Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಹೊಸ ದೇಶವನ್ನೇ ನಿರ್ಮಿಸಿದ ನಿತ್ಯಾನಂದನ ಬಂಧನಕ್ಕೆ ವಾರೆಂಟ್!

ಹೊಸ ದೇಶವನ್ನೇ ನಿರ್ಮಿಸಿದ ನಿತ್ಯಾನಂದನ ಬಂಧನಕ್ಕೆ ವಾರೆಂಟ್!
ಹೊಸ ದೇಶವನ್ನೇ ನಿರ್ಮಿಸಿದ ನಿತ್ಯಾನಂದನ ಬಂಧನಕ್ಕೆ ವಾರೆಂಟ್!

February 5, 2020
Share on FacebookShare on Twitter

ನಿತ್ಯಾನಂದ, ಕರುನಾಡು ಮರೆಯದ ಹೆಸರುಗಳ ಪಟ್ಟಿಯಲ್ಲಿ ನಿತ್ಯಾನಂದ ಸ್ವಾಮೀಜಿಗೆ ಪ್ರತ್ಯೇಕವಾದ ಸ್ಥಾನವಿದೆ. ನಿತ್ಯಾನಂದ ಸ್ವಾಮೀಜಿ, ಸ್ವಯಂಘೋಷಿತ ದೇವಮಾನವನಾಗಿ ಬಿಡದಿಯಲ್ಲಿ ಬಿಡಾರ ಹೂಡಿದ ಬಳಿಕ ತನ್ನ ವಿಶೇಷ ಕೆಲಸಗಳಿಂದಲೇ ಗಮನ ಸೆಳೆದಿರುವುದು ಹೆಚ್ಚು. ಸ್ವಾಮೀಜಿಗಳು ಎಂದರೆ ಬಡ ಮಕ್ಕಳÀ ಸೇವೆ, ಸಮಾಜಸೇವೆ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವುದು. ನೊಂದವರ ಕಣ್ಣಿರು ಒರೆಸುವುದು ಎನ್ನುವ ಆಲೋಚನೆಯನ್ನೇ ದೂರ ಮಾಡಿದ ಕುಖ್ಯಾತಿ ಬಿಡದಿಯ ನಿತ್ಯಾನಂದ ಸ್ವಾಮೀಜಿಗೆ ಸಲ್ಲುತ್ತದೆ. ಈ ನಿತ್ಯಾನಂದ ಸ್ವಾಮೀಜಿ ಸದ್ಯಕ್ಕೆ ನಮ್ಮ ಭಾರತದಲ್ಲಿ ಇಲ್ಲ. ಈತ ಪ್ರತ್ಯೇಕ ದೇಶವನ್ನೇ ನಿರ್ಮಾಣ ಮಾಡಿಕೊಂಡು ಈಕ್ವೆಡಾರ್ ದೀಪರಾಷ್ಟçದಲ್ಲಿ ವಾಸವಾಗಿದ್ದಾನೆ. ಈತನನ್ನು ಬಂಧಿಸಲು ಗುಜರಾತ್ ಸರ್ಕಾರ ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದೆ. ಇದೀಗ ಕರ್ನಾಟಕ ಹೈಕೋರ್ಟ್ ಕೂಡ ಬಂಧನ ವಾರೆಂಟ್ ಕೊಟ್ಟಿದೆ.

ಹೆಚ್ಚು ಓದಿದ ಸ್ಟೋರಿಗಳು

ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವುದರ ಬದಲಿಗೆ ನಿರುದ್ಯೋಗವನ್ನು ಸೃಷ್ಟಿಸಿದೆ : ಸಿದ್ದರಾಮಯ್ಯ

SIDDARAMAIAH VS DK SHIVAKUMAR | ಇನ್ನೂ ಮುಗಿಯದ ಸಿದ್ದರಾಮಯ್ಯ ಕ್ಷೇತ್ರ ಗೊಂದಲ #PRATIDHVANI

RAHUL GANDHI | ರಾಹುಲ್ ಗಾಂಧಿಗೋಸ್ಕರ ಬೀದಿಗಿಳಿದ ಯುವ ಕಾಂಗ್ರೆಸ್ #PRATIDHVANI

ಬಿಡದಿಯ ಆಶ್ರಮದಲ್ಲಿ ಅತ್ಯಾಚಾರ ನಡೆಸಿದ ಆರೋಪ ನಿತ್ಯಾನಂದ ಸ್ವಾಮೀಜಿ ಮೇಲಿದ್ದು, ಆ ಪ್ರಕರಣದಲ್ಲಿ ಜಾಮೀನು ಕೂಡ ಪಡೆದುಕೊಂಡಿದ್ದ. ಆದರೆ ನಿತ್ಯಾನಂದ ಸ್ವಾಮೀಜಿಗೆ ಕೊಟ್ಟಿರುವ ಜಾಮೀನು ರದ್ದು ಮಾಡಬೇಕೆಂದು ನಿತ್ಯಾನಂದ ವಿರುದ್ಧ ದೂರು ಸಲ್ಲಿಸಿರುವ ಲೆನಿನ್ ಹೈಕೋರ್ಟ್ ಮೊರೆ ಹೋಗಿದ್ದರು. ಲೆನಿನ್ ಪರ ವಕೀಲರ ವಾದ ಆಲಿಸಿದ್ದ ಹೈಕೋರ್ಟ್ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಇಂದು ಆದೇಶ ಪ್ರಕಟಗೊಂಡಿದ್ದು, ರಾಸಲೀಲೆ ಪ್ರಕರಣದಲ್ಲಿ ನಿತ್ಯಾನಂದ ಪಡೆದುಕೊಂಡಿದ್ದ ಜಾಮೀನು ರದ್ದು ಮಾಡಲಾಗಿದೆ. ಜೊತೆಗೆ ನಿತ್ಯಾನಂದ ಜಾಮೀನು ಪಡೆದುಕೊಂಡಾಗ ಕೋರ್ಟ್ಗೆ ಸಲ್ಲಿಸಿದ್ದ ಬಾಂಡ್ ಮುಟ್ಟುಗೋಲು ಹಾಕಿಕೊಳ್ಳುವಂತೆ ಕೋರ್ಟ್ ಸೂಚನೆ ಕೊಟ್ಟಿದೆ. ಫೆಬ್ರವರಿ 3ರಂದು ವಿಚಾರಣೆ ಮುಗಿಸಿ ತೀರ್ಪು ಕಾಯ್ದಿರಿಸಿದ್ದ ಏಕಸದಸ್ಯ ಪೀಠ, ಇಂದು ತೀರ್ಪು ಪ್ರಕಟ ಮಾಡಿದ್ದು, ವಿಚಾರಣೆಗೆ ಹಾಜರಾಗದೆ ನ್ಯಾಯಾಲಯಕ್ಕೆ ಅಗೌರವ ಸೂಚಿಸಿದ್ದು, ಕೂಡಲೇ ಬಂಧನ ಮಾಡಿ ಎಂದು ಕೋರ್ಟ್ ಆದೇಶ ಮಾಡಿದೆ.

ಜೂನ್ 5, 2018ರ ಬಳಿಕ ನಿತ್ಯಾನಂದ ಕೋರ್ಟ್ ಎದುರು ಕೂಡ ಹಾಜರಾಗಿಲ್ಲ. ನಿತ್ಯಾನಂದ ಪಾಸ್‌ಪೋರ್ಟ್ ಅವಧಿ ಕೂಡ ಮುಕ್ತಾಯವಾಗಿದ್ದು, ಬೆಲ್ಲೀಸ್ ದೇಶದ ಪಾಸ್‌ಪೋರ್ಟ್ ಪಡೆದು ನಿತ್ಯಾನಂದ ದೇಶ ಬಿಟ್ಟು ಪರಾರಿಯಾಗಿದ್ದಾನೆ. ಕೋರ್ಟ್ ನೋಟಿಸ್ ಕೂಡ ನಿತ್ಯಾನಂದ ಸ್ವೀಕಾರ ಮಾಡಿಲ್ಲ. ಬಿಡದಿ ಆಶ್ರಮದಲ್ಲಿ ಶಿಷ್ಯೆ ಅಚಲಾನಂದ ನೋಟಿಸ್ ಪಡೆದುಕೊಂಡಿದ್ದಾರೆ. ಬಿಡದಿಯಲ್ಲಿ ನಿತ್ಯಾನಂದ ಶ್ರೀಗಳು ಇಲ್ಲ ಎಂದು ಉತ್ತರಿಸಿದ್ದಾರೆ. ಈ ಎಲ್ಲಾ ಆಯಾಮಾಗಳಿಂದಲೂ ನಿತ್ಯಾನಂದನಿಗೆ ನೀಡಿರುವ ಜಾಮೀನು ಅರ್ಜಿಯನ್ನು ರದ್ದು ಮಾಡಬೇಕು ಎಂದು ಲೆನಿನ್ ಪರ ವಕೀಲರು ಕೋರಿದ್ದರು. ಲೆನಿನ್ ಪರ ವಕೀಲರ ವಾದ ಮನ್ನಿಸಿದ ಹೈಕೋರ್ಟ್ ಏಕಸದಸ್ಯ ಪೀಠ, ಜಾಮೀನು ರದ್ದು ಮಾಡಿ ಬಂಧನಕ್ಕೆ ಆದೇಶ ಮಾಡಿದೆ. ಇದೀಗ ಭಾರತ ಬಿಟ್ಟು ಪ್ರತ್ಯೇಕ ದೇಶವನ್ನೇ ಸ್ಥಾಪನೆ ಮಾಡಿ, ಭಾರತದಲ್ಲಿ ಎಲ್ಲವೂ ಸರಿಯಿಲ್ಲ ಎಂದು ವಿಶ್ವಸಂಸ್ಥೆಗೆ ದೂರು ಸಲ್ಲಿಸಿರುವ ಸ್ವಯಂಘೋಷಿತ ದೇವಮಾನವನಿಗೆ ಬಂಧನ ಭೀತಿ ಎದುರಾಗಿದೆ. ಕೋರ್ಟ್ ಎದುರು ಹಾಜರಾಗಿದ್ದ ಡಿಎಸ್‌ಪಿ ಬಾಲರಾಜ್, ನಾವು ನಿತ್ಯಾನಂದ ಸ್ವಾಮೀಜಿಗೆ ನೋಟಿಸ್ ಕೊಡಲು ಸಾಧ್ಯವಾಗ್ತಿಲ್ಲ. ಅವರು ಪ್ರಪಂಚ ರ‍್ಯಾಟನೆಯಲ್ಲಿದ್ದಾರೆ. ಈಕ್ವೇಡರ್ ರಾಷ್ಟçದ ಕೈಲಾಸ ಹೆಸರಿನ ದೀಪ ರಾಷ್ಟçದಲ್ಲಿದ್ದಾರೆ ಎನ್ನಲಾಗಿದೆ ಎಂದು ತಿಳಿಸಿದ್ದಾರೆ.

ನಿತ್ಯಾನಂದ ಸ್ವಾಮೀಜಿ, ಸೆಕ್ಷನ್‌ಗಳಾದ ಕ್ರಮಿನಲ್ ಅಪರಾಧ (114) ಅತ್ಯಾಚಾರ (376) ಸುಳ್ಳು ಮಾಹಿತಿ ನೀಡಿ ಕಣ್ಮರೆ (201), ವಂಚನೆ (420), ಕ್ರಿಮಿನಲ್ ಪಿತೂರಿ (120ಬಿ) ದೂರು ದಾಖಲಾಗಿದೆ. 2010ರಿಂದ 2 ಬಾರಿ ಬಂಧನಕ್ಕೆ ಒಳಪಟ್ಟಿದ್ದ ನಿತ್ಯಾನಂದ ಸ್ವಾಮೀಜಿ ಜಾಮೀನು ಪಡೆದು ಪಾರಾಗಿದ್ದ. ಇದೀಗ ಹೈಕೋರ್ಟ್ ಏಕಸದಸ್ಯ ಪೀಠ, ಮತ್ತೆ ಬಂಧನಕ್ಕೆ ಒಳಪಡಿಸಿವಂತೆ ಸೂಚನೆ ಕೊಟ್ಟಿದ್ದು, ಪೊಲೀಸರು ಯಾವ ವಿಧಾನ ಅನುಸರಿಸ್ತಾರೆ ಎನ್ನುವುದು ಕುತೂಹಲಕಾರಿಯಾಗಿದೆ. ಈಗಾಗಲೇ ಭಾರತದಲ್ಲಿ ಕಾನೂನಿಗೆ ಗೌರವವಿಲ್ಲ. ಸುಖಾಸುಮ್ಮನೆ ಬಂಧನ ಮಾಡ್ತಾರೆ, ದೌರ್ಜನ್ಯ ಮಾಡುವ ಕಾನೂನುಗಳಿವೆ ಎಂದು ವಿಶ್ವಸಂಸ್ಥೆ ಬಾಗಿ ತಟ್ಟಿರುವ ನಿತ್ಯಾನಂದ ವಿರುದ್ಧ ಗುಜರಾತ್ ಸರ್ಕಾರ ಸಿಬಿಐ ಮೊರೆ ಹೋಗುತ್ತಿದೆ. ನಿನ್ನೆಯಷ್ಟೇ ಆದೇಶ ಮಾಡಿರುವ ಗುಜರಾತ್ ಹೈಕೋರ್ಟ್ ಇಬ್ಬರು ಹೆಣ್ಣುಮಕ್ಕಳ ನಾಪತ್ತೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಸೂಚನೆ ಕೊಟ್ಟಿದೆ. ಇದೀಗ ಕರ್ನಾಟಕ ಪೊಲೀಸರು ಕೂಡ ಸಿಬಿಐ, ಅಥವಾ ಕೇಂದ್ರ ಗೃಹ ಇಲಾಖೆ ಮೂಲಕ ಈಕ್ವೆಡರ್‌ನ ಕೈಲಾಸ ದೇಶದಲ್ಲಿರುವ ನಿತ್ಯಾನಂದನನ್ನು ಬಂಧಿಸುವ ಕೆಲಸ ಮಾಡುತ್ತಾ ಕಾದು ನೋಡ್ಬೇಕು. ಒಟ್ಟಾರೆ, ಪ್ರತ್ಯೇಕ ದೇಶ, ಪ್ರತ್ಯೇಕ ಹಣಕಾಸು, ಪ್ರತ್ಯೇಕ ಕಾನೂನು ರೂಪಿಸುತ್ತಿರುವ ತಮಿಳುನಾಡಿನ ನಿತ್ಯಾನಂದ ಪರಪ್ಪನ ಅಗ್ರಹಾರಕ್ಕೆ ಬರುವ ದಿನಗಳು ದೂರವಿಲ್ಲ ಎನಿಸುತ್ತದೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ದೇಶವನ್ನು ಹಿಂದುಳಿಸುತ್ತಿರುವ ನೆಹರು ದ್ವೇಷ
Uncategorized

ದೇಶವನ್ನು ಹಿಂದುಳಿಸುತ್ತಿರುವ ನೆಹರು ದ್ವೇಷ

by ಡಾ | ಜೆ.ಎಸ್ ಪಾಟೀಲ
March 23, 2023
ಕೋಲಾರದಿಂದ ಹಿಂದೆ ಸರಿದ ಸಿದ್ದರಾಮಯ್ಯ? ರಾಹುಲ್‌ ಸಲಹೆಯೇನು?
ಕರ್ನಾಟಕ

ಕೋಲಾರದಿಂದ ಹಿಂದೆ ಸರಿದ ಸಿದ್ದರಾಮಯ್ಯ? ರಾಹುಲ್‌ ಸಲಹೆಯೇನು?

by ಪ್ರತಿಧ್ವನಿ
March 18, 2023
ಆರ್​ಸಿಬಿ ಪಂದ್ಯದ ಟಿಕೆಟ್​ ಖರೀದಿಗೆ ಮುಗಿಬಿದ್ದ ಫ್ಯಾನ್ಸ್​ : ಚಿನ್ನಸ್ವಾಮಿ ಕ್ರೀಡಾಂಗಣದ ಟಿಕೆಟ್​​ ಬಹುತೇಕ ಸೋಲ್ಡ್​ ಔಟ್​
Top Story

ಆರ್​ಸಿಬಿ ಪಂದ್ಯದ ಟಿಕೆಟ್​ ಖರೀದಿಗೆ ಮುಗಿಬಿದ್ದ ಫ್ಯಾನ್ಸ್​ : ಚಿನ್ನಸ್ವಾಮಿ ಕ್ರೀಡಾಂಗಣದ ಟಿಕೆಟ್​​ ಬಹುತೇಕ ಸೋಲ್ಡ್​ ಔಟ್​

by ಮಂಜುನಾಥ ಬಿ
March 21, 2023
RAHUL GANDHI | ರಾಹುಲ್ ಗಾಂಧಿಗೋಸ್ಕರ ಬೀದಿಗಿಳಿದ ಯುವ ಕಾಂಗ್ರೆಸ್ #PRATIDHVANI
ಇದೀಗ

RAHUL GANDHI | ರಾಹುಲ್ ಗಾಂಧಿಗೋಸ್ಕರ ಬೀದಿಗಿಳಿದ ಯುವ ಕಾಂಗ್ರೆಸ್ #PRATIDHVANI

by ಪ್ರತಿಧ್ವನಿ
March 23, 2023
ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಐಟಿ ದಾಳಿ : ಶೋಭಾ ಡೆವಲಪರ್ಸ್ ಕಚೇರಿಗಳ ಮೇಲೆ ರೇಡ್‌..! IT Raid At Dawn in Bangalore: Raid on the offices of Shobha Developers..!
Top Story

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಐಟಿ ದಾಳಿ : ಶೋಭಾ ಡೆವಲಪರ್ಸ್ ಕಚೇರಿಗಳ ಮೇಲೆ ರೇಡ್‌..! IT Raid At Dawn in Bangalore: Raid on the offices of Shobha Developers..!

by ಪ್ರತಿಧ್ವನಿ
March 20, 2023
Next Post
ಶಾಹಿನ್‌ಬಾಗ್‌ ಕುರಿತು ಬಿಜೆಪಿ ಬಿಡುಗಡೆ ಮಾಡಿರುವ ವಿಡಿಯೋ ಅಸಲಿಯೋ? ನಕಲಿಯೋ?

ಶಾಹಿನ್‌ಬಾಗ್‌ ಕುರಿತು ಬಿಜೆಪಿ ಬಿಡುಗಡೆ ಮಾಡಿರುವ ವಿಡಿಯೋ ಅಸಲಿಯೋ? ನಕಲಿಯೋ?

ಮಗುವಿನ ತಾಯಿ

ಮಗುವಿನ ತಾಯಿ, ಶಿಕ್ಷಕಿ ದೇಶದ್ರೋಹಿ ಎಂದ ಬಿಜೆಪಿಯ ಫ್ಯಾಸಿಸ್ಟ್ ಮುಖ ಅನಾವರಣ

BSY ಸಂಪುಟದಲ್ಲಿ 10 ಮಂದಿಗೆ ಸಚಿವ ಸ್ಥಾನ: ಮುಂದಿರುವುದು ಖಾತೆ ಹಂಚಿಕೆ ಸವಾಲು

BSY ಸಂಪುಟದಲ್ಲಿ 10 ಮಂದಿಗೆ ಸಚಿವ ಸ್ಥಾನ: ಮುಂದಿರುವುದು ಖಾತೆ ಹಂಚಿಕೆ ಸವಾಲು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist