Also Read: ಸಚಿನ್ ಪೈಲಟ್ ಕಿತ್ತುಹಾಕಿದ ಕಾಂಗ್ರೆಸ್ ಪರ್ಯಾಯ ನಾಯಕನನ್ನು ಹುಟ್ಟುಹಾಕುವುದೇ?
ರಾಜಸ್ಥಾನ ರಾಜಕೀಯದಲ್ಲಿ ಭಾರೀ ಸಂಚಲನವನ್ನು ಹುಟ್ಟಿಸಿದ್ದ ರಾಜ್ಯ ಉಪಮುಖ್ಯಮಂತ್ರಿ ಪೈಲಟ್ ನಡೆ ದಿನಗಳೆದಂತೆ ಇನ್ನಷ್ಟು ಕುತೂಹಲಕಾರಿ ತಿರುವು ಪಡೆಯುತ್ತಿದೆ. ತನ್ನ ಬೆಂಬಲಿಗ ಶಾಸಕರೊಡನೆ ಸರ್ಕಾರ ಕೆಡವಲು ಮುಂದಾಗಿದ್ದ ಸಚಿನ್ ಪೈಲಟ್ರನ್ನು ರಾಜಸ್ಥಾನ ಕಾಂಗ್ರೆಸ್ ಹದ್ದುಬಸ್ತಿನಲ್ಲಿಡಲು ಯತ್ನಿಸುತ್ತಿದೆ.
ಮುಖ್ಯಮಂತ್ರಿ ಗೆಹ್ಲೋಟ್, ಸಚಿನ್ ಸೇರಿದಂತೆ ಅವರ ಬೆಂಬಲಿಗ ಎರಡು ಮಂತ್ರಿಗಳನ್ನು ತನ್ನ ಸಚಿವ ಸಂಪುಟದಿಂದ ಹೊರ ಹಾಕಿದ್ದರು. ಅಷ್ಟೇ ಅಲ್ಲದೆ ರಾಜಸ್ಥಾನ್ ಸಭಾಪತಿ ಸಿ.ಪಿ ಜೋಷಿ ʼಪಕ್ಷ ವಿರೋಧಿʼ ಕ್ರಮದ ಕುರಿತು ವಿವರಣೆ ಕೇಳಿ ಸಚಿನ್ ಪೈಲಟ್ ತಂಡಕ್ಕೆ ನೋಟೀಸ್ ಜಾರಿಗೊಳಿಸಿತ್ತು. ವಿಫಲವಾದರೆ ಅವರ ಶಾಸಕತ್ವವನ್ನು ಅನರ್ಹಗೊಳಿಸುವುದಾಗಿಯೂ ಹೇಳಿದ್ದರು.

ಪಕ್ಷದ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಶಾಸಕರನ್ನು ಅನರ್ಹಗೊಳಿಸುವ ತಂತ್ರವನ್ನು ಪ್ರಶ್ನಿಸಿ ಸಚಿನ್ ಪೈಲಟ್ ತಂಡ ಹೈ ಕೋರ್ಟ್ ಮೊರೆ ಹೋಗಿದೆ. ಸಚಿನ್ ಪೈಲಟ್ ತಂಡದ ಪರ ವಕೀಲರಾಗಿ, ಬಿಜೆಪಿಯ ಅವಧಿಯಲ್ಲಿ ಅಟಾರ್ನಿ ಜನರ್ಲ್ ಆಗಿ ನೇಮಕಗೊಂಡಿದ್ದ ಮುಕುಲ್ ರೋಹಟ್ಗಿ ವಾದಿಸಲಿದ್ದರೆ. ಇನ್ನು ಕಾಂಗ್ರೆಸ್ ಕೂಡಾ ತನ್ನ ಕಡೆಯಿಂದ ತೀಕ್ಷ್ಣ ಕಾನೂನು ತಜ್ಙರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದಾರೆ.
200 ಸದಸ್ಯರ ರಾಜಸ್ಥಾನ ವಿಧಾನ ಸಭೆಯಲ್ಲಿ ಬಹುಮತ ಸಾಬೀತು ಪಡಿಸಲು 101 ಶಾಸಕರ ಮತ ಬೇಕಾಗಿದೆ. ಬಂಡಾಯ ಶಾಸಕರನ್ನು ಅನರ್ಹಗೊಳಿಸಿದರೆ ಗೆಹ್ಲೋಟ್ ನೇತೃತ್ವದ ಸರ್ಕಾರ ಕುಸಿಯಲಿದೆ. ಹಾಗಾಗಿ ಅನರ್ಹಗೊಳಿಸುವುದು ಅನುಮಾನ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಅದಾಗ್ಯೂ 73 ಶಾಸಕ ಬಲವಿರುವ ಬಿಜೆಪಿಗೆ ರಾಜ್ಯ ಅಧಿಕಾರ ಕೈಗೆ ತೆಗೆಯಲು ಕನಿಷ್ಠ ಇನ್ನೂ 30 ಶಾಸಕರ ಮತ ಬೇಕಾಗಿದೆ.
