್​ ಸರ್ಕಾರ ಎನ್ನಬಹುದು.

ReplyForward
Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಸಂವಿಧಾನದ ಆಚರಣೆಯೂ ಸಾಂವಿಧಾನಿಕ ನಡೆಯೂ

Next Post

ಡಿಸೆಂಬರ್‌ 30ಕ್ಕೆ ತೆರೆಮೇಲೆ ಪದವಿಪೂರ್ವ

Related Posts

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
0

ತರುಣ್‌ ಸುಧೀರ್‌ ನಿರ್ಮಾಣದ ಹೊಸ ಚಿತ್ರಕ್ಕೆ ಶಿವಣ್ಣ-ಪ್ರೇಮ್‌ ಸಾಥ್..ʼಏಳುಮಲೆʼ ಟೈಟಲ್‌ ಟೀಸರ್‌ನಲ್ಲಿ ಮಿಂಚಿದ ರಕ್ಷಿತಾ ಸಹೋದರ ರಾಣಾ. ತರುಣ್ ಕಿಶೋರ್ ಸುಧೀರ್ ನಿರ್ಮಾಣ ಮಾಡುತ್ತಿರುವ ಪುನೀತ್ ರಂಗಸ್ವಾಮಿ...

Read moreDetails

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

July 9, 2025
Next Post
ಡಿಸೆಂಬರ್‌ 30ಕ್ಕೆ ತೆರೆಮೇಲೆ ಪದವಿಪೂರ್ವ

ಡಿಸೆಂಬರ್‌ 30ಕ್ಕೆ ತೆರೆಮೇಲೆ ಪದವಿಪೂರ್ವ

Please login to join discussion

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada