• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ʻದೇವೇಗೌಡರ ನೀಲಿಗಣ್ಣಿನ ಹುಡುಗʼ ಸಿಎಂ ಇಬ್ರಾಹಿಂ ಕೈಗೆ ಖಳನಾಯಕರಾಗಬಲ್ಲರೇ?

Any Mind by Any Mind
March 15, 2022
in ಕರ್ನಾಟಕ, ರಾಜಕೀಯ
0
ʻದೇವೇಗೌಡರ ನೀಲಿಗಣ್ಣಿನ ಹುಡುಗʼ ಸಿಎಂ ಇಬ್ರಾಹಿಂ ಕೈಗೆ ಖಳನಾಯಕರಾಗಬಲ್ಲರೇ?
Share on WhatsAppShare on FacebookShare on Telegram

ಅಲ್ಲಿಗೆ ಕಾಂಗ್ರೆಸ್ ಜೊತೆಗಿನ ಎಲ್ಲಾ ನಂಟು ಮುರಿದಿರುವ ರಾಜ್ಯದ ಹಿರಿಯ ರಾಜಕಾರಣಿ ಸಿಎಂ ಇಬ್ರಾಹಿಂ ಇದೀಗ ತೆನೆ ಹೊರಲು ಮುಹೂರ್ತ ನೋಡಿಕೊಳ್ಳುತ್ತಿದ್ದಾರೆ. ಬಹಳ ದಿನಗಳಿಂದ ಮಾತಿನಲ್ಲೇ ಗೊಂದಲ ಹುಟ್ಟು ಹಾಕಿ ಕಾಂಗ್ರೆಸ್ನ ಹಿರಿಯ ನಾಯಕರಿಗೆ ಕಿರಿಕಿರಿ ಮಾಡಿದ್ದ ಸಿಎಂ ಇಬ್ರಾಹಿಂ ಅಧಿಕೃತವಾಗಿ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ನಿಂದ ಹೊರ ನಡೆದಿದ್ದಾರೆ. ತನಗೆ ಯಾವ ಸ್ಥಾನಮಾನವೂ ನೀಡಿಲ್ಲ ಎಂಬುವುದನ್ನು ರಾಜ್ಯದ ಅಲ್ಪಸಂಖ್ಯಾತರಿಗೆ ಮಾಡಿದ ಅಪಮಾನ ಎಂದು ಕೋಟ್ ಮಾಡಿರುವ ಸಿಎಂ ಇಬ್ರಾಹಿಂಗೆ, ದಳ ಸೇರಿಕೊಂಡರೂ ಮುಂದಿನ ದಾರಿ ಏನು..? ಹೇಗೆ..? ಹೀಗೆ ಹಲವು ಪ್ರಶ್ನೆಗಳು ಎದುರುಗೊಳ್ಳಲಿದೆ.

ADVERTISEMENT

ಸಿಎಂ ಇಬ್ರಾಹಿಂ ನಿರ್ಗಮನ ಎಷ್ಟರ ಮಟ್ಟಿಗೆ ರಾಜ್ಯ ಕಾಂಗ್ರೆಸ್ಗೆ ಘಾಸಿಮಾಡಲಿದೆ ಎಂಬುವುದೇ ಸದ್ಯಕ್ಕಿರುವ ಚರ್ಚಾವಿಷಯ. 1978ರಲ್ಲಿ ಶಿವಾಜಿನಗರದಿಂದ ಚುನಾವಣಾ ಅಖಾಡಕ್ಕೆ ಧುಮುಕಿ ಗೆದ್ದು ಬಂದ ರೋಚಕ ಇತಿಹಾಸ ಇರುವ ಸಿಎಂ ಇಬ್ರಾಹಿಂ ನಂತರದ ದಿನಗಳಲ್ಲಿ ರಾಜಕೀಯವಾಗಿ ಯಶಸ್ವಿಗೊಂಡಿದ್ದರು. ಅದರಲ್ಲೂ ಸಿಎಂ ಇಬ್ರಾಹಿಂ ಅವರ ರಾಜಕೀಯ ಬದುಕಿನ ಉತ್ತುಂಗ ಎಂದರೆ 1994ರಲ್ಲಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಅಲ್ಪಸಂಖ್ಯಾತರ ಮತವನ್ನು ಕ್ರೂಢೀಕರಿಸಿ ದೇವೇಗೌಡರ ತೆಕ್ಕೆಗೆ ಕೊಟ್ಟಿದ್ದು. ಇದೂ ಈಗಲೂ ಒಂದು ಅಪ್ರತಿಮ ಇತಿಹಾಸವಾಗಿಯೇ ಉಳಿದಿದೆ. ನಂತರದಲ್ಲಿ ದೇವೇಗೌಡರು ಗೆದ್ದು ಪ್ರಧಾನಿಯಾದಾಗ ಬಂದ ದಾರಿ ಮರೆಯದ ದೇವೇಗೌಡರು ಕೈ ಹಿಡಿದ ಸಿಎಂ ಇಬ್ರಾಹಿಂರನ್ನು ತನ್ನ ಸಂಪುಟದಲ್ಲಿ ಸಚಿವ ಸ್ಥಾನ ಕೊಟ್ಟು ಕೃತಘ್ಞತೆ ಸಲ್ಲಿಸಿದ್ದರು. ಇಲ್ಲಿಗೆ ರಾಜಕೀಯ ಪಡಸಾಲೆಯಲ್ಲಿ ಸಿಎಂ ಇಬ್ರಾಹಿಂ ದೇವೇಗೌಡರ ನೀಲಿಗಣ್ಣಿನ ಹುಡುಗ ಎಂದು ಕರೆಸಿಕೊಂಡರು.

ಅದಾಗಿ ರಾಜಕೀಯ ಏರಿಳಿತಗಳಲ್ಲಿ ಸಿಎಂ ಇಬ್ರಾಹಿಂ ಸಿದ್ದರಾಮಯ್ಯನವರ ಸಖ್ಯ ಬೆಳೆಸಿಕೊಂಡರು. ಸಿದ್ದರಾಮಯ್ಯ ಕಾಂಗ್ರೆಸ್ ಬಂದ ಬೆನ್ನಲ್ಲೇ ಅಹಿಂದ ಚಳವಳಿಯಲ್ಲೂ ಸಿದ್ದರಾಮಯ್ಯ ಬೆನ್ನಿಗೆ ನಿಂತು ತನ್ನ ಕರಾರುವಾಕ್ ಭಾಷಣ ನಡೆಸಿ ಜನಮಾನಸ ಗೆದ್ದರು. ಸಿದ್ದರಾಮಯ್ಯ ಕೂಡ ಇಬ್ರಾಹಿಂಗೆ ಯೋಜನಾ ಆಯೋಗದ ಉಪಾಧ್ಯಕ್ಷ, ವಿಧಾನಪರಿಷತ್ ಸದಸ್ಯರಾಗುವವರೆಗೆ ಕೈ ಹಿಡಿದರು. 2013ರಲ್ಲಿ ಚುನಾವಣೆಯಲ್ಲಿ ಸಿಎಂ ಇಬ್ರಾಹಿಂಗೆ ಸಂಬಂಧವೇ ಇಲ್ಲದ ಭದ್ರವಾತಿ ಕ್ಷೇತ್ರದಿಂದ ಹೈಕಮಾಂಡ್ ಮೇಲೆ ಒತ್ತಡ ಹೇರಿ ಟಿಕೆಟ್ ಕೊಡಿಸುವಲ್ಲಿಯೂ ಸಿದ್ದರಾಮಯ್ಯ ಯಶಸ್ವಿಯಾಗಿದ್ದರೂ. ಹೀಗೆ ಸಿಎಂ ಇಬ್ರಾಹಿಂ ಕಾಂಗ್ರೆಸ್ನ ಮನೆಮಗನಂತೆ ಬೆಳೆದು ಇದೀಗ ಕಾಂಗ್ರೆಸ್ ಏನೂ ಕೊಟ್ಟಿಲ್ಲ ಎಂದು ಆರೋಪಿಸಿ ಹೊರ ನಡೆದಿದ್ದಾರೆ. 

ಇದರ ಹೊರತಾಗಿಯೂ ಸಿಎಂ ಇಬ್ರಾಹಿಂ ಓರ್ವ ವರ್ಣರಂಜಿತ, ಮಾತಿನಲ್ಲೇ ಅರಮನೆ ಕಟ್ಟುವ ಮಾತುಗಾರ. ಅದರಲ್ಲಿ ಯಾವ ತಕರಾರೂ ಸಲ್ಲ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ನ ಯಾವುದೇ ಸಂಘಟಿತ ಕೆಲಸಗಳಲ್ಲಿ ಇಬ್ರಾಹಿಂ ಗುರುತಿಸಿಕೊಂಡಿರಲಿಲ್ಲ. ಆಗಾಗ್ಗೆ ಮಾಧ್ಯಮಗಳ ಮುಂದೆ ಪ್ರತ್ಯಕ್ಷಗೊಂಡು ಮಾತಿನ ಚಟಾಕಿ, ಹಾಸ್ಯ ಲೇಪಿತ ಮಾತು ಆಡಿ ಮಾಯವಾಗುತ್ತಿದ್ದು ಬಿಟ್ಟರೆ ಸದ್ಯಕ್ಕೆ ರಾಜ್ಯ ರಾಜಕಾರಣದಲ್ಲಿ ಸಿಎಂ ಇಬ್ರಾಹಿಂಗೆ ಅಂಥಾ ವರ್ಚಸ್ಸೇನು ಇಲ್ಲ ಎಂಬುವುದು ಕೂಡ ಅಷ್ಟೇ ಸತ್ಯ. ಈಗಲೂ ಸಿಎಂ ಇಬ್ರಾಹಿಂ ತಾನೊಬ್ಬ ಅಲ್ಪಸಂಖ್ಯಾತರ ಮಾಸ್ ಲೀಡರ್ ಎಂದುಕೊಂಡಿದ್ದರೆ, ವಾಸ್ತವ ಬೇರೆಯೇ ಇದೆ. 

ಕಾಂಗ್ರೆಸ್ನಲ್ಲಿ ಜಮೀರ್ ಅಹಮ್ಮದ್, ಎನ್ಎ ಹ್ಯಾರಿಸ್, ಯುಟಿ ಖಾದರ್, ರಿಜ್ವನ್ ಅರ್ಷದ್ ಸೇರಿದಂತೆ ಇರುವ ಏಳು ಶಾಸಕರು ಕನಿಷ್ಠ ಪಕ್ಷ ತಮ್ಮ ಕ್ಷೇತ್ರದಲ್ಲಾದರೂ ವರ್ಚಸ್ಸು ಉಳಿಸಿಕೊಂಡಿದ್ದಾರೆ. ಯುಟಿ ಖಾದರ್ ವಿಪಕ್ಷದ ಉಪನಾಯಕರಾಗಿ ಬಜೆಟ್ ಅಧಿವೇಶನದಲ್ಲಿ ಉಪಸ್ಥಿತಿ ತೋರಿರುವ ಪರಿ ಭರವಸೆ ಮೂಡಿಸುವಂತದ್ದು. ಜೊತೆಗೆ ಮಾಸ್ ಔಟ್ರೆ ಹೊಂದಿರುವ ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಕ್ಷೇತ್ರದ ಹೊರತಾಗಿಯೂ ಇಡೀ ಬೆಂಗಳೂರಿನಲ್ಲಿ ಹಾಗೂ ಉತ್ತರ ಕರ್ನಾಟಕದ ಅಲ್ಪಸಂಖ್ಯಾ ಬಾಹುಳ್ಯವಿರುವ ಕಡೆಗಳಲ್ಲಿ ಭಾಯ್ ಜಾನ್ ಎನಿಸಿಕೊಂಡಿದ್ದಾರೆ. ಹೀಗೆ ಕಾಂಗ್ರೆಸ್ನಲ್ಲಿರುವ ಮುಸ್ಲಿಂ ನಾಯಕರಿಗೆ ಹೋಲಿಸಿಕೊಂಡರೆ ಸಿಎಂ ಇಬ್ರಾಹಿಂ ಸದ್ಯಕ್ಕೆ ಕಾಂಗ್ರೆಸ್ ಎಂಬ ಶೊಕೇಸ್ ನಲ್ಲಿರುವ ಅಲಂಕಾರಿಕ ವಸ್ತುವಷ್ಟೇ. ಕೇವಲ ಮಾತುಗಾರನಾಗಿಯಷ್ಟೇ ಕಾಂಗ್ರೆಸ್ಗೆ ಅಲ್ಪಮಟ್ಟಿನ ಕಿರಿಕಿರಿ ಮಾಡ ಬಲ್ಲರೇ ಹೊರತು ಅದಕ್ಕಿಂತ ಆಚೆಗೆ ಈಗಲೂ ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟಿರುವ ಅಲ್ಪಸಂಖ್ಯಾತರನ್ನು ಮನೋಭಾವನೆಯನ್ನು ಕೆರಳಿಸಿ ಜನತಾ ದಳಕ್ಕೆ ಮತ ಬ್ಯಾಂಕ್ ಸೃಷ್ಟಿಸಲೇನು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಸಿಎಂ ಇಬ್ರಾಹಿಂ ನಿರ್ಗಮನ ಕಾಂಗ್ರೆಸ್ಸಿಗರನ್ನು ಹೆಚ್ಚೇನು ವಿಚಲಿತಗೊಳ್ಳುವಂತೇನು ಮಾಡಲಿಲ್ಲ. 

ಸದ್ಯ ಸಿಎಂ ಇಬ್ರಾಹಿಂ ಕಾಂಗ್ರೆಸ್ ತೊರೆದಿದ್ದಾರೆ ಅಷ್ಟೇ. ದಳ ಸೇರುವವರಾದರೂ ಇನ್ನೂ ಅಧಿಕೃತವಾಗಿ ಸೇರಿಕೊಂಡಿಲ್ಲ. ಹಳೆಯ ದೋಸ್ತ್ಗಳನ್ನು ಅಪ್ಪಿಕೊಳ್ಳಲು ಹೊರಟಿರುವ ಸಿಎಂ ಇಬ್ರಾಹಿಂಗೆ ಮುಂಬರುವ ವಿಧಾನಸಭಾ ಚುನಾವಣೆ ಅಕ್ಷರಶಃ ಅಗ್ನಿ ಪರೀಕ್ಷೆಯಾಗಲಿದೆ. ಕನಿಷ್ಠ ಪಕ್ಷ ಜೆಡಿಎಸ್ಗೆ ಒಂದು ಸೀಟನ್ನಾದರೂ ಗೆಲ್ಲಿಸಿಕೊಟ್ಟರೆ ಇನ್ನುಳಿದ ಕಾಲ ಜೆಡಿಎಸ್ನಲ್ಲಿ ʻಹಿರಿಯʼ ಪಟ್ಟ ಧಕ್ಕಿಸಿಕೊಂಡು ಒಂದಿಷ್ಟು ಪೋರ್ಟ್ ಫೋಲಿಯೋ ಲಾಭಗಳನ್ನು ಪಡೆದುಕೊಂಡು ದಿನ ದೂಡಬಹುದು. ಅಲ್ಪಸಂಖ್ಯಾತರನ್ನು ಬುಟ್ಟಿಹೆ ಹಾಕಿಕೊಳ್ಳಲು ರಣತಂತ್ರ ಹೆಣೆಯುತ್ತಿರುವ ಕುಮಾರಸ್ವಾಮಿ ಆಂಡ್ ಟೀಮ್ಗೆ ಸಿಎಂ ಇಬ್ರಾಹಿಂ ಆಗಮನ ಆರಂಭದಲ್ಲಿ ಒಂದಿಷ್ಟು ಹುಮ್ಮಸ್ಸು ನೀಡಿದರೂ, ಅಂಥಾ ರಾಜಕೀಯ ಲಾಭದ ನಿರೀಕ್ಷೆಯೇನು ಅವರಿಗೂ ಇರ್ಲಿಕ್ಕಿಲ್ಲ. ಹೀಗಾಗಿ ಸಿಎಂ ಇಬ್ರಾಹಿಂ ನಿರ್ಗಮನ ಕಾಂಗ್ರೆಸ್ ಪಾಲಿಗೆ ಮುನಿಸಿಕೊಂಡು ಮನೆ ಬಿಟ್ಟ ಅಳಿಯನಂತೆಯಷ್ಟೇ.

Tags: BJPCongress PartyCovid 19ಎಚ್ ಡಿ ಕುಮಾರಸ್ವಾಮಿಎಚ್ ಡಿ ದೇವೇಗೌಡಕರೋನಾಕೋವಿಡ್-19ಬಿಜೆಪಿಸಿಎಂ ಇಬ್ರಾಹಿಂಸಿದ್ದರಾಮಯ್ಯ
Previous Post

ಕಾಶ್ಮೀರ್ ಫೈಲ್ಸ್ ಎಂಬ ಸಿನಿಮಾ ಮತ್ತು ಕಣಿವೆ ರಾಜ್ಯದ ಅಸಲೀ ಸತ್ಯ!

Next Post

ಈದ್ಗಾ ಮಸೀದಿ ತೆರವು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮಾನ್ಯ ಮಾಡಿದ ಅಲಹಾಬಾದ್ ಹೈಕೋರ್ಟ್

Related Posts

ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ
ಕರ್ನಾಟಕ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

by ಪ್ರತಿಧ್ವನಿ
April 10, 2026
0

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಮುದ್ರಿತ ಅಂಕಪಟ್ಟಿ ನೀಡುವ ಪದ್ಧತಿಗೆ ಸರ್ಕಾರ ತೆರೆ ಎಳೆಯಲು ನಿರ್ಧರಿಸಿದೆ. ಬದಲಿಗೆ ಡಿಜಿಟಲ್ ಅಂಕಪಟ್ಟಿಯನ್ನೇ ಅಧಿಕೃತವಾಗಿ...

Read moreDetails
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post
ಈದ್ಗಾ ಮಸೀದಿ ತೆರವು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮಾನ್ಯ ಮಾಡಿದ ಅಲಹಾಬಾದ್ ಹೈಕೋರ್ಟ್

ಈದ್ಗಾ ಮಸೀದಿ ತೆರವು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮಾನ್ಯ ಮಾಡಿದ ಅಲಹಾಬಾದ್ ಹೈಕೋರ್ಟ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada