• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಎಣ್ಣೆ, ತರಕಾರಿ, ಹಾಲು, ಅಕ್ಕಿ-ಬೇಳೆ ಬೆಲೆ ಕೇಳಿದರೆ ತಲೆ ತಿರುಗಿ ಬೀಳ್ತಿರ!

Any Mind by Any Mind
April 5, 2022
in ದೇಶ
0
ಎಣ್ಣೆ, ತರಕಾರಿ, ಹಾಲು, ಅಕ್ಕಿ-ಬೇಳೆ ಬೆಲೆ ಕೇಳಿದರೆ ತಲೆ ತಿರುಗಿ ಬೀಳ್ತಿರ!
Share on WhatsAppShare on FacebookShare on Telegram

ಹೋಟೆಲ್‌ ಗೆ ಹೋದರೆ ಬೈಯ್ಕೊಂಡು ತಿನ್ನಬೇಕು. ಗೋಣಿಚೀಲದಲ್ಲಿ ಹಣ ತಂದರೂ ಒಂದೊತ್ತಿನ ಊಟಕ್ಕೂ ಯೋಚನೆ ಮಾಡೋ ಸ್ಥಿತಿ. ಜೇಬು ತುಂಬಿಕೊಂಡು ಹೊರಗೆ ಹೋದರೆ ಮರಳಿ ಬರುವಾಗ ಖಾಲಿ ಖಾಲಿ!

ADVERTISEMENT

ಇದು ಇವತ್ತಿನ ಭಾರತದಲ್ಲಿನ ಬಹುತೇಕರ ಸ್ಥಿತಿ. ಯಾವುದೇ ಬೆಲೆ ಕೇಳಿದರೂ ಆಶ್ಚರ್ಯ, ಆಘಾತ. ಇವತ್ತು ಕೇಳಿದ ಬೆಲೆ ನಾಳೆಗೆ ದುಪ್ಪಟ್ಟು. ರೇಟು ಕೇಳೋಕೆ ಭಯ. ಕೆಜಿ ಲೆಕ್ಕದಲ್ಲಿ ಸಿಗುತ್ತಿದ್ದ ತರಕಾರಿ, ಬೇಳೆ-ಬೆಲೆ ಅದೇ ರೇಟಿಗೆ ೧೦೦ ಗ್ರಾಂ, ೨೦೦ ಗ್ರಾಂ ಅಂತಾರೆ. ಉಸ್ಸಾಪ್ಪ, ದುಬಾರಿ ದುನಿಯಾ ಬೇಸಿಗೆ ಕಾಲದ ಬಿಸಿಲಿಗಿಂತ ಹೆಚ್ಚು!

ಹೌದು, ದೇಶಾದ್ಯಂತ ಪೆಟ್ರೋಲ್, ಡೀಸೆಲ್, ತರಕಾರಿಗಳು, ಎಣ್ಣೆ, ಹಾಲು ಮತ್ತು ಇತರ ಅಗತ್ಯ ವಸ್ತುಗಳ ಬೆಲೆಗಳು ವೇಗವಾಗಿ ಏರುತ್ತಿವೆ. ದಿನದಿಂದ ದಿನಕ್ಕೆ ಬೆಲೆ ಏರಿಕೆ ರಾಕೆಟ್‌ ವೇಗದಲ್ಲಿ ಗಗನಕ್ಕೆ ಏರುತ್ತಿರುವುದನ್ನು ನೋಡಿ.  ಜನಸಾಮಾನ್ಯರು ಕಂಗಾಲಾಗಿದ್ದಾರೆ.

ಉಕ್ರೇನ್ ಯುದ್ಧದ ಪರಿಣಾಮವಾಗಿ ಜಾಗತಿಕವಾಗಿ ಕಚ್ಚಾತೈಲ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಪಂಚ ರಾಜ್ಯಗಳ ಚುನಾವಣೆಯ ಬಳಿಕ ದೇಶದ ಸರ್ಕಾರಿ ತೈಲ ಕಂಪನಿಗಳು ದೇಶದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿ ದಿನ ಪರಿಷ್ಕರಣೆ ವೇಳೆ ಏರಿಕೆ ಮಾಡುತ್ತಿದೆ. ದೇಶದಲ್ಲಿ 15 ದಿನಗಳಲ್ಲಿ 13 ಬಾರಿ ಇಂಧನ ದರವನ್ನು ಏರಿಕೆ ಮಾಡಲಾಗಿದೆ. ಇಂದು ಕೂಡಾ ಪೆಟ್ರೋಲ್‌, ಡೀಸೆಲ್ ದರ ಏರಿಕೆ ಮಾಡಲಾಗಿದೆ.

ತರಕಾರಿ, ಅಕ್ಕಿ ಬೆಲೆ ಏರಿಕೆ

ತರಕಾರಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಎಎನ್‌ಐ ವರದಿಯ ಪ್ರಕಾರ ಟೊಮ್ಯಾಟೊ, ಕುಂಬಳಕಾಯಿ, ಮೆಣಸಿನಕಾಯಿ, ಮೂಲಂಗಿ ಮತ್ತು ಸೋರೆಕಾಯಿ ಬೆಲೆಗಳು ವೇಗವಾಗಿ ಏರಿದೆ. ತರಕಾರಿ ಮಾರಾಟಗಾರರು ಮತ್ತು ವ್ಯಾಪಾರಿಗಳು ತರಕಾರಿ ಬೆಲೆಯಲ್ಲಿ ಈ ಹಠಾತ್ ಹೆಚ್ಚಳದ ಹಿಂದಿನ ಪ್ರಮುಖ ಕಾರಣ ಬಗ್ಗೆ ಉಲ್ಲೇಖಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

ಕೋಳಿ, ಅಡುಗೆ ಎಣ್ಣೆ ಮತ್ತು ಬ್ರಾಂಡೆಡ್ ಬಾಸ್ಮತಿ ಅಕ್ಕಿಯ ಬೇಡಿಕೆಯ ಮೇಲೂ ಬೆಲೆ ಏರಿಕೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಬಾಸ್ಮತಿ ಅಕ್ಕಿಯ ಜಾಗತಿಕ ಬೆಲೆ ಏರಿಕೆಯಾಗಿದ್ದು ಜೊತೆಗೆ ಪ್ರಾದೇಶಿಕ ತಳಿಗಳ ಅಕ್ಕಿಯ ದರಗಳು ಏರಿಕೆಯಾಗಿವೆ.

ಖಾದ್ಯ ತೈಲ

ದೇಶೀಯ ಬೇಡಿಕೆಯ ಶೇಕಡಾ 60 ರಷ್ಟು ಪೂರೈಸಲು ಖಾದ್ಯ ತೈಲದ ಆಮದಿನ ಮೇಲೆ ಅವಲಂಬಿತವಾಗಿದೆ. ಜಾಗತಿಕ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಕಳೆದೆರಡು ತಿಂಗಳುಗಳಲ್ಲಿ ವಿವಿಧ ರೀತಿಯ ಅಡುಗೆ ಎಣ್ಣೆಗಳ ಪೂರೈಕೆ ಸಾಧ್ಯವಾಗದೇ ಖಾದ್ಯ ತೈಲದ ಬೆಲೆ ಏರಿಕೆ ಕಂಡಿದೆ. ಪಿಟಿಐ ವರದಿಯ ಪ್ರಕಾರ, ಸರ್ಕಾರದ ಹಲವಾರು ಕ್ರಮಗಳ ಹೊರತಾಗಿಯೂ ಬೆಲೆಗಳು ಏರಿಕೆ ಕಂಡಿವೆ.

ಸೂರ್ಯಕಾಂತಿ ಎಣ್ಣೆಯ ಸರಾಸರಿ ಬೆಲೆ ಈ ವರ್ಷದ ಜನವರಿ 1 ರಂದು ಕೆಜಿಗೆ 161.71 ರೂ.ಗೆ ಹೋಲಿಸಿದರೆ ಏಪ್ರಿಲ್ 4 ರಂದು ಕೆಜಿಗೆ 184.58 ರೂ.ಗೆ ಏರಿದೆ. ಅದೇ ರೀತಿ, ಸೋಯಾಬೀನ್ ಎಣ್ಣೆಯ ಸರಾಸರಿ ಬೆಲೆ ಕೆಜಿಗೆ 148.59 ರೂ.ನಿಂದ 162.13 ರೂ.ಗೆ ಏರಿಕೆಯಾಗಿದೆ, ತಾಳೆ ಎಣ್ಣೆಯು ಪ್ರತಿ ಕೆಜಿಗೆ 128.28 ರೂ.ಗಳಿಂದ 151.59 ರೂ.ಗೆ ಏರಿಕೆಯಾಗಿದೆ. ಸಾಸಿವೆ ಎಣ್ಣೆಯು ಪ್ರತಿ ಕೆಜಿಗೆ 2.78 ರೂಗಳಿಂ  188.54 ರೂ.ಗೆ ಏರಿಕೆಯಾಗಿದೆ.

ಪೆಟ್ರೋಲ್, ಡೀಸೆಲ್, ಎಲ್ಪಿಜಿ ಗ್ಯಾಸ್ ಬೆಲೆ ಹೆಚ್ಚಳ!

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮಂಗಳವಾರ ಪ್ರತಿ ಲೀಟರ್‌ಗೆ 80-85 ಪೈಸೆಗಳಷ್ಟು ಹೆಚ್ಚಿಸಲಾಗಿದೆ.  ಕಳೆದ 15 ದಿನಗಳಲ್ಲಿ 13ನೇ ಬಾರಿಗೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ. ಕಳೆದ ಎರಡು ವಾರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ ಸುಮಾರು 9.20 ರೂ. ಏರಿಕೆಯಾಗಿದೆ.

ಮಾರ್ಚ್ 22 ರಂದು ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 50 ರೂ.ಗಳಷ್ಟು ಹೆಚ್ಚಿಸಲಾಗಿತ್ತು.

ಹಾಲು ದರ ಹೆಚ್ಚಳ!

ಈಗಾಗಲೇ ಅಮುಲ್, ಪರಾಗ್ ಮತ್ತು ಇತರರು ಬ್ರ್ಯಾಂಡ್ಗಳು ಹಾಲಿನ ಬೆಲೆಯನ್ನು  ಹೆಚ್ಚಿಸಿದ್ದಾರೆ.

ಹಣದುಬ್ಬರ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಮುಂಬರುವ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿದರಗಳ ಮೇಲಿನ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ಸಾಧ್ಯತೆಯಿದೆ. ಆದಾಗ್ಯೂ, ಹಣದುಬ್ಬರದ ಮೇಲಿನ ತನ್ನ ಮುಂಚಿನ ಮುನ್ಸೂಚನೆಯನ್ನು ಆರ್‌ಬಿಐ ಮಾರ್ಪಡಿಸಬಹುದು ಎಂದು ಹಣಕಾಸು ತಜ್ಞರು ಅಂದಾಜಿಸಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧ ಆರಂಭವಾದಾಗಿನಿಂದ, ಜಾಗತಿಕವಾಗಿ ಹೆಚ್ಚಿರುವ ತೈಲ ಬೆಲೆಗಳು ಗ್ರಾಹಕರ ಮೇಲೆ ಬೀರಿರುವ ಪ್ರಭಾವವನ್ನು ಆರ್‌ಬಿಐ ಮನಗಂಡಿದೆ ಎಂದು ಹೇಳಲಾಗುತ್ತಿದೆ.

RBI ಗವರ್ನರ್ ನೇತೃತ್ವದ ದರ ನಿಗದಿ ಸಮಿತಿ — ಹಣಕಾಸು ನೀತಿ ಸಮಿತಿ (MPC) — 2022-23 ಹಣಕಾಸು ವರ್ಷದ ಮೊದಲ ಸಭೆಯನ್ನು ಏಪ್ರಿಲ್ 6 ರಿಂದ 8 ರವರೆಗೆ ನಡೆಸಲಿದೆ. ಫಲಿತಾಂಶವನ್ನು ಏಪ್ರಿಲ್ 8 ರಂದು ಪ್ರಕಟಿಸುತ್ತದೆ.

ICRA ಲಿಮಿಟೆಡ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಅದಿತಿ ನಾಯರ್ ಅವರು ಏಪ್ರಿಲ್ 2022 ರ ನೀತಿ ಪರಾಮರ್ಶೆಯಲ್ಲಿ, MPC ತನ್ನ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಮುನ್ಸೂಚನೆಯನ್ನು ಪರಿಷ್ಕರಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

Tags: BJPCongress PartyCovid 19ಅಕ್ಕಿ-ಬೇಳೆಎಣ್ಣೆತರಕಾರಿಬಿಜೆಪಿಹಾಲು
Previous Post

ಅಂಬೇಡ್ಕರರು ಸಂವಿಧಾನದ ಮೂಲಕ ಈ ನಾಡಿನ ಪ್ರತಿಯೊಬ್ಬರಿಗೂ ಧ್ವನಿಯಾಗಿದ್ದಾರೆ :ಹೆಚ್‌ಡಿಕೆ

Next Post

ಪಾಕಿಸ್ತಾನದ 4 ಸೇರಿ 22 ಯೂಟ್ಯೂಬ್‌ ಚಾನೆಲ್‌ ನಿಷೇಧಿಸಿದ ಕೇಂದ್ರ

Related Posts

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ
Top Story

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ

by ಪ್ರತಿಧ್ವನಿ
October 23, 2025
0

ಮಿಲೆನಿಯಂ ಸಮೂಹದ ಮುಂದೆ ಪರ್ಯಾಯವೊಂದನ್ನು  ಇಡದಿದ್ದರೆ  ನಮ್ಮ ಶ್ರಮ ನಿರರ್ಥಕವಾಗುತ್ತದೆ ನಾ ದಿವಾಕರ  ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್)‌ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸುವ ಭರದಲ್ಲಿ...

Read moreDetails
ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

October 22, 2025

ನವೆಂಬರ್‌ ಕ್ರಾಂತಿ ನಡುವೆ ಡಿಕೆಶಿ ಟೆಂಪಲ್‌ ರನ್..!‌ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್ ಮತ್ತು ಪತ್ನಿ ಉಷಾ

October 22, 2025

ದರ್ಶನ್‌ನ ಟಾರ್ಗೆಟ್‌ ಮಾಡಿದ್ದೇ ಸರ್ಕಾರ..?

October 22, 2025

ದರ್ಶನ್ ಅವರ ತಮ್ಮ ನೋಡಿ ನನ್ನ ಬಾಲಿವುಡ್ ಹೀರೋ ಅನ್ಕೊಂಡ್ರೂ

October 22, 2025
Next Post
ದೇಶದ್ರೋಹ ಆರೋಪದ ಮೇಲೆ 20 ಯೂಟ್ಯೂಬ್‌ ಚಾನೆಲ್ ಹಾಗೂ 2 ನ್ಯೂಸ್ ವೆಬ್ ಸೈಟ್‌ ನಿಷೇಧಿಸಿದ ಕೇಂದ್ರ ಸರ್ಕಾರ

ಪಾಕಿಸ್ತಾನದ 4 ಸೇರಿ 22 ಯೂಟ್ಯೂಬ್‌ ಚಾನೆಲ್‌ ನಿಷೇಧಿಸಿದ ಕೇಂದ್ರ

Please login to join discussion

Recent News

ಹಿಟ್ ಅಂಡ್ ರನ್ ಕೇಸ್: ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ
Top Story

ಹಿಟ್ ಅಂಡ್ ರನ್ ಕೇಸ್: ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ

by ಪ್ರತಿಧ್ವನಿ
October 24, 2025
ಜಿಬಿಎ ವ್ಯಾಪ್ತಿಗೆ ತರುವ ಹೊರವಲಯ ಪ್ರದೇಶಗಳ ಸಮೀಕ್ಷೆಗೆ ಸೂಚನೆ: ಡಿಸಿಎಂ ಡಿ.ಕೆ. ಶಿವಕುಮಾರ್
Top Story

ಜಿಬಿಎ ವ್ಯಾಪ್ತಿಗೆ ತರುವ ಹೊರವಲಯ ಪ್ರದೇಶಗಳ ಸಮೀಕ್ಷೆಗೆ ಸೂಚನೆ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 24, 2025
ಬಿಜೆಪಿಯಿಂದ ತಿರಸ್ಕೃತಗೊಂಡ ನಿರುದ್ಯೋಗಿ ಪ್ರತಾಪ್ ಸಿಂಹ
Top Story

ಬಿಜೆಪಿಯಿಂದ ತಿರಸ್ಕೃತಗೊಂಡ ನಿರುದ್ಯೋಗಿ ಪ್ರತಾಪ್ ಸಿಂಹ

by ಪ್ರತಿಧ್ವನಿ
October 24, 2025
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ
Top Story

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ

by ಪ್ರತಿಧ್ವನಿ
October 24, 2025
ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ
Top Story

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

by ಪ್ರತಿಧ್ವನಿ
October 24, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಹಿಟ್ ಅಂಡ್ ರನ್ ಕೇಸ್: ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ

ಹಿಟ್ ಅಂಡ್ ರನ್ ಕೇಸ್: ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ

October 24, 2025
ಜಿಬಿಎ ವ್ಯಾಪ್ತಿಗೆ ತರುವ ಹೊರವಲಯ ಪ್ರದೇಶಗಳ ಸಮೀಕ್ಷೆಗೆ ಸೂಚನೆ: ಡಿಸಿಎಂ ಡಿ.ಕೆ. ಶಿವಕುಮಾರ್

ಜಿಬಿಎ ವ್ಯಾಪ್ತಿಗೆ ತರುವ ಹೊರವಲಯ ಪ್ರದೇಶಗಳ ಸಮೀಕ್ಷೆಗೆ ಸೂಚನೆ: ಡಿಸಿಎಂ ಡಿ.ಕೆ. ಶಿವಕುಮಾರ್

October 24, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada