ಹಥ್ರಾಸ್ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮುಖ್ಯ ಆರೋಪಿ ಸಂದೀಪ್ ಠಾಕೂರ್ ಪೊಲೀಸರಿಗೆ ಪತ್ರ ಬರೆದಿದ್ದು ತಮ್ಮನ್ನು ಪ್ರಕರಣದಲ್ಲಿ ಆರೋಪಿಗಳಂತೆ ʼಬಿಂಬಿಸಲಾಗಿದೆʼ ಎಂದಿದ್ದಾನೆ
ಬುಧವಾರದಂದು ಸಂದೀಪ್ ಹಥ್ರಾಸ್ ಎಸ್ಪಿಗೆ ಬರೆದಿರುವ ಪತ್ರದಲ್ಲಿ, ಆಕೆಯ ತಾಯಿ ಹಾಗೂ ಆಕೆಯ ಸಹೋದರರು ಆಕೆಗೆ ಚಿತ್ರಹಿಂಸೆ ನೀಡಿ ಕೊಂದಿದ್ದಾರೆ ಎಂದು ಆರೋಪಿಸಿದ್ದಾನೆ.
Also Read: ಹಥ್ರಾಸ್: ಪತ್ರಕರ್ತ ಸೇರಿ ನಾಲ್ವರ ಮೇಲೆ UAPA, ದೇಶದ್ರೋಹ ಪ್ರಕರಣ ದಾಖಲು
“ಅವರು (ಆರೋಪಿಗಳು) ಈ ಪತ್ರವನ್ನು ನಿನ್ನೆ (ಬುಧವಾರ) ಸಂಜೆ ಹಥ್ರಾಸ್ ನ ಪೊಲೀಸ್ ವರಿಷ್ಠಾಧಿಕಾರಿಗೆ ಕಳುಹಿಸಿದ್ದಾರೆ. ಕಾನೂನಿನ ಪ್ರಕಾರ ನಾವು ಅದನ್ನು ಎಸ್ಪಿಗೆ ತಲುಪಿಸಿದ್ದೇವೆ. ಅವರು(ಆರೋಪಿಗಳು) ತಮ್ಮ ವಾದವನ್ನು ಮುಂದಿಟ್ಟಿದ್ದಾರೆ. ಇನ್ನು ತನಿಖಾ ಸಂಸ್ಥೆಗಳು ಅದನ್ನು ಪರಿಶೀಲಿಸಲಿವೆ ”ಎಂದು ಅಲಿಗಢ್ ಜೈಲಿನ ಹಿರಿಯ ಅಧೀಕ್ಷಕ ಅಲೋಕ್ ಸಿಂಗ್ ಗುರುವಾರ ಸುದ್ದಿಗಾರರಿಗೆ ಹೇಳಿದ್ದಾರೆ.
Also Read: ಹಥ್ರಾಸ್: ಚಂದ್ರಶೇಖರ್ ಆಝಾದ್ ಹಾಗೂ ಸಂಗಡಿಗರ ವಿರುದ್ಧ ಪ್ರಕರಣ ದಾಖಲು
ಮೃತ ಹುಡುಗಿಯೊಂದಿಗೆ ತನಗೆ ಗೆಳೆತನವಿತ್ತು ಎಂದು ಹೇಳಿರುವ ಸಂದೀಪ್, ನಾವು ಫೋನ್ ಮುಖಾಂತರವೂ ಸಂಪರ್ಕದಲ್ಲಿದ್ದೆವು. ಇದನ್ನು ಸಹಿಸದ ಆಕೆಯ ಕುಟುಂಬಸ್ಥರು ಆಕೆಯನ್ನು ಕೊಂದಿದ್ದಾರೆ ಎಂದು ಹೇಳಿದ್ದಾನೆ.
Also Read: ಹಥ್ರಾಸ್ ಪ್ರಕರಣ; ಸಂತ್ರಸ್ತೆ ಮೇಲೆಯೇ ಆರೋಪ ಮಾಡುತ್ತಿರುವ ಬಿಜೆಪಿ ನಾಯಕರು
ಆದರೆ, ಸಂತ್ರಸ್ತೆಯ ಕುಟುಂಬ ಸಂದೀಪನ ಈ ಆರೋಪಗಳನ್ನು ಅಲ್ಲಗೆಳೆದಿದೆ.
ಸೆಪ್ಟೆಂಬರ್ 14 ರಂದು ಸಾಮೂಹಿಕ ಅತ್ಯಾಚಾರಕ್ಕೊಳಗಾದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಎರಡು ವಾರಗಳ ಬಳಿಕ ಕೊನೆಯುಸಿರೆಳೆದಿದ್ದಳು.
Also Read: ಹಥ್ರಾಸ್ ಪ್ರಕರಣ ಯೋಗಿ ವಿರುದ್ಧದ ಅಂತರಾಷ್ಟ್ರೀಯ ಸಂಚು – UP ಪೊಲೀಸ್
ಮುಖ್ಯ ಆರೋಪಿ ಸಂದೀಪ್ರನ್ನು ಸೆಪ್ಟೆಂಬರ್ 14 ರಂದೇ ವಶಕ್ಕೆ ಪಡೆದುಕೊಂಡರೆ, ಉಳಿದ ಮೂವರು ಆರೋಪಿಗಳನ್ನು ನಂತರದ ದಿನಗಳಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಎಲ್ಲರ ವಿರುದ್ಧವೂ ಅತ್ಯಾಚಾರ, ಕೊಲೆ ಹಾಗೂ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಬಾಲಕಿ ಸಾಯುವ ಮುನ್ನ ನೀಡಿದ ಹೇಳಿಕೆಯನ್ನು ಆಧರಿಸಿ ನಾಲ್ವರೂ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.






