• Home
  • About Us
  • ಕರ್ನಾಟಕ
Friday, December 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಭಾರತದ ಹೆಜ್ಜೆಯನ್ನು ಅನುಸರಿಸುತ್ತಿದೆಯೇ ನೇಪಾಳ?

by
June 16, 2020
in ಅಭಿಮತ
0
ಭಾರತದ ಹೆಜ್ಜೆಯನ್ನು ಅನುಸರಿಸುತ್ತಿದೆಯೇ ನೇಪಾಳ?
Share on WhatsAppShare on FacebookShare on Telegram

ನೇಪಾಳ ಸರ್ಕಾರ ಭಾರತದ ಮೇಲೆ ಮುಗಿಬೀಳುತ್ತಿದೆ. ಭಾರತ ಮತ್ತು ನೇಪಾಳ 1,800 ಕಿಲೋ ಮೀಟರ್‌ ಮುಕ್ತ ಗಡಿಯನ್ನು ಹಂಚಿಕೊಂಡಿವೆ. 1816ರ ಸುಗಾಲಿ ಒಪ್ಪಂದದ ಆಧಾರದ ಮೇಲೆ ಲಿಪುಲೇಖ್ ಪಾಸ್ ಮೇಲೆ ನೇಪಾಳ ಸರ್ಕಾರ ಹಕ್ಕಿದೆ ಎಂದು ಹೇಳಿಕೊಂಡಿದೆ. ಇದೀಗ ಭಾರತದ ಭೂಪ್ರದೇಶದ ಕೆಲವು ಭಾಗಗಳನ್ನು ತನ್ನದು ಎಂದು ಹೇಳಿಕೊಂಡು “ಹೊಸ ನಕ್ಷೆ”ಯನ್ನು ಸಂಸತ್‌ನಲ್ಲಿ ಅಂಗೀಕರಿಸಿದೆ. ಲಿಂಪಿಯಾಡುರಾ, ಲಿಪುಲೇಖ್ ಮತ್ತು ಕಾಲಾಪಾನಿಯನ್ನು ಒಳಗೊಂಡ ಹೊಸ ನಕ್ಷೆಯನ್ನು ಅನುಮೋದಿಸಿದೆ. ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳು ಈ ರಸ್ತೆಯನ್ನು ಬಳಸುತ್ತಿದ್ದರು. ನೇಪಾಳದ ಪ್ರಧಾನಮಂತ್ರಿ ಕೆ ಪಿ ಶರ್ಮಾ ಓಲಿ ಭಾರತದಲ್ಲಿ ಭೂಪ್ರದೇಶವನ್ನು ನೇಪಾಳದ ನಕ್ಷೆಯನ್ನು ಬದಲಿಸುವ ಸಾಂವಿಧಾನಿಕ ತಿದ್ದುಪಡಿ ತರಲು ಮುಂದಾಗಿದ್ದಾರೆ. ಭಾರತದ ವಿರುದ್ಧ ಸಂಸತ್‌ನಲ್ಲಿ ನೇಪಾಳ ಪ್ರಧಾನಿ ಕೆ ಪಿ ಓಲಿ ಘರ್ಜಿಸಿದ್ದಾರೆ. ನೇಪಾಳ ಪುಟ್ಟ ದೇಶ ಭಾರತದಂತಹ ದೇಶದ ವಿರುದ್ಧ ಘರ್ಜಿಸಲು ಕಾರಣ ಏನು ಎನ್ನುವುದೇ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ADVERTISEMENT

ಚೀನಾ ದೇಶ ಕೂಡ ಭಾರತದ ಮೇಲೆ ಹಗೆ ಸಾಧಿಸುತ್ತಿದೆ..!

ಭಾರತ – ಚೀನಾ ನಡುವೆ ಇತ್ತೀಚಿಗೆ ಶಾಂತಿ ಮಾತುಕತೆ ನಡೆದಿತ್ತು. ಎರಡು ಕಡೆಯ ಸೇನಾ ಅಧಿಕಾರಿಗಳು ಮಾತುಕತೆ ನಡೆಸಿ, ಬಿಕ್ಕಟ್ಟು ಶಮನವಾಗಿದೆ ಎಂದು ಘೋಷಿಸಿದ್ದರು. ಆದರೆ 1975ರ ನಂತರ ಭಾರತ ಹಾಗೂ ಚೀನಾ ನಡುವೆ ಗಡಿಯಲ್ಲಿ ಗುಂಡಿನ ಚಕಮಕಿ ನಡೆದಿದೆ. ಭಾರತೀಯ ಸೇನಾಧಿಕಾರಿ ಹಾಗೂ ಇಬ್ಬರು ಯೋಧರು ಸಾವನ್ನಪ್ಪಿದ್ದಾರೆ, ಹಲವಾರು ಸೈನಿಕರು ಗಾಯಗೊಂಡಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ. ವಿವಾದಿತ ಅಕ್ಸಾಯ್ ಚಿನ್-ಲಡಾಖ್ ಪ್ರದೇಶದಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚಕಮಕಿ ನಡೆದಿದೆ. ಎರಡೂ ದೇಶಗಳ ಕಡೆಯೂ ಸಾವು ಸಂಭವಿಸಿದೆ ಎಂದು ಭಾರತ ಸರ್ಕಾರ ತಿಳಿಸಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಭಾರತದ ಹಿರಿಯ ಸೇನಾ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ವಿದೇಶಾಂಗ ಸಚಿವರು ಕೂಡ ಸಭೆಯಲ್ಲಿ ಉಪಸ್ಥಿತರಿದ್ದು, ಪರಿಸ್ಥಿತಿ ತಿಳಿಗೊಳಿಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪ್ರಧಾನಿ ನರೇಂದ್ರ ಮೋದಿಗೆ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದ್ದಾರೆ. ವಿದೇಶಾಂಗ ಸಚಿವ ಎಸ್‌ ಜೈಶಂಕರ್‌, ಬಿಪಿನ್‌ ರಾವತ್‌ ಸೇರಿದಂತೆ ಸೇನಾ ಮುಖ್ಯಸ್ಥರುಗಳು ಹಾಜರಿದ್ದು, ಸದ್ಯದ ಗಡಿ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದರು. ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಚೀನಾ ದಾಳಿ ಬಗ್ಗೆ ಆಕ್ರೋಶ ಹೊರ ಹಾಕಿದ್ದು, ಚೀನಾ ದೇಶ ಪದೇ ಪದೇ ಇದೇ ರೀತಿ ಗಡಿ ವಿಚಾರದಲ್ಲಿ ಭಾರತವನ್ನು ಕೆಣಕುತ್ತಲೇ ಇದೆ. ಭಾರತಕ್ಕೆ ಇದು ಸೂಕ್ತ ಸಮಯವಾಗಿದ್ದು ಕಠಿಣ ನಿರ್ಧಾರ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.

ಭಾರತಕ್ಕೆ ಪಾಕಿಸ್ತಾನ ಮಾತ್ರವೇ ಶತ್ರು ರಾಷ್ಟ್ರನಾ..?

ಪಾಕಿಸ್ತಾನ ಭಾರತದಿಂದ ಸಿಡಿದು ಸೃಷ್ಟಿಯಾದ ಹೊಸ ರಾಷ್ಟ್ರ. ಅಂದರೆ ಭಾರತದ ಸಹೋದರ ದೇಶ ಪಾಕಿಸ್ತಾನ. ಭಾರತ ಮತ್ತು ಪಾಕಿಸ್ತಾನ ದಾಯಾದಿಗಳು ಹಾಗಾಗಿ ಗಡಿ ವಿಚಾರದಲ್ಲಿ ಅಣ್ಣತಮ್ಮಂದಿರಂತೆ ಕಿತ್ತಾಡುವುದು ಸಹಜ. ಆದರೆ ನೇಪಾಳ ಭಾರತದ ಸ್ನೇಹಿತ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ನೇಪಾಳಕ್ಕೂ ಭೇಟಿ ನೀಡಿ ಅಲ್ಲಿನ ಸಂಸತ್‌ನಲ್ಲಿ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಆದರೀಗ ನೇಪಾಳವೂ ಭಾರತದ ವಿರುದ್ಧ ತಿರುಗಿ ಬಿದ್ದಿದೆ. ಇದಕ್ಕೆ ಕಾರಣ ನಮ್ಮ ಭಾರತದಲ್ಲಿ ಅಧಿಕಾರ ನಡೆಸುತ್ತಿರುವ ಭಾರತೀಯ ಜನತಾ ಪಕ್ಷವೇ ಕಾರಣವಾಯ್ತಾ ಎನ್ನುವ ಅನುಮಾನ ದಟ್ಟವಾಗ್ತಿದೆ.

ನೇಪಾಳ ಕಮ್ಯುನಿಸ್ಟ್ ಪಕ್ಷದಿಂದ ಪ್ರಧಾನಿ ಆಗಿರುವ ಕೆ ಪಿ ಶರ್ಮಾ ಓಲಿ, ಭಾರತದ ಮೇಲಿನ ದ್ವೇಷಮಯ ವಾತಾವರಣ ಅಧಿಕಾರದ ಗದ್ದುಗೆ ಭದ್ರ ಮಾಡಿಕೊಳ್ಳಲು ಅನುಕೂಲವಾಗಿದೆ ಎನ್ನಲಾಗಿದೆ. ಇತ್ತೀಚಿಗಷ್ಟೇ ಕೆ ಪಿ ಓಲಿ ಶರ್ಮಾ ವಿರುದ್ಧ ಬಂಡಾಯ ಎದ್ದಿತ್ತು. ಪ್ರಧಾನಿ ಹುದ್ದೆಯಿಂದ ಕೆಳಕ್ಕೆ ಇಳಿಯುವಂತೆ ಆಗ್ರಹ ಮಾಡಲಾಗಿತ್ತು. ಇದೇ ಸಮಯವನ್ನು ಬಳಸಿಕೊಂಡ ಪ್ರಧಾನಿ ಓಲಿ ಶರ್ಮಾ, ಭಾರತದ ವಿರುದ್ಧ ಜನರ ಗಮನ ಸೆಳೆಯುವಂತಹ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಇದೀಗ ಪಕ್ಷದಲ್ಲೂ ಕೆ ಪಿ ಓಲಿ ಶರ್ಮಾ ಪ್ರಬಲ ನಾಯಕನಾಗಿದ್ದಾರೆ.

ನೇಪಾಳದ ಮಾಜಿ ಭಾರತೀಯ ರಾಯಭಾರಿ ರಂಜಿತ್ ರೇ ʼದಿ ಪ್ರಿಂಟ್‌ʼ ವೆಬ್‌ ಪತ್ರಿಕೆ ಜೊತೆಗೆ ಮಾತನಾಡಿದ್ದು, ನೇಪಾಳದ ಪ್ರಧಾನಿ ಕೆ ಪಿ ಶರ್ಮಾ ಓಲಿ, ಭಾರತದೊಂದಿಗೆ ವಿವಾದಿತ ಪ್ರದೇಶಗಳನ್ನು ಒಳಗೊಂಡ ಹೊಸ ನಕ್ಷೆ ಅಂಗೀಕರಿಸಿದ್ದು ಅವರಿಗೆ ದೇವರು ಕೊಟ್ಟ ವರ ಎಂದಿದ್ದಾರೆ. ನೇಪಾಳ ಕಮ್ಯುನಿಸ್ಟ್ ಪಕ್ಷದಲ್ಲಿ ತಮ್ಮದೇ ಆದ ಸ್ಥಾನವನ್ನು ಗಟ್ಟಿಗೊಳಿಸಲು ಭಾರತದ ವಿರೋಧಿ ನಿಲುವು ಸೃಷ್ಟಿಸಲು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಸಾಮಾನ್ಯವಾಗಿ ನೇಪಾಳಿ ಕಮ್ಯುನಿಸ್ಟರು ನೇಪಾಳದಲ್ಲಿ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲು ಭಾರತೀಯ ವಿರೋಧಿ ರಾಷ್ಟ್ರೀಯತೆಯನ್ನು ಬಳಸುತ್ತಾರೆ. ಪಿಎಂ ಓಲಿ ತಮ್ಮದೇ ಪಕ್ಷದೊಳಗೆ ದುರ್ಬಲರಾದ್ದರು. ಇದೀಗ ಭಾರತ ವಿರೋಧಿ ನಿರ್ಧಾರ ರಾಷ್ಟ್ರೀಯತಾವಾದಿ ಭಾವನೆಯನ್ನು ಹುಟ್ಟುಹಾಕಲು ಸಮರ್ಥವಾಗಿದೆ. ಅವರು ಅಧಿಕಾರಕ್ಕೆ ಬರಲು ಇದನ್ನೇ ಬಳಸಿದ್ದಾರೆ ಎಂದಿದ್ದಾರೆ.

ಚೀನಾ ಕೂಡ ಭಾರತದ ಮೇಲೆ ಸದಾ ಕಾಲ ತನ್ನ ಸೇನೆಯನ್ನು ಗಡಿಯಲ್ಲಿ ಜಮಾವಣೆ ಮಾಡುತ್ತಲೇ ಬೆದರಿಕೆ ಒಡ್ಡುತ್ತದೆ. ಒಮ್ಮೊಮ್ಮೆ ಚೀನಾ ಗಡಿಯಲ್ಲಿ ಸೈನಿಕರನ್ನು ಒಳಗೆ ನುಗ್ಗಿಸಿ ಭಾರತದ ಮೇಲೆ ಕಾಲು ಕೆರೆದು ಜಗಳ ಮಾಡುತ್ತದೆ. ಇದು ಚೀನಾ ಸೇನಾ ಶಕ್ತಿಗೆ ವಿಶ್ವ ಮಟ್ಟದಲ್ಲಿ ಭಾರೀ ಪ್ರಚಾರ ತಂದು ಕೊಡುತ್ತದೆ. ಚೀನಾ ದೇಶದ ಸೇನಾ ಶಕ್ತಿ ಬಲಾಢ್ಯವಾಗಿದ್ದು, ಭಾರತದ ಮೇಲೆ ಶಕ್ತಿ ಪ್ರದರ್ಶನ ಮಾಡುತ್ತ ವಿಶ್ವದ ಗಮನ ಸೆಳೆಯುವುದು ಅದರ ತಂತ್ರಗಾರಿಕೆ. ಅದರ ಜೊತೆಗೆ ಚೀನಾ ದೇಶದ ವಿರುದ್ಧ ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಬೈಕಾಟ್‌ ಚೀನಾ ಎನ್ನುವುದನ್ನು ಪರೋಕ್ಷವಾಗಿ ಲೋಕಲ್‌ ವೋಕಲ್‌ ಘೋಷಣೆ ಮಾಡಿದ್ದರು. ಆ ಕೋಪವನ್ನು ಭಾರತದ ಮೇಲೆ ಈ ರೀತಿ ವ್ಯಕ್ತಪಡಿಸಿದೆ ಎನ್ನಬಹುದು.

ಭಾರತವೂ ಇದೇ ರೀತಿ ಮಾಡುತ್ತಾ..?

ಒಂದು ದೇಶದಲ್ಲಿ ಚುನಾವಣೆ ಗೆಲ್ಲಲ್ಲು ಅಥವಾ ದೇಶದ ಜನರಲ್ಲಿ ಒಂದೇ ಭಾವನೆ ಮೂಡುವಂತೆ ಮಾಡಲು ಇರುವ ಸರಳ ಉಪಾಯ ಎಂದರೆ ದೇಶಪ್ರೇಮ. ನಮ್ಮ ದೇಶ ಎಂದರೆ ಎಲ್ಲರೂ ಉಘೇ ಎನ್ನುತ್ತಾರೆ. ನಮ್ಮ ದೇಶದ ಮೇಲೆ ಮತ್ತೊಂದು ದೇಶ ಆಕ್ರಮಣ ಮಾಡುತ್ತಿದೆ ಎಂದರೆ ಎಲ್ಲರ ಎದೆಯಲ್ಲೂ ಆಕ್ರೋಶದ ಕಟ್ಟೆ ಹೊಡೆಯುತ್ತದೆ. ಪ್ರಧಾನಿ ನರೇಂದ್ರ ಮೋದಿ ಕಳೆದ ಬಾರಿ ಲೋಕಸಭಾ ಚುನಾವಣೆ ವೇಳೆ ಕಾಲು ಕೆರೆದು ಬಂದ ಪಾಕಿಸ್ತಾನದ ಮೇಲೆ ಬಾಲಾಕೋಟ್‌ ವಾಯು ದಾಳಿ ನಡೆಸುವ ಮೂಲಕ ಪ್ರಚಂಡ ಗೆಲುವು ಸಾಧಿಸಿದ್ದರು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೆಲುವು ಸಿಗಲಿದೆ ಎನ್ನುವುದರನ್ನೂ ಯಾವ ರಾಜಕೀಯ ಪಂಡಿತರೂ ಊಹೆ ಮಾಡಿರಲಿಲ್ಲ. ಆದರೆ ಪಾಕಿಸ್ತಾನದ ಮೇಲೆ ನಡೆಸಿದ ಏರ್‌ಸ್ಟ್ರೈಕ್‌ ಲೋಕಸಭಾ ಚುನಾವಣೆಯ ದಿಕ್ಕನ್ನೇ ಬದಲಿಸಿತು. ವಿರೋಧ ಪಕ್ಷಗಳು ಏನನ್ನೂ ಮಾತನಾಡಿದರೂ ತಪ್ಪು ಸಂದೇಶ ಹೋಗುವಂತಾಯ್ತು. ರಾಜಕೀಯ ವಿರೋಧಿಗಳು ಎನ್ನುವ ಕಾರಣಕ್ಕೆ ದೇಶದ ವಿಚಾರದಲ್ಲಿ ವಿರೋಧಿಸುವಂತೆಯೂ ಇರಲಿಲ್ಲ, ಪರವಾಗಿ ಮಾತನಾಡುವ ಸ್ಥಿತಿಯಲ್ಲೂ ಇರಲಿಲ್ಲ.

ಪ್ರಧಾನಿ ನರೇಂದ್ರ ಮೋದಿ ಬಳಸಿದ ಅಸ್ತ್ರವನ್ನೇ ವಿವಿಧ ದೇಶಗಳಲ್ಲಿ ಪ್ರಯೋಗಿಸಲಾಗುತ್ತಿದೆ. ವಿಶ್ವದ ದೊಡ್ಡ್ಣ ಎನ್ನುವ ಅಮೆರಿಕದಲ್ಲೂ ಜಾರ್ಜ್‌ ಫ್ಲಾಯ್ಡ್‌ ಸಾವಿನ ಹೋರಾಟವನ್ನು ರಾಜಕೀಯ ಲಾಭಕ್ಕಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಳಸುತ್ತಿದ್ದಾರೆ ಎನ್ನುವ ವರದಿಗಳು ಬರುತ್ತಿವೆ. ಇತ್ತ ನೇಪಾಳದಲ್ಲಿ ಕೂಡ ಭಾರತದ ವಿರುದ್ಧದ ನಿರ್ಧಾರ ಪ್ರಧಾನಿಯ ಪಟ್ಟ ಉಳಿಸಿದೆ. ಒಟ್ಟಾರೆ, ಭಾರತದಲ್ಲಿ ಮಾಡಿದ್ದನ್ನೇ ವಿಶ್ವದ ಬೇರೆ ನಾಯಕರು ಪಾಲಿಸುತ್ತಾ, ಜನರ ಭಾವನೆಗಳನ್ನೇ ಬಳಸಿಕೊಂಡು ರಾಜಕೀಯ ಲಾಭ ಗಳಿಸುವ ಸಂಚು ಯಶಸ್ವಿಯಾಗುತ್ತಿದೆ ಎನ್ನಲಾಗುತ್ತಿದೆ.

Tags: India vs NepalPolitical Gainಭಾರತ vs ನೇಪಾಳರಾಜಕೀಯ ಲಾಭ
Previous Post

ಕೋವಿಡ್-19: ರಾಜ್ಯದಲ್ಲಿ ಇಂದು 317 ಪ್ರಕರಣ ಪತ್ತೆ

Next Post

ಭಾರತ-ಚೀನಾ ಗಡಿ ಮುಖಾಮುಖಿ; ಭಾರತೀಯ 20 ಯೋಧರು ಹುತಾತ್ಮ, ಚೀನಾಕ್ಕೆ ತಕ್ಕ ಪ್ರತಿಕ್ರಿಯೆ

Related Posts

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ
ಅಭಿಮತ

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ

by ಪ್ರತಿಧ್ವನಿ
November 7, 2025
0

  https://youtu.be/iZY7Q0JnGnY ಬೆಂಗಳೂರು: ಹೈಕೋರ್ಟ್ ನಲ್ಲಿಂದು ಮತ್ತೆ ಚಿತ್ತಾಪುರ ಪಥಸಂಚಲನ ಕುರಿತ ಅರ್ಜಿ ವಿಚಾರಣೆ ನಡೆದಿದೆ. ೮ ವೇಳೆ ಅರ್ಜಿದಾರರಿಗೆ ಅನುಮತಿ ಮಂಜೂರು ಮಾಡಲು ಸರ್ಕಾರಕ್ಕೆ ನವೆಂಬರ್...

Read moreDetails

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

January 12, 2025

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024
Next Post
ಭಾರತ-ಚೀನಾ ಗಡಿ ಮುಖಾಮುಖಿ; ಭಾರತೀಯ 20 ಯೋಧರು ಹುತಾತ್ಮ

ಭಾರತ-ಚೀನಾ ಗಡಿ ಮುಖಾಮುಖಿ; ಭಾರತೀಯ 20 ಯೋಧರು ಹುತಾತ್ಮ, ಚೀನಾಕ್ಕೆ ತಕ್ಕ ಪ್ರತಿಕ್ರಿಯೆ

Please login to join discussion

Recent News

BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!
Top Story

BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!

by ಪ್ರತಿಧ್ವನಿ
December 19, 2025
Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ
Top Story

Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ

by ಪ್ರತಿಧ್ವನಿ
December 19, 2025
ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು
Top Story

ನಾಗರಬಾವಿ ಪಬ್‌ನಲ್ಲಿ ಗಲಾಟೆ..ಅಸಭ್ಯ ವರ್ತನೆ: ದೂರು-ಪ್ರತಿದೂರು ದಾಖಲು

by ಪ್ರತಿಧ್ವನಿ
December 19, 2025
ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್
Top Story

ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ ತಪ್ಪೇನು- ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
December 19, 2025
ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌
Top Story

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

by ನಾ ದಿವಾಕರ
December 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!

BBK 12: ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಔಟ್‌..!

December 19, 2025
Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ

Winter Session 2025: ರೈತರಿಗೆ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಧನ ಏರಿಕೆ ಮಾಡಿದ ಸರ್ಕಾರ

December 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada