Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ವೋಟ್‌ ಹಾಕಲು ಕನ್ನಡಿಗರು.. ಜೈಕಾರಕ್ಕೆ ಮಹಾರಾಷ್ಟ್ರ.. ಇದು ರಾಜಕಾರಣಿಗಳ ಲೆಕ್ಕಾಚಾರ..!

ವೋಟ್‌ ಹಾಕಲು ಕನ್ನಡಿಗರು.. ಜೈಕಾರಕ್ಕೆ ಮಹಾರಾಷ್ಟ್ರ.. ಇದು ರಾಜಕಾರಣಿಗಳ ಲೆಕ್ಕಾಚಾರ..!
ವೋಟ್‌ ಹಾಕಲು ಕನ್ನಡಿಗರು.. ಜೈಕಾರಕ್ಕೆ ಮಹಾರಾಷ್ಟ್ರ.. ಇದು ರಾಜಕಾರಣಿಗಳ ಲೆಕ್ಕಾಚಾರ..!

February 28, 2020
Share on FacebookShare on Twitter

ಬಿಜೆಪಿ ಶಾಸಕರು ಉನ್ನತ ಮಟ್ಟಕ್ಕೆ ಏರಬೇಕು, ಉನ್ನತ ಹುದ್ದೆ ಪಡೆಯಬೇಕು ಎಂದರೆ ಸಂಘ ಪರಿವಾರದ ಆಶೀರ್ವಾದ ಇರಲೇಬೇಕು ಎನ್ನುವುದು ಎಲ್ಲರಿಗೂ ಗೊತ್ತಿರೋ ಸಂಗತಿ. ಬಿಜೆಪಿಯ ಮಾತೃ ಸಂಸ್ಥೆ ಆಗಿರುವ ಆರ್‌ಎಸ್‌ಎಸ್‌, ಬಿಜೆಪಿ ಸರ್ಕಾರ ಎಲ್ಲಾ ನಿರೂಪಣೆಯಲ್ಲೂ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದು ತಿಳಿದಿರುವ ವಿಚಾರ. ಕೆಲವು ವಿಚಾರಗಳ ಬಗ್ಗೆ ಆರ್‌ಎಸ್‌ಎಸ್‌ ನಾಯಕರ ಜೊತೆ ಚರ್ಚಿಸಿಯೇ ನಿರ್ಧಾರ ಕೈಗೊಳ್ಳುವ ಪರಿಪಾಠವಿದೆ. ಇದೀಗ ಜೆಡಿಎಸ್‌, ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಹಲವು ನಾಯಕರಿಗೆ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗುವುದಕ್ಕೆ ಸಾಕಷ್ಟು ಕಷ್ಟವಾಗ್ತಿದೆ. ಇದು ಅವರ ನಡೆ ನುಡಿಯಲ್ಲೂ ಆಗಾಗ ವ್ಯಕ್ತವಾಗುತ್ತಲೇ ಇದೆ.

ಹೆಚ್ಚು ಓದಿದ ಸ್ಟೋರಿಗಳು

ಜನೋತ್ಸವವನ್ನ ಮುಂದೂಡಿದ ಬಿಜೆಪಿ

ಬಿಬಿಎಂಪಿ ಚುನಾವಣೆಗೆ ಮೀಸಲಾತಿ ಪಟ್ಟಿ ಅಂತಿಮಗೊಳಿಸಿ ಸರ್ಕಾರ ಆದೇಶ : ಕೈ ನಾಯಕರು ಕೊತಕೊತ

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಫಲಿತಾಂಶ ಪ್ರಕಟ

ಇನ್ನೂ ಕೆಲವು ನಾಯಕರು ಇದೀಗ ಬಿಜೆಪಿ ಸೇರ್ಪಡೆಯಾಗಿದ್ದರೂ ಬಿ.ಎಸ್‌ ಯಡಿಯೂರಪ್ಪ ಕೊಟ್ಟಿದ್ದ ಆಶ್ವಾಸನೆಯಿಂದ ಮಂತ್ರಿಗಳಾಗಿದ್ದಾರೆ. ಈ ಅವಧಿ ಮುಗಿದರೆ ಬಿ.ಎಸ್‌. ಯಡಿಯೂರಪ್ಪ ಮೂಲೆ ಗುಂಪಾಗುವುದು ಶತಸಿದ್ಧ. ಆ ಬಳಿಕ ಪಕ್ಷದಲ್ಲಿ ಏನಾದರೂ ಸಾಧಿಸಬೇಕು ಎಂದರೆ ಸಂಘ ಪರಿವಾರದ ಕೃಪೆ ಇರಲೇಬೇಕೆಂಬುದನ್ನು ಮನಗಂಡು ಸಂಘ ಪರಿವಾರವನ್ನು ಮೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಮೊದಲಿಗ ಎಂದರೆ ಕೆ.ಆರ್‌. ಪೇಟೆಯಿಂದ ಉಪಚುನಾವಣೆಯಲ್ಲಿ ಗೆದ್ದು ಸಚಿವರಾಗಿರುವ ನಾರಾಯಣಗೌಡ. ಹಾಗು ಯಶವಂತಪುರ ಕ್ಷೇತ್ರದ ಎಸ್‌.ಟಿ. ಸೋಮಶೇಖರ್‌.

ಮುಂಬೈನಲ್ಲಿ ಹೋಟೆಲ್‌ ಉದ್ಯಮಿ ಆಗಿರುವ ಕೆ.ಆರ್‌. ಪೇಟೆ ತಾಲೂಕಿನ ಕೈಗೋನಹಳ್ಳಿಯ ನಾರಾಯಣಗೌಡ, ಅಲ್ಲಿಂದ ಮತ್ತೆ ತವರೂರಿಗೆ ವಾಪಸ್‌ ಬಂದು ಜೆಡಿಎಸ್‌ ಟಿಕೆಟ್‌ ಗಿಟ್ಟಿಸಿ ಶಾಸಕರಾಗಿದ್ದರು. ಎರಡು ಬಾರಿ ಶಾಸಕರಾದ ಬಳಿಕ ಆಪರೇಷನ್‌ ಕಮಲ ಮೂಲಕ ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ. ಇದೀಗ ಗೆದ್ದು ಬಿಜೆಪಿಯಿಂದ ಸಚಿವರಾಗಿದ್ದಾರೆ. ಇದೀಗ ಸಂಘ ಪರಿವಾರವನ್ನೂ ಸೆಳೆಯಲು ಹಿಂದಿಯಲ್ಲಿ ಭಾಷಣ ಮಾಡಿದ್ದಾರೆ. ಅಷ್ಟೇ ಅಲ್ಲದೆ ಜೈ ಮಹಾರಾಷ್ಟ್ರ, ಜೈ ಶಿವಾಜಿ ಎನ್ನುವ ಮೂಲಕ ಕನ್ನಡಿಗರ ಆಕ್ರೋಶ ಕಾರಣವಾಗಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಆರ್ ಪೇಟೆಯಲ್ಲಿ ಸಚಿವ ನಾರಾಯಣಗೌಡ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಹಿಂದಿಯಲ್ಲೇ ಮಾತನಾಡಿರುವ ಸಚಿವ ನಾರಾಯಣಗೌಡ, ಕೊನೆಯಲ್ಲಿ ಮಹಾರಾಷ್ಟ್ರಕ್ಕೆ ಜೈ ಎಂದು ಮರಾಠ ಪ್ರೇಮ ತೋರಿಸಿದ್ದಾರೆ. ಇಂದು ನಾನು ಏನೇ ಆಗಿದ್ದರು ಅದು ಮಹಾರಾಷ್ಟ್ರದಿಂದ ಮಾತ್ರ. ಕಳೆದ 35 ವರ್ಷಗಳ ಹಿಂದೆ ಮುಂಬೈಗೆ ಹೋಗಿದ್ದ ನಾನು ಈಗ ಮಹಾರಾಷ್ಟ್ರದಲ್ಲಿ ದೊಡ್ಡ ಹೋಟೆಲ್‌ ಉದ್ಯಮಿ ಆಗಿದ್ದೇನೆ. ಬಿಲ್ಡರ್ ಕೂಡ ಆಗಿ ಮತ್ತೆ ಇಲ್ಲಿಗೆ ಬಂದು ರಾಜಕಾರಣಿ ಆಗಿದ್ದೇನೆ. ನನ್ನ ದೇಹದಲ್ಲಿ ಏನಾದರೂ ತಾಕತ್ತಿದೆ ಅಂದರೆ ಅದು ಮಹಾರಾಷ್ಟ್ರದಿಂದ ಮಾತ್ರ ಎನ್ನುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕಳೆದ ವಾರ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಪತ್ನಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮಹಾರಾಷ್ಟ್ರಕ್ಕೆ ಜೈ ಎಂದಿದ್ರು. ಯಾವಾಗ ವಿವಾದ ಸ್ವರೂಪ ಪಡೀತೋ ಆಗ ಉಲ್ಟಾ ಹೊಡೆದಿದ್ದ ಶಾಸಕ ಬಸಬರಾಜ್ ಮತ್ತಿಮೂಡ್ ಪತ್ನಿ ಜಯಶ್ರೀ, ನಾನು ಮರಾಠ ಯುವಕ ಮಂಡಳಿ ಆಯೋಜಿಸಿದ್ದ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಮರಾಠಿ ಭಾಷೆಯಲ್ಲಿ ಭಾಷಣ ಮಾಡಿದ ಬಳಿಕ ಜೈ ಶಿವಾಜಿ ಎಂದ ಕೂಡಲೇ ಬಾಯ್ತಪ್ಪಿನಿಂದ ಜೈ ಮಹಾರಾಷ್ಟ್ರ ಎಂದಿದ್ದು. ಉದ್ದೇಶಪೂರ್ವಕವಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದಿದ್ದರು. ಇದೀಗ ಮಿನಿಸ್ಟರ್‌ ಒಬ್ಬರು ಸಂಘ ಪರಿವಾರ ಓಲೈಸಿಕೊಳ್ಳುವ ಉದ್ದೇಶದಿಂದ ಹಿಂದಿಯಲ್ಲಿ ಭಾಷಣ ಮಾಡಿ ಜೈ ಮಹಾರಾಷ್ಟ್ರ, ಜೈ ಶಿವಾಜಿ ಎಂದಿದ್ದಾರೆ ಎಂದು ಆಕ್ರೋಶ ಭುಗಿಲೆದ್ದಿದೆ.

ನಾರಾಯಣಗೌಡ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಮಂಡ್ಯ ಜನರೇ ನಿರ್ಧಾರ ಮಾಡುತ್ತಾರೆ. ಮಂಡ್ಯ ಜಿಲ್ಲೆ ಅಪ್ಪಟ ಕನ್ನಡಿಗರ ನಾಡಾಗಿದೆ. ಮಹಾರಾಷ್ಟ್ರದಲ್ಲಿ ಉದ್ಯಮ ಮೂಲಕ ಹಣ ಮಾಡಿರಬಹುದು. ಆದೇ ದುಡ್ಡಲ್ಲಿ ನಾನು ಜನರನ್ನು ಕೊಂಡುಕೊಂಡಿದ್ದೇನೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮಂಡ್ಯದ ಕೆ.ಆರ್‌ ಪೇಟೆ ಜನರೇ ತಕ್ಕ ಉತ್ತರ ಕೊಡುತ್ತಾರೆ ಎಂದಿದ್ದಾರೆ. ಇನ್ನು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎನ್‌ ನಾರಾಯಣಗೌಡ ಮಾತನಾಡಿ ಕೂಡಲೇ ರಾಜೀನಾಮೆ ಕೊಟ್ಟು ಕನ್ನಡಿಗರ ಕ್ಷಮಾಪಣೆ ಕೇಳಬೇಕು. ಕನ್ನಡಿಗರ ಮನಸ್ಸಿಗೆ ನೋವಾಗುವಂತೆ ಮಾತನಾಡಿರುವುದು ತಪ್ಪು ಎಂದು ಖಂಡಿಸಿದ್ದಾರೆ. ವಿವಾದ ಸ್ವರೂಪ ಪಡೆಯುವ ಮುನ್ನ ಮಂಡ್ಯದಲ್ಲಿ ಮಾತನಾಡಿರುವ ಸಚಿವ ನಾರಾಯಣಗೌಡ ಕನ್ನಡಿಗರ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

ಈ ರೀತಿ ಮರಾಠಿ ಪ್ರೇಮ ಬೆಳಗಾವಿ ರಾಜಕಾರಣಿಗಳಲ್ಲಿ ಆಗಾಗ ಕಾಣಿಸುತ್ತದೆ. ಚುನಾವಣೆ ಘೋಷಣೆಯಾದ ವೇಳೆ ಅಲ್ಲಿನ ರಾಜಕಾರಣಿಗಳು ಮಹಾರಾಷ್ಟಕ್ಕೂ ಜೈ ಎನ್ನುತ್ತಾರೆ. ಅದಕ್ಕೆ ಕಾರಣ ಎಂದರೆ ಬೆಳಗಾವಿ ಗಡಿ ಭಾಗದಲ್ಲಿರುವ ಮರಾಠಿ ಮತದಾರ ಮತಗಳನ್ನು ಗಳಿಸುವ ಉದ್ದೇಶವಿರುತ್ತದೆ. ಆದರೆ ಮಂಡ್ಯದಲ್ಲಿ ಅಪ್ಪಟ ಕನ್ನಡಿಗರೇ ವಾಸ ಮಾಡುತ್ತಿದ್ದು, ಇಲ್ಲಿ ಮರಾಠಿ ಮತದಾರರನ್ನು ಸೆಳೆದು ಗೆಲುವು ಸಾಧಿಸುವ ಯಾವುದೇ ಪ್ರಮೆಯವಿಲ್ಲ. ಆದರೂ ಸಚಿವ ನಾರಾಯಣಗೌಡ ಮರಾಠಿ ಪ್ರೇಮ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ರೂಪು ರೇಷೆ ಸಿದ್ದವಾಗುವಾಗಲೇ ಕ್ಷಮೆ ಕೇಳಿ ನಾರಾಯಣಗೌಡ ಬಚಾವ್‌ ಆಗಿದ್ದಾರೆ.

RS 500
RS 1500

SCAN HERE

[elfsight_youtube_gallery id="4"]

don't miss it !

ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಎಸಿಬಿ ವಶಕ್ಕೆ
ಕರ್ನಾಟಕ

ಲೋಕಾಯುಕ್ತ ವ್ಯಾಪ್ತಿಗೆ ಎಸಿಬಿ: ಹೈಕೋರ್ಟ್‌ ಮಹತ್ವದ ಆದೇಶ

by ಪ್ರತಿಧ್ವನಿ
August 11, 2022
ನಾನು ಉಪ ರಾಷ್ಟ್ರಪತಿ ಆಕಾಂಕ್ಷಿ ಆಗಿರಲಿಲ್ಲ: ನಿತೀಶ್‌ ಕುಮಾರ್‌
ದೇಶ

ನಾನು ಉಪ ರಾಷ್ಟ್ರಪತಿ ಆಕಾಂಕ್ಷಿ ಆಗಿರಲಿಲ್ಲ: ನಿತೀಶ್‌ ಕುಮಾರ್‌

by ಪ್ರತಿಧ್ವನಿ
August 11, 2022
ಗ್ರಾಮಸ್ಥರು, ಗಣ್ಯರ ವಿರೋಧದ ನಡುವೆಯೂ ಗೋಮಾಳ ಭೂಮಿ ಅಕ್ರಮ ಮಂಜೂರಾತಿಗೆ ಕಸರತ್ತು!
ಇದೀಗ

ಗ್ರಾಮಸ್ಥರು, ಗಣ್ಯರ ವಿರೋಧದ ನಡುವೆಯೂ ಗೋಮಾಳ ಭೂಮಿ ಅಕ್ರಮ ಮಂಜೂರಾತಿಗೆ ಕಸರತ್ತು!

by ಪ್ರತಿಧ್ವನಿ
August 15, 2022
ರಾಜ್ಯದ ಆರು ಪೊಲೀಸರಿಗೆ ಗೃಹ ಸಚಿವಾಲಯದ ಪದಕ
ಕರ್ನಾಟಕ

ರಾಜ್ಯದ ಆರು ಪೊಲೀಸರಿಗೆ ಗೃಹ ಸಚಿವಾಲಯದ ಪದಕ

by ಪ್ರತಿಧ್ವನಿ
August 12, 2022
GANESH | GALIPATA 2 | ಥಿಯೇಟರ್ ನಲ್ಲಿ ದೇವ್ಲೇ ಸಾಂಗ್ ಮಜಾ ಕೊಡ್ತು!
ವಿಡಿಯೋ

GANESH | GALIPATA 2 | ಥಿಯೇಟರ್ ನಲ್ಲಿ ದೇವ್ಲೇ ಸಾಂಗ್ ಮಜಾ ಕೊಡ್ತು!

by ಪ್ರತಿಧ್ವನಿ
August 12, 2022
Next Post
ಭಾರತದ ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸುತ್ತಿರುವ ವಕೀಲರು ಮತ್ತು ಕೆಲವು ಪ್ರಕರಣಗಳು

ಭಾರತದ ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸುತ್ತಿರುವ ವಕೀಲರು ಮತ್ತು ಕೆಲವು ಪ್ರಕರಣಗಳು

ಮಹಾದಾಯಿ ನದಿ ವಿವಾದದ ಕುರಿತು ಭಾರತ ಸರ್ಕಾರ ಹೊರಡಿಸಿದ ಗೆಜೆಟ್‌

ಮಹಾದಾಯಿ ನದಿ ವಿವಾದದ ಕುರಿತು ಭಾರತ ಸರ್ಕಾರ ಹೊರಡಿಸಿದ ಗೆಜೆಟ್‌

ಬಿಹಾರದಲ್ಲಿ ಗರಿಗೆದರುವುದೆ ಹೊಸ ರಾಜಕೀಯ ಸಮೀಕರಣ?

ಬಿಹಾರದಲ್ಲಿ ಗರಿಗೆದರುವುದೆ ಹೊಸ ರಾಜಕೀಯ ಸಮೀಕರಣ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist