• Home
  • About Us
  • ಕರ್ನಾಟಕ
Thursday, June 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ತಿಮ್ಮಪ್ಪನ ಸನ್ನಿಧಿ ಮತ್ತೆ ತೆರೆಯಲು ಸರ್ಕಾರದ ಮೊರೆಹೋದ ಆಡಳಿತ ಮಂಡಳಿ

by
May 25, 2020
in ದೇಶ
0
ತಿಮ್ಮಪ್ಪನ ಸನ್ನಿಧಿ ಮತ್ತೆ ತೆರೆಯಲು ಸರ್ಕಾರದ ಮೊರೆಹೋದ ಆಡಳಿತ ಮಂಡಳಿ
Share on WhatsAppShare on FacebookShare on Telegram

ತಿರುಪತಿ ದೇವಸ್ಥಾನ ಜಗತ್ತಿನಲ್ಲೇ ಇರುವ ಶ್ರೀಮಂತ ದೇವಸ್ಥಾನಗಳಲ್ಲೊಂದು. ಕರೋನಾ ಮತ್ತು ಲಾಕ್ ಡೌನ್ ಕಾರಣದಿಂದಾಗಿ ಇತಿಹಾಸದಲ್ಲೇ ಚೊಚ್ಚಲ ಬಾರಿಗೆ ತಿಮ್ಮಪ್ಪನ ಸನ್ನಿಧಿಯ ಬಾಗಿಲು ಮುಚ್ಚಲ್ಪಟ್ಟಿದೆ. ಕೇಂದ್ರ ಗೃಹ ಇಲಾಖೆಯ ಅಧಿಸೂಚನೆಯ ಪ್ರಕಾರ ಮೇ 31ರ ವರೆಗೆ ದೇಶದ ಎಲ್ಲಾ ಧಾರ್ಮಿಕ ಕೇಂದ್ರಗಳನ್ನೂ ಮುಚ್ಚಲು ಸೂಚಿಸಿದೆ. ಆದರೀಗ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ) ತಿಮ್ಮಪ್ಪ ಸನ್ನಧಿಯನ್ನು ಮತ್ತೆ ತೆರೆಯಲು ಆಂಧ್ರಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದೆ. ಅಲ್ಲದೇ ಕೋವಿಡ್ 19 ಶಿಷ್ಟಾಚಾರವನ್ನು ಕಟ್ಟು ನಿಟ್ಟಾಗಿ ಪಾಲಿಸುವುದಾಗಿ ಹೇಳಿದೆ.

ADVERTISEMENT

“ದೇಶಕ್ಕೆ ಕೋವಿಡ್ ವೈರಾಣು ಅಪ್ಪಳಿಸಿದ ದಿನದಿಂದಲೂ ಕೂಡ ತಿರುಮಲ ಪಟ್ಟಣ ಗ್ರೀನ್ ಝೋನ್‌ನಲ್ಲೇ ಇದೆ. ಆದರೂ ಮುನ್ನೆಚ್ಚರಿಕಾ ದೃಷ್ಟಿಯಿಂದ ನಾವು ದೇವಸ್ಥಾನದ ಬಾಗಿಲು ಮುಚ್ಚಿದೆವು. ತಿರುಪತಿ ತಿಮ್ಮಪ್ಪ ನಮ್ಮನ್ನು ಕಾಪಾಡಿದ್ದಾನೆ. ಅವನು ಸದಾ ನಮ್ಮ ಜೊತೆಗಿದ್ದಾನೆ. ಮುಂದಕ್ಕೂ ಅವನೇ ನಮ್ಮನ್ನು ಕಾಪಾಡುತ್ತಾನೆ” ಎಂದು ಮಂಡಳಿಯ ಅಧ್ಯಕ್ಷ ವೈ ವಿ ಸುಬ್ಬಾರೆಡ್ಡಿ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದಿಗೆ ಹೇಳಿಕೆ ನೀಡಿದ್ದಾರೆ. ಅಂದಹಾಗೆ ಮಾರ್ಚ್ 20ಕ್ಕೆ ಲಾಕ್ ಡೌನ್ ಹಿನ್ನೆಲೆ ದೇವಸ್ಥಾನ ಮುಚ್ಚಲಾಗಿತ್ತು.

ದೇವಸ್ಥಾನವನ್ನು ಮತ್ತೆ ತೆರೆಯಲು ಅನುಮತಿ ಕೊಟ್ಟರೆ ಕೆಳಗಿನ ಮುನ್ನೆಚ್ಚರಿಕಾ ಕ್ರಮಗಳನ್ನು ಆಡಳಿತ ಮಂಡಳಿ ಅನುಸರಿಸಲಿದೆ:

• ತಿಮ್ಮಪ್ಪನ್ನ ದರ್ಶನಕ್ಕೆ ಬರುವ ಭಕ್ತಾಧಿಗಳು ನಿಲ್ಲುವ ಜಾಗವನ್ನು ಸಂಪೂರ್ಣವಾಗಿ ಗುರಿತಿಸಲಾಗಿದೆ. ಒಬ್ಬೊಬ್ಬರಿಗೂ ಚೌಕ ಮಾದರಿಯಲ್ಲಿ ಗೆರೆ ಎಳೆಯಲಾಗಿದೆ. ಆ ಚೌಕಟ್ಟಿನ ಒಳಗೆ ನಿಂತುಕೊಂಡೇ ಭಕ್ತಾಧಿಗಳು ದರ್ಶನ ಪಡೆಯ ಬೇಕಿದೆ.

• ಎಲ್ಲಾ ಭಕ್ತಾಧಿಗಳು ಕೂಡ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆಗೆ ಒಳಪಡಲಿದ್ದಾರೆ. ಅಲ್ಲದೇ ಎಲ್ಲರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕಿದೆ.

• ಪ್ರತಿ ದಿನ ನಿಗದಿ ಭಕ್ತಾಧಿಗಳಿಗಷ್ಟೇ ದರ್ಶನಕ್ಕೆ ಅವಕಾಶ. ದಿನಂಪ್ರತಿ ಸುಮಾರು 1 ಲಕ್ಷಕ್ಕೂ ಅಧಿಕ ಜನರು ತಿಮ್ಮಪ್ಪನ ಸನ್ನಿಧಿಗೆ ಆಗಮಿಸುತ್ತಾರೆ. ಆದರೆ ಕೋವಿಡ್ 19 ಅನ್ನು ಗಮನದಲ್ಲಿಟ್ಟುಕೊಂಡು ಅದರ ಪ್ರಮಾಣವನ್ನು 25 ರಿಂದ 30 ಸಾವಿರಕ್ಕೆ ಇಳಿಸಲಾಗಿದೆ.

• ದಿನಕ್ಕೆ ನಿಗದಿತ ಸಮಯದ ದರ್ಶನ ಇರಲಿದೆ. ಪ್ರತಿ ದರ್ಶನ ಮುಗಿದ ಬಳಿಕ ಸ್ಯಾನಿಟೈಸರ್ ಬಳಸಿ ದೇವಸ್ಥಾನದ ಅಂಗಳದ ಶುದ್ಧೀಕರಣ ನಡೆಯಲಿದೆ.

• ದರ್ಶನಕ್ಕೆ ಒಬ್ಬೊಬ್ಬರಾಗಿ ತೆರಳುವ ವ್ಯವಸ್ಥೆ ಮಾಡಲಾಗಿದೆ. ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸುವುದಲ್ಲದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಿದೆ.

ಇನ್ನು ತಿಮ್ಮಪ್ಪನ ಸನ್ನಿಧಿಯ ವೈಶಿಷ್ಟ್ಯಗಳಲ್ಲೊಂದಾದ ತಿಮ್ಮಪ್ಪನ್ನ ಪ್ರಸಾದ ಮೊದಲಿನಂತೆಯೇ ಲಭ್ಯವಾಗಲಿದೆ. ಆದರೆ, ಪ್ರಸಾದವನ್ನು ನೇರವಾಗಿ ಕೈಗೆ ನೀಡುವ ಬದಲು ಶಿಸ್ತುಬದ್ಧವಾಗಿ ಪ್ಯಾಕ್ ಮಾಡಿ ಭಕ್ತರಿಗೆ ನೀಡಲಾಗುತ್ತದೆ. ಇದರ ಜೊತೆಗೆ ಪವಿತ್ರವಾದ ತೀರ್ಥವನ್ನೂ ಎಂದಿನಂತೆ ಭಕ್ತರು ಪಡೆಯಬಹುದು. ಹೀಗೆ ಕೋವಿಡ್ 19 ಶಿಷ್ಟಾಚಾರಕ್ಕೆ ಬದ್ಧವಾಗಿದ್ದುಕೊಂಡೇ ದೇವಸ್ಥಾನವನ್ನು ಮತ್ತೆ ತೆರೆಯಲು ಆಡಳಿತ ಮಂಡಳಿ ಆಂಧ್ರಪ್ರದೇಶದ ಸರಕಾರಕ್ಕೆ ಮನವಿ ಮಾಡಿಕೊಂಡಿದೆ. ಆದರೆ ಈವರೆಗೆ ಈ ಬಗ್ಗೆ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ತಿರುಪತಿ ದೇವಸ್ಥಾನದ ಆದಾಯಕ್ಕೆ ಬರೆ ಎಳೆದ ಲಾಕ್ ಡೌನ್:

ತಿರುಪತಿ ದೇವಸ್ಥಾನಕ್ಕೆ ದಿನಂಪ್ರತಿ ಸರಿಸುಮಾರು 3 ರಿಂದ 4 ಕೋಟಿಯಷ್ಟು ಆದಾಯ ಬರುತ್ತಿತ್ತು. ಆದರೆ ಈ ಕೋವಿಡ್ 19 ಹಾಗೂ ಲಾಕ್ ಡೌನ್ ಕಾರಣದಿಂದಾಗಿ ಆದಾಯಕ್ಕೆ ಬಹುದೊಡ್ಡ ಪೆಟ್ಟು ಬಿದ್ದಿದೆ. ಈ ಹಿನ್ನೆಲೆ ಈ ಲಾಕ್ಡೌನ್ ಅವಧಿಯಲ್ಲಿ ಸುಮಾರು 200 ಕೋಟಿ ರೂಪಾಯಿಯಷ್ಟು ಮೊತ್ತ ದೇವಸ್ಥಾನದ ಆದಾಯದಲ್ಲಿ ಕಡಿತಗೊಂಡಿದೆ. ಹೀಗೆಂದ ಮಾತ್ರಕ್ಕೆ ಇದು ದೇವಸ್ಥಾನದ ಸಿಬ್ಬಂದಿ ವರ್ಗಕ್ಕೆ ಸಂಬಳ ಕೊಡುವಷ್ಟೇನು ತೊಂದರೆಯಾಗಿಲ್ಲ. ತಿಮ್ಮಪ್ಪನ ಕೃಪೆಯಿಂದ ಈವರೆಗೆ ಎಲ್ಲವೂ ಸುಸೂತ್ರವಾಗಿ ನೆರವೇರಿದೆ ಎಂದಿದ್ದಾರೆ ದೇವಸ್ಥಾನ್ದ ಆಡಳಿತ ಮಂಡಳಿಯ ಅಧ್ಯಕ್ಷ ಸುಬ್ಬಾರೆಡ್ಡಿ. ದರ್ಶನಕ್ಕೆ ಬರುವ ಭಕ್ತಾದಿಗಳಿಂದ, ಪ್ರಸಾದಿಂದ ಹಾಗೂ ದಾನಿಗಳಿಂದ ಬರುವ ಹಣವಷ್ಟೇ ಈ ದೇವಸ್ಥಾನದ ಆದಾಯವಾಗಿದೆ.

ಹೀಗಾಗಿ ತಿರುಪತಿ ತಿಮ್ಮಪ್ಪನ ಸನ್ನಿಧಿಯನ್ನು ಶೀಘ್ರವೇ ತೆರೆಯಲು ಆಂಡಳಿತ ಮಂಡಳಿ ಮುಂದಾಗಿದ್ದಾರೆ. ಆದರೆ ಮೇ 31ರ ವರೆಗೆ ಯಾವುದೇ ಧಾರ್ಮಿಕ ಕೇಂದ್ರಗಳು ತೆರೆಯ ಕೂಡದು ಎಂಬ ಗೃಹ ಇಲಾಖೆಯ ಆದೇಶದ ನಡುವೆ ಆಂಧ್ರಪ್ರದೇಶ ಸರ್ಕಾರದ ನಡೆ ಏನಾಗಿರಲಿದೆ ಎಂಬುದಾಗಿದೆ ಸದ್ಯಕ್ಕೆ ತಿಮ್ಮಪ್ಪನ ಭಕ್ತರಲ್ಲಿರುವ ಕುತೂಹಲ.

Tags: ‌ lockdownAndhrapradeshCovid 19TTDಆಂಧ್ರಪ್ರದೇಶಕೋವಿಡ್-19ತಿರುಪತಿ ತಿಮ್ಮಪ್ಪ ದೇವಸ್ಥಾನ ಮಂಡಳಿ
Previous Post

ಕರೋನಾ ಭೀತಿ: ಸುಧಾ ಭಾರದ್ವಾಜ್- ಶೋಮಾ ಸೇನ್ ಬಿಡುಗಡೆಗೆ ಗಣ್ಯರ ದನಿ

Next Post

ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಸದಸ್ಯ ರಾಷ್ಟ್ರಗಳ ಕೈಮೇಲಾಗಿ ಟ್ರಂಪ್‌ಗೆ ಹಿನ್ನಡೆ

Related Posts

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !
Top Story

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

by Chetan
June 19, 2025
0

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..! - ಮತ್ತೆ ಬಡಾಯಿ ಕೊಚ್ಚಿಕೊಂಡ ಡೊನಾಲ್ಡ್ ಟ್ರಂಪ್ ! ಪಹಲ್ಗಾಮ್ ಉಗ್ರರ ದಾಳಿಗೆ (Pahalgam terror attack) ಪ್ರತಿಯಾಗಿ...

Read moreDetails
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

June 18, 2025
ವಿಮಾನ ದುರಂತ; ಅಹಮದಾಬಾದ್ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು

ವಿಮಾನ ದುರಂತ; ಅಹಮದಾಬಾದ್ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು

June 15, 2025
ಈ ಸಾವು ನ್ಯಾಯವೇ??

ಈ ಸಾವು ನ್ಯಾಯವೇ??

June 15, 2025
Next Post
ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಸದಸ್ಯ ರಾಷ್ಟ್ರಗಳ ಕೈಮೇಲಾಗಿ ಟ್ರಂಪ್‌ಗೆ ಹಿನ್ನಡೆ

ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಸದಸ್ಯ ರಾಷ್ಟ್ರಗಳ ಕೈಮೇಲಾಗಿ ಟ್ರಂಪ್‌ಗೆ ಹಿನ್ನಡೆ

Please login to join discussion

Recent News

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !
Top Story

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

by Chetan
June 19, 2025
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .
Top Story

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

by ಪ್ರತಿಧ್ವನಿ
June 18, 2025
ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
Top Story

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

by ಪ್ರತಿಧ್ವನಿ
June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ
Top Story

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

by ಪ್ರತಿಧ್ವನಿ
June 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

June 19, 2025
ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada