• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಶೇ.15ರ ಗಡಿದಾಟಿದ ಸಗಟು ದರ ಹಣದುಬ್ಬರ, ಬಡ್ಡಿದರ ಏರಿಕೆಯಿನ್ನು ಅನಿವಾರ್ಯ!

Any Mind by Any Mind
May 17, 2022
in ದೇಶ
0
ಶೇ.15ರ ಗಡಿದಾಟಿದ ಸಗಟು ದರ ಹಣದುಬ್ಬರ, ಬಡ್ಡಿದರ ಏರಿಕೆಯಿನ್ನು ಅನಿವಾರ್ಯ!
Share on WhatsAppShare on FacebookShare on Telegram

ಚಿಲ್ಲರೆ ದರ ಹಣದುಬ್ಬರದ ನಂತರ ಈಗ ಸಗಟುದರ ಹಣದುಬ್ಬರ (ಡಬ್ಲ್ಯೂಪಿಐ) ಮಿತಿ ಮೀರಿ ಜಿಗಿದಿದೆ. ಏಪ್ರಿಲ್ ತಿಂಗಳಲ್ಲಿ ಶೇ.15.08ಕ್ಕೆ ಏರಿದೆ. ಮಾರ್ಚ್ ತಿಂಗಳಲ್ಲಿ ಶೇ.14.55ರಷ್ಟಿತ್ತು. ಏಪ್ರಿಲ್ ತಿಂಗಳಲ್ಲೂ ಎರಡಂಕಿ ಹಣದುಬ್ಬರ ದಾಖಲಾಗುವುದರೊಂದಿಗೆ ಸಗಟು ದರ ಹಣದುಬ್ಬರವು ಸತತ 13 ತಿಂಗಳ ಕಾಲ ಎರಡಂಕಿ ದಾಟಿ ದಾಖಲೆ ಮಾಡಿದೆ. ಕೇಂದ್ರ ವಾಣಿಜ್ಯ ಸಚಿವಾಲಯವು ಮಂಗಳವಾರ ಹಣದುಬ್ಬರದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.

ADVERTISEMENT

ಕಳೆದ ವರ್ಷ  ಇದೇ ಅವಧಿಯಲ್ಲಿ ಸಗಟುದರ ಹಣದುಬ್ಬರ ಶೇ.10.74ರಷ್ಟಿತ್ತು.  ಚಿಲ್ಲರೆ ದರ ಹಣದುಬ್ಬರವು (ಸಿಪಿಐ) ಏಪ್ರಿಲ್ ತಿಂಗಳಲ್ಲಿ ಶೇ.7.79ರಷ್ಟು ದಾಖಲಾಗಿದೆ. ಇದು ಮೇ2014ರ ನಂತರ ಅತಿಗರಿಷ್ಠ ಹಣದುಬ್ಬರವಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಒಟ್ಟಾರೆ ಸೂಚ್ಯಂಕ ಶೇ.2.1ರಷ್ಟು ಹೆಚ್ಚಳವಾಗಿದ್ದರೆ, ಇಂಧನ ಮತ್ತು ವಿದ್ಯುತ್ ಶೇ.2.8ರಷ್ಟು ಹೆಚ್ಚಳವಾಗಿದೆ. ತರಕಾರಿ ಮತ್ತಿತರ ಸರಕುಗಳ ಸೂಚ್ಯಂಕ ಮಾರ್ಚ್ ತಿಂಗಳಿಗಿಂತ ಶೇ.1.7ರಷ್ಟು ಹೆಚ್ಚಳವಾಗಿದೆ.

ಏಪ್ರಿಲ್‌ನಲ್ಲಿ ಹಣದುಬ್ಬರದ ತೀವ್ರ ಹೆಚ್ಚಳದ ನಿರೀಕ್ಷಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು ಜೂನ್‌ ತಿಂಗಳ ನಿಗದಿತ ಸಭೆಗಿಂತ ಒಂದು ತಿಂಗಳು ಮುಂಚಿತವಾಗಿ ಮೇ 4ರಂದು ಸಭೆ ನಡೆಸಿ, ರೆಪೊದರವನ್ನು 40 ಅಂಶಗಳಷ್ಟು (ಶೇ. 0.40) ಏರಿಕೆ ಮಾಡಿತ್ತು. 

ಜೂನ್ ತಿಂಗಳ ಹಣಕಾಸು ನೀತಿ ಸಮಿತಿ ಸಭೆಯ ಹೊತ್ತಿಗೆ ಶೇ.0.75 ರಿಂದ ಶೇ.1.0ರಷ್ಟು ಬಡ್ಡಿ ದರ ಏರಿಸುವ ನಿರೀಕ್ಷೆ ಹಣಕಾಸು ಮಾರುಕಟ್ಟೆಯಲ್ಲಿದೆ. ಹಣದುಬ್ಬರ ಹೆಚ್ಚಳಕ್ಕೆ ಇತ್ತೀಚೆಗೆ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರದ ಆರ್ಥಿಕ ಪರಿಣಾಮಗಳು ಕಾರಣವಾದರೂ, ದೇಶೀಯ ಮಾರುಕಟ್ಟೆಯಲ್ಲಿ ಇಂಧನ ದರ ತೀವ್ರವಾಗಿ ಏರಿಕೆಯಾಗಿದ್ದರಿಂದಾಗಿ ಯುದ್ಧ ಆರಂಭಕ್ಕೂ ಮುನ್ನವೇ ಅಂದರೆ ಜನವರಿ ತಿಂಗಳಿಂದಲೇ ಚಿಲ್ಲರೆ ದರ ಹಣದುಬ್ಬರ ಶೇ. 6ರ ಗಡಿದಾಟಿತ್ತು. ಹದಿಮೂರು ತಿಂಗಳಿಂದಲೂ ಸಗಟುದರದ ಸೂಚ್ಯಂಕವು ಎರಡಂಕಿ ದಾಟಿತ್ತು. ಯುದ್ಧದ ಪರಿಣಾಮ ಹಣದುಬ್ಬರ ಹೆಚ್ಚಳ ತ್ವರಿತವಾಗಿದೆ.

ಐದು ರಾಜ್ಯಗಳ ಚುನಾವಣೆ ಮುಗಿದ ನಂತರ ಕೇಂದ್ರ ಸರ್ಕಾರವು ಸತತ ಹದಿನೈದು ದಿನಗಳ ಕಾಲ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಏರಿಕೆ ಮಾಡಿತ್ತು. ಈ ಅವಧಿಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಸರಾಸರಿ 10 ರೂಪಾಯಿ ಅಂದರೆ ಶೇ.12ರಷ್ಟು ಏರಿಕೆಯಾಗಿತ್ತು. ಇದಲ್ಲದೇ ರಿಸರ್ವ್ ಬ್ಯಾಂಕ್ ಬಡ್ಡಿದರ ಏರಿಸಿದ ನಂತರವೂ ಕೇಂದ್ರ ಸರ್ಕಾರ ಎಲ್ಪಿಜಿ ಸಿಲಿಂಡರ್ ದರವನ್ನು 50 ರೂಪಾಯಿ ಏರಿಸಿ 1000 ರೂಪಾಯಿ ಗಡಿ ದಾಟಿಸಿದೆ. ನಿನ್ನೆಯಷ್ಟೇ ಸಿಎನ್ಜಿ ದರವನ್ನು ಏರಿಕೆ ಮಾಡಿದೆ. ಹೀಗಾಗಿ ಹಣದುಬ್ಬರ ಸದ್ಯಕ್ಕೆ ತಗ್ಗುವ ಯಾವುದೇ ಸಾಧ್ಯತೆ ಇಲ್ಲ.

Tags: BJPCongress PartyCovid 19ನರೇಂದ್ರ ಮೋದಿಬಡ್ಡಿದರಬಿಜೆಪಿಹಣದುಬ್ಬರ
Previous Post

ವಕೀಲೆ ಸಂಗೀತಾ ಶಿಕ್ಕೇರಿ‌ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್

Next Post

ಗಾಯಗೊಂಡ ಅಜಿಂಕ್ಯ ರಹಾನೆ ಐಪಿಎಲ್‌ ನಿಂದ ಹೊರಗೆ

Related Posts

Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
0

ಹಾಸನ ಜಿಲ್ಲೆಯ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆ ರಾಜ್ಯದಲ್ಲಿ ಮೂರು ಸಾವಿರ ಅಕ್ರಮ ಪಂಪ್ ಸೆಟ್ ಗಳ ಸಕ್ರಮ ಕೃಷಿ ಫೀಡರ್ ಗಳನ್ನು ಸೌರೀಕರಣಗೊಳಿಸಿ ರೈತರ...

Read moreDetails

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025
Next Post
ಗಾಯಗೊಂಡ ಅಜಿಂಕ್ಯ ರಹಾನೆ ಐಪಿಎಲ್‌ ನಿಂದ ಹೊರಗೆ

ಗಾಯಗೊಂಡ ಅಜಿಂಕ್ಯ ರಹಾನೆ ಐಪಿಎಲ್‌ ನಿಂದ ಹೊರಗೆ

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada