ಲಾಕ್ಡೌನ್ನಲ್ಲಿ ಅಗತ್ಯವಾದ ಮೂಲ ಸೌಕರ್ಯಗಳು ಸಿಗದ ಕಾರಣಕ್ಕಾಗಿ ಜೀವ ಕಳೆದುಕೊಂಡ ಹಲವು ಆಘಾತಕಾರಿ ಸುದ್ದಿಗಳನ್ನು ನಾವುಕೇಳಿಕೊಂಡಿದ್ದೇವೆ. ವಲಸೆ ಕಾರ್ಮಿಕರ ಸಾವು, ಶ್ರಮಿಕ್ ರೈಲುಗಳಲ್ಲಿನ ಸಾವು ದೇಶವನ್ನು ದಂಗುಬಡಿಸಿವೆ. ಈ ಮಧ್ಯೆ ಕರ್ನಾಟಕದಲ್ಲಿ ಹಸಿದವರಿಗೆ ಅನ್ನ ನೀಡುವ ರೈತರು ಕೂಡಾ ಆತ್ಮಹತ್ಯಗೆ ಶರಣಾಗಿದ್ದು ಅತ್ಯಂತ ಬೇಸರ ಮೂಡಿಸುವ ವಿಚಾರ.
ರಾಜ್ಯದಲ್ಲಿ 2021ರಲ್ಲಿ ಈವರೆಗೆ ಸುಮಾರು 75 ಜನ ರೈತರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕೇವಲ 61 ದಿನಗಳಲ್ಲಿ 75ರೈತರ ಸಾವುಗಳು ಸಂಭವಿಸಿವೆ. ಅಂದರೆ ದಿನವೊಂದಕ್ಕೆ ಒಂದಕ್ಕಿಂತ ಹೆಚ್ಚು ಸರಾಸರಿಯಂತೆ ರೈತರ ಆತ್ಮಹತ್ಯೆ ಪ್ರಕರಣಗಳು ಸುದ್ದಿಯಾಗಿವೆ.
ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೇ, ಅಥವಾ ಸಾಲಬಾಧೆಯಿಂದ ಪರಿತಪಿಸುತ್ತಿದ್ದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಹಾದಿಯನ್ನು ಹಿಡಿದಿದ್ದಾರೆ.

ಇನ್ನು ಕೋವಿಡ್ – 19 ಪರಿಹಾರ ನಿಧಿ ಬಿಡುಗಡೆ ಮಾಡಿ ಘೋಷಣೆ ಮಾಡಿದ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಅದರಲ್ಲಿ ಎಲ್ಲಾ ರೈತರನ್ನು ಸೇರಿಸಲಿಲ್ಲ. ಹೂವು ಬೆಳೆಗಾರರಿಗೆ ಪ್ರತೀ ಹೆಕ್ಟೇರ್ಗೆ 25,000 ರೂ. ಹಾಗೂ ಮೆಕ್ಕೆಜೋಳ ಬೆಳೆಗಾರರಿಗೆ 5000 ರೂ. ಸಹಾಯಧನವನ್ನು ಒಂದು ಬಾರಿಗೆ ನೀಡುವ ಭರವಸೆಯನ್ನು ಸಿಎಂ ಯಡಿಯೂರಪ್ಪ ನೀಡಿದ್ದರು. ಈ ಬಾರಿ ಬೆಳೆ ಚೆನ್ನಾಗಿ ಬಂದಿದ್ದರೂ, ಸಾಗಾಟ ಮಾಡಲಾಗದೇ ಅಥವಾ ಬೆಳೆಗೆ ತಕ್ಕ ಬೆಲೆ ಲಭಿಸದೇ ರೈತರು ಕಂಗಾಲಾಗಿ ಹೋಗಿದ್ದಾರೆ.
ಇನ್ನು ಕಳೆದ ಕೆಲವು ವರ್ಷಗಳಲ್ಲಿ ರೈತರ ಆತ್ಮಹತ್ಯೆಯ ಪ್ರಕರಣಗಳ ಅಂಕಿ ಸಂಖ್ಯೆ ಹೀಗಿವೆ

ಕೃಪೆ: ಟೈಮ್ಸ್ ಆಫ್ ಇಂಡಿಯಾ










