
ಗುವಾಹಟಿ:ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಉಮ್ರಾಂಗ್ಶೋ ವ್ಯಾಪ್ತಿಯ ಟಿಂಕಿಲೋ ಪ್ರದೇಶದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ, ನೀರು hrid ಪರಿಣಾಮ 10-15 ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಘಟನೆ ಕಾರ್ಮಿಕರು ಕೆಲಸ ಮಾಡುತ್ತಿರುವಾಗ ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ನಡೆದಿದೆ.

ಘಟನೆಯಲ್ಲಿ ಕೆಲವು ಕಾರ್ಮಿಕರು ತಕ್ಷಣವೇ ಹೊರಬಂದಿರುವುದು ವರದಿಯಾಗಿದೆ. ಆದರೆ ಗಣಿ ಒಳಗೆ ಇನ್ನೂ 10 ರಿಂದ 15 ಕಾರ್ಮಿಕರು ಸಿಲುಕಿರುವ ಸಾಧ್ಯತೆ ಇದೆ. ದಿಮಾ ಹಸಾವೊ ಜಿಲ್ಲೆಯ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು, ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳು ಸ್ಥಳಕ್ಕೆ ತಲುಪಿ ಕಾರ್ಯಾಚರಣೆಯಲ್ಲಿ ತೊಡಗಿವೆ.

ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಮತ್ತು ಸಂಬಂಧಿತ ಅಧಿಕಾರಿಗಳು ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸುತ್ತಿದ್ದಾರೆ. ಈ ಮಧ್ಯೆ, ಗಣಿಗಾರರು ಎಲ್ಲರೂ ಸುರಕ್ಷಿತವಾಗಿ ಹೊರಬರಲು ಜಿಲ್ಲಾಡಳಿತವು ಸೇನೆಯ ಸಹಾಯವನ್ನು ಕೋರಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಘಟನೆಗೆ ತೀವ್ರ ದುಃಖ ವ್ಯಕ್ತಪಡಿಸಿದ್ದು, “ಉಮ್ರಾಂಗ್ಶೋದಲ್ಲಿ ಕಲ್ಲಿದ್ದಲು ಗಣಿಯಲ್ಲಿ ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ ಎಂಬ ದುಃಖದ ಸುದ್ದಿ ನನ್ನನ್ನು ಕಳವಳಗೊಳಿಸಿದೆ.
ಎಂಬ ದುಃಖದ ಸುದ್ದಿ ನನ್ನನ್ನು ಕಳವಳಗೊಳಿಸಿದೆ. ಎಲ್ಲಾ ಕಾರ್ಮಿಕರ ಸುರಕ್ಷತೆಗೆ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.ಸ್ಥಳೀಯ ಮೂಲಗಳ ಪ್ರಕಾರ, ಗಣಿಯಲ್ಲಿ 27ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು.ಗಣಿಯಲ್ಲಿದ್ದ ನೀರು ಏಕಾಏಕಿ ಉಕ್ಕಿದ್ದು, ಕೆಲವು ಕಾರ್ಮಿಕರಿಗೆ ಹೊರಬರಲು ಸಾಧ್ಯವಾಗದ ಕಾರಣ ಹಲವರು ಒಳಗೇ ಸಿಲುಕಿದ್ದಾರೆ.
ರಕ್ಷಣಾ ತಂಡಗಳು ಗಣಿಯೊಳಗೆ ಕ್ಯಾಮರಾ ಕಳುಹಿಸಿ ಮತ್ತು ಆಮ್ಲಜನಕ ಪೂರೈಸುತ್ತಿವೆ. ಈ ಘಟನೆಯ ನಿಖರ ವಿವರ ಮತ್ತು ಅವಶ್ಯಕತೆಗಾಗಿ ರಕ್ಷಣಾ ತಂಡಗಳು ಹಗಲಿರುಳೆನೆಂದೂ ಕಾರ್ಯಾಚರಣೆಯನ್ನು ಮುಂದುವರಿಸುತ್ತಿವೆ.