• Home
  • About Us
  • ಕರ್ನಾಟಕ
Thursday, November 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಸೇನೆ ಜತೆ ಮೈತ್ರಿ ಅನಿವಾರ್ಯವಾಗಿತ್ತು : ಪವಾರ್  

by
December 10, 2019
in ದೇಶ
0
ಸೇನೆ ಜತೆ ಮೈತ್ರಿ ಅನಿವಾರ್ಯವಾಗಿತ್ತು : ಪವಾರ್  
Share on WhatsAppShare on FacebookShare on Telegram

ಮಹಾರಾಷ್ಟ್ರದಲ್ಲಿ ಪ್ರತಿಪಕ್ಷಗಳ ಮೈತ್ರಿ ಸರ್ಕಾರದ ಮಾತುಕತೆ ನಡೆದಿದ್ದ ಸೂಕ್ಷ್ಮ ಸನ್ನಿವೇಶದಲ್ಲಿ ಈ ಭೇಟಿ ನಡೆಯಿತು. ಅದು ತಪ್ಪು ಸಂದೇಶಗಳನ್ನು ಕಳಿಸುವುದೆಂದು ನಿಮಗೆ ಅನಿಸಲಿಲ್ಲವೇ?
ಯಾರಾದರೂ ಹಾಗೆ ಯೋಚಿಸಿದರೆ ಅದು ಅವರ ತಲೆನೋವೇ ವಿನಾ ನನ್ನದಲ್ಲ. ಪ್ರಧಾನಿಯವರೊಂದಿಗೆ ನನ್ನ ವ್ಯಕ್ತಿಗತ ಸಂಬಂಧ ಚೆನ್ನಾಗಿದೆ. ನಾನು ಕೇಂದ್ರ ಸರ್ಕಾರದಲ್ಲಿದ್ದಾಗ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದರು. ಆಗ ಅವರ ಕುರಿತು ಕೇಂದ್ರ ಸರ್ಕಾರಕ್ಕೆ ಅಸಂತೋಷವಿತ್ತು. ಕೇಂದ್ರ ಕೃಷಿ ಮಂತ್ರಿಯಾಗಿ ನಾನು ಹಲವಾರು ಬಾರಿ ಗುಜರಾತಿಗೆ ಭೇಟಿ ನೀಡಿದ್ದು ಕಾಂಗ್ರೆಸ್ಸಿನ ಎಲ್ಲ ಸಚಿವರಿಗೂ ಅಸಮಾಧಾನ ಉಂಟು ಮಾಡಿತ್ತು. ಆದರೆ ಸಚಿವನಾಗಿ ನನ್ನ ಕರ್ತವ್ಯವನ್ನು ನಿಭಾಯಿಸಿದೆ ಅಷ್ಟೇ. ತಾವು ಪ್ರಧಾನಿಯಾದ ನಂತರ ಮೋದಿಯವರು ನನ್ನ ಕ್ಷೇತ್ರದಲ್ಲಿ ಮಾಡಿರುವ ಒಳ್ಳೆಯ ಅಭಿವೃದ್ಧಿ ಕೆಲಸಗಳನ್ನು ನೋಡಲು ಬರುವುದಾಗಿ ಹೇಳಿ ಬಂದರು. ಒಳ್ಳೆಯ ಮಾತಾಡಿದರು. ಆದರೆ ಚುನಾವಣೆ ಸಂದರ್ಭದಲ್ಲಿ ಬಂದು ನನ್ನ ಮೇಲೆ ದಾಳಿ ನಡೆಸಿದರು. ತಮ್ಮ ಪಕ್ಷದ ನಾಯಕರಾಗಿ ಅವರು ದಾಳಿ ಮಾಡಿದ್ದನ್ನು ನಾನು ತಪ್ಪು ತಿಳಿದುಕೊಳ್ಳಲಿಲ್ಲ. ಪ್ರಧಾನಿಯಾಗಿ ಮತ್ತು ಆಡಳಿತಗಾರನಾಗಿ ಒಳ್ಳೆಯದನ್ನು ಗುರುತಿಸಿ ಮೆಚ್ಚಲು ಅವರು ಹಿಂಜರಿಯುವುದಿಲ್ಲ. ಈ ಎರಡರ ನಡುವಣ ವ್ಯತ್ಯಾಸವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.

ADVERTISEMENT

ನೀವು ಪ್ರಧಾನಿಯವರನ್ನು ಭೇಟಿ ಮಾಡಿದ ಕುರಿತು ಚರ್ಚೆಯಾಗಿದೆ?
ಭೇಟಿ ಮಾಡಿದೆ ಹೌದು. ಅದರಲ್ಲೇನು ತಪ್ಪಿದೆ? ನಾನು ಪ್ರಧಾನಿಯನ್ನು ಭೇಟಿಯಾಗಿದ್ದ ಉದ್ದೇಶ, ಅವರನ್ನು ಅಂತಾರಾಷ್ಟ್ರೀಯ ಸಕ್ಕರೆ ಸಮ್ಮೇಳನಕ್ಕೆ ಆಹ್ವಾನಿಸುವುದಷ್ಟೇ ಆಗಿತ್ತು. ಆದರೆ ಭೇಟಿಯಲ್ಲಿ ಇತರೆ ಮಾತುಕತೆಗಳೂ ತೂರಿ ಬರುತ್ತವೆ. ಕಾಂಗ್ರೆಸ್-ಶಿವಸೇನೆಯ ಜೊತೆ ಸರ್ಕಾರ ರಚಿಸುವ ಕುರಿತು ಇನ್ನೊಮ್ಮೆ ಆಲೋಚಿಸುವುದು ಸಾಧ್ಯವೇ ಎಂದು ಅವರು ಕೇಳಿದ್ದು ಹೌದು. ಆದರೆ ಕಾಂಗ್ರೆಸ್-ಸೇನೆಯ ಜೊತೆ ಸರ್ಕಾರ ರಚಿಸುವುದು ನನ್ನ ಸಹೋದ್ಯೋಗಿಗಳು ಕೈಗೊಂಡ ಪ್ರಜ್ಞಾಪೂರ್ವಕ ನಿರ್ಧಾರ ಎಂದು ಅವರಿಗೆ ತಿಳಿಸಿದೆ. ಅವರ ಆಹ್ವಾನವನ್ನು ತಿರಸ್ಕರಿಸಿದೆ ಎಂಬುದು ದುರಹಂಕಾರದ ಮಾತಾಗುತ್ತದೆ. ಅದು ನನ್ನ ಚಾಳಿಯಲ್ಲ. ಭಾರತದ ಪ್ರಧಾನಿಯನ್ನು ನಾನ್ಯಾಕೆ ತಿರಸ್ಕರಿಸಲಿ? ಅಂತಿಮವಾಗಿ ಪ್ರಧಾನಿ ಎಂಬ ಪದವಿಗೆ ಗೌರವ ನೀಡಬೇಕಾಗುತ್ತದೆ.

ಅವರೇನಂದರು?
ಬಿಜೆಪಿ ಜೊತೆ ಸೇರಿ ಕೆಲಸ ಮಾಡಬೇಕೆಂಬುದು ಅವರ ಸಲಹೆಯಾಗಿತ್ತು… ಸಾಧ್ಯವಿಲ್ಲ ಎಂದಾಗ ಮತ್ತೊಮ್ಮೆ ಆಲೋಚಿಸಿ ಎಂದರು. ನಾನು ಮತ್ತು ನನ್ನ ಸಹೋದ್ಯೋಗಿಗಳು ನಿರ್ಧಾರ ಮಾಡಿಯಾಗಿದೆ ಎಂದೆ.

ನಿಮ್ಮ ಮಗಳು ಸುಪ್ರಿಯಾ ಸುಳೆಯವರಿಗೆ ಕೇಂದ್ರ ಸಚಿವ ಸ್ಥಾನ ಕೊಡುತ್ತೇನೆ ಎಂದರೇ?
ಇಲ್ಲ, ಇಲ್ಲ. ಆಕೆ ಒಳ್ಳೆಯ ಸಂಸದೀಯ ಪಟುವೆಂದೂ, ನಿಮ್ಮೊಂದಿಗೆ ಆಕೆಯ ಪ್ರತಿಭೆ ವ್ಯರ್ಥವಾಗಬಾರದೆಂದೂ ಅವರು ಕಳೆದ ಐದು ವರ್ಷಗಳಿಂದ ಲಘು ಹಾಸ್ಯದ ಧಾಟಿಯಲ್ಲಿ ಹೇಳುತ್ತ ಬಂದಿದ್ದಾರೆ. ಆ ದಿನವೂ ಅದನ್ನೇ ಹೇಳಿದರು. ಆಕೆ ಯಾಕೆ ಕಾಲಹರಣ ಮಾಡುತ್ತಿದ್ದಾಳೆ, ಆಕೆಯ ಸೇವೆಯನ್ನು ರಾಷ್ಟ್ರಮಟ್ಟದಲ್ಲಿ ಉಪಯೋಗಿಸಿಕೊಳ್ಳಬಹುದು ಎಂದರು.

ಆರ್ಥಿಕ ವಲಯದಲ್ಲಿ ತಪ್ಪುಗಳಾಗಿದ್ದರೂ ಮೋದಿ ವರ್ಚಸ್ಸು ಮುಂದುವರೆದಿರುವ ಕಾರಣ ಏನಿದ್ದೀತು?
ಅವರು ತಮ್ಮ ಪಕ್ಷದ ಸರ್ವೋಚ್ಚ ನಾಯಕ. ಸರ್ಕಾರದ ಮುಖ್ಯಸ್ಥ. ಅವರ ಕೆಲವು ವಿಚಾರಗಳನ್ನು ನಾವು ಒಪ್ಪುವುದಿಲ್ಲ. ಟೀಕಿಸುತ್ತೇವೆ ಕೂಡ. ಆದರೆ ಹಲವಾರು ಅಪ್ರಿಯ ನಿರ್ಧಾರಗಳ ನಂತರವೂ ಜನ ಯಾಕೆ ಅವರ ವಿರುದ್ಧ ತಿರುಗಿಲ್ಲ? ಯಾಕೆಂದರೆ ಜನ ಪರ್ಯಾಯವನ್ನು ನಿರೀಕ್ಷಿಸುತ್ತಿದ್ದಾರೆ. ಪರ್ಯಾಯವೊಂದನ್ನು ಕೊಡುತ್ತೇವೆ ಎಂದು ಜನರಿಗೆ ಭರವಸೆ ನೀಡುವಲ್ಲಿ ಯಾರಾದರೂ ಯಶಸ್ಸು ಕಂಡಿದ್ದಾರೆಯೇ?

ಹಾಗಾದರೆ ತಪ್ಪು ಯಾರದು?
ಪ್ರತಿಪಕ್ಷಗಳಲ್ಲಿರುವ ನಮ್ಮೆಲ್ಲರದೂ ತಪ್ಪೇ. ಎ ಎಂಬ ಮನುಷ್ಯ ತಪ್ಪಿತಸ್ಥನೆಂದು ಜನರಿಗೆ ಮನವರಿಕೆ ಮಾಡಿಸಿ, ಬಿ ಎಂಬುವನಾದ ನಾನು ಯಶಸ್ವೀ ಬದಲಿ ವ್ಯವಸ್ಥೆಯನ್ನು ನೀಡಬಲ್ಲೆ, ನನಗೆ ಜನ ಸಮೂಹಗಳ ಬೆಂಬಲ ಇದೆ ಎಂಬ ವಿಶ್ವಾಸವನ್ನು ಯಾರಾದರೂ ಜನರಲ್ಲಿ ಮೂಡಿಸಿದ್ದಾರೆಯೇ? ಪ್ರತಿಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು, ಹೋರಾಡಬೇಕು. ಆ ದಿಸೆಯಲ್ಲಿ ಪ್ರಯತ್ನ ಜರುಗಿದ್ದಲ್ಲಿ, ಅದರೊಂದಿಗೆ ಸೇರಿಕೊಳ್ಳುವುದು ನನ್ನ ಕರ್ತವ್ಯ.

ಪಕ್ಷ ಮತ್ತು ಸರ್ಕಾರದಲ್ಲಿ ಅಜಿತ್ ಪವಾರ್ ಪಾತ್ರವೇನು? ನಿಮ್ಮ ನಂತರ ಪಕ್ಷದ ನಾಯಕತ್ವ ಅವರದು ಎನ್ನುವ ಮಾತುಗಳಿದ್ದವು. ಇದೀಗ ನಿಮ್ಮ ಮಗಳು ಸುಪ್ರಿಯಾ ನಾಯಕತ್ವಕ್ಕೆ ಅಜಿತ್ ಪ್ರತಿಸ್ಫರ್ಧಿ ಎನ್ನಲಾಗುತ್ತಿದೆ?
ಸರ್ಕಾರದಲ್ಲಿ ಅಜಿತ್ ಪಾತ್ರ ಏನೆಂದು ಹೇಳಲಾರೆ. ಪಕ್ಷದಲ್ಲಿ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನಾಯಕತ್ವ ಯಾರದೆಂದು ಅಂತಿಮವಾಗಿ ನಿರ್ಧರಿಸುವವರು ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು. ಅಂದ ಹಾಗೆ ನನ್ನ ಆರೋಗ್ಯ ಇನ್ನೂ ಚೆನ್ನಾಗಿಯೇ ಇದೆ (ನಗು). ಸುಪ್ರಿಯಾ ಆಲೋಚನೆ ಬೇರೆಯೇ ಇದೆ, ಒಳ್ಳೆಯ ಸಂಸದೀಯ ಪಟುವಾಗಬೇಕು, ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಬೇಕು ಎಂದು.

Tags: Ajith PawarAmith ShaDevendra FadnavesMaharastra PoliticsNarendra ModiNCP PartyPresident RuleSharad Pawarಅಜಿತ್ ಪವಾರ್ಅಮಿತ್ ಶಾಎನ್ ಸಿಪಿಕೇಂದ್ರ ಬಿಜೆಪಿ ಸರ್ಕಾರದೇವೇಂದ್ರ ಫಡ್ನಾವಿಸ್ನರೇಂದ್ರ ಮೋದಿಮಹಾರಾಷ್ಟ್ರ ರಾಜಕಾರಣರಾಷ್ಟ್ರಪತಿ ಆಳ್ವಿಕೆಶರದ್ ಪವಾರ್
Previous Post

ರಾಜ್ಯ ಕಾಂಗ್ರೆಸ್ ನಾಯಕರ ಒಳಬೇಗುದಿ ಪಕ್ಷವನ್ನೇ ಹಾಳು ಮಾಡುವಷ್ಟಿದೆಯೇ?

Next Post

`ಆರೋಪಿಗಳಿಗೆ ಶಿಕ್ಷೆ ಕೋರ್ಟ್‌ನಿಂದ ಆಗಬೇಕೇ ಹೊರತು ಪೊಲೀಸರಿಂದಲ್ಲ’

Related Posts

ಉಗ್ರ ಕೃತ್ಯಕ್ಕೆ ಸಂಚು: 5 ರಾಜ್ಯಗಳಲ್ಲಿ NIA ಶೋಧ
ಇತರೆ / Others

ಉಗ್ರ ಕೃತ್ಯಕ್ಕೆ ಸಂಚು: 5 ರಾಜ್ಯಗಳಲ್ಲಿ NIA ಶೋಧ

by ಪ್ರತಿಧ್ವನಿ
November 13, 2025
0

ಬಾಂಗ್ಲಾ ವಲಸಿಗರಿಂದ ಭಯೋತ್ಪಾದನಾ ಕೃತ್ಯಕ್ಕೆ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ 5 ರಾಜ್ಯಗಳ 10 ಸ್ಥಳಗಳಲ್ಲಿ ಶೋಧ ನಡೆಸಿದೆ. ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳ...

Read moreDetails
ಚುನಾವಣೆ ಸಮಯದಲ್ಲೇ ಭಯೋತ್ಪಾದಕರ ದಾಳಿ ಯಾಕೆ?: ನೆಟ್ಟಿಗರ ಪ್ರಶ್ನೆಗೆ ಉತ್ತರಿಸೋರ್ಯಾರು..?

ಚುನಾವಣೆ ಸಮಯದಲ್ಲೇ ಭಯೋತ್ಪಾದಕರ ದಾಳಿ ಯಾಕೆ?: ನೆಟ್ಟಿಗರ ಪ್ರಶ್ನೆಗೆ ಉತ್ತರಿಸೋರ್ಯಾರು..?

November 12, 2025
ಮಾಧ್ಯಮ ಸ್ವಾತಂತ್ರ್ಯವೂ-ನೈತಿಕ ಜವಾಬ್ದಾರಿಯೂ

ಮಾಧ್ಯಮ ಸ್ವಾತಂತ್ರ್ಯವೂ-ನೈತಿಕ ಜವಾಬ್ದಾರಿಯೂ

November 12, 2025
ಬಿಹಾರ Exit Poll: ಅಧಿಕಾರದತ್ತ ಎನ್‌ಡಿಎ..ಮಹಾಘಟಬಂಧನ್‌ಗೆ ತೀವ್ರ ಹಿನ್ನಡೆ

ಬಿಹಾರ Exit Poll: ಅಧಿಕಾರದತ್ತ ಎನ್‌ಡಿಎ..ಮಹಾಘಟಬಂಧನ್‌ಗೆ ತೀವ್ರ ಹಿನ್ನಡೆ

November 11, 2025

ಮಂಡ್ಯ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಿದ ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್..!!

November 11, 2025
Next Post
`ಆರೋಪಿಗಳಿಗೆ ಶಿಕ್ಷೆ ಕೋರ್ಟ್‌ನಿಂದ ಆಗಬೇಕೇ ಹೊರತು ಪೊಲೀಸರಿಂದಲ್ಲ’

`ಆರೋಪಿಗಳಿಗೆ ಶಿಕ್ಷೆ ಕೋರ್ಟ್‌ನಿಂದ ಆಗಬೇಕೇ ಹೊರತು ಪೊಲೀಸರಿಂದಲ್ಲ’

Please login to join discussion

Recent News

ಕಾಂಗ್ರೆಸ್​​ ಮತ್ತೆ ವೈಟ್‌ವಾಶ್ ಆಗುತ್ತೋ ಏನೋ ಗೊತ್ತಿಲ್ಲ: ಮಾಜಿ ಸಚಿವ ರಾಜಣ್ಣ ಅಚ್ಚರಿ ಹೇಳಿಕೆ
Top Story

ಕಾಂಗ್ರೆಸ್​​ ಮತ್ತೆ ವೈಟ್‌ವಾಶ್ ಆಗುತ್ತೋ ಏನೋ ಗೊತ್ತಿಲ್ಲ: ಮಾಜಿ ಸಚಿವ ರಾಜಣ್ಣ ಅಚ್ಚರಿ ಹೇಳಿಕೆ

by ಪ್ರತಿಧ್ವನಿ
November 13, 2025
ಒಬ್ಬ ಯುವಕ 7 ಮತದಾರರ ಚೀಟಿಗಳು, ದಂಗಾದ ಕಾಂಗ್ರೆಸ್‌..!
Top Story

ಒಬ್ಬ ಯುವಕ 7 ಮತದಾರರ ಚೀಟಿಗಳು, ದಂಗಾದ ಕಾಂಗ್ರೆಸ್‌..!

by ಪ್ರತಿಧ್ವನಿ
November 13, 2025
ಇಂದಿನ ರಾಶಿ ಭವಿಷ್ಯ: ಹೊಸ ಹೂಡಿಕೆಯಲ್ಲಿ ಎಚ್ಚರ ವಹಿಸಬೇಕಾದ ರಾಶಿಗಳಿವು..!
Top Story

ಇಂದಿನ ರಾಶಿ ಭವಿಷ್ಯ: ಹೊಸ ಹೂಡಿಕೆಯಲ್ಲಿ ಎಚ್ಚರ ವಹಿಸಬೇಕಾದ ರಾಶಿಗಳಿವು..!

by ಪ್ರತಿಧ್ವನಿ
November 13, 2025
ಕರ್ನಾಟಕದಲ್ಲಿ ವ್ಯಾಪಾರ, ಬಂಡವಾಳ ಹೂಡಿಕೆಗೆ ಸಿಂಗಾಪುರ ಉತ್ಸುಕ: ಡಿಸಿಎಂ ಡಿ.ಕೆ. ಶಿವಕುಮಾರ್
Top Story

ಕರ್ನಾಟಕದಲ್ಲಿ ವ್ಯಾಪಾರ, ಬಂಡವಾಳ ಹೂಡಿಕೆಗೆ ಸಿಂಗಾಪುರ ಉತ್ಸುಕ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
November 12, 2025
ಸತ್ವ ಗ್ರೂಪ್ ನ ಅಶ್ವಿನ್ ಸಂಚೆಟಿ ಪೊಲೀಸರ ವಶಕ್ಕೆ
Top Story

ಸತ್ವ ಗ್ರೂಪ್ ನ ಅಶ್ವಿನ್ ಸಂಚೆಟಿ ಪೊಲೀಸರ ವಶಕ್ಕೆ

by ಪ್ರತಿಧ್ವನಿ
November 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಾಂಗ್ರೆಸ್​​ ಮತ್ತೆ ವೈಟ್‌ವಾಶ್ ಆಗುತ್ತೋ ಏನೋ ಗೊತ್ತಿಲ್ಲ: ಮಾಜಿ ಸಚಿವ ರಾಜಣ್ಣ ಅಚ್ಚರಿ ಹೇಳಿಕೆ

ಕಾಂಗ್ರೆಸ್​​ ಮತ್ತೆ ವೈಟ್‌ವಾಶ್ ಆಗುತ್ತೋ ಏನೋ ಗೊತ್ತಿಲ್ಲ: ಮಾಜಿ ಸಚಿವ ರಾಜಣ್ಣ ಅಚ್ಚರಿ ಹೇಳಿಕೆ

November 13, 2025
ಒಬ್ಬ ಯುವಕ 7 ಮತದಾರರ ಚೀಟಿಗಳು, ದಂಗಾದ ಕಾಂಗ್ರೆಸ್‌..!

ಒಬ್ಬ ಯುವಕ 7 ಮತದಾರರ ಚೀಟಿಗಳು, ದಂಗಾದ ಕಾಂಗ್ರೆಸ್‌..!

November 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada