ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹೆಸರನ್ನು ಶಾಲಾ ಶಿಕ್ಷಣ & ಸಾಕ್ಷರತಾ ಇಲಾಖೆಯೆಂದು ಮರುನಾಮಕರಣ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿರುವ ಕುರಿತು ಪತ್ರಿಕ್ರಿಯಿಸಿರುವ ಶಿಕ್ಷಣ ತಜ್ಞ ನಿರಂಜನಾರಾಧ್ಯ ಹೆಸರು ಬದಲಿಸುವುದು ಅವರಿಗಿರುವ ಒಂದು ಸಾಮಾನ್ಯ ರೋಗ ಎಂದು ಟೀಕಿಸಿದ್ದಾರೆ.
ಹೌದು ಈ ಕುರಿತು ಖಾಸಗಿ ಮಾಧ್ಯಮ ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತಿರಿಸಿದ ಅವರು, ಹೆಸರು ಬದಲಿಸುವುದು ಅವರಿಗಿರುವ ಒಂದು ಸಾಮಾನ್ಯ ರೋಗ . ಹೊಸ ನೀತಿ ಅನ್ವಯ ಈಗ MHRD ಯು ಶಿಕ್ಷಣ ಮಂತ್ರಾಲಯ (MoE)
ಸಾರ್ವಜನಿಕ ಬೋಧನಾ ಇಲಾಖೆಯನ್ನು (DPI) ಎಂದು ಬ್ರಿಟಿಷರು ಹೆಸರಿಸಿದ್ದು . DPI ಎಂಬ ಪದ , ಕಲಿಕೆಗಿಂತಲೂ indoctrination ಎಂಬ ರೀತಿಯಲ್ಲಿ ಪ್ರತಿಧ್ವನಿಸುತ್ತದೆ. ಜೊತೆಗೆ ಮಾನವ ಹಕ್ಕುಗಳು ಹಾಗು UNCRC ಶಿಕ್ಷಣವನ್ನು ಒಂದು ಹಕ್ಕಾಗಿ ಪರಿಭಾವಿಸಿ , ಎಲ್ಲ ಮಕ್ಕಳಿಗೆ ಆರೈಕೆ , ಪೌಷ್ಠಿಕತೆ ಹಾಗು ಶಿಕ್ಷಣ ವನ್ನು ಕನಿಷ್ಠ ೧೮ ವರ್ಷದವರೆಗೆ ಉಚಿತವಾಗಿ ಒದಗಿಸಬೇಕೆಂಬುದು UNSDGs ನ ೪ನೇ ಗುರಿಯಾಗಿದೆ . ಈ ಹಿನ್ನೆಲೆಯಲ್ಲಿ , ಶಾಲಾ ಶಿಕ್ಷಣ ಇಲಾಖೆ ಎಂಬ ಬಗ್ಗೆ ತಕರಾರಿಲ್ಲ. ಆದರೆ ದೊಡ್ಡ ಸಾಧನೆಯೇಯಲ್ಲ ಎಂದು ಹೇಳಿದ್ದಾರೆ.
ಮುಂದುವರೆದು, ಈ ಬದಲಾವಣೆಯನ್ನು ಮಾನವ ಹಕ್ಕು ನೆಲೆ ಮತ್ತು ಕಡ್ಡಾಯ ಶಿಕ್ಷಣವನ್ನು ವಿಸ್ತರಿಸುವ ಭಾಗವಾಗಿ , ‘ ಶಾಲಾ ಶಿಕ್ಷಣ ಸಾರ್ವರ್ತ್ರೀಕರಣ ಇಲಾಖೆ ಎಂದು ಕರೆಯಬೇಕೆಂದು ನಾನು ೨೦೦೩ ರಲ್ಲಿಯೇ ಹೇಳಿದ್ದೆ ಮತ್ತು ಲೇಖನ ಬರೆದಿದ್ದೆ !

ಆದೇಶ ಪತ್ರದಲ್ಲಿ ಏನಿದೆ?
ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ, 12ನೇ ತರಗತಿಯವರೆಗಿನ ಶಿಕ್ಷಣವು ಶಾಲಾ ಶಿಕ್ಷಣದ ವ್ಯಾಪ್ತಿಗೊಳಪಡುತ್ತದೆ. ರಾಷ್ಟ್ರೀಯ ಶಿಕ್ಷಣ ನೀಡಿ 20201 ರಲ್ಲಿಯೂ ಸಹ ಸದರಿ ಅಂಶವನ್ನು ಪುನರುಚ್ಛರಿಸಲಾಗಿರುತ್ತದೆ. ಈ ಹಿನ್ನಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ (ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನೊಳಗೊಂಡಂತೆ) ಪದನಾಮವನ್ನು ಶಾಲಾ ಶಿಕ್ಷಣ ಇಲಾಖೆ ಎಂದು ಬದಲಾಯಿಸುವುದು ಸೂಕ್ತ ಎಂದು ವಿವಿಧ ಹಂತದ ಚರ್ಚೆಯಲ್ಲಿ ತಜ್ಞರು ಅಭಿಪ್ರಾಯಿಸಿದ್ದಾರೆ, ಈಗಾಗಲೇ ಕೇಂದ್ರ ಸರ್ಕಾರ ಹಾಗೂ ಹೆಚ್ಚಿನ ರಾಜ್ಯಗಳಲ್ಲಿ ಶಾಲಾ ಶಿಕ್ಷಣ ಇಲಾಖೆ” ಎಂಬ ಪದನಾಮ ರೂಢಿಯಲ್ಲಿರುವುದರಿಂದ ಕರ್ನಾಟಕ ರಾಜ್ಯದಲ್ಲಿಯೂ ಸಹ ಇದೇ ಮಾದರಿಯನ್ನು ಅಳವಡಿಸಲು ಮೇಲೆ ಓದಲಾದ ಟಿಪ್ಪಣಿಯಲ್ಲಿ ಮಾನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಸೂಚಿಸಿರುತ್ತಾರೆ. ಸದರಿ ಪ್ರಸ್ತಾವನೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಆಡಳಿತ ಸುಧಾರಣೆಯ ಅಭಿಪ್ರಾಯವನ್ನು ಪಡೆಯಲಾಗಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಪ್ರಸ್ತುತ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಎಂದು ಕರೆಯಲ್ಪಡುವ ಇಲಾಖೆಯನ್ನು ‘ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ’ (Department of School Education and Gteracy) ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಮರು ನಾಮಕರಣಗೊಳಿಸಿ ಆದೇಶಿಸಲಾಗಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.