ರೇಣುಕಾ ಸ್ವಾಮಿ (Renuka swamy) ಕೊಲೆ ಕೇಸ್ ಗೆ ಸಂಬಂಧಪಟ್ಟಂತೆ ಪೊಲೀಸ್ ತನಿಖೆ ವೇಳೆ ಮತ್ತಷ್ಟು ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಕೊಲೆ ಬಳಿಕ ದರ್ಶನ್ (Darshan) ಮೂವತ್ತು ಲಕ್ಷ ಹಣವನ್ನು ಪ್ರದೋಶ್ ಗೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
![](https://pratidhvani.com/wp-content/uploads/2024/06/IMG_8184-1.jpeg)
ಹಣವನ್ನು ಪಡೆದುಕೊಂಡು ಹೋಗಿದ್ದ ಪ್ರದೋಶ್, ಉಳಿದ ಆರೋಪಿಗಳಿಗೆ ಹಣವನ್ನು ತೋರಿಸಿಯೇ ಬಾಡಿಯನ್ನು ಎಸೆದು ಸರಂಡರ್ ಆಗಲು ಕಾರ್ತಿಕ್ ಅಂಡ್ ಟೀಮ್ ನ ಒಪ್ಪಿಸಲಾಗಿತ್ತಂತೆ.
ಈಗ ಸದ್ಯಕ್ಕೆ ನೀವುಗಳು ಅರೆಸ್ಟ್ ಆಗಿ (Arrest), ಕೋರ್ಟ್ (Court) ಖರ್ಚು ಬೇಲ್ (Bail) ಖರ್ಚ್ ಎಲ್ಲವನ್ನು ನೋಡಿಕೊಳ್ಳುತ್ತೆವೆ, ನಂತ್ರ ಹಣವನ್ನು ನೀಡ್ತೀವಿ ಎಂದು ಒಪ್ಪಿಸಿದ್ದ ಪ್ರದೋಶ್ ಈ ಎಲ್ಲರನ್ನು ಸರೆಂಡರ್ ಆಗಲು ಪುಸಲಾಯಿಸಿದ್ದಾನೆ.
ಅದ್ರಂತೆ ಒಟ್ಟು ಮೂವತ್ತು ಲಕ್ಷ ನಗದನ್ನು ಪ್ರದೋಶ್ ತನ್ನ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದ. ಈಗ ಪ್ರದೋಶ್ ಹಣ ಇಟ್ಟಿರುವ ಸ್ಥಳ ಸಹ ಪೊಲೀಸರು ಪತ್ತೆ ಹಚ್ಚಿದ್ದು, ಪಂಚನಾಮೆ ಮಾಡಿ ಹಣವನ್ನು ರಿಕವರಿ ಮಾಡಿಕೊಳ್ಳಲು ಪೊಲೀಸರು ತೀರ್ಮಾನ ಮಾಡಿದ್ದಾರೆ.