• Home
  • About Us
  • ಕರ್ನಾಟಕ
Thursday, January 29, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಕರೋನಾದಿಂದಲೇ ಆರ್ಥಿಕ ಸುಧಾರಣೆಗೆ ಮುಂದಾಗಬೇಕಿದೆ ಭಾರತ!

by
May 20, 2020
in ದೇಶ
0
ಕರೋನಾದಿಂದಲೇ ಆರ್ಥಿಕ ಸುಧಾರಣೆಗೆ ಮುಂದಾಗಬೇಕಿದೆ ಭಾರತ!
Share on WhatsAppShare on FacebookShare on Telegram

ಭಾರತ ಅತೀ ದೊಡ್ಡ ʼಬಿಗ್‌ ಬ್ಯಾಂಗ್‌ʼ ಸುಧಾರಣೆ ಕಂಡದ್ದು 1991 ರ ನಂತರ. ಪತ್ರಕರ್ತರು, ಕೈಗಾರಿಕೋದ್ಯಮಿಗಳು ಹಾಗೂ ಅರ್ಥಶಾಸ್ತ್ರಜ್ಞರು ಇವರೆಲ್ಲರೂ ಇದರ ಉಪಯೋಗ ಪಡೆದಿದ್ದರು. ಏಕೆಂದರೆ 1991 ರ ನಂತರ ದೇಶದಲ್ಲಿ ಈಸ್ಟ್‌ ಇಂಡಿಯಾ ಕಂಪೆನಿಗಳಿಗೆ ವಿದೇಶಿ ಬಂಡವಾಳ ಹೂಡಿಕೆ ಮಾಡಲು ಅವಕಾಶ ಮಾಡಿಕೊಡಲಾಯಿತು. ಕೇವಲ ಇದು ಮಾತ್ರವಲ್ಲದೇ ಪ್ರತಿ ಕೇಂದ್ರ ಬಜೆಟ್‌ ಸಮಯದಲ್ಲೂ ಒಂದು ನಿರೀಕ್ಷೆ ಇದ್ದೇ ಇರುತ್ತವೆ. ಅದೇನೆಂದರೆ ಎರಡನೇ ತಲೆಮಾರಿನ ರಚನಾತ್ಮಕ ಸುಧಾರಣೆಯ ಬಗ್ಗೆ. ಅಂತಹ ಕಾಯುವಿಕೆಯೂ ಇಂದು ನಿನ್ನೆಯದ್ದಲ್ಲ. ಅದು ಮನಮೋಹನ್‌ ಸಿಂಗ್‌ ಆರ್ಥಿಕ ಸಚಿವರಾಗಿದ್ದ ಅವಧಿಯಿಂದ ಹಿಡಿದು ಆ ನಂತರದ ಪಿ. ಚಿದಂಬರಂ, ಜಸ್ವಂತ್‌ ಸಿಂಗ್‌, ಯಶವಂತ್‌ ಸಿನ್ಹಾ ಹಾಗು ಅರುಣ್‌ ಜೇಟ್ಲಿವರೆಗೂ ಇತ್ತು. ಆದರೆ ಅಂತಹ ನಿರೀಕ್ಷೆಗಳಿಗೆಲ್ಲ ಪ್ರತಿ ಬಾರಿಯೂ ದ್ರೋಹವಾಗುತ್ತಲೇ ಬಂದಿದೆ. ಇದೀಗ 2019 ರ ಚುನಾವಣಾ ಪ್ರಣಾಳಿಕೆಯ ಹೊರತಾಗಿಯೂ ಹಾಲಿ ಆರ್ಥಿಕ ಸಚಿವೆ ನಿರ್ಮಲಾ ಸೀತರಾಮನ್‌ ಅವರಿಂದಲೂ ʼಬಿಗ್‌ ಬ್ಯಾಂಗ್‌ ಸುಧಾರಣೆʼ ಮಾಡಲು ಸಾಧ್ಯವಾಗಲೇ ಇಲ್ಲ.

ADVERTISEMENT

ಈಗಾಗಲೇ ಲಾಕ್‌ಡೌನ್‌ ನಿಂದಾಗಿ ತಲೆದೋರಿದ ನಿರುದ್ಯೋಗ ಸ್ಥಿತಿಯಿಂದ ವಲಸೆ ಕಾರ್ಮಿಕರು ನಗರ ಬಿಟ್ಟು ತಮ್ಮ ತವರಿಗೆ ತೆರಳಿದ್ದಾರೆ. ಇದರಿಂದಾಗಿ ದೇಶದ ಅಭಿವೃದ್ಧಿ ಮೇಲೆಯೂ ಸಾಕಷ್ಟು ಪರಿಣಾಮ ಬೀರಲಿದೆ. ಕಾರಣ, ಅದಾಗಲೇ ನಗರಗಳಲ್ಲಿ ನಡೆಯುತ್ತಿದ್ದ ಕಟ್ಟಡ ಕಾಮಗಾರಿ ನಡೆಸಲು ಸರಕಾರ ಗ್ರೀನ್‌ ಸಿಗ್ನಲ್‌ ನೀಡಿದರೂ ಕಾರ್ಮಿಕರ ಕೊರತೆಯಿಂದ ಸಂಕಷ್ಟ ಅನುಭವಿಸುವಂತಾಗಿದೆ. ಅತ್ತ ವಲಸೆ ಕಾರ್ಮಿಕರು ಹಾಗೂ ಇನ್ನಿತರ ದುಡಿಯುವ ವರ್ಗಗಳ ಸಂಕಷ್ಟಕ್ಕೆ ಸೂಕ್ತವಾದ ಸ್ಪಂದನೆ ಬೇಕಿತ್ತೇನೋ ನಿಜ. ಅದಕ್ಕೆ ಪೂರಕಯೆನ್ನುವಂತೆ ಪ್ರಧಾನಿ ನರೇಂದ್ರ ಮೋದಿ ʼಬಿಗ್‌ ಬ್ಯಾಂಗ್‌ ಸುಧಾರಣೆʼಯ ಭರವಸೆ ನೀಡಿದ್ದಾರೆ.

ಈ ಮೂಲಕ ಕೃಷಿಕ ವರ್ಗಕ್ಕೆ ಮುಕ್ತ ಮಾರುಕಟ್ಟೆ ಅವಕಾಶ, ರಕ್ಷಣಾ ಉತ್ಪಾದನೆಯ ಮೇಲೆ ಎಫ್‌ಡಿಐ ಮಿತಿಯನ್ನು ಶೇಕಡಾ 74ಕ್ಕೆ ಏರಿಸುವುದು. MSME ವ್ಯಾಖ್ಯಾನ ಬದಲಿಸುವುದು, ಕಲ್ಲಿದ್ದಲು ಹಾಗೂ ಖನಿಜ ಗಣಿಗಾರಿಕೆ ಸುಧಾರಣೆ ಹಾಗೂ ಇದರ ಜೊತೆಗೆ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿ ಕಾರ್ಮಿಕ ಕಾನೂನುಗಳನ್ನ ತಿದ್ದುಪಡಿ ಮಾಡಲಾಗಿದೆ.

ಆದರೆ ವಾಸ್ತವದಲ್ಲಿ ಭಾರತ ಕುಸಿತದ ಸಮಯದಲ್ಲಿ ಮಾತ್ರ ಸುಧಾರಣೆಗೆ ಮುಂದಾಗುತ್ತಿದೆ ಅನ್ನೋದು ಸ್ಪಷ್ಟ. ಅದರ ಬದಲಾಗಿ ಒಂದು ದೂರದೃಷ್ಟಿಯುಳ್ಳ ಯೋಜನೆಗಳು ಜಾರಿಯಾಗುತ್ತಿಲ್ಲ. ಆದರೆ ಭಾರತದಲ್ಲಿ ರಚನಾತ್ಮಕ ರೀತಿಯಲ್ಲಿ ಆರ್ಥಿಕ ಸುಧಾರಣೆ ಆಗಬೇಕಿದೆ. ಹಾಗಿದ್ದಲ್ಲಿ ಮಾತ್ರ ಆಗಬಹುದಾದ ಆರ್ಥಿಕ ಆಘಾತಗಳನ್ನ ದೇಶ ತಡೆಯಬಹುದು. ಆದರೆ ದೇಶದಲ್ಲಿ ಪರಿಸ್ಥಿತಿ ಹಾಗಿಲ್ಲ, ಯಾವಾಗ ಆರ್ಥಿಕತೆ ಉತ್ತಮವಾಗಿರುತ್ತದೋ ಅದಾಗ ರಾಜಕೀಯ ನಾಯಕರು ರಾಜಕೀಯ ವಿಚಾರದಲ್ಲಿಯೇ ನಿರತರಾಗಿರುತ್ತಾರೆ. ಆದ್ದರಿಂದ ದೇಶದಲ್ಲಿ ರಾಜಕೀಯ ಚರ್ಚೆ, ವಿರೋಧ ಇಲ್ಲದೇ ಸುಧಾರಣೆಗಳು ಪೂರ್ವಭಾವಿಯಾಗಿ ನಡೆಯಬೇಕಿದೆ ಅನ್ನೋದನ್ನ ಆರ್ಥಿಕ ಸಂದಿಗ್ಧ ಪರಿಸ್ಥಿತಿಗಳು ಕಲಿಸಿಕೊಟ್ಟಿವೆ. ಆದರೆ ಹೆಚ್ಚಿನ ಪೂರ್ವಭಾವಿ ಸಮಯವಿರದೇ ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದಲ್ಲಿ ಮತ್ತಷ್ಟು ಗೊಂದಲ ಹುಟ್ಟುಹಾಕುತ್ತವೆ ಅನ್ನೋದು ಸತ್ಯ.

ಈ ಹಿಂದೆಯೂ ಆರ್ಥಿಕ ಕುಸಿತ ಅನ್ನೋದನ್ನ ದೇಶ ಕಂಡಿದೆ. ಇದೀಗ ನರೇಂದ್ರ ಮೋದಿ ಸರಕಾರವನ್ನ ಕರೋನಾ ಇನ್ನಷ್ಟು ಆರ್ಥಿಕವಾಗಿ ಕಟ್ಟಿ ಹಾಕಿದೆ. ಆದರೆ ಇದೆಲ್ಲವನ್ನ ಮರೆಮಾಚಲು ನಿರ್ಮಲಾ ಸೀತರಾಮನ್‌ ಆಕರ್ಷಕ ಶೀರ್ಷಿಕೆ ನೀಡಿ ಸುಧಾರಣೆಯ ಮಾತನ್ನಾಡುತ್ತಿದ್ದಾರೆ. ಅಲ್ಲದೇ ಈ ಸಮಯದಲ್ಲಿ ಸಾಲ ಬಾಕಿ ಉಳಿಸುವ ಕಂಪೆನಿಗಳನ್ನ ಸುಸ್ತಿದಾರರನ್ನಾಗಿ ಘೋಷಿಸುವುದಾಗಲೀ, ವರುಷದ ಅಂತ್ಯದವರೆಗೆ ಯಾವುದೇ ಕಂಪೆನಿಯ ದಿವಾಳಿತನ ಘೋಷಿಸುವುದಾಗಲೀ ಮಾಡದೇ ಇರುವುದಾಗಿಯೂ ಹಾಗು ಕೆಲವು ವ್ಯವಹಾರ ಅಪರಾಧಗಳನ್ನ ಕೈ ಬಿಡುವ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಖಾಸಗಿ ಕಂಪೆನಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಸಿಗಲಿದ್ದು ಯಾವುದೇ ಕ್ಷೇತ್ರದಲ್ಲೂ ಹೂಡಿಕೆ ಮಾಡುವ ಅವಕಾಶ ಪಡೆಯಲಿದೆ.

ಕೋವಿಡ್-19‌ ತಂದಿಟ್ಟ ಸಂದಿಗ್ಧತೆಯಿಂದ ಹೊರಬರಲು ನರೇಂದ್ರ ಮೋದಿ ಸರಕಾರ ಎರಡು ಮಾದರಿಯ ತಂತ್ರಗಾರಿಕೆಗೆ ಮುಂದಾಗಿದೆ. ಒಂದು ಆರ್ಥಿಕ ಸುಧಾರಣೆ ಹಾಗೂ ಇನ್ನೊಂದು ರಚನಾತ್ಮಕ ಸುಧಾರಣೆ. ಕಾರಣ, ಕರೋನಾ ಆಕ್ರಮಿಸುವ ಮುನ್ನವೇ ದೇಶದಲ್ಲಿ ಆರ್ಥಿಕತೆ ಕೂಡಾ ಕುಸಿದಿತ್ತು. ಆರ್ಥಿಕತೆ ಮೇಲೆತ್ತಬೇಕಾದ ಸಮಯದಲ್ಲೆಲ್ಲ ನರೇಂದ್ರ ಮೋದಿ ರಾಜಕೀಯ ಮಾಡುತ್ತಲೇ ಹೋದರು. CAA ಜಾರಿ, ಕಾಶ್ಮೀರ ವಿಶೇಷ ಪ್ರಾತಿನಿಧ್ಯ ರದ್ದತಿ ಮುಂತಾದ ರಾಜಕೀಯ ವಿಚಾರಗಳ ಬಗ್ಗೆ ಹೆಚ್ಚು ಆಸಕ್ತಿದಾಯಕರಾಗಿದ್ದರು.

ಅದರೆ ಈಗ ಅನಿವಾರ್ಯವಾಗಿ ಬದಲಾವಣೆಯ ಕಾಲಘಟ್ಟಕ್ಕೆ ಭಾರತ ಬಂದು ನಿಂತಿದೆ. ಈಗಾಗಲೇ ಪಾಶ್ಚಿಮಾತ್ಯ ಕಂಪೆನಿಗಳು ಚೀನಾದಿಂದ ಹಿಂದೆ ಸರಿಯಲು ಮುಂದಾಗಿವೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆದರಿಕೆಯೂ ಜೋರಾಗಿದೆ. ಹಾಗೇನಾದರೂ ಆದಲ್ಲಿ ಅಂತಹ ಕಂಪೆನಿಗಳು ಚೀನಾ ಗಡಿ ದೇಶವಾದ ಭಾರತದತ್ತ ತನ್ನ ನೋಟ ಬೀರುವ ಸಾಧ್ಯತೆ ಜಾಸ್ತಿಯಿದೆ. ಇಂತಹ ಅವಕಾಶಗಳು ಇದುವರೆಗೂ ಒದಗಿ ಬಂದಿರಲಿಲ್ಲ, ಹಾಗಾಗಿ ಭಾರತದ ʼಮೇಕ್‌ ಇನ್‌ ಇಂಡಿಯಾʼ ಕನಸಿಗೂ ಅದು ಇನ್ನಷ್ಟು ಪುಷ್ಟಿ ನೀಡುವ ಸಾಧ್ಯತೆಯಿದೆ.

ಅಲ್ಲದೇ ಕಳೆದ ತಿಂಗಳು ಆರ್‌ಬಿಐ ಮಾಜಿ ಗವರ್ನರ್‌ ರಘುರಾಂ ರಾಜನ್‌ ಕೂಡಾ ಇದನ್ನೇ ಉಲ್ಲೇಖಿಸಿದ್ದರು. “ಭಾರತವು ಕುಸಿತದ ಸಮಯದಲ್ಲಿ ಸುಧಾರಣೆ ಮಾಡುತ್ತದೆ ಎಂದೇ ಹೇಳಲಾಗುತ್ತದೆ”, ಅಂತೆಯೇ ದೇಶ ಈಗ ಕೋವಿಡ್-19ನಲ್ಲೂ ಆರ್ಥಿಕ ಸುಧಾರಣೆಯನ್ನ ಎದುರು ನೋಡುತ್ತಿದೆ ಎಂದಿದ್ದರು. ಒಟ್ಟಿನಲ್ಲಿ ದೇಶ ಆರ್ಥಿಕವಾಗಿ ತೀರಾ ಕುಸಿತ ಕಾಣುತ್ತಿದ್ದರೂ, ಇನ್ನೊಂದೆಡೆ ಕೋವಿಡ್-19‌ ಅನ್ನೋದು ದೇಶವನ್ನ ಎತ್ತಿ ಹಿಡಿಯಬಹುದು ಅನ್ನೋ ಹತ್ತಾರು ಲೆಕ್ಕಾಚಾರಗಳು ಕೂಡಾ ಎದುರಿಗೆ ಕಾಣುತ್ತಿವೆ. ಒಂದು ವೇಳೆ ಹಾಗೆಯೇ ಆದ್ದಲ್ಲಿ, ಕರೋನೋತ್ತರ ಭಾರತ ಬೇರೆ ದೇಶಗಳಿಗಿಂತ ವಿಭಿನ್ನವಾಗಿ ಚೇತರಿಕೆ ಕಾಣಬಹುದು. ಆದರೆ ಅದಕ್ಕೆ ಆಳುವ ಸರಕಾರದ ಆಲೋಚನೆಗಳು ಮುಖ್ಯವಾಗುತ್ತದೆ.

Tags: ‌ ಆರ್‌ಬಿಐ‌ ಲಾಕ್‌ಡೌನ್Big BANGCovid 19LockdownRBIಕೋವಿಡ್-19ಬಿಗ್‌ ಬ್ಯಾಂಗ್
Previous Post

ವೈಫಲ್ಯ ಮುಚ್ಚಿಹಾಕಲು ಲಾಕ್ ಡೌನ್ ಅಸ್ತ್ರ: ಕರೋನಾ ಟಾಸ್ಕ್‌ ಫೋರ್ಸ್!

Next Post

ʻಲಾಕ್‌ಡೌನ್ ಮೋದಿಯ ವಿಫಲ ಪ್ರಯತ್ನʼ : ತಪ್ಪಡ್ ನಿರ್ದೇಶಕ ಅನುಭವ್ ಸಿನ್ಹಾ ಅಭಿಮತ

Related Posts

ರಾಜ್ಯಪಾಲರ ಫೋನ್‌ ಕದ್ದಾಲಿಕೆ ಮಾಡ್ತಿದೆಯಾ ಕಾಂಗ್ರೆಸ್‌ ಸರ್ಕಾರ..?
ಇದೀಗ

ರಾಜ್ಯಪಾಲರ ಫೋನ್‌ ಕದ್ದಾಲಿಕೆ ಮಾಡ್ತಿದೆಯಾ ಕಾಂಗ್ರೆಸ್‌ ಸರ್ಕಾರ..?

by ಪ್ರತಿಧ್ವನಿ
January 28, 2026
0

ಬೆಂಗಳೂರು : ವಿಧಾನಭೆಯಲ್ಲಿಂದು ಆಡಳಿತ ಮತ್ತು ವಿಪಕ್ಷಗಳ ನಡುವೆ ಟೀಕಾ ಪ್ರಹಾರ ಜೋರಾಗಿಯೇ ನಡೆದಿದೆ. ರಾಜ್ಯಪಾಲರಿಗೆ ಕೇಶವ ಕೃಪಾದಿಂದ ಫೋನ್‌ ಕರೆಗಳು ಬರುತ್ತವೆ. ಜಂಟಿ ಅಧಿವೇಶನದಲ್ಲಿ ಭಾಷಣ...

Read moreDetails
ಅಜಿತ್‌ ಪವಾರ್‌ NDA ಕೂಟ ಬಿಟ್ಟು, INDIA ಒಕ್ಕೂಟ ಸೇರ್ಪಡೆಯಾಗಬೇಕಿತ್ತು: ವಿಮಾನ ಅಪಘಾತಕ್ಕೆ ದೀದಿ ಸ್ಪೋಟಕ ತಿರುವು..?

ಅಜಿತ್‌ ಪವಾರ್‌ NDA ಕೂಟ ಬಿಟ್ಟು, INDIA ಒಕ್ಕೂಟ ಸೇರ್ಪಡೆಯಾಗಬೇಕಿತ್ತು: ವಿಮಾನ ಅಪಘಾತಕ್ಕೆ ದೀದಿ ಸ್ಪೋಟಕ ತಿರುವು..?

January 28, 2026
WPL : ಪ್ಲೇ ಆಫ್‌ ಎಂಟ್ರಿಗೆ ಸಿದ್ಧವಾದ ವನಿತೆಯರು : ಯುಪಿ ವಿರುದ್ಧ ಗೆಲುವಿಗೆ ಆರ್‌ಸಿಬಿ ಪ್ಲ್ಯಾನ್‌ ಏನು..?

WPL : ಪ್ಲೇ ಆಫ್‌ ಎಂಟ್ರಿಗೆ ಸಿದ್ಧವಾದ ವನಿತೆಯರು : ಯುಪಿ ವಿರುದ್ಧ ಗೆಲುವಿಗೆ ಆರ್‌ಸಿಬಿ ಪ್ಲ್ಯಾನ್‌ ಏನು..?

January 28, 2026
ಸಂಜಯ್ ಗಾಂಧಿಯಿಂದ ಇಲ್ಲಿಯವರೆಗೆ ಆಕಾಶಯಾನದಿಂದ ಮೃತ್ಯು ಕಂಡ ಭಾರತದ ಗಣ್ಯರು

ಸಂಜಯ್ ಗಾಂಧಿಯಿಂದ ಇಲ್ಲಿಯವರೆಗೆ ಆಕಾಶಯಾನದಿಂದ ಮೃತ್ಯು ಕಂಡ ಭಾರತದ ಗಣ್ಯರು

January 28, 2026
Ajit Pawar: ಅಜಿತ್ ಪವಾರ್ ದುರ್ಮರಣ: ಸಿಎಂ ಸಿದ್ದರಾಮಯ್ಯ ಸಂತಾಪ

Ajit Pawar: ಅಜಿತ್ ಪವಾರ್ ದುರ್ಮರಣ: ಸಿಎಂ ಸಿದ್ದರಾಮಯ್ಯ ಸಂತಾಪ

January 28, 2026
Next Post
ʻಲಾಕ್‌ಡೌನ್ ಮೋದಿಯ ವಿಫಲ ಪ್ರಯತ್ನʼ : ತಪ್ಪಡ್ ನಿರ್ದೇಶಕ ಅನುಭವ್ ಸಿನ್ಹಾ ಅಭಿಮತ

ʻಲಾಕ್‌ಡೌನ್ ಮೋದಿಯ ವಿಫಲ ಪ್ರಯತ್ನʼ : ತಪ್ಪಡ್ ನಿರ್ದೇಶಕ ಅನುಭವ್ ಸಿನ್ಹಾ ಅಭಿಮತ

Please login to join discussion

Recent News

ಸದನದ ನಿಯಾಮವಳಿ ಪುಸ್ತಕ ಹರಿದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ: ಯಾಕೆ..?
Top Story

ಸದನದ ನಿಯಾಮವಳಿ ಪುಸ್ತಕ ಹರಿದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ: ಯಾಕೆ..?

by ಪ್ರತಿಧ್ವನಿ
January 28, 2026
ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌
Top Story

ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
January 28, 2026
‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!
Top Story

‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!

by ಪ್ರತಿಧ್ವನಿ
January 28, 2026
JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?
Top Story

JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?

by ಪ್ರತಿಧ್ವನಿ
January 28, 2026
ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್
Top Story

ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
January 28, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಹಿರಿಯ ಹೋರಾಟಗಾರ ಅನಂತ್ ಸುಬ್ಬರಾವ್ ಇನ್ನಿಲ್ಲ

ಹಿರಿಯ ಹೋರಾಟಗಾರ ಅನಂತ್ ಸುಬ್ಬರಾವ್ ಇನ್ನಿಲ್ಲ

January 28, 2026
ರಾಜ್ಯಪಾಲರ ಫೋನ್‌ ಕದ್ದಾಲಿಕೆ ಮಾಡ್ತಿದೆಯಾ ಕಾಂಗ್ರೆಸ್‌ ಸರ್ಕಾರ..?

ರಾಜ್ಯಪಾಲರ ಫೋನ್‌ ಕದ್ದಾಲಿಕೆ ಮಾಡ್ತಿದೆಯಾ ಕಾಂಗ್ರೆಸ್‌ ಸರ್ಕಾರ..?

January 28, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada