Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ವೈಯಕ್ತಿಕ ಕೋಪಕ್ಕೆ ಹೊಡೆದಾಡಿ ಸಿಎಎ ಪ್ರತಿಭಟನಾಕಾರರು ಮೃತಪಟ್ಟರು : ಯೋಗಿ ಆದಿತ್ಯನಾಥ್

ವೈಯಕ್ತಿಕ ಕೋಪಕ್ಕೆ ಹೊಡೆದಾಡಿ ಸಿಎಎ ಪ್ರತಿಭಟನಾಕಾರರು ಮೃತಪಟ್ಟರು : ಯೋಗಿ ಆದಿತ್ಯನಾಥ್
ವೈಯಕ್ತಿಕ ಕೋಪಕ್ಕೆ ಹೊಡೆದಾಡಿ ಸಿಎಎ ಪ್ರತಿಭಟನಾಕಾರರು ಮೃತಪಟ್ಟರು : ಯೋಗಿ ಆದಿತ್ಯನಾಥ್

February 22, 2020
Share on FacebookShare on Twitter

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ ಒಂದಲ್ಲ ಒಂದು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾ ತಮ್ಮನ್ನು ಮುಖ್ಯಮಂತ್ರಿ ಮಾಡಿದವರಿಗೆ ಸದಾ ನಿಷ್ಠೆ ತೋರುತ್ತಲೇ ಇದ್ದಾರೆ. ದೆಹಲಿ ಚುನಾವಣೆ ಕಾವಿನಲ್ಲಿ ಗುಂಡಿನ ಮೊರೆತ ಕೇಳುತ್ತಿದ್ದರೆ, ಜನ ಭಯಭೀತರಾಗಿದ್ದರು. ಆದರೆ ಇಂತಹ ಘಟನೆಗಳಿಂದ ಕಳವಳ ಪಡಬೇಕಿದ್ದ ಆದಿತ್ಯನಾಥ್‌ ಚುನಾವಣಾ ರ್ಯಾಲಿಯಲ್ಲಿ ʻಬೋಲಿ ಸೇ ನಹೀ ಗೋಲಿ ಸೆ ಸಾಮ್ನಾ ಕರ್ನಾ ಪಡೆಗಾʼ ಎಂದು ಪ್ರಚೋದನಾತ್ಮಕವಾದ ಹೇಳಿಕೆಯನ್ನು ನೀಡಿದ್ದರು. ಶಾಹೀನ್‌ ಭಾಗ್‌ ಪ್ರತಿಭಟನಾಕಾರರನ್ನ ತರಾಟೆಗೆ ತೆಗೆದುಕೊಂಡು ಅವರ ಅಸಲಿಯತ್ತು ಸಿಎಎ ವಿರೋಧಿ ಹೋರಾಟ ಅಲ್ಲ, ಕಾಶ್ಮೀರದಲ್ಲಿ ವಿಶೇಷಾಧಿಕಾರ ತೆರವು ಮಾಡಿದ್ದು, ಸುಪ್ರೀಂಕೋರ್ಟ್‌ ರಾಮಜನ್ಮ ಭೂಮಿ ತೀರ್ಪನ್ನ ನಮ್ಮ ಪರವಾಗಿ ನೀಡಿದ್ದು, ನಮ್ಮ ಸರ್ಕಾರ ತ್ರಿವಳಿ ತಲಾಖ್‌ ರದ್ದು ಮಾಡಿರುವುದು ಎಂದು ಹೇಳಿದ್ದರು.

ಹೆಚ್ಚು ಓದಿದ ಸ್ಟೋರಿಗಳು

ಕೆಲವು ರಾಷ್ಟ್ರಗಳು ಅಜೆಂಡಾ ನಿರ್ಧರಿಸಿ, ಉಳಿದವರು ಅನುಸರಿಸುವ ಕಾಲ ಮುಗಿದಿದೆ: ಜೈಶಂಕರ್

ಸುಪ್ರೀಂ ಕೋರ್ಟ್ ಗಮನ ಸೆಳೆಯಲು ಬೀದಿಗಿಳಿದು ಹೋರಾಟ ಅನಿವಾರ್ಯ: ಬಸವರಾಜ ಬೊಮ್ಮಾಯಿ

ತಮಿಳುನಾಡಿನಲ್ಲಿ ಬಿಜೆಪಿ ಜತೆಗಿನ ಬಾಂಧವ್ಯವನ್ನು ಕಳೆದುಕೊಳ್ಳುತ್ತೇನೆ : ಉದಯನಿಧಿ ಸ್ಟಾಲಿನ್

ಇಷ್ಟಕ್ಕೂ ಸುಮ್ಮನಾಗದೇ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಕಾಶ್ಮೀರ ವಿಶೇಷ ಕಾಯ್ದೆ ರದ್ಧತಿ ವಿರೋಧಿಸಿ ಪಾಕಿಸ್ತಾನದ ಪರ ನಿಂತಿದ್ದಾರೆ ಎಂದು ಬಿಟ್ಟಿದ್ದರು. ಈ ತರಹದ ಹೇಳಿಕೆಗಳು ಸಾಕಷ್ಟು ನೀಡಿದ್ದಾರೆ ಇನ್ನೂ ನೀಡುತ್ತಾ ಇದ್ದಾರೆ. ಈಗ ಬಹಳ ಆಶ್ಚರ್ಯ ಎನ್ನುವ ಹಾಗೆ ತಮ್ಮ ರಾಜ್ಯದಲ್ಲಿ ಸಿಎಎ ವಿರುದ್ದ ನಡೆದ ಪ್ರತಿಭಟನೆಗಳಲ್ಲಿ ಯಾವುದೇ ಹಿಂಸಾಚಾರ ನಡೆದಿಲ್ಲ, ಸಾವು ನೋವುಗಳೇ ಸಂಭವಿಸಿಲ್ಲ, ಪೊಲೀಸರು ಮುಗ್ಧರು ಎನ್ನವಂತೆ ಮಾತನಾಡುತ್ತಿದ್ದಾರೆ. ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿರುವವರಿಗೆ ಪುನಃ ಅದೇ ದಾಟಿಯಲ್ಲಿ ಎಚ್ಚರಿಸಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾದ ದಿನದಿಂದ ಇಲ್ಲಿವರೆಗೆ ಉತ್ತರ ಪ್ರದೇಶದಲ್ಲಿ ಸಾಕಷ್ಟು ಪ್ರತಿಭಟನೆಗಳು ನಡೆದಿವೆ. ಪೊಲೀಸ್‌ ಹಾಗೂ ಪ್ರತಿಭಟನಾಕಾರರ ನಡುವಿನ ಸಂಘರ್ಷದಲ್ಲಿ 20ಕ್ಕೂ ಹೆಚ್ಚು ಜನರು ಮೃತರಾಗಿದ್ದಾರೆ. ಈ ಬಗ್ಗೆ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಉತ್ತರ ನೀಡಿದ ಸಿಎಂ ಯೋಗಿ ಆದಿತ್ಯಾನಾಥ್‌, ಸಿಎಎ ವಿರೋಧಿ ಪ್ರತಿಭಟನಾಕಾರ ಯಾರೂ ಮೃತರಾಗಿಲ್ಲ ಎಂದು ಹೇಳಿಕೆ ನೀಡಿ ದಿಗಿಲು ಬಡಿಸಿದ್ದಾರೆ. ಹಾಗಾದರೆ ಕಳೆದ ಎರಡು ತಿಂಗಳಲ್ಲಿ ಮೃತಪಟ್ಟಿರುವವರು ಅವರೆಲ್ಲಾ ಯಾರು ಎಂಬುದಕ್ಕೆ ಅವರ ಉತ್ತರ ಇನ್ನೂ ಬಾಲಿಶವಾಗಿದೆ. ಉತ್ತರ ಪ್ರದೇಶದಲ್ಲಿ ಯಾವುದೇ ಸಂಘರ್ಷ ಆಗಿಲ್ಲ, ಸಾಯುತ್ತೇನೆ ಎಂದು ಬಂದವರನ್ನ ಯಾರು ತಡೆಯುತ್ತಾರೆ? ಪೊಲೀಸ್‌ ಗುಂಡೇಟಿಗಂತೂ ಯಾರೂ ಪ್ರಾಣ ಬಿಟ್ಟಿಲ್ಲ, ಉಪದ್ರವಿಗಳು ಅವರೇ ಹೊಡೆದುಕೊಂಡು ಸತ್ತಿದ್ದಾರೆ , ನಮ್ಮ ಪೊಲೀಸರನ್ನ ಟೀಕಿಸುವುದರ ಬದಲು ಎಲ್ಲರೂ ಹೊಗಳಬೇಕಿದೆ ಎಂದರು.

ಯೋಗಿ ಆದಿತ್ಯಾನಾಥ್‌ ಇರೋದೇ ಹೀಗೆ, ತಮ್ಮದೇ ಇಲಾಖೆಯ ಅಧಿಕಾರಿಗಳು ಮಾಧ್ಯಮದ ಮುಂದೆ ಏನು ಹೇಳಿದ್ದಾರೆಂಬುದರ ಪರಿವೆಯೇ ಇಲ್ಲ ಎಂಬಂತೆ ಸಾವು ನೋವುಗಳಿಗೆ ಷರಾ ಬರೆದುಬಿಟ್ಟರು. ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಪೊಲೀಸ್‌ ಮಹಾ ನಿರ್ದೇಶಕ ಓ.ಪಿ ಸಿಂಗ್‌ ಇಂಡಿಯಾ ಟುಡೇ ಚಾನೆಲ್‌ಗೆ ಮಾತನಾಡುವಾಗ, ಸುಮಾರು 20 ಜನರು ಸಿಎಎ ವಿರೋಧಿ ಹೋರಾಟದಲ್ಲಿ ಮೃತರಾಗಿದ್ದಾರೆ, ಬಿಜ್ನೋರ್‌, ಕಾನ್‌ಪುರಗಳಲ್ಲಿ ಪೊಲೀಸ್‌ ಫೈರಿಂಗ್‌ ಆಗಿದೆ ಎಂದು ಹೇಳಿದ್ದರು. ಆದರೆ ಇದ್ಯಾವದೂ ತಮ್ಮ ಅರಿವಿಗೆ ಬಂದಿಲ್ಲವೇನೋ ಎಂಬಂತೆ ಮಾತನಾಡುತ್ತಿದ್ದಾರೆ.

ಯೋಗಿ ಆದಿತ್ಯನಾಥ್ ಇಷ್ಟಕ್ಕೇ ಸುಮ್ಮನಾಗಿಲ್ಲ. ವಿಪಕ್ಷಗಳನ್ನ ತರಾಟೆಗೆ ತೆಗೆದುಕೊಂಡು ಸಂವಿಧಾನವನ್ನ ಇಷ್ಟು ವರ್ಷ ಹಾಳುಗೆಡುವಿರುವ ನಿಮ್ಮಿಂದ ಪಾಠ ಕಲಿಯುವುದು ಬೇಕಿಲ್ಲ. ಯಾರಿಗೆ ಯಾವ ತರಹ ಉತ್ತರ ನೀಡಬೇಕೋ ಅದು ನಮಗೆ ಗೊತ್ತಿದೆ ಎಂದು ಸಿಎಎ ವಿರೋಧಿ ಹೋರಾಟಗಾರರಿಗೂ ಎಚ್ಚರಿಸಿದ್ದಾರೆ. ವಾರದ ಹಿಂದೆ ಸಿಎಎ ವಿರೋಧಿ ಹೋರಾಟದಲ್ಲಿ ಆಸ್ತಿ ನಷ್ಟವಾದರೆ ಅದನ್ನ ಹೋರಾಟಗಾರರೇ ಭರಿಸಬೇಕು ಎಂದು ತಾಕೀತು ಮಾಡಿದ್ದನ್ನೂ ಇಲ್ಲಿ ಸ್ಮರಿಸಬಹುದು.

ಉತ್ತರ ಪ್ರದೇಶ ಪೊಲೀಸ್‌ ರಾಜ್ಯವಾಗಿ ಹಲವು ದಶಕಗಳೇ ಕಳೆದಿವೆ, ಅಲ್ಲಿ ಕಾನೂನು ಸುವ್ಯವಸ್ಥೆಗೆ ಅರ್ಥವೇ ಇಲ್ಲವಾಗಿ ಹೋಗುವ ಸಂದರ್ಭ ಎದುರಾಗಿದೆ. ಬಿಜೆಪಿಯ ಯೋಗಿ ಆದಿತ್ಯಾನಾಥ್‌ ಇದರ ಮುಂದುವರಿದ ಭಾಗ ಅಷ್ಟೇ! ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಲ್ಲಿ ಸರ್ಕಾರ ಆರೋಪಿಗಳಿಗೆ ಅಭಯ ನೀಡಿದ್ದು ಕೂಡಾ ಟೀಕೆಗೆ ಗುರಿಯಾಗಿತ್ತು.

RS 500
RS 1500

SCAN HERE

Pratidhvani Youtube

«
Prev
1
/
5518
Next
»
loading
play
Congress | ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಸೇರ್ಪಡೆ | @PratidhvaniNews
play
D K Shivakumar | ಯಾವುದೇ ಕಾರಣಕ್ಕೂನಾವು ಕೆ ಆರ್ ಎಸ್ ಇಂದ ನೀರು ಕೊಡುವ ಸ್ಥಿತಿ ಉದ್ಭವಿಸುವುದಿಲ್ಲ|
«
Prev
1
/
5518
Next
»
loading

don't miss it !

ಬಿಎಸ್‌ ಯಡಿಯೂರಪ್ಪ ಭೇಟಿಯಾದ ನಿಖಿಲ್‌ ಕುಮಾರಸ್ವಾಮಿ
Top Story

ಬಿಎಸ್‌ ಯಡಿಯೂರಪ್ಪ ಭೇಟಿಯಾದ ನಿಖಿಲ್‌ ಕುಮಾರಸ್ವಾಮಿ

by ಪ್ರತಿಧ್ವನಿ
September 25, 2023
ಜಿಲ್ಲೆಯಲ್ಲಿಹೆಚ್ಚಾಗುತ್ತಿರುವ  ಡೆಂಗ್ಯೂ ಪ್ರಕರಣ: ಕಳೆದ 9 ತಿಂಗಳಲ್ಲಿ ಒಟ್ಟು 138 ಪ್ರಕರಣಗಳು ದೃಢ!
Top Story

ಜಿಲ್ಲೆಯಲ್ಲಿಹೆಚ್ಚಾಗುತ್ತಿರುವ ಡೆಂಗ್ಯೂ ಪ್ರಕರಣ: ಕಳೆದ 9 ತಿಂಗಳಲ್ಲಿ ಒಟ್ಟು 138 ಪ್ರಕರಣಗಳು ದೃಢ!

by ಪ್ರತಿಧ್ವನಿ
September 21, 2023
Top Story

ಯುವತಿ ರಾತ್ರಿ ಮಲಗಿದ್ದ ಕೋಣೆಯ ಬಳಿ ಬಂದು ಕಿರುಕುಳ – ನೆರೆಮನೆಯಾತನ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಪ್ರಕರಣ

by ಪ್ರತಿಧ್ವನಿ
September 22, 2023
ಹೈಕಮಾಂಡ್‌  ಒಪ್ಪಿಗೆ ನೀಡಿದ್ರೆ ಡಿಸಿಎಂ  ಆಗ್ತೀನಿ: ಎಂ.ಬಿ ಪಾಟೀಲ್
ಇದೀಗ

ಹೈಕಮಾಂಡ್‌ ಒಪ್ಪಿಗೆ ನೀಡಿದ್ರೆ ಡಿಸಿಎಂ ಆಗ್ತೀನಿ: ಎಂ.ಬಿ ಪಾಟೀಲ್

by ಪ್ರತಿಧ್ವನಿ
September 21, 2023
ರಾಜ್ಯದ ಮೂರನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌: ಸೆ.24ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ
Top Story

ರಾಜ್ಯದ ಮೂರನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌: ಸೆ.24ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ

by ಪ್ರತಿಧ್ವನಿ
September 22, 2023
Next Post
ಕನ್ನಡಿಗರ ನೆಮ್ಮದಿ ಹಾಳು ಮಾಡಲು ಮನೆಹಾಳು ಯೋಜನೆ?

ಕನ್ನಡಿಗರ ನೆಮ್ಮದಿ ಹಾಳು ಮಾಡಲು ಮನೆಹಾಳು ಯೋಜನೆ?

ಸೀ ಕಿಂಗ್‌ ಮತ್ತು ಚೇತಕ್ ಎಂಬ ಆ್ಯಂಟಿಕ್ ಪೀಸ್‌ಗಳಿಗೆ ರಿಲೀಫ್‌ ಕೊಡಲು ಬರುತ್ತಿವೆ MH-60 ಸೀಹಾಕ್‌ಗಳು

ಸೀ ಕಿಂಗ್‌ ಮತ್ತು ಚೇತಕ್ ಎಂಬ ಆ್ಯಂಟಿಕ್ ಪೀಸ್‌ಗಳಿಗೆ ರಿಲೀಫ್‌ ಕೊಡಲು ಬರುತ್ತಿವೆ MH-60 ಸೀಹಾಕ್‌ಗಳು

ಮೋದಿಯೊಂದಿಗೆ CAA ಮತ್ತು NRC ವಿಷಯ ಚರ್ಚಿಸಲಿರುವ ಟ್ರಂಪ್‌

ಮೋದಿಯೊಂದಿಗೆ CAA ಮತ್ತು NRC ವಿಷಯ ಚರ್ಚಿಸಲಿರುವ ಟ್ರಂಪ್‌

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist