ಮಳೆಗಾಲ ಸಮೀಪಿಸುತ್ತಿದೆ. ಒಂದೇ ಮಳೆಗೆ ನಗರದಲ್ಲಿ ಸಾಲು ಸಾಲು ಮರಗಳು ಧರೆಗುರುಳುತ್ತಿವೆ. ಉರುಳುವ ಮರಗಳ ಪೈಕಿ ಆರೋಗ್ಯವಂತ ಮರಗಳೇ ಹೆಚ್ಚಾಗಿ ಒಂದರ ಹಿಂದೆ ಒಂದು ಧರೆಗುಳುತ್ತಿದೆ. ಇದು ಆತಂಕ ಹೆಚ್ಚುವಂತೆ ಮಾಡಿದೆ. ನಗರದಲ್ಲಿ ಆರೋಗ್ಯವಂತ ಮರಗಳೇ ಏಕಾಏಕಿ ನೆಲಕ್ಕಚ್ಚಲು ಅಸಲಿ ಕಾರಣವೇನು ಎಂಬುವುದೇ ಸದ್ಯದ ಪ್ರಶ್ನೆ. ಇತ್ತೀಚೆಗೆ ಸುರಿದ ಮಾನ್ಸೂನ್ ಪೂರ್ವ ಮಳೆಗೆ ಅಚಾನಕ್ ಆಗಿ ಬೃಹತ್ ಮರಗಳು ಧರೆಗುರುಳಿದವು. ಇದಕ್ಕೆಲ್ಲಾ ಕಾರಣ ನಗರದ ಈ ಪ್ರಮುಖ ಇಲಾಖೆಗಳು ಅಂತಿವೆ ಬಿಬಿಎಂಪಿ. ಈ ಮೂರು ಇಲಾಖೆಗಳ ಕಾಮಗಾರಿಯಿಂದಾಗಿ ಬೀಳುತ್ತಿರುವ ರೆಂಬೆ, ಕೊಂಬೆಗಳು, ಮಳೆಯ ಹೊಡತಕ್ಕೆ ಬೇರು ಸಮೇತ ಕಿತ್ತು ಬರುತ್ತಿವೆ.
ಸ್ಮಾರ್ಟ್ ಸಿಟಿ, BWSSB, ಬೆಸ್ಕಾಂ ಕಾಮಾಗರಿಗಳಿಂದ ನಗರದ ಮರಗಳು ಬಲಹೀನಗೊಳ್ಳುತ್ತಿದೆ ಎಂದು ಪಾಲಿಕೆ ಆರೋಪಿಸಿದೆ. ಫುಟ್ ಪಾತ್ ಅಭಿವೃದ್ಧಿ, SWD ಕಾಮಾಗರಿ ಹಿನ್ನೆಲೆ ಗಟ್ಟಿಮುಟ್ಟಾದ ಮರಗಳ ಬೇರುಗಳಿಗೆ ಸ್ಮಾರ್ಟ್ ಸಿಟಿಯಿಂದ ಹಾನಿಯಾಗುತ್ತಿದೆ. ವಿದ್ಯುತ್ ಲೈನ್ ಕಾಮಾಗರಿ ಹೆಸರಿನಲ್ಲಿ ಮರಗಳ ರೆಂಬೆಕೊಂಬೆ ಕಟ್ ಮಾಡುತ್ತಿದೆ ಬೆಸ್ಕಾಂ. ಈ ರೀತಿ ರೆಂಬೆಕೊಂಬೆ ಕಟ್ ಮಾಡುವುದರಿಂದ ಮರಗಳ ಉಸಿರಾಡುವಿಕೆಗೆ ತೊಂದರೆಯಾಗುತ್ತಿದೆ. ಅವೈಜ್ಞಾನಿಕವಾಗಿ ರಸ್ತೆ ಬದಿ ಅಗೆದು ಪೈಪ್ ಲೈನ್ ತೆಗೆದುಕೊಳ್ಳುವ ಜಲ ಮಂಡಳಿಯ ನಡೆಯಿಂದಾಗಿ ಗಟ್ಟಿಮುಟ್ಟಾದ ಮರಗಳಿಗೆ ಹಾನಿಯಾಗುತ್ತಿದೆ. ಹೀಗೆ ಈ ಮೂರು ಇಲಾಖೆಗಳ ಅವೈಜ್ಞಾನಿಕ ಕಾಮಾಗರಿಯಿಂದ ನಗರ ಬಲಿಷ್ಠ ಮರಗಳಿಗೆ ಹಾನಿಯಾಗುತ್ತಿದೆ. ಈ ಕಾರಣದಿಂದ ಏಕಾಏಕಿ ಒಂದು ಮಳೆ ಗಾಳಿಗೆ ಮೆಗಳು ಧರೆಗುರುಳುತ್ತಿವೆಯಂತೆ. ಈ ಮೂರು ಇಲಾಖೆಗಳಿಂದ ರಸ್ತೆಯಲ್ಲಿ ಓಡಾಡುವ ಜನ ಸಾಮಾನ್ಯರಿಂದ ಜೀವಕ್ಕೆ ಇದೀಗ ಕುತ್ತು ಎಂಬಂತಾಗಿದೆ.
ಈ ಬಗ್ಗೆ ನೇರವಾಗಿ ಈ ಮೂರು ಇಲಾಖೆಗೆ ವಿರುದ್ಧ ಬಿಬಿಎಂಪಿ ಹರಿಹಾಯ್ದಿದೆ. ಕಾಮಾಗರಿ ನಡೆಸುವಾಗ ಮರಗಳ ಸುತ್ತ ಕಟ್ಟೆ ಬಿಡಿಸಿ 2*2 ಜಾಗ ಬಿಡಬೇಕು. ಹೀಗೆ ಮಾಡದೇ ಇದ್ದರೆ ಮರಗಳ ಬೇರುಗಳಿಗೆ ಧಕ್ಕೆಯಾಗಿ, ಮರ ಬಲಹೀನಗೊಳ್ಳುತ್ತದೆ. ಈ ಕಾರಣದಿಂದ ಸಣ್ಣ ಮಳೆ ಗಾಳಿಗೆ ಮರಗಳು ನೆಲಕ್ಕೆ ಉರುಳುತ್ತಿವೆ ಎಂದು ಬಿಬಿಎಂಪಿ DCF ಸರೀನಾ ಸಿಕ್ಕಲಿಗಾರ ಪ್ರತಿಕ್ರಿಯಿಸಿದ್ದಾರೆ.