• Home
  • About Us
  • ಕರ್ನಾಟಕ
Thursday, July 10, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಕರ್ನಾಟಕದಲ್ಲಿ 5 ವರ್ಷದೊಳಗಿನ ಪ್ರತಿ ಮೂರರಲ್ಲಿ‌ ಒಂದು ಮಗು ಅಪೌಷ್ಟಿಕವಾಗಿದೆ: NHFS-5 ಡೇಟಾ

ಫಾತಿಮಾ by ಫಾತಿಮಾ
May 19, 2022
in ಕರ್ನಾಟಕ
0
ಕರ್ನಾಟಕದಲ್ಲಿ 5 ವರ್ಷದೊಳಗಿನ ಪ್ರತಿ ಮೂರರಲ್ಲಿ‌ ಒಂದು ಮಗು ಅಪೌಷ್ಟಿಕವಾಗಿದೆ: NHFS-5 ಡೇಟಾ
Share on WhatsAppShare on FacebookShare on Telegram

ಮಧ್ಯಾಹ್ನದ ಊಟ ಮತ್ತು ಕ್ಷೀರ ಭಾಗ್ಯದಂತಹ ರಾಜ್ಯ ಸರ್ಕಾರದ ಯೋಜನೆಗಳ ಹೊರತಾಗಿಯೂ, ಕರ್ನಾಟಕದಲ್ಲಿ ಐದು ವರ್ಷದೊಳಗಿನ 35% ಮಕ್ಕಳಲ್ಲಿ ಬೆಳವಣಿಗೆ ಕುಂಠಿತರಾಗಿದ್ದಾರೆ ಎಂದು ಮೇ 3ರಂದು ಬಿಡುಗಡೆಯಾಗಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ತಿಳಿಸಿದೆ. ಇದು ರಾಷ್ಟ್ರೀಯ ಸರಾಸರಿಯಾಗಿರುವ 36% ಕ್ಕಿಂತ ಕೇವಲ 1% ಕಡಿಮೆ.

ADVERTISEMENT

ಬೆಳವಣಿಗೆ ಕುಂಠಿತವಾಗುವುದು ಅಥವಾ ವಯಸ್ಸಿಗೆ ತಕ್ಕುದಾದ ಎತ್ತರ ಇಲ್ಲದಿರುವುದು ದೀರ್ಘಕಾಲದ ಪೋಷಣೆಯ ಕೊರತೆಯ ಸಂಕೇತವಾಗಿದೆ. ತೆಳ್ಳಗಿನ ತಾಯಂದಿರಿಗೆ ಜನಿಸುವ ಮಕ್ಕಳು ಬೆಳವಣಿಗೆಯಲ್ಲಿನ ಸಮಸ್ಯೆಗೆ ಹೆಚ್ಚು ಒಳಗಾಗುತ್ತಾರೆ ಮತ್ತು ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಕುಂಠಿತಗೊಳ್ಳುವಿಕೆಯ ಪ್ರಮಾಣ ಹೆಚ್ಚಾಗಿದೆ ಎಂದೂ ಸಮೀಕ್ಷೆ ತಿಳಿಸಿದೆ.

ಸಮೀಕ್ಷೆಯ ಬಗ್ಗೆ ಮಾತನಾಡುತ್ತಾ ಬೆಂಗಳೂರಿನ ಅಕುರಾ ಆಸ್ಪತ್ರೆಯ ಸ್ತ್ರೀರೋಗತಜ್ಞ ಮತ್ತು ಮಕ್ಕಳ ಸಂರಕ್ಷಣೆಯಲ್ಲಿ ತರಬೇತುದಾರ ಡಾ. ಸಲ್ದಾನಾ ಅವರು ಈ ಅಪೌಷ್ಟಿಕತೆಗೆ ಎರಡು ಕಾರಣಗಳಿವೆ ಎನ್ನುತ್ತಾರೆ. ಮೊದಲನೆಯದಾಗಿ, ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳ ಸಾಮಾಜಿಕವಾಗಿ ಆರ್ಥಿಕವಾಗಿ ಕೆಳಗಿರುವ ಗುಂಪುಗಳಲ್ಲಿ ಪೀಳಿಗೆಯಿಂದ ಪೀಳಿಗೆಗೆ ದೀರ್ಘಾವಧಿಯ ಅಪೌಷ್ಟಿಕತೆ ಮತ್ತು ಗುಣಮಟ್ಟದ ಆಹಾರ ಸೇವನೆಯಲ್ಲಿನ ಕೊರತೆ ಕಂಡು ಬರುತ್ತದೆ. ಅಂದರೆ, ಈ ಮಕ್ಕಳ ಪೋಷಕರು ಮತ್ತು ಒಡಹುಟ್ಟಿದವರು ಸಹ ಅಪೌಷ್ಟಿಕತೆಯನ್ನು ಹೊಂದಿರುತ್ತಾರೆ.

ಎರಡನೆಯದಾಗಿ, ಕಳೆದ ಎರಡು ವರ್ಷಗಳಲ್ಲಿನ ಸಾಂಕ್ರಾಮಿ ರೋಗಕ ಸಮಯದಲ್ಲಿ, ಸರ್ಕಾರದ ಕೈಗೊಂಡ ಕ್ರಮಗಳು ಮತ್ತು ಆರ್ಥಿಕ ಕುಸಿತದಿಂದಾಗಿ ಪೌಷ್ಠಿಕಾಂಶದ ಆಹಾರಗಳಾದ ಬೇಳೆಕಾಳುಗಳು, ಎಣ್ಣೆಗಳು ಮತ್ತು ಸಸ್ಯ ಮತ್ತು ಮಾಂಸಾಹಾರಿ ಆಹಾರಗಳ ಬೆಲೆಗಳಲ್ಲಿನ ಹೆಚ್ಚಳಕ್ಕೆ ಕಾರಣವಾಯಿತು‌. ಇದು ದೀರ್ಘಕಾಲದ ಅಪೌಷ್ಟಿಕತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಅವರು ವಿವರಿಸುತ್ತಾರೆ.

ಸಮೀಕ್ಷೆಯ ಫಲಿತಾಂಶಗಳು ಆಶ್ಚರ್ಯಕರವಾಗಿಲ್ಲ ಎನ್ನುವ ಕರ್ನಾಟಕ ಜನರೋಗ್ಯ ಚಳವಳಿಯ ಸಹ ಸಂಚಾಲಕಿ ಅಖಿಲಾ ವಾಸನ್ ರಾಜ್ಯದಲ್ಲಿ ನಲವತ್ತರಷ್ಟು ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಕೇವಲ 11% ಶಿಶುಗಳು ಮಾತ್ರ ಬೇಕಾದಷ್ಟು ಆಹಾರವನ್ನು ಪಡೆಯುತ್ತಾರೆ. ಮಧ್ಯಾಹ್ನದ ಊಟದ ಗುಣಮಟ್ಟವೂ ರಾಜ್ಯದಲ್ಲಿ ತುಂಬಾ ಕಳಪೆಯಾಗಿದೆ ಎನ್ನುತ್ತಾರೆ. “ಮಧ್ಯಾಹ್ನದ ಊಟದಲ್ಲಿ, ಅವರು ಮೊಟ್ಟೆಗಳನ್ನು ನೀಡುವುದಿಲ್ಲ ಮತ್ತು ಆಹಾರಕ್ಕೆ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಕೂಡ ಬಳಸುವುದಿಲ್ಲ ” ಎಂದು‌ ಹೇಳುತ್ತಾರೆ.

“ಬೆಳವಣಿಗೆ‌ ಕುಂಠಿತವಾಗುವುದು ಶೈಕ್ಷಣಿಕ ಸಾಧನೆಯ ಮೇಲೂ ಪರಿಣಾಮ ಬೀರುತ್ತದೆ. ಅಂದರೆ, ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಮಕ್ಕಳಿಗೆ ಶಿಕ್ಷಣದ ಅವಶ್ಯಕತೆಗಳನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ” ಎಂದು ವಾಸನ್ ಹೇಳುತ್ತಾರೆ. “ಸರಳವಾಗಿ ಹೇಳುವುದಾದರೆ ಮಕ್ಕಳ ಭವಿಷ್ಯವು ಅಪಾಯದಲ್ಲಿದೆ” ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ಆರೋಗ್ಯ ಕಾರ್ಯಕರ್ತೆ ಡಾ ಸಿಲ್ವಿಯಾ ಕರ್ಪಗಮ್ “ದೀರ್ಘಕಾಲದ ಅಪೌಷ್ಟಿಕತೆ ಕರ್ನಾಟಕದಲ್ಲಿ ಗಂಭೀರ ಸಮಸ್ಯೆಯಾಗಿದೆ. ಮತ್ತು ಕೊರೋನಾ ಮತ್ತು ಲಾಕ್‌ಡೌನ್‌ನಿಂದಾದ ಜೀವನೋಪಾಯದ ನಷ್ಟ, ಸ್ಥಳಾಂತರ, ಸಾರ್ವಜನಿಕ ಸಾರಿಗೆಯ ಸ್ಥಗಿತ, ಮೂಲಭೂತ ಆರೋಗ್ಯ ಸೇವೆಗಳ ನಿರಾಕರಣೆ ಇವು ಸಮಸ್ಯೆಗಳನ್ನು ಇನ್ನಷ್ಟು ಬಿಗಡಾಯಿಸಿತು” ಎನ್ನುತ್ತಾರೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ, ದುರ್ಬಲ ಗುಂಪುಗಳಾದ 14 ವರ್ಷದೊಳಗಿನ ಮಕ್ಕಳು, ಹದಿಹರೆಯದ ಹುಡುಗಿಯರು ಮತ್ತು ಗರ್ಭಿಣಿ ಹಾಗೂ ಬಾಣಂತಿಯರು ಕಾನೂನುಬದ್ಧವಾಗಿ ಸರ್ಕಾರದಿಂದ ಆಹಾರ ಪಡೆದುಕೊಳ್ಳಲು ಅರ್ಹತೆ ಪಡೆದುಕೊಳ್ಳುತ್ತಾರೆ ಆದರೆ ಸರ್ಕಾರಕ್ಕೆ ಇದನ್ನು ಪೂರೈಸಲಾಗುತ್ತಿಲ್ಲ ಎಂದು ಅವರು ಹೇಳಿದರು.

“ಸರ್ಕಾರವು ಒದಗಿಸುವ ಆಹಾರವನ್ನು ಸಹ ಧಾನ್ಯಗಳು ಮತ್ತು ರಾಗಿಗೆ ಸೀಮಿತಗೊಳಿಸಲಾಗಿದೆ. ಅತ್ಯಂತ ಕಳಪೆ ಆಹಾರ ವೈವಿಧ್ಯತೆ ಇದೆ. ಹಾಲು ಮತ್ತು ಡೈರಿ ಹೊರತುಪಡಿಸಿ ಎಲ್ಲಾ ಪ್ರಾಣಿ ಮೂಲದ ಆಹಾರಗಳ ಕಲಬೆರೆಕೆ ಮಾಡಲಾಗುತ್ತದೆ. ಇವುಗಳು ಅಸ್ತಿತ್ವದಲ್ಲಿರುವ ಸೂಚಕಗಳನ್ನು ಸಹ ಇನ್ನಷ್ಟು ಹದಗೆಡಿಸಬಹುದು, ಆದ್ದರಿಂದ ಆಹಾರ ಮತ್ತು ಪೌಷ್ಟಿಕಾಂಶಕ್ಕೆ ಸರ್ಕಾರ ಕೈಗೊಳ್ಳುವ ನಿರ್ಧಾರಗಳು NFHS ಮತ್ತು CNNS ನಂತಹ ಪುರಾವೆಗಳು, ವಿಜ್ಞಾನ ಮತ್ತು ಡೇಟಾವನ್ನು ಆಧರಿಸಿರಬೇಕು ಎಂದು ನಾವು ಒತ್ತಾಯಿಸಬೇಕಾಗಿದೆ, ” ಎಂದು ಕರ್ಪಗಮ್ ಹೇಳುತ್ತಾರೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಇಂಧನ ಬೆಲೆ ಹೆಚ್ಚಳಕ್ಕೆ ತೈಲ ಬಾಂಡ್ ಕಾರಣವೆ?

Next Post

ಭವಿಷ್ಯದತ್ತ ಯೋಚಿಸಿ ಬದುಕು ರೂಪಿಸಿಕೊಳ್ಳಿ

Related Posts

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
0

ತರುಣ್‌ ಸುಧೀರ್‌ ನಿರ್ಮಾಣದ ಹೊಸ ಚಿತ್ರಕ್ಕೆ ಶಿವಣ್ಣ-ಪ್ರೇಮ್‌ ಸಾಥ್..ʼಏಳುಮಲೆʼ ಟೈಟಲ್‌ ಟೀಸರ್‌ನಲ್ಲಿ ಮಿಂಚಿದ ರಕ್ಷಿತಾ ಸಹೋದರ ರಾಣಾ. ತರುಣ್ ಕಿಶೋರ್ ಸುಧೀರ್ ನಿರ್ಮಾಣ ಮಾಡುತ್ತಿರುವ ಪುನೀತ್ ರಂಗಸ್ವಾಮಿ...

Read moreDetails

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

July 9, 2025
Next Post
ಭವಿಷ್ಯದತ್ತ ಯೋಚಿಸಿ ಬದುಕು ರೂಪಿಸಿಕೊಳ್ಳಿ

ಭವಿಷ್ಯದತ್ತ ಯೋಚಿಸಿ ಬದುಕು ರೂಪಿಸಿಕೊಳ್ಳಿ

Please login to join discussion

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada