ಜಾತಿ, ಜನಾಂಗ, ಧರ್ಮ, ಭಾಷೆ ಹೀಗೆ ಎಲ್ಲವನ್ನೂ ಮೀರಿ ಎಲ್ಲರಿಂದಲೂ ಹುಟ್ಟುಹಬ್ಬದ ಶುಭಾಶಯಗಳನ್ನ ಪಡೆದುಕೊಂಡ ಅಪೂರಪದ ವ್ಯಕ್ತಿ ಅಂದರೆ ಅದು ದೊಡ್ಮನೆ ಹುಡುಗ ನಮ್ಮ ಪುನೀತ್ ರಾಜಕುಮಾರ್. ಅಂತ ಯುವರತ್ನ ಅಪ್ಪುವಿನ ಜೀವನ ಚರಿತ್ರೆ ಪಠ್ಯದಲ್ಲಿ ಅಳವಡಿಸಿ ಅಂತ ಅಭಿಮಾನಿ ದೇವರುಗಳು ಬೇಡಿಕೆ ವ್ಯಕ್ತಪಡಿಸಿದ್ದಾರೆ.
4 & 5ನೇ ತರಗತಿಯ ಪಠ್ಯಪುಸ್ತಕದಲ್ಲಿ ದೊಡ್ಮನೆ ಹುಡುಗನ ಜೀವನಗಾಥೆ!
ಅಂದು ಬೆಟ್ಟದ ಹೂ ಅಗಿ ಅರಳಿ, ಇಂದು ದೊಡ್ಡಮನೆ ಹುಡುಗನಗಿ ಬೆಳೆದು, ಇಡೀ ದೇಶವೇ ಕೊಂಡಡುವಂತ ದಿವಂಗತ ಪುನೀತ್ ರಾಜಕುಮಾರ್ ರವರು ನಮ್ಮನ್ನು ಅಗಲಿ ಮೂರುವರೆ ತಿಂಗಳುಗಳೆ ಕಳೆದಿದೆ. ಅದರೆ ಅವರು ಮಾಡಿದ ಸಾಮಾಜಿಕ ಸೇವೆ ಪುರಸ್ಕರಿಸಿ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ಥಿ ನೀಡಿದೆ. ಮೈಸೂರು ವಿಶ್ವವಿದ್ಯಾಲಯ ಡಾಕ್ಟರ್ ರೇಟ್ ಪದವಿ ಕೊಟ್ಟು ಅಪ್ಪುವಿಗೆ ನಮನ ಸಲ್ಲಿಸಿದೆ. ಇತ್ತ ರಾಜ್ಯದಲೂ ಕೂಡ ಈ ಮಹಾನ್ ವ್ಯಕ್ತಿಯ ಜೀವನಾಧರಿತ ಯಶೋಗಾಥೆಯನ್ನೂ ಪ್ರಾಥಮಿಕ ಶಿಕ್ಷಣದಲ್ಲಿ ಅಳವಡಿಸಲು ಒತ್ತಾಯ ಮಾಡುತ್ತಿದ್ದಾರೆ.
ಪುನೀತ್ ಹೆಸರು ಕೇಳಿದರೆ ಸಾಕು ಇಡೀ ರಾಜ್ಯದ ಜನ ಒಂದು ಬಾರಿ ಮೌನವಾಗ್ತರೆ. ಚಿಕ್ಕ ವಯಸ್ಸಿನಲ್ಲೇ ನಟನೆ ಮೂಲಕ ರಾಷ್ಟ್ರ ಪ್ರಶಸ್ಥಿ ಪಡೆದು, ಇಡೀ ದೇಶವೇ ನಿಬ್ಬೆರಗಾಗಿ ನೋಡುವಂತೆ ಮಾಡಿದ ಅಪ್ಪುವಿನ ಸಾಧನೆಯ ಬದುಕು ಹಲವರಿಗೆ ಸ್ಪೂರ್ತಿ. ಇವರು ಮಾಡಿರೋ ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಹಾಗೂ ಸಹಾಯವನ್ನೂ ಪರಿಗಣಿಸಿ ಪ್ರಾಥಮಿಕ ಪಠ್ಯಪುಸ್ತಕದಲ್ಲಿ ಇವರ ಜೀವನ್ನಧಾರಿತ ಯಶೋಗಾಥೆಯನ್ನು ಅಳವಡಿಸಿ ಅಂತ ಜನ ಒತ್ತಯ ಮಾಡುತ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಬಿಜೆಪಿ ದಕ್ಷಿಣ ವಲಯದ ಅಧ್ಯಕ್ಷ ಎನ್ ಅರ್ ರಮೇಶ್ ಕೂಡ ಶಿಕ್ಷಣ ಸಚಿವ ಬಿಸಿ ನಾಗೇಶ್ ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಪುನೀತ್ ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ 26 ಅನಾಥ ಆಶ್ರಮ, 19 ಗೋ ಶಾಲೆಗಳು, 16 ವೃದ್ಧಾಶ್ರಮಗಳು, 4,800ಕ್ಕೂ ಹೆಚ್ಚಿನ ಬಡ ವಿದ್ಯಾರ್ಥಿಗಳ ಓದಿನ ಬಗ್ಗೆ ಹೆಚ್ಚಿನ ಸಹಾಯ ಅಸ್ತ ನೀಡಿದ್ದು, ಹೀಗೆ ಬದುಕಿನ ಉದ್ದಗಲಕ್ಕೂ ಜನರ ಸೇವೆ ಮಾಡಿದ ಪವರ್ ಸ್ಟಾರ್ ಬದುಕು ಮುಂದಿನ ಪೀಳಿಗೆಗೆ ಸ್ಪೂರ್ತಿ. ಮಕ್ಕಳು ಪ್ರಾಥಮಿಕ ಶಾಲೆಯಲ್ಲೇ ಇಂಥಾ ಅಪ್ರತಿಮ ಸಾಧನೆಯನ್ನು ಓದಿಕೊಂಡರೆ ಒಳ್ಳೆಯದು ಹಾಗೂ ಮುಂದಿನ ಪೀಳಿಗೆಯ ಮಕ್ಕಳಲ್ಲಿ ಸಮಾಜಮುಖಿ ಮನೋಭಾವನೆ ಬೆಳೆಸಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕ ರಂಗದಿಂದ ಕರ್ನಾಟಕ ರತ್ನ ಡಾ ಪುನೀತ್ ರಾಜ್ ಕುಮಾರ್ ಬದುಕನ್ನು ಪಠ್ಯವಾಗಿಸಲು ಜನಾಗ್ರಹ ಹೆಚ್ಚಾಗಿದೆ.