• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಬಿಜೆಪಿ ಗೆಲುವು ಸಮಾಜವಾದಿ ರಾಷ್ಟ್ರ ಎಂಬ ಕಳಂಕ ತೊಳೆಯಿತು ಎಂದಿದ್ದ ಅಂಖೀ ದಾಸ್!

by
September 1, 2020
in ದೇಶ
0
ಬಿಜೆಪಿ ಗೆಲುವು ಸಮಾಜವಾದಿ ರಾಷ್ಟ್ರ ಎಂಬ ಕಳಂಕ ತೊಳೆಯಿತು ಎಂದಿದ್ದ ಅಂಖೀ ದಾಸ್!
Share on WhatsAppShare on FacebookShare on Telegram

ಫೇಸ್ ಬುಕ್ ಮತ್ತು ಆಡಳಿತಾರೂಢ ಬಿಜೆಪಿ ನಡುವಿನ ಆಪ್ತ ಸಂಬಂಧದ ಕುರಿತ ವರದಿಗಳನ್ನು ಜಾಗತಿಕ ಸಾಮಾಜಿಕ ಜಾಲತಾಣ ದೈತ್ಯ ಸಂಸ್ಥೆ ನಿರಾಕರಿಸುತ್ತಿದ್ದರೂ, ಆ ನಂಟಿನ ಹೊಸಹೊಸ ವಿವರಗಳು ಬಹಿರಂಗವಾಗುತ್ತಲೇ ಇವೆ.

ADVERTISEMENT

ಮತದಾರರ ಮೇಲೆ ಪ್ರಭಾವ ಬೀರುವ ಮೂಲಕ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಸೇರಿದಂತೆ ದೇಶದ ಪ್ರಜಾಪ್ರಭುತ್ವದ ಬುನಾದಿಗಳನ್ನೇ ಅಲುಗಾಡಿಸುವಂತಹ ಪ್ರಯತ್ನಗಳಲ್ಲಿ ಫೇಸ್ ಬುಕ್ ಭಾಗಿಯಾಗಿದ್ದು, ಆಡಳಿತ ಪಕ್ಷ ಮತ್ತು ಪ್ರಧಾನಿ ಮೋದಿಯವರ ಪರ ಆ ಸಂಸ್ಥೆ ಕೆಲಸ ಮಾಡಿದೆ ಎಂಬ ಗಂಭೀರ ಸಂಗತಿಯನ್ನು ಮೊದಲು ಬಹಿರಂಗಗೊಳಿಸಿದ್ದ ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್, ಇದೀಗ ಮತ್ತೊಂದು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಪ್ರಧಾನಿ ಮೋದಿಯವರು ಭಾರೀ ಜಯಭೇರಿ ಭಾರಿಸಿದ 2014ರ ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳುವ ಮುನ್ನಾ ದಿನ ಫೇಸ್ ಬುಕ್ ಇಂಡಿಯಾದ ಮುಖ್ಯಸ್ಥೆ ಅಂಖೀ ದಾಸ್, “ಅವರ ಸಾಮಾಜಿಕ ಜಾಲತಾಣ ಪ್ರಚಾರಕ್ಕೆ ನಾವೊಂದು ಕಿಡಿ ಹೊತ್ತಿಸಿದೆವು. ಅದರ ಪ್ರತಿಫಲವೇನು ಎಂಬುದು ಈಗ ಇತಿಹಾಸ ನಿರ್ಮಿಸುತ್ತಿದೆ” ಎಂದು ತಮ್ಮ ಸಂಸ್ಥೆಯ ಆಂತರಿಕ ಜಾಲತಾಣ ಗುಂಪಿನಲ್ಲಿ ಬೆನ್ನುತಟ್ಟಿಕೊಂಡಿದ್ದರು ಎಂಬುದನ್ನು ವಾಲ್ ಸ್ಟ್ರೀಟ್ ಜರ್ನಲ್ ಆಧಾರಸಹಿತವಾಗಿ ಬಹಿರಂಗಪಡಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

2011ರಿಂದ ಫೇಸ್ ಬುಕ್ ಕಂಪನಿಯ ಭಾರತದ ವ್ಯವಹಾರಗಳ ಹೊಣೆ ಹೊತ್ತಿರುವ ಅಂಖೀ ದಾಸ್, ಆರಂಭದಿಂದಲೂ ಬಿಜೆಪಿ ಮತ್ತು ಮೋದಿ ಪರವಾಗಿ ಮತ್ತು ಕಾಂಗ್ರೆಸ್ ವಿರುದ್ಧವಾಗಿ ನಿರಂತರವಾಗಿ ಸಂದೇಶಗಳನ್ನು ಕಂಪನಿಯ ಸಿಬ್ಬಂದಿಯ ಆಂತರಿಕ ಬಳಕೆಯ ಗುಂಪುಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಆ ಮೂಲಕ ತಾನು ಯಾವುದೇ ಪಕ್ಷ- ಸಿದ್ಧಾಂತದ ಪರವಾಗಿ ಇಲ್ಲ, ರಾಜಕೀಯವಾಗಿ ನಿರ್ಲಿಪ್ತ ನಿಲುವು ತನ್ನದು. ಚುನಾವಣೆಗಳ ವಿಷಯದಲ್ಲಿ ಕೂಡ ಅದೇ ನಿರ್ಲಿಪ್ತ ನಿಲುವಿಗೆ ಬದ್ಧವಾಗಿರುವುದಾಗಿ ಹೇಳಿಕೊಳ್ಳುವ ಫೇಸ್ ಬುಕ್ ಕಂಪನಿಯ ಸಾಂಸ್ಥಿಕ ನೈತಿಕತೆಗೆ ವಿರುದ್ಧವಾಗಿ ಕೆಲಸ ಮಾಡಿದ್ದಾರೆ ಎಂದು ಆಕೆಯ ಸಹೋದ್ಯೋಗಿಗಳೇ ಹೇಳಿರುವುದಾಗಿ ವರದಿ ಹೇಳಿದೆ.

Also Read: ಹಿಂದುತ್ವದ ಧ್ವೇಷವನ್ನು ಫೇಸ್ಬುಕ್ ಬೆಂಬಲಿಸುತ್ತಿದೆ- ವಾಲ್ ಸ್ಟ್ರೀಟ್ ಜರ್ನಲ್ ವರದಿ

ಚುನಾವಣೆಯಲ್ಲಿ ಭಾರೀ ಜನಾದೇಶದೊಂದಿಗೆ ಮೋದಿ ಪ್ರಧಾನಿಯಾಗಿ ಹೊರಹೊಮ್ಮಿದ ಬೆನ್ನಲ್ಲೇ ಅಂಖೀ ದಾಸ್, “ಭಾರತವನ್ನು ಸಮಾಜವಾದಿ ರಾಷ್ಟ್ರ ಎಂಬ ಕಳಂಕದಿಂದ ಮುಕ್ತಗೊಳಿಸಲು ಬರೋಬ್ಬರಿ 30 ವರ್ಷಗಳ ಕಠಿಣ ಪರಿಶ್ರಮದ ಬೆಲೆ ತೆರಬೇಕಾಯಿತು” ಎಂದು ಪೋಸ್ಟ್ ಹಾಕುವ ಮೂಲಕ ಕಾಂಗ್ರೆಸ್ ಸೋಲನ್ನು ಸಂಭ್ರಮಿಸಿದ್ಧಾರೆ. ಜೊತೆಗೆ, ಹಿಂದಿನ ಆಡಳಿತ ಪಕ್ಷದ ಆಡಳಿತವನ್ನು ಮುರಿದ ಹೆಗ್ಗಳಿಕೆಯ ಮೋದಿಯವರನ್ನು, “ಉಕ್ಕಿನ ಮನುಷ್ಯ” ಎಂದೂ ಬಣ್ಣಿಸಿದ್ದಾರೆ. ಅದೇ ಹೊತ್ತಿಗೆ, ಆ ಚುನಾವಣಾ ಪ್ರಚಾರಾಂದೋಲನದಲ್ಲಿ ಮೋದಿ ಪರವಾದ ಪ್ರಚಾರಕ್ಕೆ ತಮ್ಮೊಂದಿಗೆ ‘ಬಹುದಿನಗಳ ಕಾಲ ತಮ್ಮ ಸಹಚಾರಿ’ಯಾಗಿದ್ದರು ಎಂದು ಫೇಸ್ ಬುಕ್ನ ಜಾಗತಿಕ ಚುನಾವಣಾ ಉಸ್ತುವಾರಿ ಕ್ಯಾಟಿ ಹರ್ಬತ್ ಅವರನ್ನೂ ಬಣ್ಣಿಸಿದ್ದಾರೆ. ಈ ಸಂದೇಶದೊಂದಿಗೆ ಮೋದಿ ಮತ್ತು ಹರ್ಬತ್ ನಡುವೆ ನಗುತ್ತಾ ನಿಂತಿರುವ ತನ್ನ ಫೋಟೋವೊಂದನ್ನೂ ಗುಂಪಿನಲ್ಲಿ ಹಂಚಿಕೊಂಡಿದ್ದರು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಈ ಯಾವ ವಿವರಗಳೂ ಈ ಮೊದಲು ಸಾರ್ವಜನಿಕಗೊಂಡಿರಲಿಲ್ಲ ಎಂದಿರುವ ವಾಲ್ ಸ್ಟ್ರೀಟ್ ಜರ್ನಲ್, 2012ರಿಂದ 2014ರ ನಡುವೆ ಮೋದಿ ಮತ್ತು ಬಿಜೆಪಿಗೆ ಬೆಂಬಲವಾಗಿ ಮತ್ತು ಕಾಂಗ್ರೆಸ್ ವಿರುದ್ಧವಾಗಿ ಇಂತಹ ಹಲವು ಪೋಸ್ಟ್ ಗಳನ್ನು ತಮ್ಮ ಆಂತರಿಕ ಗುಂಪಿನಲ್ಲಿ ಹಂಚಿಕೊಂಡಿದ್ದಾಗಿ ಹೇಳಿದೆ. ಜಾಗತಿಕವಾಗಿ ಫೇಸ್ ಬುಕ್ ನ ಯಾವುದೇ ಉದ್ಯೋಗಿಯೂ ಆ ಗುಂಪಿನಲ್ಲಿ ಪಾಲ್ಗೊಳ್ಳಬಹುದಾಗಿತ್ತು ಮತ್ತು ಸಾವಿರಾರು ಉದ್ಯೋಗಿಗಳ ಅದರ ಸದಸ್ಯರಾಗಿದ್ದರು ಎಂಬ ವಿವರವನ್ನೂ ಉಲ್ಲೇಖಿಸಲಾಗಿದೆ.

2011ರಿಂದಲೇ ಮೋದಿಯವರ ಗುಜರಾತ್ ಉಪ ಚುನಾವಣಾ ಪ್ರಚಾರದ ವಿಷಯದಲ್ಲಿಯೂ ಅವರ ತಂಡಕ್ಕೆ ತರಬೇತಿ ನೀಡಿದ್ದ ಅಂಖೀ ದಾಸ್, 2012ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿಯವರು ಉಪಚುನಾವಣೆಯಲ್ಲಿ ಗೆಲವು ದಾಖಲಿಸುತ್ತಿದ್ದಂತೆ, ”ನಮ್ಮ ಗುಜರಾತ್ ಕ್ಯಾಂಪೇನ್ ಭರ್ಜರಿ ಯಶಸ್ಸು ಕಂಡಿದೆ” ಎಂದು ಪೋಸ್ಟ್ ಹಾಕಿದ್ದರು. ಅಲ್ಲದೆ, 2013ರಲ್ಲಿ ತಮ್ಮ ಸಹೋದ್ಯೊಗಿ ಕ್ಯಾಟಿ ಹರ್ಬತ್ ಅವರಿಗೆ, ‘ಮೋದಿ, ಭಾರತದ ಜಾರ್ಜ್ ಡಬ್ಲ್ಯೂ. ಬುಷ್’ ಎಂದು ಬಣ್ಣಿಸಿದ್ದರು. ಜೊತೆಗೆ 2014ರ ಲೋಕಸಭಾ ಚುನಾವಣೆಗೆ ಮುನ್ನಾ ಪಕ್ಷದ ಪ್ರಚಾರದಲ್ಲಿ ಫೇಸ್ ಬುಕ್ ಕಂಪನಿಯ ಪ್ರಮುಖ ಆದ್ಯತೆಗಳನ್ನು ಪರಿಗಣಿಸುವಂತೆ ಬಿಜೆಪಿಯೊಂದಿಗೆ ಕಂಪನಿ ಲಾಬಿ ಬಹಳ ದೀರ್ಘಾವಧಿಯ ಪ್ರಯತ್ನ ನಡೆಸಿದೆ. ಅದರಲ್ಲೂ ಪ್ರಮುಖವಾಗಿ ಹೆಚ್ಚು ನಿರ್ಬಂಧವಿರದ, ಆದರೆ ವ್ಯಾಪಕ ಜಾಲ ಹೊಂದಿರುವ ಇಂಟರ್ ನೆಟ್ ಸೇವೆಯ ಬಗ್ಗೆ ಕಂಪನಿ ಬಿಜೆಪಿಯೊಂದಿಗೆ ಲಾಬಿ ನಡೆಸಿತ್ತು ಎಂದೂ ಬರೆದುಕೊಂಡಿದ್ದರು ಎನ್ನಲಾಗಿದೆ.

Also Read: ರಾಹುಲ್ ಗಾಂಧಿ vs ರವಿಶಂಕರ್ ಪ್ರಸಾದ್ ವಾಕ್ಸಮರಕ್ಕೆ ಕಾರಣವಾದ ಫೇಸ್ಬುಕ್

ಆ ಹಿನ್ನೆಲೆಯಲ್ಲಿಯೇ, ತಮ್ಮ ಕಡೆಯಿಂದ ಏನೆಲ್ಲಾ ಬೇಕೋ ಅದೆಲ್ಲವೂ ಮಾಡಲಾಗಿದೆ ಎಂಬ ಅರ್ಥದಲ್ಲಿ, “ಈಗ ಅವರು ಚುನಾವಣೆಗೆ ಹೋಗಿ ಜಯಭೇರಿ ಭಾರಿಸುವುದಷ್ಟೇ ಬಾಕಿ” ಎಂದು ಅಂಖೀ ದಾಸ್ ಬಿಜೆಪಿಯ ಜಯಭೇರಿಯನ್ನು ಊಹಿಸಿದ್ದರು. ಜೊತೆಗೆ, ಅಂದಿನ ಪ್ರಧಾನಿ ಅಭ್ಯರ್ಥಿ ಮೋದಿಯವರ ವೈಯಕ್ತಿಕ ಫೇಸ್ ಬುಕ್ ಪುಟಕ್ಕಿಂತ, ಕಾಂಗ್ರೆಸ್ ಪಕ್ಷದ ಪುಟಕ್ಕೆ ಹೆಚ್ಚು ಫಾಲೋಯರ್ಸ್ ಇರುವ ಬಗ್ಗೆ ಸಂಸ್ಥೆಯ ಸಹೋದ್ಯೋಗಿಯೊಬ್ಬರು ಪ್ರಸ್ತಾಪಿಸಿದಾಗ, ಅಂಖೀ ದಾಸ್, “ಕಾಂಗ್ರೆಸ್(ಐಎನ್ ಸಿ) ಪಕ್ಷದೊಂದಿಗೆ ಹೋಲಿಸಿ ಅವರ ಘನತೆಯನ್ನು ಕುಗ್ಗಿಸಬೇಡಿ” ಎಂದು ತಾಕೀತು ಮಾಡಿದ್ದರು ಎಂಬ ವಿವರವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಷ್ಟೇ ಅಲ್ಲ; ಅಂಖೀ ದಾಸ್ ಮತ್ತು ಬಿಜೆಪಿ ಉನ್ನತ ನಾಯಕರ ನಡುವಿನ ನಂಟು ಎಷ್ಟು ಆಪ್ತವಾಗಿತ್ತು ಎಂದರೆ; 2014ರ ಚುನಾವಣೆಯಲ್ಲಿ ಮೋದಿಯವರ ಪಕ್ಷ ಎಷ್ಟು ಸ್ಥಾನಗಳನ್ನು ಗಳಿಸಲಿದೆ. ಯಾವ ಪ್ರಮಾಣದ ಜಯಭೇರಿ ಭಾರಿಸಲಿದೆ ಎಂಬ ಕುರಿತ ಆ ಪಕ್ಷದ ಉನ್ನತ ನಾಯಕರ ನಡುವಿನ ರಹಸ್ಯ ಮಾಹಿತಿಯನ್ನು ಕೂಡ ತಾನು ಪಡೆದುಕೊಂಡಿರುವುದಾಗಿಯೂ, ‘ತನ್ನ ಪರಮಾಪ್ತರಾಗಿರುವ ಪಕ್ಷದ ಉನ್ನತ ನಾಯಕರೇ ತನಗೆ ಆ ಮಾಹಿತಿ ನೀಡಿರುವುದಾಗಿಯೂ’ ಹೇಳಿ, ದಾಸ್ ಆ ಮಾಹಿತಿಯನ್ನು ತಮ್ಮ ಸಂಸ್ಥೆಯ ಸಿಬ್ಬಂದಿಗಳ ಆಂತರಿಕ ಗುಂಪಿನಲ್ಲಿ ಹಂಚಿಕೊಂಡಿದ್ದರು ಎಂಬ ಸಂಗತಿಯನ್ನೂ ವಾಲ್ ಸ್ಟ್ರೀಟ್ ಜರ್ನಲ್ ಬಹಿರಂಗಪಡಿಸಿದೆ.

Also Read: ವಿಶ್ವಾಸ ಉಳಿಸಿಕೊಳ್ಳಲು ಫೇಸ್ಬುಕ್ ಚಟುವಟಿಕೆಗಳನ್ನು ತನಿಖೆ ಮಾಡಿ: ಶ್ರೀನಿವಾಸ್ ಬಿ.ವಿ.

ಎರಡು ವಾರದ ಹಿಂದೆ ದ್ವೇಷ ಭಾಷಣ ಮತ್ತು ಪ್ರಚೋದನಕಾರಿ ಹೇಳಿಕೆಗಳ ವಿಷಯದಲ್ಲಿ ಅಂಖೀ ದಾಸ್, ಬಿಜೆಪಿ ನಾಯಕರು ಮತ್ತು ಪಕ್ಷದ ಪರವಾಗಿ ಕಂಪನಿಯಲ್ಲಿ ಆಂತರಿಕವಾಗಿ ಹೇಗೆ ಲಾಬಿ ಮಾಡುತ್ತಿದ್ದಾರೆ . ಬಿಜೆಪಿಯೊಂದಿಗಿನ ಕಂಪನಿಯ ಮೈತ್ರಿ ವ್ಯವಹಾರ ಕಂಪನಿಗೆ ಲಾಭ ತಂದುಕೊಟ್ಟಿದೆ. ಹಾಗಾಗಿ ಆ ಪಕ್ಷ ಮತ್ತು ಅದರ ನಾಯಕರ ವಿರುದ್ಧ ವ್ಯತಿರಿಕ್ತ ಕ್ರಮ ಬೇಡ ಎಂದು ಸಮರ್ಥಿಸಿಕೊಂಡ ಕುರಿತು ಹಲವು ಸಾಕ್ಷ್ಯಾಧಾರ ಸಹಿತ ವಾಲ್ ಸ್ಟ್ರೀಟ್ ಜರ್ನಲ್ ಎಕ್ಸ್ ಕ್ಲೂಸಿವ್ ವರದಿ ಮಾಡಿತ್ತು.

ಆ ವರದಿ ಭಾರತದ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗಿತ್ತು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಸಾಕಷ್ಟು ಕೆಸರೆರಚಾಟಕ್ಕೂ ನಾಂದಿ ಹಾಡಿತ್ತು. ಈ ನಡುವೆ ವರದಿಯ ಹಿನ್ನೆಲೆಯಲ್ಲಿ ತನಗೆ ಬೆದರಿಕೆ ಕರೆಗಳು ಬರುತ್ತಿವೆ. ತನಗೆ ರಕ್ಷಣೆ ಒದಗಿಸಿ ಎಂದು ಅಂಖೀ ದಾಸ್ ಪತ್ರಕರ್ತರೊಬ್ಬರು ಸೇರಿದಂತೆ ಹಲವರ ವಿರುದ್ದ ಪೊಲೀಸ್ ದೂರು ಕೂಡ ನೀಡಿದ್ದರು. ಅದೇ ಹೊತ್ತಿಗೆ, ಫೇಸ್ ಬುಕ್ ಕಂಪನಿಯ ರಾಜಕೀಯ ಪಕ್ಷಪಾತ ಧೋರಣೆ ಮತ್ತು ಚುನಾವಣೆಗಳ ಮೇಲೆ ಪ್ರಭಾವ ಬೀರುವ ನೀತಿಯ ಕುರಿತು ವಿಚಾರಣೆ ನಡೆಸುವುದಾಗಿ ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸಮಿತಿ ಹೇಳಿತ್ತು. ದೆಹಲಿ ವಿಧಾನಸಭೆ ಕೂಡ ಫೇಸ್ ಬುಕ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ಕಳೆದ ಫೆಬ್ರವರಿಯ ದೆಹಲಿ ಗಲಭೆಯಲ್ಲಿ ಫೇಸ್ ಬುಕ್ ಭಾರತೀಯ ಅಧಿಕಾರಿಗಳ ಪಾತ್ರವಿತ್ತೆ ಎಂಬ ಕುರಿತು ತನಿಖೆ ನಡೆಸಲು ನಡಾವಳಿ ಅಂಗೀಕರಿಸಿದೆ. ಈ ನಡುವೆ, ಸ್ವತಃ ಫೇಸ್ ಬುಕ್ ನ ಜಾಗತಿಕ ಮಟ್ಟದ ವಿವಿಧ ಸಿಬ್ಬಂದಿ ವರ್ಗ ಕೂಡ ಈ ಪ್ರಕರಣದ ಹಿನ್ನೆಲೆಯಲ್ಲಿ ಕಂಪನಿ ನೈತಿಕ ನಿಲುವನ್ನು ಸ್ಪಷ್ಟಪಡಿಸುವಂತೆ ಒತ್ತಾಯಿಸಿದ್ದರು.

Also Read: ಸಾಮಾಜಿಕ ತಾಣಗಳಲ್ಲಿ ನಕಲಿ ಸುದ್ದಿಗಳದ್ದೇ ಕಾರು ಬಾರು

ಮತ್ತೊಂದು ಬೆಳವಣಿಗೆಯಲ್ಲಿ, ಫೇಸ್ ಬುಕ್ ಮತ್ತು ಆಡಳಿತ ಪಕ್ಷದ ನಡುವಿನ ಅಪವಿತ್ರ ಮೈತ್ರಿಯ ಕುರಿತ ಈ ಪ್ರಕರಣದ ಹಿನ್ನೆಲೆಯಲ್ಲಿ ದೇಶದಲ್ಲಿ ಫೇಸ್ ಬುಕ್ ನ ದ್ವೇಷ ಭಾಷಣ ಮತ್ತು ಅಸಹಿಷ್ಣುತೆ ಕುರಿತ ನೀತಿಗಳ ಕುರಿತ ಪರಿಶೀಲನೆ ನಡೆಸುವಂತೆ 54 ಮಂದಿ ಮಾಜಿ ಐಎಎಸ್ ಅಧಿಕಾರಿಗಳ ಗುಂಪು ಫೇಸ್ ಬುಕ್ ಕಂಪನಿಯ ಸಿಇಒ ಝೂಕರ್ ಬರ್ಗ್ಗೆ ಬಹಿರಂಗ ಪತ್ರ ಬರೆದಿದೆ.

ಈ ನಡುವೆ, “ಭಾರತೀಯ ಮುಸ್ಲಿಮರು ಅಧಃಪತನ ಹೊಂದಿದ ಸಮುದಾಯ(indian muslims a degenerate community)” ಎಂಬ ಹೇಳಿಕೆಯನ್ನು ಫೇಸ್ ಬುಕ್ ನಲ್ಲಿ ಹಾಕಿದ ಅಂಖೀ ದಾಸ್, ತಮ್ಮ ಸಹೋದ್ಯೋಗಿಗಳ ತೀವ್ರ ವಿರೋಧಕ್ಕೆ ಈಡಾಗಿದ್ದರು. ಸಹೋದ್ಯೋಗಿಗಳ ವಿರೋಧದ ಹಿನ್ನೆಲೆಯಲ್ಲಿ ಬಳಿಕ ಆ ಪೋಸ್ಟನ್ನು ಅಳಿಸಿ, ಆ ಬಗ್ಗೆ ಕ್ಷಮೆಯಾಚಿಸಿದ್ದರು. ಇಷ್ಟಾಗಿಯೂ ಫೇಸ್ ಬುಕ್ ಅಂಖೀ ದಾಸ್ ಅವರನ್ನು ಸಮರ್ಥಿಸಿಕೊಂಡಿದ್ದು,” ಈ ಪೋಸ್ಟುಗಳನ್ನು ಅವುಗಳನ್ನು ಹಾಕಿದ ಸಂದರ್ಭದಿಂದ ಹೊರಗಿಟ್ಟು ನೋಡಲಾಗುತ್ತಿದೆ. ಭಾರತದ ಎಲ್ಲಾ ರಾಜಕೀಯ ಪಕ್ಷಗಳಿಗೂ ಫೇಸ್ ಬುಕ್ ತನ್ನ ವೇದಿಕೆಯನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ಮುಕ್ತ ಅವಕಾಶ ನೀಡಿದೆ. ಅಂತಹ ಪ್ರಯತ್ನದ ಹಿನ್ನೆಲೆಯಲ್ಲಿ ಈ ಪೋಸ್ಟುಗಳಿವೆ” ಎಂದು ಕಂಪನಿಯ ವಕ್ತಾರ ಆ್ಯಂಡಿ ಸ್ಟೋನ್ ಪ್ರತಿಕ್ರಿಯಸಿರುವುದಾಗಿ ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ.

Tags: Ankhi DasBJPFacebookWall street Journalಅಂಖೀ ದಾಸ್ಫೇಸ್ ಬುಕ್ಬಿಜೆಪಿವಾಲ್ ಸ್ಟ್ರೀಟ್ ಜರ್ನಲ್
Previous Post

ಕರ್ನಾಟಕಕ್ಕೆ ಮುಂದಿನ ವರ್ಷ AIIMS: ಸೂಚನೆ ಕೊಟ್ಟ ಕೇಂದ್ರ ಆರೋಗ್ಯ ಸಚಿವ

Next Post

ಸ್ಯಾಂಡಲ್‌ವುಡ್‌ ಡ್ರಗ್‌ ಮಾಫಿಯಾ: ಇಂದ್ರಜಿತ್‌ ಲಂಕೇಶ್‌ರಿಂದ ಮಾಹಿತಿ ಪಡೆದ ಪೊಲೀಸರು

Related Posts

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ
Top Story

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

by ನಾ ದಿವಾಕರ
July 1, 2025
0

-----ನಾ ದಿವಾಕರ---- ಕಾರ್ಪೋರೇಟ್‌ ಕೇಂದ್ರಿತ ನಗರೀಕರಣ ಪ್ರಕ್ರಿಯೆಯ ಒಂದು ಬಂಡವಾಳಶಾಹಿ ಸ್ವರೂಪ ಆಂಗ್ಲ ಭಾಷೆಯಲ್ಲಿ ಸ್ಮಾರ್ಟ್‌ (Smart) ಎಂಬ ಪದವನ್ನು ನಾಮಪದವಾಗಿಯೂ, ಲಿಂಗತಟಸ್ಥ ಪದವಾಗಿಯೂ ಬಳಸಲಾಗುತ್ತದೆ. ಕನ್ನಡದಲ್ಲಿ...

Read moreDetails
ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

July 1, 2025

Mallikarjun Kharge: ಸಂಚಲನ ಸೃಷ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ. ಶೀಘ್ರವೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ.

July 1, 2025
ಕಾಶ್ಮೀರದಲ್ಲಿ ನಡೆಯುತ್ತಿರುವುದು ಭಯೋತ್ಪಾದನೆ ಅಲ್ಲ..ಸ್ವತಂತ್ರ ಹೋರಾಟ : ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನಿರ್ 

ಕಾಶ್ಮೀರದಲ್ಲಿ ನಡೆಯುತ್ತಿರುವುದು ಭಯೋತ್ಪಾದನೆ ಅಲ್ಲ..ಸ್ವತಂತ್ರ ಹೋರಾಟ : ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನಿರ್ 

July 1, 2025

ಲೋಕಾಯುಕ್ತರು ಹಾಗೂ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಅವರನ್ನು ವಜಾಗೊಳಿಸಿ: ರವಿಕೃಷ್ಣಾ ರೆಡ್ಡಿ.

June 30, 2025
Next Post
ಸ್ಯಾಂಡಲ್‌ವುಡ್‌ ಡ್ರಗ್‌ ಮಾಫಿಯಾ: ಇಂದ್ರಜಿತ್‌ ಲಂಕೇಶ್‌ರಿಂದ ಮಾಹಿತಿ ಪಡೆದ ಪೊಲೀಸರು

ಸ್ಯಾಂಡಲ್‌ವುಡ್‌ ಡ್ರಗ್‌ ಮಾಫಿಯಾ: ಇಂದ್ರಜಿತ್‌ ಲಂಕೇಶ್‌ರಿಂದ ಮಾಹಿತಿ ಪಡೆದ ಪೊಲೀಸರು

Please login to join discussion

Recent News

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ
Top Story

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

by ಪ್ರತಿಧ್ವನಿ
July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌
Top Story

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
July 1, 2025
ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 
Top Story

ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 

by Chetan
July 1, 2025
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ
Top Story

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

by ನಾ ದಿವಾಕರ
July 1, 2025
ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
Top Story

ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
July 1, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

July 1, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada