ದೇಶ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಪೊಲೀಸರ ಗಣನೀಯ ಸೇವೆಗೆ ನೀಡಲಾಗುವ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕವನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ರಾಜ್ಯದ 18 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಲಭಿಸಿದೆ.
ದೇಶದ ವಿವಿಧ ರಾಜ್ಯಗಳ ಪೊಲೀಸ್ ಸಿಬ್ಬಂದಿ ಪದಕಗಳನ್ನು ಪಡೆದಿದ್ದು, ಈ ಸಂಬಂಧ ಪದಕ ವಿಜೇತರ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ.
ಕರ್ನಾಟಕದ 18 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪದಕ ಪಟ್ಟಿ ಇಂತಿವೆ
– ನಂಜಪ್ಪ ಶ್ರೀನಿವಾಸ್, ಎಸ್ಪಿ ಮತ್ತು ಪ್ರಿನ್ಸಿಪಲ್ ಪೊಲೀಸ್ ತರಬೇತಿ ಶಾಲೆ ಕಡೂರು.
– ಪ್ರತಾಪ್ ಸಿಂಗ್ ತುಕರಾಮ್ ತೋರಾಟ್, ಡಿವೈಎಸ್ ಪಿ, ಐಎಸ್ ಡಿ.(DYSP-ISD)
– ನಂಬೂರು ಶ್ರೀನಿವಾಸ್ ರೆಡ್ಡಿ, ಡಿವೈಎಸ್ ಪಿ, ಸಿಐಡಿ ಫಾರೆಸ್ಟ್ ಸೆಲ್
– ನರಸಿಂಹಮೂರ್ತಿ ಪಿಳ್ಳಮುನಿಯಪ್ಪ, ಡಿವೈಎಸ್ ಪಿ ಸಿಐಡಿ (DYSP-CID)
– ಪ್ರಕಾಶ್ .ಆರ್, ಡಿವೈಎಸ್ ಪಿ ಎಸಿಬಿ (ACB)
– ಶಿವಕುಮಾರ್ ಟಿ ಎಂ, ಎಸಿಪಿ ಸುಬ್ರಮಣ್ಯಪುರ ಬೆಂಗಳೂರು
![](https://pratidhvani.com/wp-content/uploads/2022/08/rastrapati-award.jpg)
– ಝಾಕೀರ್ ಹುಸೇನ್, ಎಸಿಪಿ ಕಲಬುರಗಿ ಉಪವಿಭಾಗ
– ರಾಘವೇಂದ್ರ ರಾವ್, ಎಸಿಪಿ, ಬೆರಳಚ್ಚು ವಿಭಾಗ ಬೆಂಗಳೂರು
– ರಾಜಚಿಕ್ಕಹನುಮೇಗೌಡ, ಇನ್ಸ್ಪೆಕ್ಟರ್ ವಿದ್ಯಾರಣ್ಯಪುರ ಮೈಸೂರು
– ಡಿ ಬಿ ಪಾಟೀಲ್, ಸರ್ಕಲ್ ಇನ್ಸ್ಪೆಕ್ಟರ್, ವಿಜಯಪುರ ರೈಲ್ವೆ
– ಮಹಮ್ಮದ್ ಅಲಿ, ಇನ್ಸ್ಪೆಕ್ಟರ್ ಎಸಿಬಿ (ACB)
– ರವಿ ಬೆಳವಾಡಿ, ಇನ್ಸ್ಪೆಕ್ಟರ್ ಶೃಂಗೇರಿ ಪೊಲೀಸ್ ಠಾಣೆ
– ಮುಪೀದ್ ಖಾನ್, ಸ್ಪೆಷಲ್ ಆರ್ ಪಿಐ, ಕೆಎಸ್ಆರ್ ಪಿ(KSRP)
– ಮುರಳಿ ರಾಮಕೃಷ್ಣಪ್ಪ, ಸ್ಪೆಷಲ್ ಎಆರ್ ಎಸ್ಐ, ಕೆಎಸ್ಆರ್ ಪಿ (KSRP)
– ಮಹದೇವಯ್ಯ, ಎಆರ್ ಎಸ್ಐ ಕೆಎಸ್ಆರ್ ಪಿ (KSRP)
– ಡಿ.ಬಿ. ಶಿಂಧೆ, ಎಎಸ್ಐ ಬೆಳಗಾವಿ ಸ್ಪೆಷಲ್ ಬ್ರಾಂಚ್
– ರಂಜಿತ್ ಶೆಟ್ಟಿ, ಎಎಸ್ಐ ಕೆಂಪೇಗೌಡನಗರ ಪೊಲೀಸ್ ಠಾಣೆ
– ಬಸವರಾಜು .ಬಿ, ಸ್ಪೆಷಲ್ ಎಆರ್ ಎಸ್ಐ (ARSI) ರಾಜ್ಯ ಗುಪ್ತದಳ