ಇಂದು ಶನಿವಾರ ರಾಜೀವ್ ಗಾಂಧಿ ಅವರ ಪುಣ್ಯತಿಥಿ ಅಂಗವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತನ್ನ ತಂದೆಯನ್ನು ನೆನೆದು ಭಾವನಾತ್ಮಕವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಹೌದು, ತನ್ನ ತಂದೆಯ 31ನೇ ವರ್ಷದ ಪುಣ್ಯಸ್ಮರಣೆಯಂದು ರಾಹುಲ್ ಭಾವನಾತ್ಮಕವಾಗಿ ಪೋಸ್ಟ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ ಅವರು, ತಮ್ಮ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ದೂರದೃಷ್ಟಿಯ ನಾಯಕ ಮತ್ತು ಅದ್ಭುತ ತಂದೆ ಎಂದು ಸ್ಮರಿಸಿದ್ದಾರೆ.
ನನ್ನ ತಂದೆ ದೂರದೃಷ್ಟಿಯ ನಾಯಕರಾಗಿದ್ದರು, ಅವರ ನೀತಿಗಳು ಆಧುನಿಕ ಭಾರತವನ್ನು ರೂಪಿಸಲು ನೆರವಾದವು ಎಂದು ರಾಜೀವ್ ಗಾಂಧಿಯವರ ಭಾಷಣದ ವೀಡಿಯೊದೊಂದನ್ನು ಹಂಚಿಕೊಂಡು ಈ ಮೇಲಿನ ವಾಕ್ಯವನ್ನು ರಾಹುಲ್ ಗಾಂಧಿ ಬರೆದಿದ್ದಾರೆ.
ಭಾರತವು ಹಳೆಯದಾದರೂ ಯುವ ರಾಷ್ಟ್ರವಾಗಿದೆ. ನಾವು ತಾಳ್ಮೆಯಿಂದಿರುತ್ತೇ ವೆ. ನಾನು ಚಿಕ್ಕವನು, ನನಗೂ ಒಂದು ಕನಸು ಇದೆ. ನಾನು ಭಾರತವನ್ನು ಬಲಿಷ್ಠ , ಸ್ವತಂತ್ರ , ಸ್ವಾವಲಂಬಿ ಮತ್ತು ಮನುಕುಲದ ಸೇವೆಯಲ್ಲಿ ವಿಶ್ವದ ರಾಷ್ಟ್ರಗಳ ಮುಂಚೂಣಿಯಲ್ಲಿರಬೇಕೆಂದು ಕನಸು ಕಾಣುತ್ತೇ ನೆ. ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ನಮ್ಮ ಜನರ ಸಾಮೂಹಿಕ ನಿರ್ಣಯದ ಮೂಲಕ ಆ ಕನಸನ್ನು ನನಸಾಗಿಸಲು ನಾನು ಬದ್ಧನಾಗಿದ್ದೇನೆ ಎಂದು ಭಾಷಣದಲ್ಲಿ ಹೇಳಲಾಗಿದೆ.

“ರಾಜೀವ್ ಅವರು 21 ನೇ ಶತಮಾನದ ಭಾರತಕ್ಕಾಗಿ ದೂರದೃಷ್ಟಿ ಹೊಂದಿದ್ದರು. ಅವರು ದೂರಸಂಪರ್ಕ, ಪಂಚಾಯತ್ ರಾಜ್, ಮಹಿಳೆಯರನ್ನು ರಾಜಕೀಯದಲ್ಲಿ ಮುಂಚೂಣಿಗೆ ತರಲು ದೂರದೃಷ್ಟಿಯನ್ನು ಹೊಂದಿದ್ದರು. ಅವರು ದೊಡ್ಡ ಕನಸುಗಳನ್ನು ಹೊಂದಿದ್ದರು ಮತ್ತು ಕಾಂಗ್ರೆಸ್ ಪಕ್ಷವು ಭಾರತಕ್ಕಾಗಿ ಅವರ ಕನಸುಗಳನ್ನು ನನಸಾಗಿಸಲು ಸಹಾಯ ಮಾಡಿತು” ಎಂದು ರಾಹುಲ್ ಗಾಂಧಿಯವರ ಹಳೆಯ ಭಾಷಣವನ್ನು ವೀಡಿಯೊದಲ್ಲಿ ಹೇಳಲಾಗಿದೆ.
ಇಂದಿರಾ ಗಾಂಧಿ ಹತ್ಯೆ ಬಳಿಕ ದೇಶದ ಪ್ರಧಾನಿಯಾಗಿ ರಾಜೀವ್ ಗಾಂಧಿ ಅಧಿಕಾರ ವಹಿಸಿಕೊಂಡರು. 1984 ರಿಂದ 1989 ರವರೆಗೆ ಪ್ರಧಾನಿಯಾಗಿದ್ದರು. ಅತ್ಯಂ ತ ಕಿರಿಯ ವಯಸ್ಸಿಗೆ ಪ್ರಧಾನಿಯಾಗಿದ್ದರು. 1991ರ ಮೇ 21ರಂದು ರಾಜೀವ್ ಗಾಂಧಿ ಹತ್ಯೆಗೀಡಾದರು.










