• Home
  • About Us
  • ಕರ್ನಾಟಕ
Monday, February 2, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ನಾಗರಿಕ ಸ್ವಾತಂತ್ರ್ಯಕ್ಕೆ ದಕ್ಕೆ ತಂದ ಪೋಲಿಸರು: ಹೈ ಕೋರ್ಟ್

by
October 16, 2019
in ಕರ್ನಾಟಕ
0
ನಾಗರಿಕ ಸ್ವಾತಂತ್ರ್ಯಕ್ಕೆ ದಕ್ಕೆ ತಂದ ಪೋಲಿಸರು: ಹೈ ಕೋರ್ಟ್
Share on WhatsAppShare on FacebookShare on Telegram

ಸಾಮಾಜಿಕ ಜಾಲತಾಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ಪೋಸ್ಟ್ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ, ಫೇಸ್ ಬುಕ್ ಪೇಜ್ ಅಡ್ಮಿನ್ ವಿರುದ್ಧ ಅಕ್ರಮವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೋಲಿಸ್ ಅಧಿಕಾರಿಗಳಿಗೆ ಹೈಕೋರ್ಟ್ 1 ಲಕ್ಷ ದಂಡ ವಿಧಿಸಿ, ತನಿಖೆಗೊಳಪಡಿಸಬೇಕೆಂದು ಪೋಲಿಸ್ ಮಹಾ ನಿರ್ದೇಶಕರಿಗೆ ಆದೇಶಿಸಿದೆ.

ADVERTISEMENT

ಏನಿದು ಪ್ರಕರಣ?

ಫೇಸ್ ಬುಕ್ ನ ಟ್ರೋಲ್ ಮಗಾ ಎಂಬ ಫೇಜ್ ನಲ್ಲಿ ಜೈಕಾಂತ್ ಎಂಬುವರು ದೇವೇಗೌಡರ ಕುಟುಂಬದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದರು ಎನ್ನಲಾಗಿತ್ತು. ಹೀಗಾಗಿ ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಎಸ್ ಪಿ “ಜೈಕಾಂತ್ ಅವರು ಫೇಸ್ ಬುಕ್ ಟ್ರೋಲ್ ಮಗಾ ಎಂಬ ಪೇಜ್ ನಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಎಚ್ ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಬಗ್ಗೆ ಮಾನಹಾನಿಯಂತಹ ಪೋಸ್ಟ್ ಗಳನ್ನು ಅಪ್ ಲೋಡ್ ಮಾಡಿದ್ದಾರೆ” ಎಂದು 26.05.2019ರಂದು ಶ್ರೀರಾಂಪುರ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ (ಎಫ್ಐಆರ್ ಸಂಖ್ಯೆ: 91/2019) ದಾಖಲಿಸಿದರು.

ಈ ಕುರಿತು ಟ್ರೋಲ್ ಮಗ ಪೇಜ್ ಅಡ್ಮಿನ್ ಜೈಕಾಂತ್, ಸಿವಿಲ್ ಕೋರ್ಟ್ ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಜೂನ್ 10, 2019ರಂದು ಸಿವಿಲ್ ಕೋರ್ಟ್ ನ್ಯಾಯಾಧೀಶರು (City Civil and Sessions Judge) ನಿರೀಕ್ಷಣಾ ಜಾಮೀನು ನೀಡಿದ್ದರು. ಅಲ್ಲದೆ, ಒಂದು ವಾರದೊಳಗೆ ಪೋಲಿಸರ ಮುಂದೆ ಶರಣಾಗಲು ತಿಳಿಸಿದರು. 17 ಜೂನ್ 2019ರಂದು ಜೈಕಾಂತ್ ಪೋಲಿಸ್ ಠಾಣೆಗೆ ಭೇಟಿ ನೀಡಿದರು. ಆ ಕ್ಷಣದಲ್ಲಿ ಪೋಲಿಸ್ ಅಧಿಕಾರಿಗಳು ಈತನನ್ನು ಗಮನಿಸದೆ ಮರುದಿನ ಬರುವುದಾಗಿ ಹೇಳಿದರು. ಅಂತೆಯೇ, 18 ಜೂನ್ 2019ರಂದು ಜೈಕಾಂತ್ ತಮ್ಮ ವಕೀಲರ ಜೊತೆಗೆ ಪೋಲಿಸ್ ಠಾಣೆಗೆ ಭೇಟಿ ಕೊಟ್ಟಾಗ, ಪೋಲಿಸ್ ಅಧಿಕಾರಿಗಳು ನೇರವಾಗಿ ಜೈಕಾಂತ್ ಗೆ “ನೀವು ಜಾಮೀನು ನಿಯಮವನ್ನು ಉಲ್ಲಂಘಿಸಿದ್ದೀರಿ ಹಾಗೂ ನ್ಯಾಯಾಲಯದ ಆದೇಶವನ್ನು ಪಾಲಿಸುತ್ತಿಲ್ಲ” ಎಂದು ಮತ್ತೊಂದು ನೋಟಿಸ್ ನೀಡುತ್ತಾರೆ. ತದನಂತರ 23 ಜೂನ್ 2019ರಂದು ಪೋಲಿಸರು ನಂ.99/2019 ಎರಡನೇ ಎಫ್ಐಆರ್ ದಾಖಲಿಸಿಕೊಂಡು ಮತ್ತೆ ಅರ್ಜಿದಾರರನ್ನು ಅವರ ನಿವಾಸದಿಂದಲೇ ಎತ್ತಿಕೊಂಡು ಹೋಗುತ್ತಾರೆ.

ಇದಕ್ಕೂ ಮೊದಲು ಅರ್ಜಿದಾರರ ಜಾಮೀನು ಸಂಬಂಧಿತ ಬಾಂಡ್ ವಿಷಯದಲ್ಲಿ ವಿಳಂಬ ಪ್ರಶ್ನಿಸಿ ಸಿವಿಲ್ ನ್ಯಾಯಾಲಯ ನೊಟಿಸ್ ನೀಡಿದಾಗ ಶ್ರೀರಾಂಪುರ ಪೊಲೀಸರು ಒಂದು ಅಫಿಡವಿಟ್ ಸಲ್ಲಿಸುತ್ತಾರೆ. ಜೂನ್ 24, 2019ರಂದು ತನಿಖಾಧಿಕಾರಿ ನ್ಯಾಯಾಲಯದ ಮುಂದೆ ದಾಖಲೆಯನ್ನು ಸಲ್ಲಿಸುತ್ತಾರೆ. “17 ಜೂನ್ 2019ರಂದು ಅರ್ಜಿದಾರರು ಪೋಲಿಸ್ ಠಾಣೆಗೆ ಭೇಟಿ ನೀಡಿದ್ದರು, ಆದರೆ ಬಾಂಡ್ ತಂದಿರಲಿಲ್ಲ. ಅಲ್ಲದೆ, ತಾನು ವಿಶೇಷ ಕರ್ತವ್ಯದಲ್ಲಿದ್ದೆ. ಮರುದಿನ, ಅಂದರೆ 18 ಜೂನ್ 2019ರಂದು ನ್ಯಾಯಾಲಯದ ಆದೇಶಗಳೊಂದಿಗೆ ನನ್ನ ಮುಂದೆ ಹಾಜರಾದರು. ನಾನು ಅವರಿಂದ ಮತ್ತಷ್ಟು ದಾಖಲೆಗಳನ್ನು ಕೇಳಿದ್ದೆ. ಆದರೆ ಅರ್ಜಿದಾರರು ನನ್ನ ವಿರುದ್ಧವೇ ಆರೋಪ ಮಾಡಿದ್ದಾರೆ. ನ್ಯಾಯಾಲಯದ ಆದೇಶಕ್ಕೆ ಅಗೌರವ ಸಲ್ಲಿಸುವುದು ನನ್ನ ಉದ್ದೇಶವಲ್ಲ” ಎಂದು ಹೇಳುತ್ತಾರೆ. ಆದರೆ, ಎರಡನೇ ಎಫ್ಐಆರ್ ಬಗ್ಗೆ ತನಿಖಾಧಿಕಾರಿ ಏನನ್ನೂ ಹೇಳುವುದಿಲ್ಲ.

ಅರ್ಜಿದಾರ ಪರ ವಕೀಲರಾದ ಅರುಣ್ ಶ್ಯಾಮ್, “ತಮ್ಮ ಅರ್ಜಿದಾರರು ವೃತ್ತಿಯಲ್ಲಿ ಇಂಜಿನಿಯರ್. ಗೌರವಾನ್ವಿತ ಕುಟುಂಬದಿಂದ ಬಂದವರು. ರಾಜಕೀಯ ಪಕ್ಷದ ಕಾರ್ಯಕರ್ತರು ಮತ್ತು ಪೋಲಿಸರು ಅರ್ಜಿದಾರರ ಮೇಲೆ ಅಧಿಕಾರ ಚಲಾಯಿಸುತ್ತಿದ್ದಾರೆ. ಮೊದಲು ನೀಡಿದ ಜಾಮೀನಿನ ಆದೇಶವನ್ನು ವಿಫಲಗೊಳಿಸಿ, ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಬೇಕೆಂದು ಎರಡನೇ ಎಫ್ಐಆರ್ ದಾಖಲಿಸಿದ್ದಾರೆ” ಎಂದು ಪ್ರತಿಕ್ರಿಯಿಸುತ್ತಾರೆ.

ಹೈ ಕೋರ್ಟ್ ನಲ್ಲಿ ವಾದ ವಿವಾದ

ಎರಡನೇ ಎಫ್ಐಆರ್ ನಲ್ಲಿ ಜೈಕಾಂತ್ ಬಂಧನವಾದಾಗ ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಗೆ ಮೇಲ್ಮನವಿಯನ್ನು ಸಲ್ಲಿಸುತ್ತಾರೆ. 11 ಜುಲೈ 2019ರಲ್ಲಿ ಅಡ್ವೋಕೇಟ್ ಜನರಲ್ ಉದಯ ಹೊಳ್ಳ ಅಧಿಕಾರಿಗಳ ಪರವಾಗಿ ಹೈ ಕೋರ್ಟ್ ನಲ್ಲಿ ವಾದ ಮಂಡಿಸುತ್ತಾರೆ. “ಅರ್ಜಿದಾರರನ್ನು ಪ್ರತ್ಯೇಕ ಅಪರಾಧದಲ್ಲಿ ಬಂಧಿಸಲಾಗಿದೆ ಎಂದು ಪೋಲಿಸರು ಸ್ಪಷ್ಟನೆ ನೀಡಿದ್ದಾರೆ. 91/2019 ಮತ್ತು 99/2019 ಎರಡು ಎಫ್ಐಆರ್ ವಿಭಿನ್ನವಾದದ್ದು. ಅಲ್ಲದೆ, ಅರ್ಜಿದಾರನು ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಾನೆ. 91/2019ರ ಮೊದಲ ಎಫ್‌ಐಆರ್ ನಲ್ಲಿ ಐಪಿಸಿ 504, 507 ಮತ್ತು 153ಎ ಅಡಿಯ ಶಿಕ್ಷಾರ್ಹ ಅಪರಾಧದಲ್ಲಿ ನೋಂದಾಯಿಸಲಾಗಿದೆ ಮತ್ತು 99/2019ರ ಎರಡನೇ ಎಫ್‌ಐಆರ್ ನಲ್ಲಿ 153ಎ, 295ಎ, 504, 506, 354(ಡಿ) ಮತ್ತು 298 ಅಡಿಯ ಶಿಕ್ಷಾರ್ಹ ಅಪರಾಧದಲ್ಲಿ ಬಂಧಿಸಲಾಗಿದೆ” ಎಂದು ಹೇಳುತ್ತಾರೆ.

ಇದಕ್ಕೆ ಪ್ರತ್ಯುತ್ತರವಾಗಿ ಅರ್ಜಿದಾರ ಪರ ವಕೀಲ ಅರುಣ್ ಶ್ಯಾಮ್ “26 ಮೇ 2019ರಂದು ಜೆಡಿಎಸ್ ರಾಜ್ಯ ಪ್ರಧಾನಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಎಸ್ ಪಿ, ‘ಟ್ರೋಲ್ ಮಗಾ’ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಮಾನಹಾನಿಕರ ಪೋಸ್ಟ್ ಗಳನ್ನು ಹಾಕಿದ್ದಾರೆ ಎಂದು ಮೊದಲು ದೂರನ್ನು ನೀಡಿದ್ದಾರೆ ಮತ್ತು 23 ಜೂನ್ 2019ರಂದು ಜೆಡಿಎಸ್ ನ ಐಟಿ ಸೆಲ್ ವಿಭಾಗದ ಬಿ.ರವಿರಾಜ್ ‘ಟ್ರೋಲ್ ಮಗಾ ಎಂಬ ಫೇಸ್ ಬುಕ್ ಪೇಜ್ ನಲ್ಲಿ ದ್ವೇಷ ಉಂಟು ಮಾಡುವ ಹಾಗೂ ರಾಜಕೀಯ ಪಕ್ಷಗಳ ನಡುವಿನ ಸಂಘರ್ಷ ಉಂಟುಮಾಡುವ ಪೋಸ್ಟ್ ಗಳನ್ನು ಹಾಕಿಲಾಗಿದೆ ಎಂದು ಎರಡನೇ ಬಾರಿ ದೂರನ್ನು ನೀಡಿದ್ದಾರೆ. 91/2019 ಮತ್ತು 99 / 2019 ಎರಡೂ ಎಫ್‌ಐಆರ್ ಗಳು ‘ಟ್ರೋಲ್ ಮಗಾ’ ಎಂದು ಕರೆಯಲ್ಪಡುವ ‘ಫೇಸ್‌ಬುಕ್’ ಪೋಸ್ಟಗಳಿಗೆ ಸಂಬಂಧಿಸಿರುವುದು” ಎಂದು ಸ್ಪಷ್ಟೀಕರಣ ನೀಡುತ್ತಾರೆ

ಅಲ್ಲದೆ, ವಕೀಲ ಅರುಣ್ ಶ್ಯಾಮ್, ಸೆಷನ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯನ್ನು ಹಾಗೂ 17 ಜೂನ್ 2019ರಂದು ಅರ್ಜಿದಾರರು ಪೋಲಿಸ್ ಠಾಣೆಗೆ ಬಂದ ವಿಚಾರವನ್ನು ಸ್ವತಃ ಪೋಲಿಸ್ ಅಧಿಕಾರಿಗಳು ಒಪ್ಪಿಕೊಂಡಿರುವುದಾಗಿ ಹೈಕೋರ್ಟ್ ನ್ಯಾಯಾಧೀಶರಿಗೆ ತಿಳಿಸುತ್ತಾರೆ.

ಹೈ ಕೋರ್ಟ್ ಆದೇಶ

ನ್ಯಾ.ಪಿ.ಎಸ್‌. ದಿನೇಶ್‌ ಕುಮಾರ್‌ ಅವರಿದ್ದ ಏಕಸದಸ್ಯಪೀಠ ವಿಚಾರಣೆಯನ್ನು ನಡೆಸುತ್ತಿದ್ದ ಸಂದರ್ಭದಲ್ಲಿ 70 ವರ್ಷಗಳ ಹಿಂದಿನ ಇಂಗ್ಲೆಂಡ್ ನ ನ್ಯಾಯಾಲಯವು ಹೊರಡಿಸಿದ ಆದೇಶವೊಂದನ್ನು ನೆನಪಿಸಿಕೊಳ್ಳುತ್ತದೆ. “ಸುಸಂಸ್ಕೃತ ಸಮಾಜದಲ್ಲಿ ನಾಗರಿಕರ ಸ್ವಾತಂತ್ರ್ಯವು ಪವಿತ್ರವಾದದ್ದು. ಎಂದಿಗೂ ನಾಗರಿಕ ಹಕ್ಕುಗಳು ಮೇಲುಗೈ ಸಾಧಿಸಬೇಕು. ಪ್ರತಿಯೊಬ್ಬರ ನಾಗರೀಕರ ಸ್ವಾತಂತ್ರ್ಯ ಮುಖ್ಯವಾದದ್ದು”.

“ಮೇ ತಿಂಗಳಲ್ಲಿ ದಾಖಲಾದ ಸಂಗತಿಗಳು ಮತ್ತು ಎರಡನೇ ದೂರಿನಲ್ಲಿ ದಾಖಲಾದ ಆರೋಪಗಳು ಹೆಚ್ಚು ಕಡಿಮೆ ಒಂದೇ ಆಗಿರುತ್ತವೆ. ಪೊಲೀಸರು ಅರ್ಜಿದಾರರನ್ನು ಹೇಗಾದರೂ ಮಾಡಿ ಉದ್ದೇಶ ಪೂರ್ವಕವಾಗಿ ಬಂಧಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ. ಮೊದಲ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್, ಜಾಮೀನು ನೀಡಿದರೂ, ಎರಡನೇ ಪ್ರಕರದಲ್ಲಿ ಜೈಕಾಂತ್ ನನ್ನು ಪೋಲಿಸ್ ಕಸ್ಟಡಿಗೆ ಕಳುಹಿಸುವುದಾಗಿ ಆದೇಶ ಕೊಟ್ಟಿರುವುದು ದುರದೃಷ್ಟಕರ” ಎಂದು ಹೇಳಿತು.

ಹೀಗಾಗಿ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಅಕ್ರಮವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ್ದ ಅಧಿಕಾರಿಗಳಿಗೆ ಹೈಕೋರ್ಟ್ 1ಲಕ್ಷ ರೂ ದಂಡ ವಿಧಿಸಿ, ಪೊಲೀಸರನ್ನು ಸಹ ತನಿಖೆಗೊಳಪಡಿಸಲು ಆದೇಶಿಸಿದೆ. “ಅರ್ಜಿದಾರರ ವಿರುದ್ಧ ಪೊಲೀಸ್ ಕ್ರಮವು ಕಾನೂನುಬಾಹಿರವಾಗಿದೆ. ಒಂದು ತಿಂಗಳಲ್ಲಿ ಅರ್ಜಿದಾರರಿಗೆ ದಂಡದ ಮೊತ್ತ ಪಾವತಿಸಬೇಕು. ದಂಡದ ಹಣವನ್ನು ತಪ್ಪಿತಸ್ಥ ಪೊಲೀಸರ ವೇತನದಿಂದ ವಸೂಲು ಮಾಡಬೇಕು ಮತ್ತು ಪೊಲೀಸ್ ಮಹಾನಿರ್ದೇಶಕರು ತಪ್ಪಿತಸ್ಥ ಪೊಲೀಸರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಮೂರು ತಿಂಗಳಲ್ಲಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಗೆ ವರದಿ ಸಲ್ಲಿಸಬೇಕು’ ಎಂದು ನ್ಯಾ.ಪಿ.ಎಸ್‌. ದಿನೇಶ್‌ ಕುಮಾರ್‌ ಅವರಿದ್ದ ಏಕಸದಸ್ಯಪೀಠ ಆದೇಶ ನೀಡಿದೆ.

Tags: Civil CourtDirector General of PoliceFacebookHD DevegowdaHD KumaraswamyHigh Court of KarnatakaJaikanth SJD(S) Chief SecretaryJD(S) IT CellJD(S) PartyNikhil Kumaraswamyಎಚ್ ಡಿ ಕುಮಾರಸ್ವಾಮಿಎಚ್ ಡಿ ದೇವೆಗೌಡಜೆಡಿಎಸ್ ಐಟಿ ಸೆಲ್ಜೆಡಿಎಸ್ ಪಕ್ಷಜೆಡಿಎಸ್ ಪ್ರಧಾನ ಕಾರ್ಯದರ್ಶಿಜೈಕಾಂತ್ ಎಸ್ನಿಖಿಲ್ ಕುಮಾರಸ್ವಾಮಿಪೋಲಿಸ್ ಮಹಾನಿರ್ದೇಶಕರುಫೇಸ್ ಬುಕ್ಸಿವಿಲ್ ಕೋರ್ಟ್ಹೈ ಕೋರ್ಟ್
Previous Post

ಕನ್ಹಯ್ಯ ಭಾಷಣ ಯಾರಿಗೆ ಬೇಡ ಎಂದು ತೋರಿಸಿದ ಗುಲ್ಬರ್ಗಾ!

Next Post

ಕಡೆಗಣಿಸುವವರಿಗೆ ತಿರುಗೇಟು ನೀಡಲು ಬಿ ಎಸ್ ವೈ ಸಿದ್ಧತೆ

Related Posts

ಅಕ್ರಮ ಗಣಿಗಾರಿಕೆಗೆ ಜೆಸಿಬಿ ಮೇಲೆ ಕಲ್ಲೆಸೆದು ಕಾನೂನಿನ ಗಡುಸು ಮುಖ ತೋರಿಸಿದ ಮಹಿಳಾ ಅಧಿಕಾರಿ
ಕರ್ನಾಟಕ

ಅಕ್ರಮ ಗಣಿಗಾರಿಕೆಗೆ ಜೆಸಿಬಿ ಮೇಲೆ ಕಲ್ಲೆಸೆದು ಕಾನೂನಿನ ಗಡುಸು ಮುಖ ತೋರಿಸಿದ ಮಹಿಳಾ ಅಧಿಕಾರಿ

by ಪ್ರತಿಧ್ವನಿ
February 1, 2026
0

ಬೆಳಗಾವಿ : ರಾಜಕೀಯ ಒತ್ತಡ, ಬೆದರಿಕೆಗಳು, ಗುಂಪು ಗಲಾಟೆಯ ನಡುವೆಯೂ ಅಕ್ರಮ ಗಣಿಗಾರಿಕೆಗೆ ತಲೆಬಾಗದೆ, ಸ್ಥಳದಲ್ಲೇ ಕಠಿಣ ಕ್ರಮ ಕೈಗೊಂಡ ಮಹಿಳಾ ಭೂ ವಿಜ್ಞಾನಿ ಬಿಂದನ್ ಪಾಟೀಲ...

Read moreDetails
ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

February 1, 2026
Vijayapura: 27 ಭೂ ಕಬಳಿಕೆ ಪ್ರಕರಣಗಳಲ್ಲಿ 200 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ

Vijayapura: 27 ಭೂ ಕಬಳಿಕೆ ಪ್ರಕರಣಗಳಲ್ಲಿ 200 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ

February 1, 2026
ಕೇಂದ್ರದಿಂದ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ

ಕೇಂದ್ರದಿಂದ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ

February 1, 2026
400 ಕೋಟಿ ದರೋಡೆ ಕೇಸ್‌: ದಿಢೀರ್‌ ಪೊಲೀಸರಿಗೆ ಶರಣಾದ ವ್ಯಕ್ತಿ ಯಾರು..?

400 ಕೋಟಿ ದರೋಡೆ ಕೇಸ್‌: ದಿಢೀರ್‌ ಪೊಲೀಸರಿಗೆ ಶರಣಾದ ವ್ಯಕ್ತಿ ಯಾರು..?

February 1, 2026
Next Post
ಕಡೆಗಣಿಸುವವರಿಗೆ ತಿರುಗೇಟು ನೀಡಲು ಬಿ ಎಸ್ ವೈ ಸಿದ್ಧತೆ

ಕಡೆಗಣಿಸುವವರಿಗೆ ತಿರುಗೇಟು ನೀಡಲು ಬಿ ಎಸ್ ವೈ ಸಿದ್ಧತೆ

Please login to join discussion

Recent News

ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?
Top Story

ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?

by ಪ್ರತಿಧ್ವನಿ
February 1, 2026
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಹಾಗೂ ಅಳಿಯನ ಬಗ್ಗೆ ಇಲ್ಲಿದೆ ಯಾರಿಗೂ ತಿಳಿಯದ ಈ ವಿಷಯ!
Top Story

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಹಾಗೂ ಅಳಿಯನ ಬಗ್ಗೆ ಇಲ್ಲಿದೆ ಯಾರಿಗೂ ತಿಳಿಯದ ಈ ವಿಷಯ!

by ಪ್ರತಿಧ್ವನಿ
February 1, 2026
ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ
Top Story

ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

by ಪ್ರತಿಧ್ವನಿ
February 1, 2026
Vijayapura: 27 ಭೂ ಕಬಳಿಕೆ ಪ್ರಕರಣಗಳಲ್ಲಿ 200 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ
Top Story

Vijayapura: 27 ಭೂ ಕಬಳಿಕೆ ಪ್ರಕರಣಗಳಲ್ಲಿ 200 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ

by ಪ್ರತಿಧ್ವನಿ
February 1, 2026
ಕೇಂದ್ರದಿಂದ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ
Top Story

ಕೇಂದ್ರದಿಂದ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ

by ಪ್ರತಿಧ್ವನಿ
February 1, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?

ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?

February 1, 2026
ಸಾಮಾಜಿಕ ಜಾಲತಾಣದಲ್ಲಿ  ಜಮಾತೆ ಇಸ್ಲಾಮಿ ಮುಖ್ಯಸ್ಥರ ಪೋಸ್ಟ್: ಬಾಂಗ್ಲಾದೇಶದಲ್ಲಿ ಆಕ್ರೋಶ! ಆಗಿದ್ದಾದರೂ ಏನು ?

ಸಾಮಾಜಿಕ ಜಾಲತಾಣದಲ್ಲಿ  ಜಮಾತೆ ಇಸ್ಲಾಮಿ ಮುಖ್ಯಸ್ಥರ ಪೋಸ್ಟ್: ಬಾಂಗ್ಲಾದೇಶದಲ್ಲಿ ಆಕ್ರೋಶ! ಆಗಿದ್ದಾದರೂ ಏನು ?

February 1, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada