• Home
  • About Us
  • ಕರ್ನಾಟಕ
Saturday, November 22, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಕೊಡಗು: ಕಾಫಿ ಕಾರ್ಮಿಕರಲ್ಲಿ NRC ಭಯ, ದಾಖಲೆ ಕೇಳಿದ ಪೊಲೀಸ್‌ ಇಲಾಖೆ  

by
January 24, 2020
in ಕರ್ನಾಟಕ
0
ಕೊಡಗು: ಕಾಫಿ ಕಾರ್ಮಿಕರಲ್ಲಿ NRC ಭಯ
Share on WhatsAppShare on FacebookShare on Telegram

ದೇಶದೆಲ್ಲೆಡೆ CAA ಮತ್ತು NRCಯ ಕುರಿತು ಪ್ರತಿಭಟನೆಗಳು ಭುಗಿಲೆದ್ದರಿರುವಾಗ, ಕೊಡಗಿನ ಪೊಲೀಸರು ಎನ್‌ಆರ್‌ಸಿಯನ್ನು ಜಾರಿಗೇ ತಂದಿದ್ದಾರೇನೋ ಎನ್ನುವ ಭಯ ಅಲ್ಲಿನ ಕಾಫೀ ತೋಟಗಳಲ್ಲಿ ಕೂಲಿ ಮಾಡುತ್ತಿರುವ ಕಾರ್ಮಿಕರಲ್ಲಿ ಆವರಿಸಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಬಾಂಗ್ಲಾದೇಶದ ಅಕ್ರಮ ನಿವಾಸಿಗರು ಎಂದು ಹೇಳಿ, ಬಿಬಿಎಂಪಿಯ ವತಿಯಿಂದ ಮಾರತ್‌ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಹಲವಾರು ಗುಡಿಸಲುಗಳನ್ನು ನೆಲಸಮ ಮಾಡಲಾಗಿತ್ತು. ಈಗ ಕೊಡಗಿನ ನಾಪೋಕ್ಲುವಿನಲ್ಲಿ ಎಲ್ಲಾ ಕಾಫೀ ತೋಟದ ಕಾರ್ಮಿಕರ ದಾಖಲೆಗಳನ್ನು ಅಲ್ಲಿನ ಪೊಲೀಸ್‌ ಠಾಣೆಗೆ ನೀಡಬೇಕೆಂದು ಆದೇಶಿಸಲಾಗಿದೆ.

ADVERTISEMENT

ಜಿಲ್ಲಾ ಪೊಲೀಸ್‌ ಕೇಂದ್ರದಿಂದ ಈ ಕುರಿತಾಗಿ ಸ್ಪಷ್ಟನೆಯನ್ನು ನೀಡಿದ್ದು, ಈಗ ದಾಖಲೆಗಳನ್ನು ಸಂಗ್ರಹಿಸುತ್ತಿರುವುದಕ್ಕೂ, ಎನ್‌ಆರ್‌ಸಿ, ಸಿಎಎಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಆದರೆ, ಕೊಡಗಿನ ಮಾನವ ಹಕ್ಕುಗಳ ಹೋರಾಟಗಾರರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಿಂದ ವಲಸೆ ಬಂದು ಇಲ್ಲಿ ನೆಲೆಸಿರುವ ಮುಸ್ಲಿಂ ಕಾರ್ಮಿಕರಲ್ಲಿ ಭಯ ಹುಟ್ಟಿಸುವ ಕಾರ್ಯವನ್ನು ಪೊಲೀಸ್‌ ಇಲಾಖೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಕಾರ್ಮಿಕರನ್ನು ವಾಹನಗಳಲ್ಲಿ ತುಂಬಿಕೊಂಡು ಬರುತ್ತಿರುವ ಎಸ್ಟೇಟ್‌ ಮಾಲೀಕರು 

“ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕ್ರಿಮಿನಲ್‌ ಪ್ರಕರಣಗಳಲ್ಲಿ ವಲಸೆ ಬಂದಿರುವ ಕಾರ್ಮಿಕರ ಕೈವಾಡ ಇರುವ ಶಂಕೆಯಿದ್ದು, ಇದನ್ನು ಮಟ್ಟ ಹಾಕುವ ಸಲುವಾಗಿ ದಾಖಲೆಗಳ ಪರಿಶೀಲನೆ ನಡೆಸುತ್ತೀದ್ದೇವೆ. ಜಿಲ್ಲೆಗೆ ಯಾರು ಬಂದಿದ್ದಾರೆ ಎಂಬುದರ ಕುರಿತು ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ,” ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವರ್ತಿಕಾ ಕತ್ಯಾರ್‌ ತಿಳಿಸಿದ್ದಾರೆ.

ಇವರ ಆದೇಶದ ಮೇರೆಗೆ, ಜಿಲ್ಲೆಯಲ್ಲಿರುವ ಎಲ್ಲಾ ಕಾಫೀ ಎಸ್ಟೇಟ್‌ ಮಾಲಿಕರಿಗೆ ನೊಟೀಸ್‌ ಹೋಗಿದ್ದು, ತಮ್ಮ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ವಲಸಿಗರನ್ನು ಖುದ್ದು ಠಾಣೆಗೆ ಬಂದು ಹಾಜಾರಾಗಿ ದಾಖಲಾತಿಗಳನ್ನು ಸಲ್ಲಿಸಲು ನೊಟೀಸ್‌ನಲ್ಲಿ ತಿಳಿಸಲಾಗಿದೆ.

ಈ ಪ್ರಕ್ರಿಯೆ ಗುರುವಾರ ಆರಂಭವಾಗಿದ್ದು, ಗುರುವಾರ ಮಧ್ಯಾಹ್ನದೊತ್ತಿಗೆ ಸುಮಾರು 5000 ಕೂಲಿ ಕಾರ್ಮಿಕರು ತಮ್ಮ ದಾಖಲೆಗಳನ್ನು ಸಲ್ಲಿಸಿದ್ದಾರೆ. ಇನ್ನೂ ಹಲವು ಕಾರ್ಮಿಕರು ದಾಖಲೆಗಳನ್ನು ಸಲ್ಲಿಸಲು ಬಾಕಿಯಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಹಲವು ಕಾರ್ಮಿಕರ ಬಳಿ ಮೂಲ ದಾಖಲೆಗಳು ಇಲ್ಲದಿರುವ ಕಾರಣದಿಂದ, ಮೂಲ ದಾಖಲೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿದ್ದು, ಒಂದು ವೇಳೆ ಮೂಲ ದಾಖಲೆಗಳನ್ನು ಸಲ್ಲಿಸಲು ಕಾರ್ಮಿಕರು ವಿಫಲರಾದರೆ, ಕಾಫಿ ಎಸ್ಟೇಟ್‌ಗಳ ಮೇಲೆ ದಾಳಿ ನಡೆಸಿ ಆ ಕಾರ್ಮಿಕರನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇನ್ನು ಕೊಡಗು ಜಿಲ್ಲೆಯು ಬಿಜೆಪಿ, ಆರ್‌ಎಸ್‌ಎಸ್‌ ಹಾಗೂ ಬಲ ಪಂಥೀಯ ಶಕ್ತಿಗಳ ಮುಷ್ಟಿಯಲ್ಲಿದ್ದು, ಸಿಎಎ ಜಾರಿಗೆ ಬಂದ ನಂತರ ಇಲ್ಲಿ ʼಅಕ್ರಮ ವಲಸಿಗರುʼ ಎಂಬ ಕೂಗು ಹಲವು ಬಾರಿ ಕೇಳಿ ಬಂದಿದೆ. ಬಜರಂಗದಳದ ಕಾರ್ಯಕರ್ತರು ಕೂಡ ಕಾಫಿ ಎಸ್ಟೇಟ್‌ಗಳಲ್ಲಿ ಬಾಂಗ್ಲಾದೇಶಿಗರು ವಾಸವಾಗಿದ್ದಾರೆ ಎಂದು ಇತ್ತೀಚಿಗೆ ಆರೋಪಿಸಿದ್ದರು. ಮೊನ್ನೆ ಮಂಗಳವಾರ ನಡೆದ ಘಟನೆಯಲ್ಲಿ, ಬಜರಂಗ ದಳದ ಕಾರ್ಯಕರ್ತರು ಕಾಫೀ ಎಸ್ಟೇಟ್‌ ಕಾರ್ಮಿಕರು ತಂಗಿರುವ ಲಾಡ್ಜ್‌ಗೆ ದಾಳಿ ನಡೆಸಿ ಅವರು ʼಅಕ್ರಮ ವಲಸಿಗರೇʼ ಎನ್ನುವುದನ್ನು ಪತ್ತೆ ಹಚ್ಚಲು ಹೊರಟಿದ್ದರು.

ಈ ದಾಳಿಯ ಕುರಿತು ಮಾತನಾಡಿದ ಲಾಡ್ಜ್‌ ಮಾಲಿಕ, ಬಜರಂಗದಳದ ಕಾರ್ಯಕರ್ತರು ಕಾಪೀ ತೋಟದ ಕಾರ್ಮಿಕರನ್ನು ಲಾಡ್ಜ್‌ನಿಂದ ಹೊರಗೆಳೆದು ಹಾಕಿದರು. ಅದೃಷ್ಟವಶಾತ್‌, ಸ್ಥಳೀಯರು ಬಂದು ಬಜರಂಗದಳದ ಕಾರ್ಯಕರ್ತರನ್ನು ತಡೆಯದೇ ಇದ್ದಲ್ಲಿ, ಏನು ಅನಾಹುತ ಸಂಭವಿಸುತ್ತಿತ್ತೋ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ನಾಪೋಕ್ಲು ಕಾರ್ಮಿಕ ಮುಖಂಡ ಪಿ ಆರ್‌ ಭರತ್‌ ಅವರ ಪ್ರಕಾರ, ಬಜರಂಗ ದಳದ ಕಾರ್ಯಕರ್ತರು ಸುಮಾರು 20 ಜನ ಕಾರ್ಯಕರ್ತರ ಮೇಲೆ ದಾಳಿ ನಡೆಸಿದರು. ಅವರಲ್ಲಿ 14 ಜನ ಬಂಗಾಳಿ ಹಾಗೂ ಅಸ್ಸಾಮಿ ಮುಸ್ಲಿಂರು ಉಳಿದವರು ಬಿಹಾರದ ಮುಸ್ಲಿಂರು. ಎಲ್ಲರಲ್ಲೂ ಸರಿಯಾದ ದಾಖಲೆಗಳು ಇದ್ದವು. ಆದರೆ ಇದು ಯಾವುದನ್ನೂ ಗಮನಿಸುವ ಸ್ಥಿತಿಯಲ್ಲಿ. ಕಾರ್ಮಿಕರು ಮುಸ್ಲಿಂರು ಎನ್ನು ಕಾರಣಕ್ಕೆ ಈ ದಾಳಿಯನ್ನು ನಡೆಸಲಾಗಿದೆ.

ಇನ್ನು ಕೊಡಗಿನ ಆರ್‌ಟಿಐ ಕಾರ್ಯಕರ್ತ ಹಾರಿಸ್‌ ಅಬ್ದುಲ್‌ ರೆಹಮಾನ್‌ ಅವರು ಪೊಲೀಸರ ನಡೆಯನ್ನು ಖಂಡಿಸಿ, ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಮಾತ್ರ ಈ ರೀತಿಯ ಘಟನೆಗಳು ಯಾಕೆ ನಡೆಯುತ್ತಿವೆ ಎಂದು ಪ್ರಶ್ನಿಸಿದ್ದಾರೆ. ಬೆಂಗಳುರಿನಲ್ಲಿ ನಡೆದ ಘಟನೆ ಈಗ ಕೊಡಗಿಗೂ ಹಬ್ಬಿದೆ ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ.

ಕೃಪೆ: ದಿ ಫೆಡರಲ್‌

Tags: BoycotNRCCAA/NRCcoffee estateCoorgKodaguKodagu SPPolice departmentಎನ್‌ಆರ್‌ಸಿಕಾಫಿ ಎಸ್ಟೇಟ್‌ಕೊಡಗುಪೊಲೀಸ್‌ ಇಲಾಖೆ
Previous Post

ಬ್ರೆಜಿಲ್ ಅಧ್ಯಕ್ಷ ಭಾರತಕ್ಕೆ ಬರುವುದು ಬೇಡವೆನ್ನುವುದಕ್ಕೆ ಇಲ್ಲಿವೆ ಕಾರಣ

Next Post

‘ಅಪರಾಧಿ ಮುಕ್ತ ಚುನಾವಣೆʼ‌ – ಭಾರತೀಯ ಚುನಾವಣಾ ಆಯೋಗದ ಅಭಿಲಾಷೆ  

Related Posts

ಡಿಸಿಎಂ ಡಿಕೆಶಿ ಮನೆಯಲ್ಲಿ ಸಿದ್ದೇಶ್ವರ ಪಾದುಕೆ ಪೂಜೆ
ಕರ್ನಾಟಕ

ಡಿಸಿಎಂ ಡಿಕೆಶಿ ಮನೆಯಲ್ಲಿ ಸಿದ್ದೇಶ್ವರ ಪಾದುಕೆ ಪೂಜೆ

by ಪ್ರತಿಧ್ವನಿ
November 22, 2025
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನವೆಂಬರ್ ಕ್ರಾಂತಿ ಹೆಚ್ಚು ಸದ್ದು ಮಾಡುತ್ತಿರುವ ಹೊತ್ತಿನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಮನೆಯಲ್ಲಿ ವಿಶೇಷ ಪೂಜೆ ನಡೆದಿದೆ. ಅರಸಿಕೆರೆಯ ಪ್ರಸಿದ್ದ ಜೇನುಕಲ್ಲು ಸಿದ್ದೇಶ್ವರ ಪಾದುಕೆಗೆ...

Read moreDetails
Daily Horoscope: ಇಂದಿನ ಲಾಭದಾಯಕ ರಾಶಿಗಳಿವು?

Daily Horoscope: ಇಂದಿನ ಲಾಭದಾಯಕ ರಾಶಿಗಳಿವು?

November 22, 2025
ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

November 21, 2025
ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

November 21, 2025
ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

November 21, 2025
Next Post
‘ಅಪರಾಧಿ ಮುಕ್ತ ಚುನಾವಣೆʼ‌ - ಭಾರತೀಯ ಚುನಾವಣಾ ಆಯೋಗದ ಅಭಿಲಾಷೆ  

‘ಅಪರಾಧಿ ಮುಕ್ತ ಚುನಾವಣೆʼ‌ - ಭಾರತೀಯ ಚುನಾವಣಾ ಆಯೋಗದ ಅಭಿಲಾಷೆ  

Please login to join discussion

Recent News

Daily Horoscope: ಇಂದಿನ ಲಾಭದಾಯಕ ರಾಶಿಗಳಿವು?
Top Story

Daily Horoscope: ಇಂದಿನ ಲಾಭದಾಯಕ ರಾಶಿಗಳಿವು?

by ಪ್ರತಿಧ್ವನಿ
November 22, 2025
ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್
Top Story

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
November 21, 2025
ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ
Top Story

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

by ಪ್ರತಿಧ್ವನಿ
November 21, 2025
ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ
Top Story

ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

by ಪ್ರತಿಧ್ವನಿ
November 21, 2025
ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌
Top Story

ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
November 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಡಿಸಿಎಂ ಡಿಕೆಶಿ ಮನೆಯಲ್ಲಿ ಸಿದ್ದೇಶ್ವರ ಪಾದುಕೆ ಪೂಜೆ

ಡಿಸಿಎಂ ಡಿಕೆಶಿ ಮನೆಯಲ್ಲಿ ಸಿದ್ದೇಶ್ವರ ಪಾದುಕೆ ಪೂಜೆ

November 22, 2025
Daily Horoscope: ಇಂದಿನ ಲಾಭದಾಯಕ ರಾಶಿಗಳಿವು?

Daily Horoscope: ಇಂದಿನ ಲಾಭದಾಯಕ ರಾಶಿಗಳಿವು?

November 22, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada