• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಆನ್‌ಲೈನ್ ತರಗತಿಗಾಗಿ ಅಡವಿಟ್ಟ ಮಾಂಗಲ್ಯ ವಾಪಸ್ ಬಂತು..!

by
August 1, 2020
in ಕರ್ನಾಟಕ
0
ಆನ್‌ಲೈನ್ ತರಗತಿಗಾಗಿ ಅಡವಿಟ್ಟ ಮಾಂಗಲ್ಯ ವಾಪಸ್ ಬಂತು..!
Share on WhatsAppShare on FacebookShare on Telegram

ನರಗುಂದದ ಹತ್ತಿರ ರೆಡ್ಡೇರ್ ನಾಗನೂರ ಎಂಬ ಗ್ರಾಮದ ಮಹಿಳೆ, ತಮ್ಮ ಮಕ್ಕಳ ಪಾಠಕ್ಕಾಗಿ ಮಾಂಗಲ್ಯವನ್ನು ಅಡವಿಟ್ಟಿದ್ದ ಸುದ್ದಿ ಮಾಧ್ಯಮಗಳಲ್ಲಿ ಪ್ರಚಾರವಾಗಿದ್ದು, ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡಿತ್ತು. ಪ್ರತಿಧ್ವನಿ ಕೂಡ ಈ ಸುದ್ದಿಯನ್ನು ಪ್ರಕಟಿಸಿತ್ತು. ಗದಗ್ ನ ಉಸ್ತುವಾರಿ ಸಚಿವ ಸಿ. ಸಿ. ಪಾಟೀಲರು 20 ಸಾವಿರ ಗಳ ಚೆಕ್ ನೀಡಿದ್ದಾರೆ. ಶಾಸಕ ಜಮೀರ್ ಕೂಡ 50 ಸಾವಿರ ರೂಪಾಯಿಗಳನ್ನು ನೀಡಿದ್ದಾರೆ. ಹಲವು ಸಂಘ ಸಂಸ್ಥೆಗಳು ಈ ಕುಟುಂಬದ ಸಹಾಯಕ್ಕೆ ಬಂದಿದ್ದು, ಹೆಸರು ಹೇಳಲು ಇಚ್ಛಿಸದ ಸಂಘವೊಂದು ಇಬ್ಬರ ಮಕ್ಕಳ ವಿದ್ಯಾಭ್ಯಾಸಕ್ಕೆ 3 ವರ್ಷಗಳ ವರೆಗೆ ಪ್ರತಿ ತಿಂಗಳೂ 1 ಸಾವಿರ ಅಂತೆ ಸಹಾಯ ಮಾಡಿದೆ. ಇವರೆಲ್ಲರಿಗೂ ಪ್ರತಿದ್ವನಿ ತಂಡದಿಂದ ಅಭಿನಂದನೆಗಳು.

ADVERTISEMENT

Also Read: ಮಕ್ಕಳ ಆನ್‌ಲೈನ್ ಪಾಠಕ್ಕಾಗಿ ಮಾಂಗಲ್ಯ ಅಡವಿಟ್ಟ ತಾಯಿ

ಬೇರೆಯವರಂತೆ ತಮ್ಮ ಮಕ್ಕಳೂ ಆನ್ ಲೈನ್ ಶಿಕ್ಷಣ ಪಡೆಯಲಿ ಎಂದು ಕಸ್ತೂರಿ ಚಲವಾದಿ ಎಂಬ ಮಹಿಳೆ ಟಿವಿ ಕೊಂಡುಕೊಳ್ಳಲು ಮಾಂಗಲ್ಯವನ್ನು ಅಡವಿಟ್ಟರು. ಮಾಂಗಲ್ಯ ಅಡವಿಟ್ಟಿದ್ದಕ್ಕೆ 20 ಸಾವಿರ ರೂಪಾಯಿ ಸಿಕ್ಕಿತು, 14 ಸಾವಿರ ರೂಪಾಯಿಯ 32 ಇಂಚಿನ ಟಿವಿ ಖರೀದಿಸಿದರು. ಮಹಿಳೆಯ ಈ ಕಾರ್ಯಕ್ಕೆ ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಜೊತೆಗೆ ಮಾಂಗಲ್ಯ ಅಡವಿಡುವಂತಹ ಪರಿಸ್ಥಿತಿಗೆ ಬೇಸರ ವ್ಯಕ್ತಪಡಿಸಿದ್ದರು.

ಮಾಂಗಲ್ಯ ಸಿಕ್ಕಿದ್ದಕ್ಕೆ ಖುಷಿ ಆಗಿದ್ದ ಕಸ್ತೂರಿ ಅವರು ಖುಷಿಯಿಂದ ಪ್ರತಿಧ್ವನಿಗೆ ಪ್ರತಿಕ್ರಿಯಿಸಿದ್ದು ಹೀಗೆ, “ಅಡವಿಟ್ಟ ಮಾಂಗಲ್ಯ ವಾಪಸ್ ಸಿಕ್ಕಿದ ಕೂಡಲೇ ಕಣ್ಣಾಲಿಗಳು ತೇವವಾಗಿದ್ದವು. ಖುಷಿಯಿಂದ ಕಣ್ಣಿಗೆ ಒತ್ತಿಕೊಂಡು ಆ ಭಗವಂತನನ್ನು ನೆನೆಪಿಸಿಕೊಂಡು ತಾಳಿಯನ್ನು ಮತ್ತೆ ಹಾಕಿಕೊಂಡಿದ್ದೇನೆ. ನಮಗೆ ಸಹಾಯ ಮಾಡಿದ ಎಲ್ಲರಿಗೂ ನಾವೆಲ್ಲ ಚಿರಋಣಿ. ನಮಗೆ ಜನಪ್ರತಿನಿಧಿಗಳು ಸಹಾಯ ಮಾಡುತ್ತಾರೆ ಎಂದು ಊಹಿಸಿರಿಲಿಲ್ಲ. ಜನರು ನಮ್ಮ ಕಷ್ಟಕ್ಕೆ ಮುಂದೆ ಬಂದರು. ನಮ್ಮಂತೆ ಎಷ್ಟೋ ಜನರು ಇಂದು ಕೊರೊನಾದ ಲಾಕ್ ಡೌನ್ ಆದ ಮೇಲೆ ಕೆಲಸವಿಲ್ಲದೆ ಒದ್ದಾಡುತ್ತಿದ್ದಾರೆ. ಅವರೆಲ್ಲರಿಗೂ ದೇವರೂ ಒಂದಲ್ಲ ಇನ್ನೊಂದು ರೀತಿಯಲ್ಲಿ ಸಹಾಯ ಮಾಡಲಿ ಎಂದು ಬೇಡಿಕೊಳ್ಳುತ್ತೇನೆ”.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಗ್ರಾಮಸ್ಥರೆಲ್ಲರು ಈ ಮಹಿಳೆಗೆ ತಾಳಿ ವಾಪಸ್ ಸಿಕ್ಕಿದಕ್ಕೆ ಖುಷಿ ವ್ಯಕ್ತ ಪಡಿಸಿದರು. ಈ ಬಗ್ಗೆ ಪರಶುರಾಮ ಎಂಬುವರು “ತಾಳಿ ಒಬ್ಬ ಮಹಿಳೆಗೆ ಎಷ್ಟು ಅಮೂಲ್ಯ ಅನ್ನುವುದು ಎಲ್ಲರಿಗೂ ಗೊತ್ತು. ಅಂತಹ ತಾಳಿಯನ್ನೇ ಅಡವಿಟ್ಟರಲ್ಲ ಎಂದು ಬಹಳ ನೊಂದು ಕೊಂಡಿದ್ದೇವು. ನಾವ್ಯಾರೂ ಸಹಾಯ ಮಾಡುವ ಪರಿಸ್ಥಿತಿಯಲ್ಲಿಲ್ಲ. ಇತ್ತ ದುಡಿಮೆಯೂ ಇಲ್ಲ, ಅತ್ತ ಕೂಡಿಟ್ಟ ಹಣವೂ ಲಾಕ್ ಡೌನ್ ಸಮಯದಲ್ಲಿ ಬಳಸಿದ್ದೆವು. ಮಹಿಳೆಗೆ ತಾಳಿ ಸಿಕ್ಕಿದ್ದು ನಮ್ಮೆಲ್ಲರಿಗೂ ಸಂತಸ ತಂದಿದೆ”, ಎಂದು ಹೇಳಿದರು.

Tags: Online classesಆನ್ಲೈನ್ ತರಗತಿಕಸ್ತೂರಿ
Previous Post

ಎಸ್ಒಪಿ(SOP) ಪಾಲಿಸಿದರೆ ರಾಮಮಂದಿರ ಭೂಮಿ ಪೂಜೆಗೆ ಸ್ವತಃ ಪ್ರಧಾನಿಯೇ ಹೋಗುವಂತಿಲ್ಲ!

Next Post

ರಾಜಾಸ್ಥಾನ ರಾಜ್ಯಪಾಲರ ಕ್ರಮಗಳಿಗೆ ಟೀಕೆಗಳೇಕೆ?

Related Posts

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
0

"ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಬೇಕು. ಪ್ರತಿ ವರ್ಷ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಮಾಡಬೇಕು" ಎಂದು...

Read moreDetails

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

June 27, 2025

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

June 27, 2025

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

June 27, 2025
Next Post
ರಾಜಾಸ್ಥಾನ ರಾಜ್ಯಪಾಲರ ಕ್ರಮಗಳಿಗೆ ಟೀಕೆಗಳೇಕೆ?

ರಾಜಾಸ್ಥಾನ ರಾಜ್ಯಪಾಲರ ಕ್ರಮಗಳಿಗೆ ಟೀಕೆಗಳೇಕೆ?

Please login to join discussion

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ
Top Story

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

by ಪ್ರತಿಧ್ವನಿ
June 28, 2025
Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

June 28, 2025

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada