• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಲಾಲ್ ಬಾಗ್ ಫ್ಲವರ್ ಶೋಗೆ ಅದ್ದೂರಿ ಚಲಾನೆ : ಗಂಧದಗುಡಿಯ ಕುಡಿಗೆ ಪುಷ್ಪ ಗೌರವ.. ಅಪ್ಪು ನೋಡಿ ಭಾವುಕರಾದ ಜನರು!

ಪ್ರತಿಧ್ವನಿ by ಪ್ರತಿಧ್ವನಿ
August 5, 2022
in ಕರ್ನಾಟಕ, ಸಿನಿಮಾ
0
ಲಾಲ್ ಬಾಗ್ ಫ್ಲವರ್ ಶೋಗೆ ಅದ್ದೂರಿ ಚಲಾನೆ : ಗಂಧದಗುಡಿಯ ಕುಡಿಗೆ ಪುಷ್ಪ ಗೌರವ.. ಅಪ್ಪು ನೋಡಿ ಭಾವುಕರಾದ ಜನರು!
Share on WhatsAppShare on FacebookShare on Telegram

ಬಣ್ಣದ ಲೋಕದ ಮಿನುಗು ತಾರೆಯಂತಿದ್ದ ಅಪ್ಪು ಮತ್ತೆ ಇಂದು ಬಣ್ಣ ಬಣ್ಣದ ಹೂವುಗಳ ಮಧ್ಯೆ ಜೀವಪಡೆದುಕೊಂಡಿದ್ದರು. ಸಸ್ಯಕಾಶಿಯಲ್ಲಿ ನಗುಮುಖದ ಯುವರತ್ನ ಮತ್ತೊಮ್ಮೆ ಹುಟ್ಟಿ ಬಂದಂತೆ ಭಾಸವಾಗಿತ್ತು. ಹೌದು, ಲಾಲ್ ಬಾಗ್ ಫ್ಲವರ್ ಶೋ ದಿವಂಗತ ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಸಮರ್ಪಿಸಲಾಗಿದ್ದು, ಇಂದು ಅಭೂತಪೂರ್ವ ಚಾಲನೆ ಸಿಕ್ಕಿದೆ.

ADVERTISEMENT

ಫ್ಲವರ್ ಶೋನಲ್ಲಿ ಎಲ್ಲರ ಕಣ್ಮನ ಸೆಳೆಯುತ್ತಿದೆ ಪುನೀತ್ ರಾಜ್ ಕುಮಾರ್ ಪ್ರತಿಮೆ

ಆ ನಗುವ ಮುಖ ಇನ್ನೆಷ್ಟು ಕಾಲ‌ ಉರುಳಿದರೂ ಕನ್ನಡಿಗರು ಮರೆಯಲು ಸಾಧ್ಯವಿಲ್ಲ.‌ ಅಂಥದೊಂದು ಸೆಳೆತವಿದೆ ಆ ಕಲೆಗಾರನಲ್ಲಿ. ಅಭಿಮಾನಿಗಳೇ ದೇವರು ಎಂದ ಅಣ್ಣಾವ್ರ ಪಥದಲ್ಲಿದ್ದ ಪುನೀತ್ ರಾಜ್‍ಕುಮಾರ್ ಇಂದು ನೆನೆಪು ಮಾತ್ರ. ಅಂದಿನ ಗಳಿಗೆಯನ್ನು ನೆನೆಪಿಸಿಕೊಂಡರೂ ಈ ಕ್ಷಣವೂ ಕಣ್ಣಾಲಿ ಕಂಪಿಸ ತೊಡಗುತ್ತವೆ. ಅದು ಆ ಮಹಾ ವ್ಯಕ್ತಿತ್ವ ಧಕ್ಕಿಸಿಕೊಂಡ ಗೆಲುವು. ಈಗ ಅಂಥಾ ಮಹಾನ್ ನಟನಿಗೆ ತೋಟಗಾರಿಕೆ ಇಲಾಖೆ ಗೌರವಪೂರ್ವಕವಾಗಿ ಹೂವುಗಳ ನಮನ ಸಲ್ಲಿಸಿದೆ. ತೋಟಗಾರಿಕೆ ಇಲಾಖೆ ಸ್ವಾತಂತ್ರ್ಯ ದಿನದ ಭಾಗವಾಗಿ ಹಮ್ಮಿಕೊಂಡಿರುವ ಫ್ಲವರ್ ಶೋಗೆ ಇಂದು ಅದ್ದೂರಿ ಚಾಲನೆ ಸಿಕ್ಕಿದೆ. ಸಿಎಂ ಬೊಮ್ಮಾಯಿ, ತೋಟಗಾರಿಕೆ ಸಚಿವ ಮುನಿರತ್ನ, ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ಸಮ್ಮುಖದಲ್ಲಿ ಫ್ಲವರ್ ಶೋ ಉದ್ಘಾಟನೆಗೊಂಡಿದೆ.

ಲಾಲ್ ಬಾಗ್ ಗಾಜಿನ ಮನೆಯಲ್ಲಿ ಅನಾವರಣಗೊಂಡ ಗಾಜನೂರಿನ ಮನೆ

212ನೇ ಲಾಲ್ ಬಾಗ್ ಫ್ಲವರ್ ಶೋಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ವರ ನಟ ಡಾ. ರಾಜ್ ಕುಮಾರ್ ಥೀಮ್ ಬಳಸಲಾಗಿದೆ. ಲಾಲ್ ಬಾಗ್ ಗಾಜಿನ ಮನೆಯೊಳಗೆ ಬಣ್ಣ ಬಣ್ಣದ ಹೂವುಗಳಿಂದ ಅಲಂಕಾರ ಮಾಡಿ ಪುನೀತ್ ರಾಜ್‍ಕುಮಾರ್ ಹಾಗೂ ಅಣ್ಣಾವ್ರ ಪ್ರತಿಮೆಗಳನ್ನು ಇಡಲಾಗಿದೆ. ಗಾಜಿನ ಮನೆ ಒಳಹೊಕ್ಕ ಕೂಡಲೇ ಅಣ್ಣಾವ್ರು ಹುಟ್ಟಿದ ಗಾಜನೂರಿನ ಮನೆ ಹೂವುಗಳಿಂದ ಲೋಕಾರ್ಪಣೆಗೊಳಿಸಲಾಗಿದೆ. ಗಾಜಿನ ಮನೆಯ ಎಡ ಭಾಗದಲ್ಲಿ ಮಯೂರ ಸಿನಿಮಾದಲ್ಲಿ ಅಣ್ಣಾವ್ರ ಪಾತ್ರವನ್ನೂ ಬಿಂಬಿಸುವ ಪ್ರತಿಮೆ ಹಾಗೂ ಬಲ ಭಾಗದಲ್ಲಿ ಕನ್ನಡಿಗರ ಅಪ್ಪುವಿನ ಕಂಚಿನ ಪ್ರತಿಮೆ ನಿಲ್ಲಿಸಲಾಗಿದೆ. ಇವರೆಡನ್ನೂ ಕಣ್ತುಂಬಿ ಭಾವುಕರಾಗಿ ಮುಂದಕ್ಕೆ ನಡೆಯುವ ಹೊತ್ತಿಗೆ ಕಣ್ಣ ಮುಂದೆ ಮತ್ಯಾವುದೋ ಹೂವಿನ ಜಗತ್ತು ತೆರೆದುಕೊಳ್ಳಲಿದೆ.

ಫ್ಲವರ್ ಶೋನಲ್ಲಿ ಮಂಜಿನ ಹನಿಗಳಿಂದ ನೋಡುಗರಿಗೆ ರೋಮಾಂಚಕಾರಿ ಭಾವನೆ

ಗಾಜಿನ ಮನೆ ದಾಟಿ ಬರುವವರ ಮುಂದೆ ಅಕ್ಷರಶಃ ಹೂವುಗಳ ಜಗತ್ತೊಂದು ಅನಾವರಣಗೊಳ್ಳಲಿದೆ. ಇಂಥಾ ಸುಂದರ ಜಗತ್ತಿನ ಮಧ್ಯೆ ವಿರಾಜಮಾನವಾಗಿ ಅಪ್ಪು ರಾರಾಜಿಸುತ್ತಾರೆ. ಅಪ್ಪ ರಾಜ್ ಕುಮಾರ್ ಅಮ್ಮ ಪಾರ್ವತಮ್ಮ ರಾಜ್ ಕುಮಾರ್ ಜೊತೆಗೆ ಹೂವಿನ ಮಧ್ಯೆ ನಿಂತು ನಗುವ ಪುನೀತ್ ರಾಜ್‍ಕುಮಾರ್ ನೋಡುಗರನ್ನು ಭಾವನಾತ್ಮಕವಾಗಿ ಸಳೆಯುತ್ತಾರೆ. ಅಪ್ಪು ಕಟ್ಟಿ ಬೆಳೆಸಿದ ಶಕ್ತಿಧಾಮ, ಅಪ್ಪುವಿನ ಕೊನೆಯ ಸಿನಿಮಾ‌ ಗಂಧದಗುಡಿಯ ಫ್ಲವರ್ ಸ್ಟಿಲ್ ಪೋಸ್ಟರ್ ಜನರು ಕೈಬೀಸಿ ಕರೆಯುತ್ತಿದೆ. ಇದರ ನಡುವೆ ಮೇಲಿಂದ ಮಂಜಿನಂತೆ ಚಿಮ್ಮಿ ಬೀಳುವ ನೀರಿನ ಹನಿಗಳು ಫ್ಲವರ್ ಶೋ ಕಟ್ಟಿ ಕೊಡಬಲ್ಲ ಅತ್ಯುತ್ತಮ ಭಾವನೆ ಜನರಲ್ಲಿ ಹುಟ್ಟಿಸುತ್ತದೆ. ಈ ಬಗ್ಗೆ ನಟ ಶಿವರಾಜ್ ಕುಮಾರ್ ಮಾತನಾಡಿದ ಸಣ್ಣ ವಯಸ್ಸಿಗೆ ಇಷ್ಟೆಲ್ಲಾ ಮಾಡಿದ್ದಾನೆ ನನ್ನ ತಮ್ಮ ಎನ್ನುವುದು ಅಣ್ಣನಾಗಿ ನಮಗೆ ಹೆಮ್ಮೆ ಎಂದರು.

ಈ ಬಾರಿಯ ಫ್ಲವರ್ ಶೋಗೆ 54 ದೇಶಗಳಿಂದ ವಿಶೇಷ ತಳಿಗಳನ್ನು ತರಿಸಲಾಗಿರುವುದು ವಿಶೇಷ. ದೇಶದ ವಿವಿಧ ಭಾಗದಲ್ಲಿ ಬೆಳೆಯಲಾಗಿರುವ ಸುಮಾರು 100ಕ್ಕೂ ಅಧಿಕ ತಳಿಯನ್ನು ಶೃಂಗಾರಕ್ಕಾಗಿ ಫ್ಲವರ್ ಶೋನಲ್ಲಿ‌ ಬಳಸಲಾಗಿದೆ. ಅಲ್ಲದೆ ಒಂದು ಲಕ್ಷಕ್ಕೂ ಅಧಿಕ ಹೂವಿನ ಪಾಟ್ ಗಳನ್ನು ಬಳಸಿ ಹೂವಿನ ಲೋಕವನ್ನು ಸೃಷ್ಟಿಸಲಾಗಿದೆ‌. ಇಂದಿನಿಂದ ಮುಂದಿನ 10 ದಿನಗಳ ಕಾಲ ಈ ಪುಷ್ಪ ಪ್ರದರ್ಶನ ನಡೆಯಲಿದ್ದು, ಅಗಸ್ಟ್ 15 ಸ್ವಾತಂತ್ರ್ಯ ದಿನದ ಸಂಜೆಗೆ ಸಮಾಪ್ತಿಯಾಗಲಿದೆ. ತೋಟಗಾರಿಕೆ ಇಲಾಖೆ ಈ ಬಾರಿ ಫ್ಲವರ್ ಶೋನಲ್ಲಿ 15 ಲಕ್ಷ ಜನರು ಭಾಗಿಯಾಗುವ ಲೆಕ್ಕಾಚಾರ ಹಾಕಿಕೊಂಡಿದೆ. ವಾರದ ಕೊನೆಯಲ್ಲಿ ವಯಸ್ಕರಿಗೆ 100 ರೂಪಾಯಿ ಹಾಗೂ ವಾರದ ದಿನಗಳಲ್ಲಿ 80 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಜೊತೆಗೆ 1 ರಿಂದ 10ನೇ ತರಗತಿ ವರೆಗಿನ ಮಕ್ಕಳು ಗುಂಪಾಗಿ ಬಂದರೆ ಉಚಿತ ಪ್ರವೇಶ ನೀಡಿದ್ದು, ಸ್ವ ಇಚ್ಛೆಯಿಂದ ಶಾಲಾ ಸಮಸವಸ್ತ್ರ ಧರಿಸಿ ಬರುವ ಮಕ್ಕಳಿಗೆ 30 ರೂಪಾಯಿ ಪ್ರವೇಶ ದರವನ್ನು ತೋಟಗಾರಿಕೆ ಇಲಾಖೆ ನಿಗದಿಪಡಿಸಿದೆ.

ಹೀಗೆ ಅಗಲಿದ ನಟ, ಅಭಿಮಾನಿಗಳ ಅಪ್ಪುವಿಗೆ ತೋಟಗಾರಿಕೆ ಇಲಾಖೆ ಪುಷ್ಪ ನಮನ ಸಲ್ಲಿಸಿದೆ. ಕಳೆದ ಮೂರು ವರ್ಷಗಳಿಂದ ಕೊರೋನಾ ಇದ್ದ ಕಾರಣ ಫ್ಲವರ್ ಶೋ ನಡೆಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ಮುಂದಿನ 10 ದಿನಗಳ ಕಾಲ ಸಸ್ಯಕಾಶಿಯಲ್ಲಿ ಫ್ಲವರ್ ಶೋ ಜರುಗಲಿದ್ದು, ಜನರು ಹೆಚ್ಚೆಚ್ಚು ಸೇರುವ ನಿರೀಕ್ಷೆ ಇದೆ. ಮೊದಲ ದಿನವೇ ಜನರು ಸಮರೋಪಾದಿಯಲ್ಲಿ ಬಂದಿದ್ದು, ಹೂವಿನ ಲೋಕ ಕಣ್ತುಂಬಿಕೊಂಡು ಹೊರಡುತ್ತಿದ್ದಾರೆ. ಜೊತೆಗೆ, ಪುನೀತ್ ರಾಜ್‍ಕುಮಾರ್ ಥೀಮ್ ಬಳಸಿ ಫ್ಲವರ್ ಶೋ ನಡೆಸಿರುವುದರಿಂದ ಬಹುತೇಕ ಫ್ಲವರ್ ಶೋ ಗೆದ್ದಿದೆ.

Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ದಸರಾ ಜಂಬೂಸವಾರಿಗೆ 14 ಗಜಪಡೆಗಳ ಪಟ್ಟಿ ಸಿದ್ಧ!

Next Post

ಬಣ್ಣ ಅಲ್ಲ.. ಸೆಗಣಿ ಎರಚಿ ಇಲ್ಲಿ ಓಕುಳಿ ಆಡ್ತಾರೆ!

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post
ಬಣ್ಣ ಅಲ್ಲ.. ಸೆಗಣಿ ಎರಚಿ ಇಲ್ಲಿ ಓಕುಳಿ ಆಡ್ತಾರೆ!

ಬಣ್ಣ ಅಲ್ಲ.. ಸೆಗಣಿ ಎರಚಿ ಇಲ್ಲಿ ಓಕುಳಿ ಆಡ್ತಾರೆ!

Please login to join discussion

Recent News

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,
Top Story

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

by ಪ್ರತಿಧ್ವನಿ
July 5, 2025
Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

July 5, 2025

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada