Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಹೊಣೆಗೇಡಿ ಪೊಲೀಸರ ಬೆನ್ನಿಗೆ ಯುಪಿ ಸರ್ಕಾರ

ಹೊಣೆಗೇಡಿ ಪೊಲೀಸರ ಬೆನ್ನಿಗೆ ಯುಪಿ ಸರ್ಕಾರ
ಹೊಣೆಗೇಡಿ ಪೊಲೀಸರ ಬೆನ್ನಿಗೆ ಯುಪಿ ಸರ್ಕಾರ

December 30, 2019
Share on FacebookShare on Twitter

ದೇಶಾದ್ಯಂತ ಸಿಎಎ ಮತ್ತು ಎನ್ಆರ್ ಸಿ ವಿರುದ್ಧ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದರೂ ಆಡಳಿತ ನಡೆಸುತ್ತಿರುವ ಬಿಜೆಪಿ ನಾಯಕರು ಮಾತ್ರ ಪ್ರತಿಭಟನಾಕಾರರ ಮನವಿಗೆ ಕಿವಿಗೊಡುವ ಗೋಜಿಗೆ ಹೋಗದೇ ಪ್ರತಿಭಟನೆಗಳನ್ನು ಹತ್ತಿಕ್ಕುವುದರಲ್ಲೇ ನಿರತರಾಗಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಮೋದಿ ಹಿರಿಯಣ್ಣ, ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ: ಕೇಜ್ರಿವಾಲ್‌

ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಅಪಘಾತ : ಶಸ್ತ್ರಚಿಕಿತ್ಸೆ ಮುಗಿಸಿ ಆ್ಯಂಬುಲೆನ್ಸ್​ನಲ್ಲೇ ಪರೀಕ್ಷೆ ಬರೆದ ಸಾಹಸಿ

ಅಭಿವೃದ್ಧಿಯ ಮಾರ್ಗವೂ ಕಾರ್ಪೋರೇಟ್ ಬಂಡವಾಳವೂ ಸಮಾಜದ ಮೇಲ್ವರ್ಗಕ್ಕೆ ಮಾತ್ರವೇ ನಿಲುಕುವ ಅಭಿವೃದ್ಧಿ ಮಾದರಿಗಳೇ ನವಉದಾರವಾದದ ಜೀವಾಳ

ಪ್ರತಿಭಟನಾಕಾರರನ್ನು ದಮನ ಮಾಡಲು ಹೊರಟಿರುವ ಪೊಲೀಸರಿಗೆ ಸಾಥ್ ನೀಡುತ್ತಿರುವ ಈ ನಾಯಕರು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವಂತಹ ಪ್ರಕ್ರಿಯೆಗೆ ಧ್ವನಿಗೂಡಿಸುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ಹೊಣೆಗೇಡಿ ಪೊಲೀಸ್ ಅಧಿಕಾರಿಯೊಬ್ಬರು ಸಿಎಎ ಮತ್ತು ಎನ್ಆರ್ ಸಿಗೆ ವಿರೋಧ ವ್ಯಕ್ತಪಡಿಸುವವರೆಲ್ಲಾ ಪಾಕಿಸ್ತಾನಕ್ಕೆ ಹೋಗಿ ಎಂದು ನೀಡಿರುವ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರೆ ಉತ್ತರ ಪ್ರದೇಶ ಸರ್ಕಾರ ಮಾತ್ರ ಈ ಅಧಿಕಾರಿ ಬೆಂಬಲಕ್ಕೆ ನಿಂತಿದೆ.

ಅಧಿಕಾರಿ ನೀಡಿದ ಹೇಳಿಕೆಯಲ್ಲಿ ಯಾವುದೇ ರೀತಿಯ ತಪ್ಪಿಲ್ಲ. ಅಧಿಕಾರಿ ಸರಿಯಾಗಿಯೇ ಹೇಳಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಪೊಲೀಸ್ ಅಧಿಕಾರಿ ಬೆನ್ನಿಗೆ ನಿಂತಿದ್ದಾರೆ.

ಪೊಲೀಸ್ ಅಧಿಕಾರಿ ನೀಡಿರುವ ಹೇಳಿಕೆ ಸರಿಯಾಗಿದ್ದು, ಅವರು ನೀಡಿರುವುದು ಎಲ್ಲಾ ಮುಸ್ಲಿಂರಿಗಲ್ಲ. ಕೆಲವು ದೇಶದ್ರೋಹ ಮತ್ತು ದೇಶದ ಜನತೆಗೆ ಅನುಕೂಲವಾಗುವಂತಹ ಕಾನೂನುಗಳ ವಿರುದ್ಧ ಧ್ವನಿ ಎತ್ತಿರುವವರಿಗೆ ಮಾತ್ರ ಹೇಳಿರುವುದು ಎಂದು ಸಮರ್ಥಿಸಿಕೊಂಡಿದ್ದಾರೆ.

ಪೊಲೀಸ್ ಅಧಿಕಾರಿ ಪ್ರತಿಭಟನಾಕಾರರನ್ನು ಉದ್ದೇಶಿಸುತ್ತಾ ನೀವು CAA & NRCಗೆ ವಿರೋಧ ವ್ಯಕ್ತಪಡಿಸಿದರೆ ಮತ್ತು ಪಾಕಿಸ್ತಾನದ ಪರ ಘೋಷಣೆ ಕೂಗುವುದಾದರೆ, ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಿಕೆ ನೀಡಿದ್ದರು. ಈ ವಿಡೀಯೋ ಬಹಿರಂಗಗೊಂಡು ತೀವ್ರ ಟೀಕೆಗೆ ಗುರಿಯಾಗಿತ್ತು.

ಇದನ್ನು ಸಮರ್ಥಿಸಿಕೊಂಡಿರುವ ಮೌರ್ಯ ಅವರು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಪಾಕಿಸ್ತಾನದ ಪರವಾದ ಘೋಷಣೆ ಕೂಗಿದ್ದ ಪ್ರತಿಭಟನಾಕಾರರಿಗೆ ಪಾಕಿಸ್ತಾನಕ್ಕೆ ಹೋಗಿ ಎಂದು ಪೊಲೀಸ್ ಅಧಿಕಾರಿ ಹೇಳಿದ್ದರು. ಭಾರತದಲ್ಲಿದ್ದುಕೊಂಡು ಪಾಕಿಸ್ತಾನ ಪರವಾದ ಘೋಷಣೆ ಕೂಗುವುದಾದರೆ ಆ ದೇಶಕ್ಕೆ ಹೋಗಿ ವಾಸ ಮಾಡಲಿ ಎಂಬರ್ಥದಲ್ಲಿ ಹೇಳಿದ್ದಾರೆ. ಇದರಲ್ಲಿ ತಪ್ಪು ಕಂಡುಹಿಡಿಯವುದೇ ಒಂದು ತಪ್ಪು ಎಂದು ಹೇಳಿದ್ದಾರೆ.

ಇಲ್ಲಿರುವ ಪ್ರಶ್ನೆಯೆಂದರೆ ಪ್ರತಿಭಟನಾಕಾರರಲ್ಲಿ ಕೆಲವರು ಹೊಣೆಗೇಡಿಗಳಿರುತ್ತಾರೆ. ಅವರು ಪ್ರತಿಭಟನೆ ಮಾಡುವ ಭರಾಟೆಯಲ್ಲಿ ಹಲವು ವಿಧದ ಘೋಷಣೆಗಳನ್ನು ಕೂಗುತ್ತಾರೆ. ಹಾಗಂತ, ಜವಾಬ್ದಾರಿಯುತ ಸ್ಥಾನದಲ್ಲಿರುವ ಅದರಲ್ಲೂ ಶಾಂತಿ ಸುವ್ಯವಸ್ಥೆ ಕಾಪಾಡುವ ಒಬ್ಬ ಪೊಲೀಸ್ ಅಧಿಕಾರಿ ಸಾರ್ವಜನಿಕರಿಗೆ ನೀವು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸರಿ? ಹೀಗೆ ಹೇಳಿಕೆ ಕೊಡುತ್ತಾ ಹೋದರೆ ಸರ್ಕಾರಿ ಅಧಿಕಾರಿಗಳಿಗೂ ರಾಜಕಾರಣಿಗಳೂ ವ್ಯತ್ಯಾಸ ಎಲ್ಲಿರುತ್ತದೆ? ಪ್ರತಿಭಟನೆಯನ್ನು ತಹಬದಿಗೆ ತರಬೇಕಾಗಿರುವ ಪೊಲೀಸರೇ ಪ್ರತಿಭಟನೆಯನ್ನು ಪ್ರಚೋದಿಸುವ ರೀತಿಯಲ್ಲಿ ಹೇಳಿಕೆಗಳನ್ನು ಕೊಟ್ಟರೆ ಪರಿಣಾಮ ಏನಾಗುತ್ತದೆ? ಎಂಬ ಅರಿವು ಇಟ್ಟುಕೊಳ್ಳಬೇಕಾಗುತ್ತದೆ.

ಒಂದು ವೇಳೆ ಕೆಲವು ಪ್ರತಿಭಟನಾಕಾರರು ಪಾಕಿಸ್ತಾನದ ಪರವಾದ ಘೋಷಣೆಗಳನ್ನು ಕೂಗಿದರೆ ಅಂತಹವರನ್ನು ದೇಶದ್ರೋಹದ ಆರೋಪದಲ್ಲಿ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಲು ಕಾನೂನಿನಲ್ಲಿ ಅವಕಾಶವಿದೆ. ಅದನ್ನು ಬಿಟ್ಟು ನೀವು ಪಾಕಿಸ್ತಾನಕ್ಕೆ ಹೋಗಿ, ಮತ್ತೊಂದು ದೇಶಕ್ಕೆ ಹೋಗಿ ಎಂದು ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡಿದರೆ ಪ್ರತಿಭಟನೆಯ ಕಿಚ್ಚಿಗೆ ಮತ್ತಷ್ಟು ತುಪ್ಪ ಸುರಿದಂತಾಗುತ್ತದೆ. ಇಂತಹ ಸಾಮಾನ್ಯ ಪ್ರಜ್ಞೆಯನ್ನೂ ಇಟ್ಟುಕೊಳ್ಳದಿರುವ ಪೊಲೀಸ್ ಅಧಿಕಾರಿಗಳಿಂದ ಸಾರ್ವಜನಿಕರು ಯಾವ ರೀತಿ ನ್ಯಾಯ ಪಡೆಯಲು ಸಾಧ್ಯ?

ಅದೇ ರೀತಿ ಇಂತಹ ಹೊಣೆಗೇಡಿ ಪೊಲೀಸ್ ಅಧಿಕಾರಿಗಳ ಬೆನ್ನಿಗೆ ನಿಲ್ಲುವ ಬದಲು ಆಡಳಿತ ನಡೆಸುವವರು ಅವರಿಗೆ ಎಚ್ಚರಿಕೆ ಕೊಟ್ಟು ಕಾನೂನು ಸುವ್ಯವಸ್ಥೆ ಕಾಪಾಡಿ ಎಂದು ತಾಕೀತು ಮಾಡಬೇಕಾಗುತ್ತದೆ. ಆದರೆ, ಮುಸ್ಲಿಂ ವಿರೋಧಿ ಮಂತ್ರವನ್ನೇ ಜಪಿಸುವ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ರಾಜಕಾರಣಿಗಳಿಂದ ಇದನ್ನು ಬಯಸುವುದಾದರೂ ಹೇಗೆ?

ಪ್ರತಿಭಟನಾಕಾರರು ಮುಸ್ಲಿಂರು ಎಂಬ ಕಾರಣಕ್ಕೆ ಈ ರಾಜಕಾರಣಿಗಳು ಪೊಲೀಸರ ಬೆನ್ನಿಗೆ ನಿಂತು ಅವರನ್ನು ಮತ್ತಷ್ಟು ಪ್ರಚೋದನೆಗೆ ಒಳಪಡಿಸುವುದು ದುರದೃಷ್ಠಕರ.

ಕೃಪೆ: ದಿ ವೈರ್

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

K. S. Eshwarappa | ಬಿಜೆಪಿ ಮಹಾಸಂಗಮ ಐತಿಹಾಸಿಕ ಸಮಾವೇಶಕ್ಕೆ ಚಾಲನೆ
ಇದೀಗ

K. S. Eshwarappa | ಬಿಜೆಪಿ ಮಹಾಸಂಗಮ ಐತಿಹಾಸಿಕ ಸಮಾವೇಶಕ್ಕೆ ಚಾಲನೆ

by ಪ್ರತಿಧ್ವನಿ
March 23, 2023
ʼಕೆ ಜಿ ಎಫ್ʼ ,  ʼಕಾಂತಾರ ʼ ಚಿತ್ರಗಳ ನಂತರ ಭಾರತದಾದ್ಯಂತ ಕನ್ನಡದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಹಾರಿಸಿದ “ಕಬ್ಜ”..  KABZAA ‘Box Office’ Collection..!
ಸಿನಿಮಾ

ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸಿದ ʻಕಬ್ಜʼ.. ಮೊದಲ ದಿನದ ಕಲೆಕ್ಷನ್‌ ಎಷ್ಟು ಗೊತ್ತಾ..?

by Prathidhvani
March 18, 2023
DK SHIVAKUMAR | ಬಿಜೆಪಿ ಎಸ್ ಸಿ ಎಸ್ ಟಿ ಅವರಿಗೆ ತುಂಬಾ ಮೋಸ ಮಾಡಿದೆ #PRATIDHVANI
ಇದೀಗ

DK SHIVAKUMAR | ಬಿಜೆಪಿ ಎಸ್ ಸಿ ಎಸ್ ಟಿ ಅವರಿಗೆ ತುಂಬಾ ಮೋಸ ಮಾಡಿದೆ #PRATIDHVANI

by ಪ್ರತಿಧ್ವನಿ
March 23, 2023
SIDDARAMAIAH VS DK SHIVAKUMAR | ಇನ್ನೂ ಮುಗಿಯದ ಸಿದ್ದರಾಮಯ್ಯ ಕ್ಷೇತ್ರ ಗೊಂದಲ #PRATIDHVANI
ಇದೀಗ

SIDDARAMAIAH VS DK SHIVAKUMAR | ಇನ್ನೂ ಮುಗಿಯದ ಸಿದ್ದರಾಮಯ್ಯ ಕ್ಷೇತ್ರ ಗೊಂದಲ #PRATIDHVANI

by ಪ್ರತಿಧ್ವನಿ
March 23, 2023
Fact Check : ಪ್ರಧಾನಿ ನರೇಂದ್ರ ಮೋದಿಗೆ ನೋಬೆಲ್ ಶಾಂತಿ​ ಪ್ರಶಸ್ತಿ.. ಸುಳ್ಳಿನ ಹಿಂದಿನ ಸತ್ಯ..
Top Story

Fact Check : ಪ್ರಧಾನಿ ನರೇಂದ್ರ ಮೋದಿಗೆ ನೋಬೆಲ್ ಶಾಂತಿ​ ಪ್ರಶಸ್ತಿ.. ಸುಳ್ಳಿನ ಹಿಂದಿನ ಸತ್ಯ..

by ಪ್ರತಿಧ್ವನಿ
March 17, 2023
Next Post
ಬದಲಾದ ಎಐಸಿಸಿ: ಕೆಪಿಸಿಸಿ ಆಯ್ಕೆ ತೀರ್ಪಿಗೆ ಮುನ್ನ ವಾದ ಆಲಿಸಲು ನಿರ್ಧಾರ

ಬದಲಾದ ಎಐಸಿಸಿ: ಕೆಪಿಸಿಸಿ ಆಯ್ಕೆ ತೀರ್ಪಿಗೆ ಮುನ್ನ ವಾದ ಆಲಿಸಲು ನಿರ್ಧಾರ

ಮಂಗಳೂರು ಗೋಲಿಬಾರ್:  ಮಾನವ ಹಕ್ಕುಗಳ ಆಯೋಗಕ್ಕೆ ದೂರು‌ ದಾಖಲು 

ಮಂಗಳೂರು ಗೋಲಿಬಾರ್: ಮಾನವ ಹಕ್ಕುಗಳ ಆಯೋಗಕ್ಕೆ ದೂರು‌ ದಾಖಲು 

ಮನೆ ಖರೀದಿ ಮಾಡ್ತೀರಾ? ಇನ್ಮುಂದೆ ಶೇ.7.90 ಬಡ್ಡಿದರಕ್ಕೆ ಗೃಹ ಸಾಲ!

ಮನೆ ಖರೀದಿ ಮಾಡ್ತೀರಾ? ಇನ್ಮುಂದೆ ಶೇ.7.90 ಬಡ್ಡಿದರಕ್ಕೆ ಗೃಹ ಸಾಲ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist