• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಕೊರೊನಾ ಇಫೆಕ್ಟ್ ಈಗ ರಾಯಚೂರಿನ ಮುದಗಲ್‌ಗೆ!

by
February 27, 2020
in ದೇಶ
0
ಕೊರೊನಾ ಇಫೆಕ್ಟ್ ಈಗ ರಾಯಚೂರಿನ ಮುದಗಲ್‌ಗೆ!
Share on WhatsAppShare on FacebookShare on Telegram

ಇತ್ತೀಚೆಗೆ ಕೊರೊನಾ ವೈರಸ್ ಎಂದರೆ ಮನದಲ್ಲಿ ಒಂಥರಾ ಭಯ ಆವರಿಸುತ್ತದೆ. ಕೊರೊನಾ ವೈರಸ್ ನಿಂದ ಚೀನಾ ದಲ್ಲಿ ಸಾವಿನ ಸರಣಿ ನಿರಂತರ ಸಾಗಿದೆ. ಇದರಿಂದ ಇಡೀ ದೇಶವೇ ತಲ್ಲಣಗೊಂಡಿದೆ. ವ್ಯಾಪಾರ ವಹಿವಾಟುಗಳು ಸಂಪೂರ್ಣ ಬಿದ್ದುಹೋಗಿವೆ. ಆದರೆ ಇದರ ಪರಿಣಾಮ ಕರ್ನಾಟಕದ ಮುದಗಲ್ ಗೂ ಆಗಿದೆ. ಹೌದು ಆದರೆ ಈ ಪರಿಣಾಮ ಯಾರ ಮೇಲೂ ಅಲ್ಲ ಆದರೆ ಮುದಗಲ್ ನ ಗ್ರಾನೈಟ್ ವ್ಯವಹಾರದ ಮೇಲೆ…

ADVERTISEMENT

ಎಲ್ಲಿದೆ ಇದು?

ಮುದಗಲ್ ಕೋಟೆ ಎಂದೇ ಪ್ರಸಿದ್ಧ ಇರುವ ಈ ಊರಿನಲ್ಲಿ ಎಲ್ಲಿ ನೋಡಿದರೂ ಕಲ್ಲು. ಇದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿಗೆ ಒಳಪಡುತ್ತದೆ. ಹುಬ್ಬಳ್ಳಿಯಿಂದ ರಾಯಚೂರಿನ ಕಡೆಗೆ 190 ಕಿಮಿ ದೂರದಲ್ಲಿರುವ ಈ ಮುದಗಲ್ ಕಲ್ಲಿಗೂ ಕೊರೊನಾ ಗೆರೆ ಕೊರೆದಿದೆ.

ಇಲ್ಲಿ ಸುಮಾರು ಏಳೆಂಟು ಗಣಿ ಕಂಪೆನಿಗಳು ಕಾರ್ಯನಿರ್ವಹಿಸುತ್ತಿದ್ದವು. ಪ್ರತಿ ತಿಂಗಳು ಆರು ಕೋಟಿ ಯಷ್ಟು ವ್ಯವಹಾರ. ಆದರೆ ಕೊರೊನಾದಿಂದ ಭಯ ಭೀತರಾದ ಚೀನಿಯರು ಈಗ ಖರೀದಿ ಮಾಡುತ್ತಿಲ್ಲ.

ಮುದಗಲ್ ನ ಗ್ರೇ ಅಥವಾ ಎಂಡಿ 5, ಹಾಗೂ ಆದಾಪುರ ಭಾಗದ ಕ್ಯಾಟ್ ಐ ಎಂಬ ಉತ್ಕೃಷ್ಟ ಗ್ರಾನೈಟ್ ಚೀನಾ, ಥೈವಾನ್ ಹಾಗೂ ಜಪಾನಿಗೆ ಹೆಚ್ಚು ರಫ್ತಾಗುತ್ತಿತ್ತು. ಶೇಕಡಾ 90 ರಷ್ಟು ಖರೀದಿಸುತ್ತಿದ್ದ ಚೀನಿಯರು ಈಗ ಖರೀದಿ ಮಾಡುತ್ತಿಲ್ಲ. ಈಗ ಏಕಾಎಕಿ ಈ ಬೆಳವಣಿಗೆ ಮುದಗಲ್ ನ ಕಲ್ಲು ವ್ಯಾಪಾರಕ್ಕೆ ಕುಂದು ತಂದಿದ್ದು, ಈಗ ಎಲ್ಲ ಕಂಪೆನಿಗಳು ಬಂದ್ ಮಾಡುವ ವಿಚಾರದಲ್ಲಿವೆ. ಕಳೆದ ಎರಡು ತಿಂಗಳಿನಿಂದ ಗ್ರಾನೈಟ್ ಹಾಗೇ ಉಳಿದಿದ್ದು ಉದ್ಯಮ ಸ್ಥಗಿತಗೊಂಡಿದೆ. ಇಲ್ಲಿನ ಗ್ರಾನೈಟ್ ಗೆ ಸ್ಥಳೀಯವಾಗಿ ಮಾರುಕಟ್ಟೆಯಿಲ್ಲ. ಇವರು ವಿದೇಶಿಯರನ್ನೇ ಅವಲಬಿಸಿದ್ದಾರೆ.

ಶಫಿ ಉಲ್ಲಾ, ಗಣಿ ಕಂಪೆನಿ ವ್ಯವಸ್ಥಾಪಕರೊಬ್ಬರನ್ನು ಕೇಳಿದಾಗ, “ಈ ಗ್ರಾನೈಟ್, ಪ್ರತಿ ಸ್ಕೇರ್ ಮೀಟರ್ ಗೆ ಸುಮಾರು 11,231 ರೂ.ಯಂತೆ ಚೀನಾಗೆ ರಫ್ತಾಗುತ್ತಿದ್ದ ಕಚ್ಚಾ ಗ್ರಾನೈಟ್ ಪ್ರತಿ ಕ್ವಾರೆಯಲ್ಲೂ 400 ಚ.ಮೀಗೂ ಅಧಿಕ ಪ್ರಮಾಣದಲ್ಲಿ ಹಾಗೇ ಉಳಿದಿದೆ. ಸ್ಥಳೀಯವಾಗಿ ಪಾಲಿಶ್ ಆಗದ ಹಿನ್ನೆಲೆ ದೊಡ್ಡ ನಷ್ಟ ಉಂಟಾಗುತ್ತಿದೆ. ಚೀನಾದ ದಿಢೀರ್ ಬೆಳವಣಿಗೆ ನಮಗೆ ಹೀಗೆ ಹಾನಿಯುಂಟು ಮಾಡುತ್ತದೆ ಎಂದೂ ಊಹಿಸಿಯೂ ಇರಲಿಲ್ಲ”.

ಎಷ್ಟು ಜನರ ದುಡಿಮೆ ಹೊಡೆತ!

ಇಲ್ಲಿರುವ ಪ್ರತಿಯೊಂದು ಗಣಿ ಸಂಸ್ಥೆಯಲ್ಲಿ 400-450 ಜನ ಕಾರ್ಮಿಕರು ದುಡಿಯುತ್ತಿದ್ದರು. ಆದರೆ ಈಗ ಎರಡು ತಿಂಗಳಿನಿಂದ ಗಣಿ ಬಂದ್ ಆಗಿದ್ದರಿಂದ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನಷ್ಟು ಕಾರ್ಮಿಕರು ಕೆಲಸ ಕಳೆದುಕೊಂಡು ಗುಳೆ ಹೋಗುವಂಥ ಸ್ಥಿತಿ ಇದೆ. ಒಂದು ಗಣಿ ನಿರ್ವಹಣೆಗೆ ಮಾಲೀಕರಿಗೆ ತಿಂಗಳಿಗೆ ಕನಿಷ್ಠ 30 ಲಕ್ಷ ರೂ. ಬೇಕಾಗುತ್ತದೆ. ಆದರೆ ವ್ಯಾಪಾರವೇ ಇಲ್ಲದಿರುವುದರಿಂದ ಸುಮಾರು 2,500 ಜನ ಕೆಲಸಗಾರರು ನಿರುದ್ಯೋಗಿಗಳಾಗುತ್ತಿದ್ದಾರೆ. ಈ 2,500 ಜನರು ಗಣಿ ಕೆಲಸ ಮೇಲೆ ಅವಲಂಬಿತರು. ಇವರೆಲ್ಲ ಈಗ ಎಲ್ಲಿ ಹೋಗಬೇಕು. ಇವರ ಮಡದಿ ಮಕ್ಕಳ ಗತಿ!

ಕಾರ್ಮಿಕರು ಏನನ್ನುತ್ತಾರೆ!

ಇಬ್ರಾಯಿಂ ರೋಣದ, “ನಾನು ಹಲವಾರು ವರ್ಷಗಳಿಂದ ಇಲ್ಲೆ ಕೆಲಸ ಮಾಡುತ್ತಿದ್ದೇನೆ. ಕಲ್ಲು ಗಣಿಗಾರಿಕೆ ಬಿಟ್ಟು ಬೇರೆ ಕೆಲಸ ಮಾಡಲು ಬರೋಲ್ಲ. ನಾನು ಇಲ್ಲಿ ಪಾಲಿಶ್ ಮಾಡುತ್ತೇನೆ. ಈಗ ಕೆಲಸವೇ ಇಲ್ಲ, ಬೇರೆಡೆ ಹುಡುಕಿಕೊಳ್ಳಿ ಎಂದು ಮಾಲೀಕರು ಹೇಳುತ್ತಿದ್ದಾರೆ. ಆದರೂ ಇವತ್ತೂ ನಾಳೆನೋ ಮತ್ತೇ ಶುರುವಾಗಬಹುದು ಎಂದು ದಿನವೂ ಸಂಸ್ಥೆಯ ಮುಂದೆ ಓಡಾಡುತ್ತಿರುತ್ತೇನೆ”.

ಚಿನ್ನಮ್ಮ ಎಂಬ ದೇವದುರ್ಗದ ಮಹಿಳೆ, “ನನ್ನ ಗಂಡ ಮತ್ತು ದೊಡ್ಡ ಮಗ ಇಲ್ಲಿ ಕಲ್ಲಿನ ಗಣಿಯಲ್ಲಿ ದುಡಿಯುತ್ತಾರೆ. ನಾನು ಇಲ್ಲಿ ಸಣ್ಣ ಮಿಲ್ಲಿನಲ್ಲಿ ದುಡಿಯುತ್ತೇನೆ. ಈಗ ಕಳೆದ ಹದಿನೈದು ದಿನದಿಂದ ಇಬ್ಬರೂ ಮನೆಯಲ್ಲಿದ್ದಾರೆ. ಕಂಪೆನಿ ಬಂದ್ ಆಯಿತಂತೆ. ಅದೇನೋ ರೋಗ ಇದೆ. ಜನ ಸಾಯ್ತಾಯಿದಾರೆ ಅಂದ್ರು, ನನಗೆ ತಿಳಿಯೋಲ್ಲ, ಓದಿಲ್ಲ, ಬರೆದಿಲ್ಲ..ಆದರೂ ಪರಿಸ್ಥಿತಿ ಸುಧಾರಿಸಿ ನನ್ನ ಗಂಡ ಮತ್ತು ಮಗ ಮತ್ತೇ ಕೆಲಸ ಹೋಗುವ ದಿನ ಯಾವಾಗ ಬರುತ್ತೋ ಎಂದು ಕಾದು ಕುಳಿತಿದ್ದೇನೆ”.

Tags: ChinaCoronaCorona VirusGranite MiningMudgulಕೊರೊನಾಕೊರೊನಾ ವೈರಸ್ಮುದಗಲ್
Previous Post

ಇಂಗಾಲ ದಾಸ್ತಾನು ಕಡಿಮೆಯಾದರೂ ಅರಣ್ಯ ವಿಸ್ತರಣೆ! ಗೊಂದಲದ ವರದಿ ನೀಡಿದ ಕೇಂದ್ರ 

Next Post

ವೋಟ್‌ ಹಾಕಲು ಕನ್ನಡಿಗರು.. ಜೈಕಾರಕ್ಕೆ ಮಹಾರಾಷ್ಟ್ರ.. ಇದು ರಾಜಕಾರಣಿಗಳ ಲೆಕ್ಕಾಚಾರ..!

Related Posts

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ
Top Story

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

by ನಾ ದಿವಾಕರ
July 1, 2025
0

-----ನಾ ದಿವಾಕರ---- ಕಾರ್ಪೋರೇಟ್‌ ಕೇಂದ್ರಿತ ನಗರೀಕರಣ ಪ್ರಕ್ರಿಯೆಯ ಒಂದು ಬಂಡವಾಳಶಾಹಿ ಸ್ವರೂಪ ಆಂಗ್ಲ ಭಾಷೆಯಲ್ಲಿ ಸ್ಮಾರ್ಟ್‌ (Smart) ಎಂಬ ಪದವನ್ನು ನಾಮಪದವಾಗಿಯೂ, ಲಿಂಗತಟಸ್ಥ ಪದವಾಗಿಯೂ ಬಳಸಲಾಗುತ್ತದೆ. ಕನ್ನಡದಲ್ಲಿ...

Read moreDetails
ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

July 1, 2025

Mallikarjun Kharge: ಸಂಚಲನ ಸೃಷ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ. ಶೀಘ್ರವೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ.

July 1, 2025
ಕಾಶ್ಮೀರದಲ್ಲಿ ನಡೆಯುತ್ತಿರುವುದು ಭಯೋತ್ಪಾದನೆ ಅಲ್ಲ..ಸ್ವತಂತ್ರ ಹೋರಾಟ : ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನಿರ್ 

ಕಾಶ್ಮೀರದಲ್ಲಿ ನಡೆಯುತ್ತಿರುವುದು ಭಯೋತ್ಪಾದನೆ ಅಲ್ಲ..ಸ್ವತಂತ್ರ ಹೋರಾಟ : ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನಿರ್ 

July 1, 2025

ಲೋಕಾಯುಕ್ತರು ಹಾಗೂ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಅವರನ್ನು ವಜಾಗೊಳಿಸಿ: ರವಿಕೃಷ್ಣಾ ರೆಡ್ಡಿ.

June 30, 2025
Next Post
ವೋಟ್‌ ಹಾಕಲು ಕನ್ನಡಿಗರು.. ಜೈಕಾರಕ್ಕೆ ಮಹಾರಾಷ್ಟ್ರ.. ಇದು ರಾಜಕಾರಣಿಗಳ ಲೆಕ್ಕಾಚಾರ..!

ವೋಟ್‌ ಹಾಕಲು ಕನ್ನಡಿಗರು.. ಜೈಕಾರಕ್ಕೆ ಮಹಾರಾಷ್ಟ್ರ.. ಇದು ರಾಜಕಾರಣಿಗಳ ಲೆಕ್ಕಾಚಾರ..!

Please login to join discussion

Recent News

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ
Top Story

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

by ಪ್ರತಿಧ್ವನಿ
July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌
Top Story

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
July 1, 2025
ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 
Top Story

ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 

by Chetan
July 1, 2025
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ
Top Story

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

by ನಾ ದಿವಾಕರ
July 1, 2025
ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
Top Story

ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
July 1, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

July 1, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada