Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಸೇನೆ ಜತೆ ಮೈತ್ರಿ ಅನಿವಾರ್ಯವಾಗಿತ್ತು : ಪವಾರ್  

ಸೇನೆ ಜತೆ ಮೈತ್ರಿ ಅನಿವಾರ್ಯವಾಗಿತ್ತು : ಪವಾರ್
ಸೇನೆ ಜತೆ ಮೈತ್ರಿ ಅನಿವಾರ್ಯವಾಗಿತ್ತು : ಪವಾರ್  
Pratidhvani Dhvani

Pratidhvani Dhvani

December 10, 2019
Share on FacebookShare on Twitter

ಮಹಾರಾಷ್ಟ್ರದಲ್ಲಿ ಪ್ರತಿಪಕ್ಷಗಳ ಮೈತ್ರಿ ಸರ್ಕಾರದ ಮಾತುಕತೆ ನಡೆದಿದ್ದ ಸೂಕ್ಷ್ಮ ಸನ್ನಿವೇಶದಲ್ಲಿ ಈ ಭೇಟಿ ನಡೆಯಿತು. ಅದು ತಪ್ಪು ಸಂದೇಶಗಳನ್ನು ಕಳಿಸುವುದೆಂದು ನಿಮಗೆ ಅನಿಸಲಿಲ್ಲವೇ?
ಯಾರಾದರೂ ಹಾಗೆ ಯೋಚಿಸಿದರೆ ಅದು ಅವರ ತಲೆನೋವೇ ವಿನಾ ನನ್ನದಲ್ಲ. ಪ್ರಧಾನಿಯವರೊಂದಿಗೆ ನನ್ನ ವ್ಯಕ್ತಿಗತ ಸಂಬಂಧ ಚೆನ್ನಾಗಿದೆ. ನಾನು ಕೇಂದ್ರ ಸರ್ಕಾರದಲ್ಲಿದ್ದಾಗ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದರು. ಆಗ ಅವರ ಕುರಿತು ಕೇಂದ್ರ ಸರ್ಕಾರಕ್ಕೆ ಅಸಂತೋಷವಿತ್ತು. ಕೇಂದ್ರ ಕೃಷಿ ಮಂತ್ರಿಯಾಗಿ ನಾನು ಹಲವಾರು ಬಾರಿ ಗುಜರಾತಿಗೆ ಭೇಟಿ ನೀಡಿದ್ದು ಕಾಂಗ್ರೆಸ್ಸಿನ ಎಲ್ಲ ಸಚಿವರಿಗೂ ಅಸಮಾಧಾನ ಉಂಟು ಮಾಡಿತ್ತು. ಆದರೆ ಸಚಿವನಾಗಿ ನನ್ನ ಕರ್ತವ್ಯವನ್ನು ನಿಭಾಯಿಸಿದೆ ಅಷ್ಟೇ. ತಾವು ಪ್ರಧಾನಿಯಾದ ನಂತರ ಮೋದಿಯವರು ನನ್ನ ಕ್ಷೇತ್ರದಲ್ಲಿ ಮಾಡಿರುವ ಒಳ್ಳೆಯ ಅಭಿವೃದ್ಧಿ ಕೆಲಸಗಳನ್ನು ನೋಡಲು ಬರುವುದಾಗಿ ಹೇಳಿ ಬಂದರು. ಒಳ್ಳೆಯ ಮಾತಾಡಿದರು. ಆದರೆ ಚುನಾವಣೆ ಸಂದರ್ಭದಲ್ಲಿ ಬಂದು ನನ್ನ ಮೇಲೆ ದಾಳಿ ನಡೆಸಿದರು. ತಮ್ಮ ಪಕ್ಷದ ನಾಯಕರಾಗಿ ಅವರು ದಾಳಿ ಮಾಡಿದ್ದನ್ನು ನಾನು ತಪ್ಪು ತಿಳಿದುಕೊಳ್ಳಲಿಲ್ಲ. ಪ್ರಧಾನಿಯಾಗಿ ಮತ್ತು ಆಡಳಿತಗಾರನಾಗಿ ಒಳ್ಳೆಯದನ್ನು ಗುರುತಿಸಿ ಮೆಚ್ಚಲು ಅವರು ಹಿಂಜರಿಯುವುದಿಲ್ಲ. ಈ ಎರಡರ ನಡುವಣ ವ್ಯತ್ಯಾಸವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.

ಹೆಚ್ಚು ಓದಿದ ಸ್ಟೋರಿಗಳು

ಸಂಪುಟ ಸಭೆಯಲ್ಲಿ ಅಗಲಿದ ಮಕ್ಕಳನ್ನು ನೆನೆದು ಕಣ್ಣೀರಿಟ್ಟ ಸಿಎಂ ಏಕನಾಥ್ ಶಿಂಧೆ

ಸಿಎಂ ಕೇಜ್ರಿವಾಲ್ ನಿವಾಸ ಧ್ವಂಸ ಪ್ರಕರಣ : ಸತತ 2 ಗಂಟೆಗಳ ಕಾಲ ವಿಚಾರಣೆ ಎದುರಿಸಿದ ತೇಜಸ್ವಿ ಸೂರ್ಯ!

ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಮಾತ್ರ PSI ಹಗರಣ ಬಗ್ಗೆ ನಿಷ್ಪಕ್ಷಪಾತ ತನಿಖೆ ಸಾಧ್ಯ : ರಾಹುಲ್‌ ಗಾಂಧಿ

ನೀವು ಪ್ರಧಾನಿಯವರನ್ನು ಭೇಟಿ ಮಾಡಿದ ಕುರಿತು ಚರ್ಚೆಯಾಗಿದೆ?
ಭೇಟಿ ಮಾಡಿದೆ ಹೌದು. ಅದರಲ್ಲೇನು ತಪ್ಪಿದೆ? ನಾನು ಪ್ರಧಾನಿಯನ್ನು ಭೇಟಿಯಾಗಿದ್ದ ಉದ್ದೇಶ, ಅವರನ್ನು ಅಂತಾರಾಷ್ಟ್ರೀಯ ಸಕ್ಕರೆ ಸಮ್ಮೇಳನಕ್ಕೆ ಆಹ್ವಾನಿಸುವುದಷ್ಟೇ ಆಗಿತ್ತು. ಆದರೆ ಭೇಟಿಯಲ್ಲಿ ಇತರೆ ಮಾತುಕತೆಗಳೂ ತೂರಿ ಬರುತ್ತವೆ. ಕಾಂಗ್ರೆಸ್-ಶಿವಸೇನೆಯ ಜೊತೆ ಸರ್ಕಾರ ರಚಿಸುವ ಕುರಿತು ಇನ್ನೊಮ್ಮೆ ಆಲೋಚಿಸುವುದು ಸಾಧ್ಯವೇ ಎಂದು ಅವರು ಕೇಳಿದ್ದು ಹೌದು. ಆದರೆ ಕಾಂಗ್ರೆಸ್-ಸೇನೆಯ ಜೊತೆ ಸರ್ಕಾರ ರಚಿಸುವುದು ನನ್ನ ಸಹೋದ್ಯೋಗಿಗಳು ಕೈಗೊಂಡ ಪ್ರಜ್ಞಾಪೂರ್ವಕ ನಿರ್ಧಾರ ಎಂದು ಅವರಿಗೆ ತಿಳಿಸಿದೆ. ಅವರ ಆಹ್ವಾನವನ್ನು ತಿರಸ್ಕರಿಸಿದೆ ಎಂಬುದು ದುರಹಂಕಾರದ ಮಾತಾಗುತ್ತದೆ. ಅದು ನನ್ನ ಚಾಳಿಯಲ್ಲ. ಭಾರತದ ಪ್ರಧಾನಿಯನ್ನು ನಾನ್ಯಾಕೆ ತಿರಸ್ಕರಿಸಲಿ? ಅಂತಿಮವಾಗಿ ಪ್ರಧಾನಿ ಎಂಬ ಪದವಿಗೆ ಗೌರವ ನೀಡಬೇಕಾಗುತ್ತದೆ.

ಅವರೇನಂದರು?
ಬಿಜೆಪಿ ಜೊತೆ ಸೇರಿ ಕೆಲಸ ಮಾಡಬೇಕೆಂಬುದು ಅವರ ಸಲಹೆಯಾಗಿತ್ತು… ಸಾಧ್ಯವಿಲ್ಲ ಎಂದಾಗ ಮತ್ತೊಮ್ಮೆ ಆಲೋಚಿಸಿ ಎಂದರು. ನಾನು ಮತ್ತು ನನ್ನ ಸಹೋದ್ಯೋಗಿಗಳು ನಿರ್ಧಾರ ಮಾಡಿಯಾಗಿದೆ ಎಂದೆ.

ನಿಮ್ಮ ಮಗಳು ಸುಪ್ರಿಯಾ ಸುಳೆಯವರಿಗೆ ಕೇಂದ್ರ ಸಚಿವ ಸ್ಥಾನ ಕೊಡುತ್ತೇನೆ ಎಂದರೇ?
ಇಲ್ಲ, ಇಲ್ಲ. ಆಕೆ ಒಳ್ಳೆಯ ಸಂಸದೀಯ ಪಟುವೆಂದೂ, ನಿಮ್ಮೊಂದಿಗೆ ಆಕೆಯ ಪ್ರತಿಭೆ ವ್ಯರ್ಥವಾಗಬಾರದೆಂದೂ ಅವರು ಕಳೆದ ಐದು ವರ್ಷಗಳಿಂದ ಲಘು ಹಾಸ್ಯದ ಧಾಟಿಯಲ್ಲಿ ಹೇಳುತ್ತ ಬಂದಿದ್ದಾರೆ. ಆ ದಿನವೂ ಅದನ್ನೇ ಹೇಳಿದರು. ಆಕೆ ಯಾಕೆ ಕಾಲಹರಣ ಮಾಡುತ್ತಿದ್ದಾಳೆ, ಆಕೆಯ ಸೇವೆಯನ್ನು ರಾಷ್ಟ್ರಮಟ್ಟದಲ್ಲಿ ಉಪಯೋಗಿಸಿಕೊಳ್ಳಬಹುದು ಎಂದರು.

ಆರ್ಥಿಕ ವಲಯದಲ್ಲಿ ತಪ್ಪುಗಳಾಗಿದ್ದರೂ ಮೋದಿ ವರ್ಚಸ್ಸು ಮುಂದುವರೆದಿರುವ ಕಾರಣ ಏನಿದ್ದೀತು?
ಅವರು ತಮ್ಮ ಪಕ್ಷದ ಸರ್ವೋಚ್ಚ ನಾಯಕ. ಸರ್ಕಾರದ ಮುಖ್ಯಸ್ಥ. ಅವರ ಕೆಲವು ವಿಚಾರಗಳನ್ನು ನಾವು ಒಪ್ಪುವುದಿಲ್ಲ. ಟೀಕಿಸುತ್ತೇವೆ ಕೂಡ. ಆದರೆ ಹಲವಾರು ಅಪ್ರಿಯ ನಿರ್ಧಾರಗಳ ನಂತರವೂ ಜನ ಯಾಕೆ ಅವರ ವಿರುದ್ಧ ತಿರುಗಿಲ್ಲ? ಯಾಕೆಂದರೆ ಜನ ಪರ್ಯಾಯವನ್ನು ನಿರೀಕ್ಷಿಸುತ್ತಿದ್ದಾರೆ. ಪರ್ಯಾಯವೊಂದನ್ನು ಕೊಡುತ್ತೇವೆ ಎಂದು ಜನರಿಗೆ ಭರವಸೆ ನೀಡುವಲ್ಲಿ ಯಾರಾದರೂ ಯಶಸ್ಸು ಕಂಡಿದ್ದಾರೆಯೇ?

ಹಾಗಾದರೆ ತಪ್ಪು ಯಾರದು?
ಪ್ರತಿಪಕ್ಷಗಳಲ್ಲಿರುವ ನಮ್ಮೆಲ್ಲರದೂ ತಪ್ಪೇ. ಎ ಎಂಬ ಮನುಷ್ಯ ತಪ್ಪಿತಸ್ಥನೆಂದು ಜನರಿಗೆ ಮನವರಿಕೆ ಮಾಡಿಸಿ, ಬಿ ಎಂಬುವನಾದ ನಾನು ಯಶಸ್ವೀ ಬದಲಿ ವ್ಯವಸ್ಥೆಯನ್ನು ನೀಡಬಲ್ಲೆ, ನನಗೆ ಜನ ಸಮೂಹಗಳ ಬೆಂಬಲ ಇದೆ ಎಂಬ ವಿಶ್ವಾಸವನ್ನು ಯಾರಾದರೂ ಜನರಲ್ಲಿ ಮೂಡಿಸಿದ್ದಾರೆಯೇ? ಪ್ರತಿಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು, ಹೋರಾಡಬೇಕು. ಆ ದಿಸೆಯಲ್ಲಿ ಪ್ರಯತ್ನ ಜರುಗಿದ್ದಲ್ಲಿ, ಅದರೊಂದಿಗೆ ಸೇರಿಕೊಳ್ಳುವುದು ನನ್ನ ಕರ್ತವ್ಯ.

ಪಕ್ಷ ಮತ್ತು ಸರ್ಕಾರದಲ್ಲಿ ಅಜಿತ್ ಪವಾರ್ ಪಾತ್ರವೇನು? ನಿಮ್ಮ ನಂತರ ಪಕ್ಷದ ನಾಯಕತ್ವ ಅವರದು ಎನ್ನುವ ಮಾತುಗಳಿದ್ದವು. ಇದೀಗ ನಿಮ್ಮ ಮಗಳು ಸುಪ್ರಿಯಾ ನಾಯಕತ್ವಕ್ಕೆ ಅಜಿತ್ ಪ್ರತಿಸ್ಫರ್ಧಿ ಎನ್ನಲಾಗುತ್ತಿದೆ?
ಸರ್ಕಾರದಲ್ಲಿ ಅಜಿತ್ ಪಾತ್ರ ಏನೆಂದು ಹೇಳಲಾರೆ. ಪಕ್ಷದಲ್ಲಿ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನಾಯಕತ್ವ ಯಾರದೆಂದು ಅಂತಿಮವಾಗಿ ನಿರ್ಧರಿಸುವವರು ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು. ಅಂದ ಹಾಗೆ ನನ್ನ ಆರೋಗ್ಯ ಇನ್ನೂ ಚೆನ್ನಾಗಿಯೇ ಇದೆ (ನಗು). ಸುಪ್ರಿಯಾ ಆಲೋಚನೆ ಬೇರೆಯೇ ಇದೆ, ಒಳ್ಳೆಯ ಸಂಸದೀಯ ಪಟುವಾಗಬೇಕು, ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಬೇಕು ಎಂದು.

RS 500
RS 1500

SCAN HERE

don't miss it !

ತೆಲಂಗಾಣ, ಪಶ್ಚಿಮ ಬಂಗಾಳದಲ್ಲಿ ಕುಟುಂಬ ರಾಜಕಾರಣವನ್ನು ಕೊನೆಗೊಳಿಸುತ್ತೇವೆ : ಅಮಿತ್ ಶಾ
ದೇಶ

ತೆಲಂಗಾಣ, ಪಶ್ಚಿಮ ಬಂಗಾಳದಲ್ಲಿ ಕುಟುಂಬ ರಾಜಕಾರಣವನ್ನು ಕೊನೆಗೊಳಿಸುತ್ತೇವೆ : ಅಮಿತ್ ಶಾ

by ಪ್ರತಿಧ್ವನಿ
July 3, 2022
ದೇಶದ ಅತ್ಯಂತ ದುಬಾರಿ ನಗರಿ ಮುಂಬೈ!
ದೇಶ

ದೇಶದ ಅತ್ಯಂತ ದುಬಾರಿ ನಗರಿ ಮುಂಬೈ!

by ಪ್ರತಿಧ್ವನಿ
June 30, 2022
ಮಹಾರಾಷ್ಟ್ರ ರಾಜಕೀಯ : ವಿಶ್ವಾಸಮತ ಗೆದ್ದ ಏಕನಾಥ್ ಶಿಂಧೆ!
ದೇಶ

ಮಹಾರಾಷ್ಟ್ರ ರಾಜಕೀಯ : ವಿಶ್ವಾಸಮತ ಗೆದ್ದ ಏಕನಾಥ್ ಶಿಂಧೆ!

by ಪ್ರತಿಧ್ವನಿ
July 4, 2022
ಜಲಧಾರೆಯಂತೆ ಜನತಾ ಮಿತ್ರ ಕಾರ್ಯಕ್ರಮವೂ ಯಶಸ್ವಿಯಾಗಲಿದೆ : ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ
ಕರ್ನಾಟಕ

ಜಲಧಾರೆಯಂತೆ ಜನತಾ ಮಿತ್ರ ಕಾರ್ಯಕ್ರಮವೂ ಯಶಸ್ವಿಯಾಗಲಿದೆ : ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
June 29, 2022
ಬಂಡಾಯ ಶಾಸಕರ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಠಾಕ್ರೆ ಬಣ : ಜುಲೈ 4ರಂದು ಏಕನಾಥ್ ಶಿಂಧೆಗೆ ಅಗ್ನಿಪರೀಕ್ಷೆ!
ದೇಶ

ಬಂಡಾಯ ಶಾಸಕರ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಠಾಕ್ರೆ ಬಣ : ಜುಲೈ 4ರಂದು ಏಕನಾಥ್ ಶಿಂಧೆಗೆ ಅಗ್ನಿಪರೀಕ್ಷೆ!

by ಪ್ರತಿಧ್ವನಿ
July 1, 2022
Next Post
`ಆರೋಪಿಗಳಿಗೆ ಶಿಕ್ಷೆ ಕೋರ್ಟ್‌ನಿಂದ ಆಗಬೇಕೇ ಹೊರತು ಪೊಲೀಸರಿಂದಲ್ಲ’

`ಆರೋಪಿಗಳಿಗೆ ಶಿಕ್ಷೆ ಕೋರ್ಟ್‌ನಿಂದ ಆಗಬೇಕೇ ಹೊರತು ಪೊಲೀಸರಿಂದಲ್ಲ’

ಎನ್ ಕೌಂಟರ್ ನಕಲಿಯೋ? ಅಸಲಿಯೋ?: ತನಿಖೆಯಾಗಲಿ

ಎನ್ ಕೌಂಟರ್ ನಕಲಿಯೋ? ಅಸಲಿಯೋ?: ತನಿಖೆಯಾಗಲಿ

ಪಕ್ಷಾಂತರ ನಿಷೇಧ ಕಾಯ್ದೆ ಕಠಿಣವಾಗಲಿ: ನ್ಯಾ. ಎನ್ ಸಂತೋಷ್ ಹೆಗ್ಡೆ  

ಪಕ್ಷಾಂತರ ನಿಷೇಧ ಕಾಯ್ದೆ ಕಠಿಣವಾಗಲಿ: ನ್ಯಾ. ಎನ್ ಸಂತೋಷ್ ಹೆಗ್ಡೆ  

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist