• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ರಾಜಕೀಯ

ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಕೆಡವುವ 'ಪೈಲೆಟ್ ಪ್ಲಾನ್' ಫ್ಲಾಪ್, ಮುಂದಿನದು ಮತ್ತೂ ಅತಂತ್ರ!

by
July 13, 2020
in ರಾಜಕೀಯ
0
ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಕೆಡವುವ 'ಪೈಲೆಟ್ ಪ್ಲಾನ್' ಫ್ಲಾಪ್
Share on WhatsAppShare on FacebookShare on Telegram

ರಾಜಸ್ಥಾನದ ಬಂಡಾಯ ನಾಯಕ ಸಚಿನ್ ಪೈಲಟ್ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿಲ್ಲ. ದೆಹಲಿಯಲ್ಲಿ ಠಿಕಾಣಿ ಹೂಡಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನಾಗಲಿ ಭೇಟಿಯಾಗಿಲ್ಲ. ಅಥವಾ ರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಅವರನ್ನೂ ಭೇಟಿಯಾಗಿಲ್ಲ. ಹಾಗಾದರೆ ಸಚಿನ್ ಪೈಲಟ್ ಮುಂದಿನ ನಡೆ ಏನು?

ADVERTISEMENT

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಕೆಡವೇ ತೀರುತ್ತೇನೆಂದು ಪಣತೊಟ್ಟು ಬಂಡಾಯದ ಭಾವುಟ ಹಿಡಿದು ಜೈಪುರದಿಂದ ದೆಹಲಿಗೆ ಬಂದಿದ್ದ ಸಚಿನ್ ಪೈಲಟ್ ಗೆ ಸದ್ಯಕ್ಕೆ ತೀವ್ರ ಹಿನ್ನಡೆ ಆದಂತಿದೆ. ಕಳೆದ ಶನಿವಾರ 24 ಶಾಸಕರೊಂದಿಗೆ ದೆಹಲಿಗೆ ಬಂದಿದ್ದರು. ತಮ್ಮ ಬಳಿ 30 ಶಾಸಕರಿದ್ದಾರೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಆದರೀಗ 24 ಶಾಸಕರ ಪೈಕಿ ಬರೊಬ್ಬರಿ 17 ಶಾಸಕರು ಉಲ್ಟಾ ಹೊಡೆದಿದ್ದಾರೆ. ‘ತಾವು ಮುಖ್ಯಮಂತ್ರಿ ಬದಲಾವಣೆಗಾಗಿ ದೆಹಲಿ ವಿಮಾನ ಏರಿದ್ದೇವೆಯೇ ಹೊರತು, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಲಲ್ಲ’ ಎಂದಿದ್ದಾರೆ. ಇದರಿಂದ ಸಚಿನ್ ಪೈಲಟ್ ಅವರ ಆಪರೇಷನ್ ಕಮಲಕ್ಕೆ ಒಳಗಾಗುವ ‘ಪೈಲಟ್ ಪ್ಲಾನ್’ ವಿಫಲವಾಗಿದೆ.

ರಾಜಸ್ಥಾನದ ರಾಜಕಾರಣ, ಅವರವರ ಕ್ಷೇತ್ರದ ಸೋಷಿಯಲ್ ಇಂಜನಿಯರಿಂಗ್ ದೃಷ್ಟಿಯಿಂದ ಶಾಸಕರು ಬಿಜೆಪಿ ಸೇರಲು ಬಿಲ್ ಕುಲ್ ಒಪ್ಪುತ್ತಿಲ್ಲ. ಇನ್ನೊಂದೆಡೆ ಸಚಿನ್ ಪೈಲಟ್ ನಡೆಯಿಂದ ವಿಚಲಿತರಾದ ಅಶೋಕ್ ಗೆಹ್ಲೋಟ್ ಖುದ್ದಾಗಿ ಶಾಸಕರಿಗೆ ಕರೆ ಮಾಡಿ ಕಾಂಗ್ರೆಸ್ ಬಿಡಬೇಡಿ, ನಿಮ್ಮ ಸಮಸ್ಯೆ ಪರಿಹರಸಲಾಗುವುದು ಎಂದು ಅಭಯ ನೀಡಿದ್ದಾರೆ‌. ಎರಡೂ ಕಾರಣಗಳಿಂದ ಸಚಿನ ಪೈಲಟ್ ಪಾಳೆಯದಲ್ಲಿದ್ದ 17 ಶಾಸಕರು ಅಶೋಕ್ ಗೆಹ್ಲೋಟ್ ತೆಕ್ಕೆ ಸೇರಿಕೊಂಡಿದ್ದಾರೆ. ಈ ಬೆಳವಣಿಗೆಯಿಂದ ಬೆಸ್ತು ಬಿದ್ದಿರುವ ಸಚಿನ್ ಪೈಲೆಟ್ ಈಗ ಹೊಸ ವರಸೆ ಶುರುಮಾಡಿದ್ದಾರೆ‌.

ಅದೇ ತೃತೀಯ ರಂಗ. ಕರ್ನಾಟಕದಂತೆ ರಾಜಸ್ಥಾನದಲ್ಲೂ ಈವರೆಗೆ ತೃತೀಯ ರಂಗಕ್ಕಾಗಲಿ, ಪ್ರಾದೇಶಿಕ ಪಕ್ಷಗಳಿಗಾಗಲಿ ಅಷ್ಟೇನೂ ಮಹತ್ವ ಸಿಕ್ಕಿಲ್ಲ. ಆದರೂ ಇತ್ತ ಮತ್ತೆ ಅಶೋಕ್ ಗೆಹ್ಲೋಟ್ ನಾಯಕತ್ವ ಒಪ್ಪಿಕೊಂಡು ವಾಪಸ್ ಕಾಂಗ್ರೆಸ್ ಬರಲಾರದೆ(ತಾಂತ್ರಿಕವಾಗಿ ಕಾಂಗ್ರೆಸ್ ತ್ಯಜಿಸಿಲ್ಲ), ಅತ್ತ ಬಿಜೆಪಿಯನ್ನೂ ಸೇರಲಾರದೆ ಅತಂತ್ರವಾಗಿರುವ ಸಚಿನ್ ಪೈಲಟ್ ರಾಜ್ಯದ ಪರಿಸ್ಥಿತಿ ಪೂರಕವಾಗಿಲ್ಲದಿದ್ದರೂ ಹೊಸ ಪಕ್ಷ ಕಟ್ಟಲು, ತೃತೀಯ ರಂಗ ನಿರ್ಮಿಸಲು ಮುಂದಾಗಿದ್ದಾರೆ. ಪ್ರಗತಿಶೀಲ ಮೋರ್ಚಾ ಅಥವಾ ಪ್ರಗತಿಶೀಲ ಕಾಂಗ್ರೆಸ್ ಎಂಬ ಹೆಸರಿನಲ್ಲಿ ಪಕ್ಷ ಕಟ್ಟುವ ಸಾಧ್ಯತೆಗಳಿವೆ. ಸದ್ಯಕ್ಕೆ ಎಷ್ಟು ಸಾಧ್ಯವೋ ಅಷ್ಟು ಶಾಸಕರಿಂದ ರಾಜೀನಾಮೆ ಕೊಡಿಸಿ, ಸರ್ಕಾರದಲ್ಲಿ ಅನಿಶ್ಚಿತತೆ ಮೂಡಿಸಿ, ಉಪಚುನಾವಣೆಗಳನ್ನು ಗೆದ್ದುಬಂದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುವ ಬಲು ದೂರದ ಆಲೋಚನೆ ಮಾಡಿದ್ದಾರೆ ಎನ್ನುತ್ತಾರೆ ಅವರ ಸಮೀಪವರ್ತಿಗಳು.

ಆದರೆ ಸಚಿನ್ ಪೈಲಟ್ ಎಣಿಸಿರುವಂತೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಉರುಳಿಸುವುದು ಅಷ್ಟು ಸಲುಭವಾಗಿಲ್ಲ‌. ಏಕೆಂದರೆ ರಾಜಸ್ಥಾನ ವಿಧಾನಸಭೆ ಸದಸ್ಯ ಸಂಖ್ಯಾಬಲ 200. ಬಹುಮತ ಸಾಬೀತುಪಡಿಸಬೇಕಾದ ಮ್ಯಾಜಿಕ್ ನಂಬರ್ 101. ಇಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿ ಸಹಿ ಹಾಕಿರುವ ಶಾಸಕರ ಸಂಖ್ಯೆ 102.

ಬಿಟಿಪಿಯ 2, ಸಿಪಿಐ (ಎಂ)ನ 2, ಆರ್ ಎಲ್‌ಡಿಯ 1 ಮತ್ತು ಪಕ್ಷೇತರರಾದ 12 ಶಾಸಕರು ಪಕ್ಷವನ್ನು ಬೆಂಬಲಿಸಿದ್ದರಿಂದ ಸ್ವತಃ 107 ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಬಲ 124 ಆಗಿತ್ತು. ಇದರಲ್ಲಿ ಈಗ ಸಚಿನ್ ಪೈಲಟ್ ಜೊತೆಗಿರುವವರು 17 ಜನ ರಾಜೀನಾಮೆ ನೀಡಿದರೆ ಕಾಂಗ್ರೆಸ್ ಬಲ 117ಕ್ಕೆ ಇಳಿಯುತ್ತದೆ. ಸಿಪಿಐ (ಎಂ)ನ ಇಬ್ಬರು ಸೈದ್ಧಾಂತಿಕ ಕಾರಣಕ್ಕೆ ಬಿಜೆಪಿ ಸೇರುವುದಿಲ್ಲ. ಉಳಿದಂತೆ ಬಿಟಿಪಿಯ ಇಬ್ಬರು, ಆರ್ ಎಲ್‌ಡಿಯ ಒಬ್ಬರು ಮತ್ತು ಪಕ್ಷೇತರರಾದ 12 ಶಾಸಕರು ಬೆಂಬಲ ವಾಪಸ್ ಪಡೆದರೆ ಆಗ ಕಾಂಗ್ರೆಸ್ ಬಲ 102ಕ್ಕೆ ಇಳಿಯುತ್ತದೆ. ಅಲ್ಲದೆ ಸಚಿನ್ ಪೈಲಟ್ ಬಣದ 17 ಶಾಸಕರು ರಾಜೀನಾಮೆ ನೀಡುವುದರಿಂದ ಕಾಂಗ್ರೆಸ್ ಬಲ 92ಕ್ಕೆ ಇಳಿಯುತ್ತದೆ. ವಿಧಾನಸಭೆಯ ಬಲ 183ಕ್ಕೆ ಕುಸಿಯುತ್ತದೆ. ಮ್ಯಾಜಿಕ್ ನಂಬರ್ 92 ಆಗುತ್ತದೆ.

ಬಿಜೆಪಿಯ ಸದ್ಯದ ಬಲ ಬಿಜೆಪಿ 72. ಆರ್‌ಎಲ್‌ಪಿಯ ಮೂವರು ಮತ್ತು ಓರ್ವ ಪಕ್ಷೇತರ ಬೆಂಬಲ ಸೂಚಿಸಿರುವುದರಿಂದ 76 ಆಗಿದೆ. ಈಗ ಕಾಂಗ್ರೆಸ್ ಪಾಳೆಯದಿಂದ ಬಿಟಿಪಿಯ ಇಬ್ಬರು, ಆರ್ ಎಲ್‌ಡಿಯ ಒಬ್ಬರು ಮತ್ತು ಪಕ್ಷೇತರರಾದ 12 ಶಾಸಕರು ಬಂದರೆ ಬಿಜೆಪಿಯ ಬಲ 91ಆಗುತ್ತದೆ. ಆಗಲೂ ಕಾಂಗ್ರೆಸ್ ಸರ್ಕಾರದ ಪತನ ಮತ್ತು ಬಿಜೆಪಿಯ ಸರ್ಕಾರ ರಚನೆ ಎರಡೂ ಸಾಧ್ಯವಾಗುವುದಿಲ್ಲ.

ಈ ಅಂಕಗಣಿತ ಕೈಹಿಡಿಯುವುದಿಲ್ಲ ಎನ್ನುವ ಕಾರಣಕ್ಕಾಗಿಯೇ ಇವತ್ತು ಬಿಜೆಪಿ ರಾಷ್ಟ್ರೀಯ ನಾಯಕರು ಸಚಿನ್ ಪೈಲಟ್ ಭೇಟಿಗೆ ಅವಕಾಶ ನೀಡಿಲ್ಲ. ಮುಂದೆಯಾದರೂ ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಕೆಡವಬೇಕಾದರೆ ಇನ್ನಷ್ಟು ಶಾಸಕರನ್ನು ಸೆಳೆಯಬೇಕು. ಅದಕ್ಕೆ ಇನ್ನಷ್ಟು ಕಾಲ ಬೇಕಾಗಬಹುದು. ಈ ಘಟನೆಯಿಂದ ತೀವ್ರವಾಗಿ ಘಾಸಿಗೊಂಡಿರುವ ಸಚಿನ್ ಪೈಲಟ್ ಹೊಸ ಪಕ್ಷ ಕಟ್ಟಿ ಹೊಸ ಆಟ ಶುರುಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಹೊರಗಡೆ ಇದ್ದುಕೊಂಡು ಕಾಂಗ್ರೆಸ್ ಶಾಸಕರನ್ನು ಅವರು ಸುಲಭವಾಗಿ ಸೆಳೆಯುವರೇ ಎಂಬುದು ಮುಂದಿನ‌ ಕುತೂಹಲ. ಸದ್ಯಕ್ಕಂತೂ ಅವರಿಗೆ ದೊಡ್ಡ ಮುಖಭಂಗವಾಗಿದೆ. ಸಚಿನ್ ಪೈಲಟ್ ಗಿಂತ ಹೆಚ್ಚು ಮುಖಭಂಗ ಬಿಜೆಪಿ ಹೈಕಮಾಂಡಿಗೆ ಆಗಿದೆ‌. ಮಧ್ಯಪ್ರದೇಶದ ಬಳಿಕ ರಾಜಸ್ಥಾನದಲ್ಲೂ ತಮ್ಮ ಸರ್ಕಾರ ರಚಿಸಬೇಕು ಎಂದು ಹಪಹಪಿಸುತ್ತಿರುವ ಬಿಜೆಪಿಗೆ ಈಗ ಕ್ಲೈಮ್ಯಾಕ್ಸ್ ಅಂತದಲ್ಲಿ ಹಿನ್ನಡೆ ಉಂಟಾಗಿದೆ.

ರಾಜಕೀಯ ಪ್ರಕ್ಷುಬ್ಧತೆ ನಡುವೆಯೂ ಆದಾಯ ತೆರಿಗೆ ಅಧಿಕಾರಿಗಳು ರಾಜಸ್ಥಾನದ 22 ಜಾಗಗಳಲ್ಲಿ ದಾಳಿ ಮಾಡಿ, ಅದರಲ್ಲೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಆಪ್ತ ಉದ್ಯಮಿ ರಾಜೀವ್ ಅರೋರಾ ಅವರ ಮನೆ ಮೇಲೆ ದಾಳಿ ಮಾಡಿದರೂ ಕಾಂಗ್ರೆಸ್ ಶಾಸಕರು ಜಗ್ಗಿಲ್ಲ. ಮುಂದೆ ಯಾವ್ಯಾವ ಅಸ್ತ್ರಗಳು ಪ್ರಯೋಗವಾಗಲಿವೆಯೋ ಕಾದುನೋಡಬೇಕು.

Tags: Ashok GehlotRajasthanSachin pilotರಾಜಸ್ಥಾನಶೋಕ್ ಗೆಹ್ಲೋಟ್ಸಚಿನ್ ಪೈಲಟ್
Previous Post

ದ್ವಿತೀಯ ಪಿಯುಸಿ ಫಲಿತಾಂಶ ನಾಳೆ

Next Post

ಅನಂತ ಪದ್ಮನಾಭ ಸ್ವಾಮಿ ದೇವಾಲಯ: ರಾಜಮನೆತನದ ಹಕ್ಕು ಎತ್ತಿಹಿಡಿದ ಸುಪ್ರೀಂ

Related Posts

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
0

"ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಬೇಕು. ಪ್ರತಿ ವರ್ಷ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಮಾಡಬೇಕು" ಎಂದು...

Read moreDetails

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

June 27, 2025

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

June 27, 2025

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

June 27, 2025
Next Post
ಅನಂತ ಪದ್ಮನಾಭ ಸ್ವಾಮಿ ದೇವಾಲಯ: ರಾಜಮನೆತನದ ಹಕ್ಕು ಎತ್ತಿಹಿಡಿದ ಸುಪ್ರೀಂ

ಅನಂತ ಪದ್ಮನಾಭ ಸ್ವಾಮಿ ದೇವಾಲಯ: ರಾಜಮನೆತನದ ಹಕ್ಕು ಎತ್ತಿಹಿಡಿದ ಸುಪ್ರೀಂ

Please login to join discussion

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ
Top Story

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

by ಪ್ರತಿಧ್ವನಿ
June 28, 2025
Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

June 28, 2025

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada