ಬೆಂಗಳೂರು ನಗರದಲ್ಲಿ ಮನೆಗೆ ನುಗ್ಗಿ ರಾಬರಿ ಮಾಡಲಾಗಿದೆ. ಗನ್ ತೋರಿಸಿ ನಲವತ್ತು ಲಕ್ಷ ರೂಪಾಯಿ ಹಣ ಸುಲಿಗೆ ಮಾಡಿದ್ದಾರೆ ಖದೀಮರು. ನಿನ್ನೆ ರಾತ್ರಿ ಎಂಟು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಕಾರಿನಲ್ಲಿ ಬಂದು ಸುಲಿಗೆ ಮಾಡಿದ ರಾಬರ್ಸ್ ಬಗ್ಗೆ ಕೊಡಿಗೇಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಿಸಿ ಕ್ಯಾಮೆರಾಗಳ ಪರಿಶೀಲನೆ ಮಾಡಿದ್ದು, ಉತ್ತರ ಪ್ರದೇಶ ಮೂಲದ ಗ್ಯಾಂಗ್ನಿಂದ ಕೃತ್ಯ ಶಂಕೆ ವ್ಯಕ್ತವಾಗಿದೆ.
![](https://pratidhvani.com/wp-content/uploads/2024/04/IMG_7196.jpeg)
ಮೂವರು ದುಷ್ಕರ್ಮಿಗಳಿಂದ ಮುಸುಕುಧಾರಿಗಳಾಗಿ ಬಂದಿದ್ದ ಮೂವರು ಆಸಾಮಿಗಳು. ಮನೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಗ್ಯಾಂಗ್, ಅದೇ ಸಮಯಕ್ಕೆ ಮನೆಗೆ ಬಂದಿದ್ದ ಮನೆ ಮಾಲೀಕ. ಈ ವೇಳೆ ಪಿಸ್ತೂಲ್ ತೋರಿಸಿ ಮನೆ ಮಾಲೀಕನ ಹೆದರಿಸಿದ ಗ್ಯಾಂಗ್, ಮನೆಗೆ ನುಗ್ಗಿ ಕಳವು ಮಾಡಿಕೊಂಡು ಹೋಗಿದೆ.
ಸಹಕಾರ ನಗರದಲ್ಲಿರುವ ಮನೆಗೆ ನುಗ್ಗಿದ ಮೂರು ಜನ ಮುಸುಕುಧಾರಿಗಳು, ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಕಳ್ಳರು ಉತ್ತರಪ್ರದೇಶ ಮೂಲದ ಗ್ಯಾಂಗ್ ಇರಬಹುದೆಂಬ ಶಂಕೆ ವ್ಯಕ್ಯವಾಗಿದೆ. ಮನೆಗೆ ನುಗ್ಗಿ ಕಳವು ಮಾಡಿಕೊಂಡು ಹೋಗಿದ್ದಾರೆ.