ನೇಪಾಳದ ದಾದಿಂಗ್ ಜಿಲ್ಲೆಯಲ್ಲಿ ಕಾರು ಹಾಗೂ ಬಸ್ಸಿನ ನಡುವೆ ಭೀಕರ ರಸ್ತೆ ಅಫಘಾತವಾಗಿದ್ದು ಘಟನೆಯಲ್ಲಿ ನಾಲ್ವರು ಭಾರತೀಯ ಪ್ರವಾಸಿಗರು ಸೇರಿದಂತೆ ಐವರು ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತರನ್ನು ಉತ್ತರಪ್ರದೇಶ ಮೂಲದ ಬೀಮಲ್ ಚಂದ್ರ ಅಗರ್ವಾಲ್, ಸಾಧನಾ ಅಗರ್ವಾಲ್, ಸಂಧ್ಯಾ ಹಾಗೂ ಅಕೇಶ್ ಅಗರ್ವಾಲ್ ಎಂದು ಗುರುತಿಸಲಾಗಿದೆ. ಕಾಠ್ಮಂಡುವಿನಿಂದ 200ಕಿ.ಮೀ ದೂರದಲ್ಲಿರುವ ಪೋಕಹಾರದಲ್ಲಿ ಏರ್ಪಡಿಸಿದ್ದ ವಿಜ್ಞಾನ ಪ್ರದರ್ಶನ ಮುಗಿಸಿಕೊಂಡು ಕಾಠ್ಮಂಡುಗೆ ವಾಪಸ್ ಬರುವ ಸಮಯದಲ್ಲಿ ತಾಕರೆ ಎಂಬ ಪ್ರದೇಶದಲ್ಲಿ ಬಸ್ ಹಾಗೂ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಬಸದದಚಾಲಕ ನೇಪಾಳ ಮೂಲದ ದಿಲ್ ಬಹದ್ದೂರ್ ಬಾಸನೇತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
![](https://pratidhvani.com/wp-content/uploads/2022/04/gmurb7qg_nepal-generic-all_625x300_12_January_20.webp)
ಇತ್ತೀಚಿನ ದಿನಗಳಲ್ಲಿ ನೇಪಾಳದಲ್ಲಿ ರಸ್ತೆ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿದ್ದು ಕಿರಿದಾದ ರಸ್ತೆ ಹಾಗೂ ಗುಡ್ಡ ಗಾಡು ಪ್ರದೇಶಗಳು ಹೆಚ್ಚಾಗಿರುವುದರಿಂದ ಈಗಾಗುತ್ತಿದೆ ಅಲ್ಲಿನ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಈಗಾಗುತ್ತಿದೆ ಎಂದು ನಾಗರೀಕರು ಆರೋಪಿಸಿದ್ದಾರೆ.