Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಮುಖ್ಯಮಂತ್ರಿ ಇದ್ದರೆ ಉಸ್ತುವಾರಿ ಸಚಿವರು ಇರಲ್ಲ, ಇದು ಈಶ್ವರಪ್ಪ ಶಿಷ್ಟಾಚಾರ!

ಮುಖ್ಯಮಂತ್ರಿ ಇದ್ದರೆ ಉಸ್ತುವಾರಿ ಸಚಿವರು ಇರಲ್ಲ, ಇದು ಈಶ್ವರಪ್ಪ ಶಿಷ್ಟಾಚಾರ!
ಮುಖ್ಯಮಂತ್ರಿ ಇದ್ದರೆ ಉಸ್ತುವಾರಿ ಸಚಿವರು ಇರಲ್ಲ

February 25, 2020
Share on FacebookShare on Twitter

ಏನಾಗಿದೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಿಗೆ? ಮುಖ್ಯಮಂತ್ರಿಗಳು ಬಂದಾಗಲೆಲ್ಲಾ ಅನಾರೋಗ್ಯ! ರಾಜ್ಯ ರಾಜಕಾರಣದಲ್ಲಿ ತನ್ನದೇ ಹೆಜ್ಜೆಗುರುತುಗಳನ್ನ ಮೂಡಿಸಿರುವ ಶಿವಮೊಗ್ಗ ಹಲವು ಧೀಮಂತ ನಾಯಕರನ್ನ ಕೊಡುಗೆಯಾಗಿ ನೀಡಿದೆ, ಅಂತವರಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ ಕೂಡ ಒಬ್ಬರು. ಇವರಷ್ಟೇ ಸಮಾನರಾಗಿ ಸ್ನೇಹಿತರಾಗಿ ರಾಜ್ಯ ಬಿಜೆಪಿಯಲ್ಲಿ ಹಿಡಿತ ಸಾಧಿಸಿಕೊಂಡವರು ಕೆ ಎಸ್‌ ಈಶ್ವರಪ್ಪ. ಸಂಘಟನೆಯಲ್ಲೇ ಗುರುತಿಸಿಕೊಂಡು ಬಂದರೂ ಯಡಿಯೂರಪ್ಪ ಹಾಗೂ ಈಶ್ವರಪ್ಪನವರ ಸ್ವಭಾವದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಬಿಜೆಪಿಯಲ್ಲಿ ಈಶ್ವರಪ್ಪನವರು ಯಡಿಯೂರಪ್ಪನವರ ವಿರುದ್ಧ ತಣ್ಣನೆ ಪ್ರತಿಭಟನೆ ಎಬ್ಬಿಸಿ ಸುಮ್ಮನೆ ಕೂತು ಬಿಡುತ್ತಾರೆ, ತಮ್ಮ ಅಸಮಾಧಾನವನ್ನ ಹೊರಹಾಕುತ್ತಲೇ ಇರುತ್ತಾರೆ.

ಹೆಚ್ಚು ಓದಿದ ಸ್ಟೋರಿಗಳು

ಮಳೆಯಿಂದ ಸಂತ್ರಸ್ತರಿಗೆ ಕಾಳಜಿ ಕಿಟ್‌ ವಿತರಣೆ: ಕಂದಾಯ ಸಚಿವ ಆರ್.ಅಶೋಕ್‌

ನೆರೆ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ : ಎಂ.ಬಿ.ಪಾಟೀಲ್

ಚಾಲೆಂಜಿಂಗ್‌ ಸ್ಟಾರ್‌ ವಿರುದ್ದ ಸಮರ ಸಾರಿದ ಅಪ್ಪು ಫ್ಯಾನ್ಸ್

ಸದ್ಯಕ್ಕೆ ಶಿವಮೊಗ್ಗ ಜಿಲ್ಲೆಯ ಪರಿಸ್ಥಿತಿ, ಶಿವಮೊಗ್ಗ ನಗರ ಒಂದು ಪ್ರಾಂತ್ಯ, ಉಳಿದದ್ದು ಇನ್ನೊಂದು ಪ್ರಾಂತ್ಯ ಎಂಬಂತಿದೆ. ಶಿವಮೊಗ್ಗ ನಗರದ ಶಾಸಕ ಕೆಎಸ್‌ ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವರೂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಾರೆ. ಬಿಎಸ್‌ ಯಡಿಯೂರಪ್ಪನವರು ಸಿಎಂ ಆದ ಮೇಲೆ ಸಾಕಷ್ಟು ಅನುದಾನದ ಜೊತೆ ಬೃಹತ್‌ ಅಭಿವೃದ್ಧಿ ಕಾರ್ಯಕ್ರಮಗಳೂ ಜಿಲ್ಲೆಯಲ್ಲಿ ನಡೆದಿವೆ. ಆದರೆ, ಬಿಎಸ್‌ವೈ ಜೊತೆ ಈಶ್ವರಪ್ಪನವರು ಕಾಣಿಸಿಕೊಂಡಿದ್ದು ಒಂದೇ ಕಾರ್ಯಕ್ರಮ, ಅದೂ ಸರ್ಕಾರ ರಚನೆಯಾದ ಸಂದರ್ಭ. ಒಮ್ಮೆ ಅಚಾನಕ್‌ ಆಗಿ ಜಿಲ್ಲಾಪಂಚಾಯತ್‌ ಸಭಾಂಗಣದಲ್ಲಿ ಇಬ್ಬರೂ ನಾಯಕರು ಮುಖಾಮುಖಿಯಾಗಿದ್ದರಷ್ಟೇ. ಇವೆರಡನ್ನು ಹೊರತು ಪಡಿಸಿ ಇಬ್ಬರೂ ಒಟ್ಟಿಗೆ ವೇದಿಕೆ ಹಂಚಿಕೊಂಡ ಸಂದರ್ಭಗಳಿಲ್ಲ.

ಇಬ್ಬರು ನಾಯಕರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸುತ್ತಿಲ್ಲ, ಆದರೆ ಇವರ ನಡುವಿನ ಮನಸ್ಥಾಪಕ್ಕೆ ಪುಷ್ಠಿ ನೀಡುವಂತಹ ಸಂದರ್ಭಗಳು ಜರುಗುತ್ತಲೇ ಇವೆ. ನಿನ್ನೆ ಶಿವಮೊಗ್ಗಲ್ಲಿ ಸುಮಾರು ಒಂದೂವರೆ ಸಾವಿರ ಕೋಟಿ ರೂಪಾಯಿ ಅನುದಾನದ ಕಾರ್ಯಕ್ರಮಗಳಿಗೆ ಸಿಎಂ ಅಡಿಗಲ್ಲು ಹಾಕಿದ್ದಾರೆ. ಸಾವಿರಾರು ಅಭ್ಯರ್ಥಿಗಳು ಹಾಜರಿದ್ದ ಬೃಹತ್‌ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ್ದಾರೆ. ಶಿಕಾರಿಪುರದಲ್ಲಿ ಸಹೋದ್ಯೋಗಿಗಳೆಲ್ಲಾ ಸಿಎಂ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ ಆದರೆ ಶಿಷ್ಟಾಚಾರವಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ, ಗ್ರಾಮೀಣಾಭಿವೃದ್ಧಿ ಸಚಿವ, ಒಂದು ಕಾಲದ ಕುಚುಕು ಗೆಳೆಯ ಈಶ್ವರಪ್ಪನವರು ಮಾತ್ರ ಗೈರು. ಆಪ್ತರು ಹೇಳುವ ಪ್ರಕಾರ ಕೆಎಸ್‌ಇ ಗೆ ಅನಾರೋಗ್ಯವಂತೆ! ಆರೋಗ್ಯ ಯಾವಾಗ ಬೇಕಾದರೂ ಹದಗೆಡಬಹುದು ಆದರೆ ಸಿಎಂ ಕಾರ್ಯಕ್ರಮಗಳಿರುವಾಗ ಹೀಗೇಕೆ? ಎಂಬ ಅನುಮಾನ ಮೂಡುತ್ತೆ. ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲೂ ಕೆಎಸ್‌ಇ ಗೈರಾಗಿದ್ದನ್ನ ನೆನಪು ಮಾಡಿಕೊಳ್ಳಬಹುದು.

ಶಿವಮೊಗ್ಗ ನಗರದಲ್ಲಿ, ನಗರ ವ್ಯಾಪ್ತಿಯಿಂದ ಜಿಲ್ಲಾ ಬಿಜೆಪಿಯ ಪದಾಧಿಕಾರಿಯಾದವರಲ್ಲಿ ಸದಾ ಒಳಜಗಳ ಹಾಗೂ ಮನಸ್ಥಾಪಗಳಿವೆ, ಇಲ್ಲಿ ಬಿಎಸ್‌ವೈ ಹಾಗೂ ಈಶ್ವರಪ್ಪ ಆಪ್ತರೆಂದೇ ಗುರುತಿಸಿಕೊಂಡವರಿದ್ದಾರೆ, ಇನ್ನು ಸಂಘಟನೆಯಿಂದ ಬಂದವರು ಬಿಜೆಪಿ ರಾಜ್ಯಾಧ್ಯಕ್ಷರ ಆಪ್ತರಾಗಿ ಕೆಲವು ಹುದ್ದೆ ಅಲಂಕರಿಸಿಕೊಂಡು ಬಿಎಸ್‌ವೈ ಬಣವನ್ನ ಅನುಮಾನದಿಂದ ನೋಡುವುದು ಇದ್ದೇ ಇದೆ. ಆದರೆ ಸಿಎಂ ಮಾತ್ರ ಸ್ಥಳೀಯ ವಿಷಯಗಳಿಗೆ ತಲೆಕೆಡಿಸಿಕೊಳ್ಳದೇ ಶಿವಮೊಗ್ಗಕ್ಕೆ ಸಾಕಷ್ಟು ಅನುದಾನವನ್ನೂ ತಂದುಕೊಂಡು ಆಯಾ ತಾಲೂಕುಗಳ ಶಾಸಕರ ಜೊತೆ ಕಾರ್ಯಕ್ರಮಗಳನ್ನ ನಡೆಸಿ ಆಚಿಂದಾಚೆ ಶಿಕಾರಿಪುರದಿಂದ ಹೊರಟು ಬಿಡುತ್ತಾರೆ. ವಿಶೇಷವಾಗಿ ಮಧ್ಯ ಕರ್ನಾಟಕದ ಕಾರ್ಯಕ್ರಗಳಿಗೆ ಶಿಕಾರಿಪುರವನ್ನೇ ಕೇಂದ್ರವನ್ನಾಗಿಸಿಕೊಳ್ಳುತ್ತಾರೆ, ಶಿವಮೊಗ್ಗ ನಗರದ ಕಡೆ ಸುಳಿಯುವುದೂ ಕಡಿಮ

ಇತ್ತೀಚೆಗೆ ಶಿವಮೊಗ್ಗ ಮೇಯರ್‌ ಚುನಾವಣೆ ನಡೆಯಿತು, ಈ ಚುನಾವಣೆಯಲ್ಲಿ ಶಿಸ್ತಿನ ಪಕ್ಷ ಬಿಜೆಪಿಯ ಬಣ ರಾಜಕೀಯ ಎಷ್ಟರಮಟ್ಟಿಗೆ ವೈಷಮ್ಯ ಸಾಧಿಸಿತ್ತು ಎಂದರೆ ಎರಡೂ ಬಣದ ಕಾರ್ಪೋರೇಟರ್‌ಗಳು ಮೇಯರ್‌ಗಾದಿಗೆ ಆಪ್ತರ ಮೂಲಕ ಪರಸ್ಪರ ಸುಳ್ಳು ಪ್ರಮಾಣಪತ್ರ ಪ್ರಕರಣ ದಾಖಲಿಸಿಕೊಂಡು ಪ್ರತಿಷ್ಠೆಗೆ ಇಳಿದಿದ್ದರು, ಕೊನೆಗೆ ಮೇಯರ್‌ ಅಭ್ಯರ್ಥಿ ಯೋಗ್ಯತೆ ಹೈಕೋರ್ಟ್‌ನಲ್ಲಿ ಸ್ಟೇ ತರುವ ಮೂಲಕ ತಾತ್ಕಾಲಿಕ ಸಿಂಧುತ್ವ ಪಡೆದುಕೊಂಡಿತು. ಈಶ್ವರಪ್ಪ ಬಣದ ಸುವರ್ಣ ಶಂಕರ್‌ ಮೇಯರ್‌ ಆದರು, ಬಿಎಸ್‌ವೈ ಬಣದಲ್ಲಿ ಗುರುತಿಸಿಕೊಂಡಿದ್ದ ಅನಿತಾ ರವಿಶಂಕರ್‌ ತಣ್ಣಗಾದರು. ಇವೆಲ್ಲಾ ಬಿಎಸ್‌ವೈಗೆ ಗೊತ್ತಿದ್ದರೂ ಗೊತ್ತಿಲ್ಲದ ತರಹ ನಡೆದುಕೊಳ್ಳುತ್ತಾರೆ. ಇಬ್ಬರು ನಾಯಕರಿಗೂ ಎಪ್ಪತ್ತು ದಾಟಿರುವುದರಿಂದ ಪರಸ್ಪರ ಅಸಮಾಧಾನ ಅನವಶ್ಯ.

RS 500
RS 1500

SCAN HERE

don't miss it !

ಏಷ್ಯಾಕಪ್ ಹಾಕಿ: ಭಾರತ-ಪಾಕಿಸ್ತಾನ 1-1 ರೋಚಕ ಡ್ರಾ
ಕ್ರೀಡೆ

ಕಾಮನ್ ವೆಲ್ತ್ ಫೈನಲ್ ಗೆ ಭಾರತ ಪುರುಷ ಹಾಕಿ ತಂಡ ಲಗ್ಗೆ!

by ಪ್ರತಿಧ್ವನಿ
August 5, 2022
ನ್ಯಾನ್ಸಿ ಪೆಲೊಸಿ ಭೇಟಿ ಬೆನ್ನಲ್ಲೇ ತೈವಾನ್  ರಕ್ಷಣಾ ವಲಯಕ್ಕೆ ಚೀನಾದ 21 ಯುದ್ಧ ವಿಮಾನಗಳ ಲಗ್ಗೆ!
ವಿದೇಶ

ನ್ಯಾನ್ಸಿ ಪೆಲೊಸಿ ಭೇಟಿ ಬೆನ್ನಲ್ಲೇ ತೈವಾನ್ ರಕ್ಷಣಾ ವಲಯಕ್ಕೆ ಚೀನಾದ 21 ಯುದ್ಧ ವಿಮಾನಗಳ ಲಗ್ಗೆ!

by ಪ್ರತಿಧ್ವನಿ
August 3, 2022
ಮಹಾರಾಷ್ಟ್ರ ವಿರೋಧಿ ಹೇಳಿಕೆ; ಕ್ಷಮೆಯಾಚಿಸಿದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ
ದೇಶ

ಮಹಾರಾಷ್ಟ್ರ ವಿರೋಧಿ ಹೇಳಿಕೆ; ಕ್ಷಮೆಯಾಚಿಸಿದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ

by ಪ್ರತಿಧ್ವನಿ
August 1, 2022
ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ : ದಾಖಲೆ ನೀಡುವಂತೆ ಬಿಬಿಎಂಪಿ ಕೊಟ್ಟಿದ್ದ ಡೈಡ್ ಲೈನ್ ಮುಕ್ತಾಯ
ಕರ್ನಾಟಕ

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ : ದಾಖಲೆ ನೀಡುವಂತೆ ಬಿಬಿಎಂಪಿ ಕೊಟ್ಟಿದ್ದ ಡೈಡ್ ಲೈನ್ ಮುಕ್ತಾಯ

by ಪ್ರತಿಧ್ವನಿ
August 4, 2022
ಗಣೇಶೋತ್ಸವಕ್ಕೆ ಒಂದು ವಾರ್ಡ್ ಗೆ ಒಂದೇ ಮೂರ್ತಿ : ಬಿಬಿಎಂಪಿಯಿಂದ ಚಿಂತನೆ!
ಕರ್ನಾಟಕ

ಗಣೇಶೋತ್ಸವಕ್ಕೆ ಒಂದು ವಾರ್ಡ್ ಗೆ ಒಂದೇ ಮೂರ್ತಿ : ಬಿಬಿಎಂಪಿಯಿಂದ ಚಿಂತನೆ!

by ಪ್ರತಿಧ್ವನಿ
August 6, 2022
Next Post
ಕೊನೆಗೂ ಬಂದ ಪುಟ್ಟ

ಕೊನೆಗೂ ಬಂದ ಪುಟ್ಟ, ಹೋದ ಪುಟ್ಟ ಎಂದಾಯಿತೆ ಟ್ರಂಪ್ ಭೇಟಿ?

ದೊರೆಸ್ವಾಮಿಯವರನ್ನು ಪಾಕ್ ಏಜೆಂಟ್ ಎಂದ ಚೀಟಿಂಗ್ ಶಾಸಕ ಯತ್ನಾಳ್ ಮೇಲಿದೆ 23 ಗಂಭೀರ ಪ್ರಕರಣಗಳು

ದೊರೆಸ್ವಾಮಿಯವರನ್ನು ಪಾಕ್ ಏಜೆಂಟ್ ಎಂದ ಚೀಟಿಂಗ್ ಶಾಸಕ ಯತ್ನಾಳ್ ಮೇಲಿದೆ 23 ಗಂಭೀರ ಪ್ರಕರಣಗಳು

ಗೋವಿಂದ ಭಟ್ಟರಿಗಂದು ಶಿಶುನಾಳ ಶರೀಫ - ಕೋರಣೇಶ್ವರರಿಗಿಂದು ದಿವಾನ್ ಶರೀಫ

ಗೋವಿಂದ ಭಟ್ಟರಿಗಂದು ಶಿಶುನಾಳ ಶರೀಫ - ಕೋರಣೇಶ್ವರರಿಗಿಂದು ದಿವಾನ್ ಶರೀಫ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist