• Home
  • About Us
  • ಕರ್ನಾಟಕ
Friday, June 27, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಕೇರಳದ ಗರ್ಭಿಣಿ ಆನೆ ಸಾವಿಗೆ ನಿಜಕ್ಕೂ ಕಾರಣರಾರು?

by
June 5, 2020
in ಅಭಿಮತ
0
ಕೇರಳದ ಗರ್ಭಿಣಿ ಆನೆ ಸಾವಿಗೆ ನಿಜಕ್ಕೂ ಕಾರಣರಾರು?
Share on WhatsAppShare on FacebookShare on Telegram

ಕೇರಳದ ಗರ್ಭಿಣಿ ಆನೆಯ ಅಮಾನುಷ ಹತ್ಯೆ ಘಟನೆ ಪರಿಸರ ದಿನದ ಹೊತ್ತಲ್ಲಿ ದೊಡ್ಡ ಮಟ್ಟದ ಆಕ್ರೋಶಕ್ಕೆ, ಆತಂಕ- ಸಂತಾಪಗಳಿಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಆನೆಯ ದುರಂತ ಅಂತ್ಯ ಮತ್ತು ಅದನ್ನು ಅತ್ಯಂತ ಹೇಯವಾಗಿ ಹತ್ಯೆ ಮಾಡಿದ ಮಾನವನ ವಿಕೃತಿಗೆ ಭಾವೋದ್ವೇಗದ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಒಂದು ತಿಂಗಳ ಮರಿಯನ್ನು ಹೊಟ್ಟೆಯೊಳಗಿಟ್ಟುಕೊಂಡಿದ್ದ ಗರ್ಭಿಣಿ ಆನೆಯ ಸಾವು ಮನುಷ್ಯನ ಸ್ವಾರ್ಥ, ವನ್ಯಜೀವಿಗಳ ಬದುಕುವ ಹಕ್ಕು, ಪರಿಸರ ನಾಶ, ಸರ್ಕಾರ ಮತ್ತು ಇಲಾಖೆಗಳ ಹೊಣೆಗೇಡಿತನ, ಪಕ್ಷಪಾತ ಧೋರಣೆ ಸೇರಿದಂತೆ ಹಲವು ವಿಷಯಗಳ ಕುರಿತ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಹಾಗೇ ಬಹಳ ಸಂವೇದನಾಶೀಲರು, ಸೂಕ್ಷ್ಮಮತಿಗಳು ಎಂದುಕೊಂಡವರ ಜಾಣ್ಮೆಯ ಆಯ್ದ ಪ್ರತಿಕ್ರಿಯೆ, ಸ್ಪಂದನೆಗಳ ಕುರಿತ ಚರ್ಚೆಯೂ ನಡೆದಿದೆ.

ಕಳೆದ ಮೇ 27ರಂದು ಕೇರಳದಲ್ಲಿ ಸಂಭವಿಸಿದ ಹೆಣ್ಣಾನೆಯ ದುರಂತ ಅಂತ್ಯಕ್ಕೆ ಕಾರಣ; ಆ ಕಾಡಾನೆ ಬೆಳೆ ನಾಶ ಮಾಡುತ್ತದೆ ಎಂದು ಕೆಲವು ವ್ಯಕ್ತಿಗಳು ಅನಾನಸ್ ಹಣ್ಣಿನೊಳಗೆ ಸಿಡಿಮದ್ದು ತುಂಬಿ, ಅದು ತಿನ್ನುವಂತೆ ಮಾಡಿದ್ದು. ಸಿಡಿಮದ್ದು ತಿಂದ ಬಳಿಕ ಆನೆಯ ಬಾಯೊಳಗೆ ಅವು ಸಿಡಿದು ಆನೆ ಮೃತಪಟ್ಟಿದೆ. ಆನೆ ಒಂದು ತಿಂಗಳ ಗರ್ಭಿಣಿಯಾಗಿತ್ತು ಎಂಬ ವಿವರಗಳೆಲ್ಲಾ ಆನೆ ಸಾವು ಸಂಭವಿಸಿದ ವಲಯದ ಅರಣ್ಯಾಧಿಕಾರಿಗಳು ನೀಡಿದ ಮಾಹಿತಿಯಿಂದ ಹೊರಜಗತ್ತಿಗೆ ತಿಳಿದ ಸಂಗತಿ.

Also Read: ಪರಿಸರ ಉಳಿಸಿ ಎಂಬ ಘೋಷಣೆ ಸಾಕು..!
ಪ್ರಕೃತಿಯನ್ನು ಉಳಿಸಲೇಬೇಕಾದ ತುರ್ತು ಮುಂದಿದೆ ಎಚ್ಚೆತ್ತುಕೊಳ್ಳಿ..!

ಆನೆಯನ್ನೇ ಕೊಲ್ಲಲು ಅವರು ಸಿಡಿಮದ್ದು ತುಂಬಿಸಿ ಅನಾನಸ್ ಇಟ್ಟಿದ್ದರೆ? ಅಥವಾ ಆ ಪ್ರದೇಶದಲ್ಲಿ ಸಾಮಾನ್ಯವಾಗಿ ಕಾಡುಹಂದಿ ಉಪಟಳದಿಂದ ಪಾರಾಗಲು ರೈತರು ಹೀಗೆ ಅನಾನಸಿನಲ್ಲಿ ಸಿಡಿಮದ್ದು ತುಂಬಿಡುವ ವಾಡಿಕೆಯಂತೆ ಇಟ್ಟಿದ್ದನ್ನು ಆನೆ ತಿಂದು ಸಾವು ಕಂಡಿತೇ ಎಂಬ ಚರ್ಚೆ ಕೂಡ ನಡೆದಿದೆ. ಆ ಭಾಗದಲ್ಲಿ ಕಾಡುಹಂದಿಗಳ ಹತ್ಯಗೆ ವನ್ಯಜೀವಿ ಕಾಯ್ದೆಯಡಿ ನೀಡಿರುವ ಅನುಮತಿಯನ್ನು ದುರ್ಬಳಕೆ ಮಾಡಿಕೊಂಡು ಆನೆ ಸಾಯಿಸಲಾಗಿದೆಯೇ ? ಎಂಬ ಅನುಮಾನಗಳೂ ಎದ್ದಿವೆ.

Also Read: ಪ್ರಭಾವಿ ಲಾಬಿಯ ಮುಂದೆ ಮಂಡಿಯೂರಿದರೆ ಪರಿಸರ ತಜ್ಞರು?

ಈ ನಡುವೆ ಘಟನೆ ನಡೆದದ್ದು ಕೇರಳದ ಮಲಪ್ಪುರಂ ಜಿಲ್ಲೆಯ ವ್ಯಾಪ್ತಿಯಲ್ಲಿ ಎಂಬುದನ್ನೇ ಮುಂದಿಟ್ಟುಕೊಂಡು ಕೇಂದ್ರ ಸಚಿವೆ ಮನೇಕಾ ಗಾಂಧಿಯವರು ಟ್ವೀಟ್ ಮಾಡಿ,”ಮಲ್ಲಪ್ಪುರಂ ಜಿಲ್ಲೆ ತೀವ್ರ ಅಪರಾಧ ಕೃತ್ಯಗಳಿಗಾಗಿಯೇ ಕುಖ್ಯಾತಿ ಹೊಂದಿದೆ. ಅದರಲ್ಲೂ ಪ್ರಾಣಿಗಳ ವಿಷಯದಲ್ಲಿ ಜಿಲ್ಲೆಯ ಕೃತ್ಯಗಳಿಗೆ ಪಾರವಿಲ್ಲ. ಅಷ್ಟಾದರೂ ಒಬ್ಬರನೇ ಒಬ್ಬ ಕಳ್ಳಬೇಟೆಗಾರರ ವಿರುದ್ಧ, ವನ್ಯಜೀವಿ ಹಂತಕರ ವಿರುದ್ಧ ಕ್ರಮಕೈಗೊಂಡಿಲ್ಲ. ಹಾಗಾಗಿ ಅವರು ಇಂತಹದ್ದನ್ನು ಮಾಡುತ್ತಲೇ ಇರುತ್ತಾರೆ. ಹಾಗಾಗಿ ನೀವೆಲ್ಲಾ ಅಲ್ಲಿನ ಸರ್ಕಾರ ಮತ್ತು ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಿಗೆ ನೇರ ಕರೆಮಾಡಿ, ಇಮೇಲ್ ಮಾಡಿ ಛೀಮಾರಿ ಹಾಕಿ” ಎಂದು ಸಾರ್ವಜನಿಕರಿಗೆ ಕರೆ ನೀಡಿದ್ದರು. ಅವರ ಈ ಟ್ವೀಟ್ ಬಳಿಕ ಇಡೀ ಘಟನೆಗೆ ಬೇರೆಯದೇ ಬಣ್ಣ ಬಂದಿತು.

Mallapuram is know for its intense criminal activity specially with regards to animals. No action has ever been taken against a single poacher or wildlife killer so they keep doing it.
I can only suggest that you call/email and ask for action pic.twitter.com/ii09qmb7xW

— Maneka Sanjay Gandhi (@Manekagandhibjp) June 3, 2020


ADVERTISEMENT

ಶೇ.70ರಷ್ಟು ಮುಸ್ಲಿಂ ಸಮುದಾಯದ ಬಾಹುಳ್ಯ ಹೊಂದಿರುವ ಕೇರಳದ ಈ ಮಲಪ್ಪುರಂ ಜಿಲ್ಲೆಯನ್ನು ಹೀಗೆ ಇಡಿಯಾಗಿ ಅಪರಾಧಿಯನ್ನಾಗಿ ಮಾಡಿದ ಕೇಂದ್ರದ ಬಿಜೆಪಿ ಸಚಿವೆಯ ಹಿಂದಿನ ರಾಜಕೀಯ ಉದ್ದೇಶ ಮತ್ತು ಅಲ್ಪಸಂಖ್ಯಾತ ವಿರೋಧಿ, ಕಟ್ಟರ್ ಹಿಂದುತ್ವವಾದಿ ಧೋರಣೆ ಇಡೀ ಘಟನೆಗೆ ಪರಿಸರ ಮತ್ತು ಸಹಜ ಮಾನವೀಯ ಅಂತಃಕರಣವನ್ನು ಮೀರಿ ಪೂರ್ವಗ್ರಹಪೀಡಿತ, ದ್ವೇಷ ರಾಜಕಾರಣದ ಅಜೆಂಡಾದ ಆಯಾಮವನ್ನು ನೀಡಿತು. ವಾಸ್ತವವಾಗಿ ಬಿಜೆಪಿಯ ಇಸ್ಲಮೋಫೋಬಿಯಾದ ರಾಜಕೀಯ ಅಜೆಂಡಾಕ್ಕೆ ತಕ್ಕಂತೆ ಸಚಿವೆ ಈ ಘಟನೆಯನ್ನು ತಿರುಚಿದ್ದಾರೆ ಎಂದು ‘ದಿ ವೈರ್’ ನ್ಯೂಸ್ ಪೋರ್ಟಲ್ ವರದಿ ಹೇಳಿದೆ.

Also Read: ಪರಿಸರ ಮಾರಕ ನಿರ್ಧಾರ ಕೈಗೊಳ್ಳುವುದಾದರೆ ವನ್ಯಜೀವಿ ಮಂಡಳಿ ಅಗತ್ಯವೇನು?

ಅದಕ್ಕೆ ಕಾರಣ; ಸಚಿವೆ ಮನೇಕಾ ಗಾಂಧಿ ತಿಳಿದಂತೆ ಆ ಆನೆ ಮಲಪ್ಪುರಂ ಜಿಲ್ಲೆಯ ವ್ಯಾಪ್ತಿಯಲ್ಲಿ ಸಾವು ಕಂಡಿಲ್ಲ! ಬದಲಾಗಿ ನೆರೆಯ ಪಲಕ್ಕಾಡು ಜಿಲ್ಲೆ ವ್ಯಾಪ್ತಿಯ ಮನ್ನಾರ್ ಕಾಡ್ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸೈಲೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್ ವ್ಯಾಪ್ತಿಗೆ ಸೇರಿದ ಈ ಜಾಗದಲ್ಲಿ ಆನೆ ಸುತ್ತಾಡಿತ್ತು. ಮಲ್ಲಪುರಂ ಮತ್ತು ಪಲಕ್ಕಾಡು ಜಿಲ್ಲೆಯ ಗಡಿ ಭಾಗದ ಹಲವು ಹಳ್ಳಿಗಳು ಆ ಪ್ರದೇಶದಲ್ಲಿ ಇದ್ದು, ತಿರುವಿಳಿಯಂಕುನ್ನು ಎಂಬ ಹಳ್ಳಿಯ ವ್ಯಾಪ್ತಿಯ ಕಾಡಿನಲ್ಲಿ ಆನೆ ಪತ್ತೆಯಾಗಿತ್ತು. ಆದರೆ, ಈ ವಾಸ್ತವಾಂಶಗಳನ್ನು ಮರೆಮಾಚಿ, ಸಚಿವೆ, ಮೋಹನ್ ಕೃಷ್ಣನ್ ಎಂಬ ಅರಣ್ಯಾಧಿಕಾರಿ ತನ್ನ ಫೇಸ್ ಬುಕ್ ನಲ್ಲಿ ಆನೆಯ ದುರಂತ ಕುರಿತು ಬರೆದ ಭಾವನಾತ್ಮಕ ಬರಹದ ಆಧಾರದ ಮೇಲೆ ಈ ಪೂರ್ವಗ್ರಹಪೀಡಿತ ಪ್ರತಿಕ್ರಿಯೆ ನೀಡಿದ್ದರು. ಮಲ್ಲಪುರಂ ಮತ್ತು ಮುಸ್ಲಿಂ ಬಾಹುಳ್ಯದ ಪ್ರದೇಶ, ಹಾಗೂ ಕೇರಳದ ಕಮ್ಯುನಿಸ್ಟ್ ಪಕ್ಷದ ಆಡಳಿತ ಮುಂತಾದ ರಾಜಕೀಯ ಮತ್ತು ಸಾಮಾಜಿಕ ಅಂಶಗಳ ಹಿನ್ನೆಲೆಯಲ್ಲಿ ಇಡೀ ವಿದ್ಯಮಾನ ಸಾಮಾಜಿಕ ಜಾಲತಾಣದಲ್ಲಿ ಈ ದೊಡ್ಡ ಪ್ರಮಾಣದ ಆಕ್ರೋಶ, ಭಾವನಾತ್ಮಕ ಸುನಾಮಿಗೆ ಕಾರಣವಾಯಿತು ವಿನಃ, ವಾಸ್ತವವಾಗಿ ವನ್ಯಜೀವಿಗಳ ಕುರಿತ ನೈಜ ಕಾಳಜಿ ಅಥವಾ ಪರಿಸರದ ಕುರಿತ ಕಾಳಜಿಯ ಕಾರಣಕ್ಕಲ್ಲ ಎಂಬ ವಾದವೂ ಈಗ ಕೇಳಿಬರುತ್ತಿದೆ.

Also Read: ವನ್ಯಜೀವಿ ಮಂಡಳಿ ಇರುವುದು ನಿಜಕ್ಕೂ ಯಾರ ಹಿತ ಕಾಯಲು?  

ಈ ವಾಸ್ತವಾಂಶಗಳು ಇಡೀ ಘಟನೆಗೆ ಮತ್ತೊಂದು ಆಯಾಮ ನೀಡಿದ್ದು, ಭಾರತೀಯರ ಭಾವನಾತ್ಮಕ ಪ್ರತಿಕ್ರಿಯೆಗಳು ಎಷ್ಟರಮಟ್ಟಿಗೆ ನೈಜ, ಎಷ್ಟರಮಟ್ಟಿಗೆ ‘ಸೆಲೆಕ್ಟಿವ್’ ಮತ್ತು ಇಸ್ಲಮೋಫೋಬಿಕ್ ಎಂಬ ಕುರಿತ ಹೊಸ ಚರ್ಚೆ ಈಗ ಶುರುವಾಗಿದೆ.

ಆನೆಯ ದಾರುಣ ಹತ್ಯೆ ನಿಜಕ್ಕೂ ಆಘಾತಕಾರಿ ಮತ್ತು ಇಡೀ ಮನುಕುಲವೇ ತಲೆತಗ್ಗಿಸುವಂತಹ ಪರಮ ಕ್ರೌರ್ಯ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ , ಅಮಾನುಷ ಘಟನೆಯ ಬಳಿಕ ಅದು ನಡೆದ ಪ್ರದೇಶ, ಅಲ್ಲಿನ ಬಹುಸಂಖ್ಯಾತ ಸಮುದಾಯ, ಅಲ್ಲಿನ ಆಡಳಿತ ಸರ್ಕಾರದ ರಾಜಕೀಯ ಸೈದ್ಧಾಂತಿಕ ನಿಲುವು ಮುಂತಾದ ನಿಜವಾಗಿಯೂ ಘಟನೆಗೆ ಸಂಬಂಧಪಡದ ಸಂಗತಿಗಳನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಸುರಿಸುವ ಕಣ್ಣೀರು, ವ್ಯಕ್ತಪಡಿಸುವ ಕಾಳಜಿ, ಮಿಡಿಯವ ಮನಸ್ಸುಗಳು ಎಷ್ಟು ನೈಜ? ಎಷ್ಟು ಮೊಸಳೆಕಣ್ಣೀರು? ಎಷ್ಟು ಕೃತಕ? ಎಂಬ ಪ್ರಶ್ನೆಗಳಿಗೂ ಅವಕಾಶ ಮಾಡಿಕೊಟ್ಟಿದೆ.

Also Read: ಉದ್ದನೆ ದಾಡಿ, ಪೈಜಾಮ ಮತ್ತು ಮಾಧ್ಯಮಗಳ ʼಇಸ್ಲಾಮೋಫೋಬಿಯಾʼ!

ಹಾಗೆಯೇ, ಪರಿಸರ ದಿನದ ಹಿನ್ನೆಲೆಯಲ್ಲಿ ಇಡೀ ಘಟನೆಯನ್ನು ಖಂಡಿಸುವ, ನೋವಿನಿಂದ ಮಿಡಿಯುವ ಮತ್ತು ಘಟನೆಗೆ ಕಾರಣರೆಂದುಕೊಂಡು ಏಕಾಏಕಿ ಒಂದು ಸಮುದಾಯವನ್ನು, ಒಂದು ಪ್ರದೇಶವನ್ನು, ಒಂದು ರಾಜ್ಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ತೀರ್ಪು ಕೊಟ್ಟು ಹಣಿಯುವ ‘ಬಲಿಪಶು’ ವರಸೆ ಸರಿಯೇ? ಅಥವಾ, ನಿಜವಾಗಿಯೂ ಅಂತಹ ಘಟನೆಗೆ ಕಾರಣವೇನು? ವನ್ಯಜೀವಿಗಳು ನಾಡಿಗೆ ನುಗ್ಗಲು ಇರುವ ಕಾರಣವೇನು? ಅದರಲ್ಲಿ ಕಾಡು ಕಡಿದು ಪ್ರಾಣಿಗಳ ನೆಲವನ್ನು ಅತಿಕ್ರಮಿಸಿದ ಹಳ್ಳಿಗರ ತಪ್ಪಿನಷ್ಟೇ ನಗರದ ಐಷಾರಾಮಿತನಕ್ಕಾಗಿ, ಭಕಾಸುರ ಕೊಳ್ಳುಬಾಕತನಕ್ಕಾಗಿ ಅರಣ್ಯಗಳ ಮೇಲೆ ಒತ್ತಡ ಉಂಟುಮಾಡಿದ ಜನರ ಪಾಲೆಷ್ಟು? ಈಗ ಐಷಾರಾಮಿ ಮನೆಗಳಲ್ಲಿ ಕೂತು ಸತ್ತ ಆನೆಗೆ ಕಣ್ಣೀರುಗರೆಯುವ ಮಂದಿ ನಿಜವಾಗಿಯೂ ಈ ದುರಂತಕ್ಕೆ ತಾವೂ ಕಾರಣ ಎಂಬ ಆತ್ಮವಿಮರ್ಶೆ ಮಾಡಿಕೊಳ್ಳಬಲ್ಲರೆ? ಎಂಬ ಪ್ರಶ್ನೆಗಳೂ ಇವೆ.

ನಗರಗಳ ಮಿತಿ ಇಲ್ಲದ ವಿಸ್ತರಣೆ, ಐಷಾರಾಮಿ ಬದುಕಿಗಾಗಿ ನೀರು, ವಿದ್ಯುತ್, ಖನಿಜಗಳಿಗಾಗಿ ಅರಣ್ಯಗಳನ್ನು ಬರಿದು ಮಾಡಿದ್ದು, ಐಷಾರಾಮಿ ಜೀವನಶೈಲಿಗಾಗಿ ಅರಣ್ಯ, ವನ್ಯಜೀವಿಗಳ ಮೇಲೆ ಒತ್ತಡ ತಂದದ್ದು, ಪ್ರವಾಸ, ಚಾರಣಗಳ ಮೂಲಕ ಸಂರಕ್ಷಿತ ಪ್ರದೇಶಗಳ ಮೇಲೆಯೂ ಒತ್ತಡ ಹೇರಿದ್ದು,.. ಹೀಗೆ ಕಾಡಿನ ಆನೆಯೊಂದು ನಾಡಿಗೆ ಬಂದು ಸಿಡಿಮದ್ದು ತಿಂದು ಸಾವು ಕಾಣಲು ತಾವೆಷ್ಟು ಕಾರಣ ಎಂದು ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಬಲ್ಲರೆ?

ಹೀಗೆ ಆತ್ಮವಿಮರ್ಶೆ ಮಾಡಿಕೊಂಡು ಕನಿಷ್ಟ ಬದುಕಿನಲ್ಲಿ ಪರಿಸರ ಪೂರಕ ಜೀವನಶೈಲಿ ರೂಢಿಸಿಕೊಂಡರೆ ಇಂತಹ ಆನ್ ಲೈನ್ ಕಣ್ಣೀರಿಗೆ ಒಂದಿಷ್ಟಾದರೂ ಬೆಲೆ, ಅಲ್ಲವೆ? ಈ ನಿಟ್ಟಿನಲ್ಲಿ ಸಣ್ಣ ಬದಲಾವಣೆಗೆ ಕಾರಣವಾದರೆ, ಆ ಅಮಾಯಕ ಆನೆಯ ಸಾವು ಮನುಷ್ಯನೆದೆಯ ಕರಗಿಸಿದ್ದು ನಿಜವೆನ್ನಬಹುದು!

Tags: Government of KeralaislamophobiaKerala elephant deathManeka GandhiPalakkadಇಸ್ಲಮೋಫೋಬಿಯಾಕಮ್ಯುನಿಸ್ಟ್ ಸರ್ಕಾರಕೇರಳಗರ್ಭಿಣಿ ಆನೆ ಹತ್ಯೆಪಲಕ್ಕಾಡ್ಬಿಜೆಪಿಮನೇಕಾ ಗಾಂಧಿ
Previous Post

ಪರಿಸರ ಉಳಿಸಿ ಎಂಬ ಘೋಷಣೆ ಸಾಕು..! ಪ್ರಕೃತಿಯನ್ನು ಉಳಿಸಲೇಬೇಕಾದ ತುರ್ತು ಮುಂದಿದೆ ಎಚ್ಚೆತ್ತುಕೊಳ್ಳಿ..!

Next Post

ಹೊತ್ತಿ ಉರಿಯುವ ಅಮೇರಿಕಾದಲ್ಲಿ ʼಹೀರೋʼ ಆದ ಭಾರತೀಯ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಹೊತ್ತಿ ಉರಿಯುವ ಅಮೇರಿಕಾದಲ್ಲಿ ʼಹೀರೋʼ ಆದ ಭಾರತೀಯ

ಹೊತ್ತಿ ಉರಿಯುವ ಅಮೇರಿಕಾದಲ್ಲಿ ʼಹೀರೋʼ ಆದ ಭಾರತೀಯ

Please login to join discussion

Recent News

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 
Top Story

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

by Chetan
June 27, 2025
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 
Top Story

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

by Chetan
June 27, 2025
ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 
Top Story

ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

by Chetan
June 27, 2025
ತಲೆಗೆ ಪೆಟ್ಟಾಗುವುದನ್ನು , ಮೆದುಳಿಗೆ ಹಾನಿಯುಂಟಾಗುವುದನ್ನು ತಪ್ಪಿಸುವ ಉದ್ದೇಶ
Top Story

ತಲೆಗೆ ಪೆಟ್ಟಾಗುವುದನ್ನು , ಮೆದುಳಿಗೆ ಹಾನಿಯುಂಟಾಗುವುದನ್ನು ತಪ್ಪಿಸುವ ಉದ್ದೇಶ

by ಪ್ರತಿಧ್ವನಿ
June 27, 2025
ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ
Top Story

ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ

by ಪ್ರತಿಧ್ವನಿ
June 26, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

June 27, 2025
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada