Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಮುಖ್ಯಮಂತ್ರಿಗಳಿಂದ ಶ್ಲಾಘನೆ: ಪ್ಲಾಸ್ಟಿಕ್ ಮುಕ್ತ ನೂತನ ಯೋಜನೆ

ಮುಖ್ಯಮಂತ್ರಿಗಳಿಂದ ಶ್ಲಾಘನೆ: ಪ್ಲಾಸ್ಟಿಕ್ ಮುಕ್ತ ನೂತನ ಯೋಜನೆ
ಮುಖ್ಯಮಂತ್ರಿಗಳಿಂದ ಶ್ಲಾಘನೆ: ಪ್ಲಾಸ್ಟಿಕ್ ಮುಕ್ತ ನೂತನ ಯೋಜನೆ
Pratidhvani Dhvani

Pratidhvani Dhvani

November 11, 2019
Share on FacebookShare on Twitter

ಗ್ರಾಮ ಪಂಚಾಯಿತಿಯಿಂದ ಪ್ಲಾಸ್ಟಿಕ್ ಮುಕ್ತ ಆಂದೋಲನ: ಹಳೇ ಬಟ್ಟೆಯಿಂದ ಕೈ ಚೀಲ ತಯಾರಿಸಿ ಮಾರಾಟ

ಹೆಚ್ಚು ಓದಿದ ಸ್ಟೋರಿಗಳು

ಬಿಎಂಟಿಎಫ್ ಅಧಿಕಾರಿ ಎಸಿಬಿ ಬಲೆಗೆ

ಶಿಕ್ಷಣ ಸಚಿವರ ಹೇಳಿಕೆ ಅಮಾನವೀಯ : ಸಿದ್ದರಾಮಯ್ಯ

ಬೀಫ್‌ ಕರಿ ಎಂದು ಟ್ವೀಟ್‌ : ಗೋಮಾಂಸದ ಚಿತ್ರಗಳನ್ನು ಪೋಸ್ಟ್ ಮಾಡಬೇಡಿ ಎಂದ ಚೆನ್ನೈ ಪೊಲೀಸರಿಗೆ ನೆಟ್ಟಿಗರಿಂದ ಫುಲ್‌ ಕ್ಲಾಸ್!‌

ಎಲ್ಲೆಡೆ ಪ್ಲಾಸ್ಟಿಕ್ ಬ್ಯಾನ್ ಬಗ್ಗೆ ಭಾಷಣಗಳು, ಬ್ಯಾನರ್ ಗಳು, ಘೋಷಣೆಗಳನ್ನು ಕೇಳುತ್ತಿರುತ್ತೇವೆ. ಆದರೆ ಈ ಗ್ರಾಮದಲ್ಲಿ ಸದ್ದಿಲ್ಲದೆ ಎರಡು ತಿಂಗಳಿನಿಂದ ಪ್ಲಾಸ್ಟಿಕ್ ಮುಕ್ತ ಗ್ರಾಮಕ್ಕೆ ತಯಾರಿ ನಡೆದಿದೆ. ಇದು ಗದಗ್ ಜಿಲ್ಲೆಯ ಅಬ್ಬಿಗೇರಿ ಗ್ರಾಮ. ಎಲ್ಲರಂತೆ ಇವರೂ ಘೋಷಣೆ ಮಾಡಿದರು, ಜನರಿಗೆ ತಿಳಿವಳಿಕೆ ಮೂಡಿಸಿದರು. ಆದರೂ ಪ್ಲಾಸ್ಟಿಕ್ ಹಾವಳಿ ನಿಲ್ಲಲಿಲ್ಲ. ಗ್ರಾಮ ಪಂಚಾಯಿತಿ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಮತ್ತು ಸಂಜೀವಿನಿ ಮಹಿಳಾ ಒಕ್ಕೂಟದವರೆಲ್ಲ ಸಭೆ ಸೇರಿಸಿ ಒಂದು ತೀರ್ಮಾನಕ್ಕೆ ಬಂದರು.

ಏನದು ತೀರ್ಮಾನ?

ಗ್ರಾಮದ ಪ್ರತಿ ಮನೆ ಮನೆಗೂ ಭೇಟಿ ನೀಡಿ ಹಳೆಯ ಹಾಗೂ ನಿರುಪಯುಕ್ತ ಬಟ್ಟೆಗಳನ್ನು ಕಳೆದ ಎರಡು ತಿಂಗಳಿನಿಂದ ಸಂಗ್ರಹಿಸಿದರು. ನಂತರ ಆ ಬಟ್ಟೆಗಳನ್ನು ಗ್ರಾಮದ ಬಣ್ಣ ಹಾಕುವವರಿಗೆ ನೀಡಲಾಯಿತು. ಅಕ್ಟೋಬರ್ ತಿಂಗಳಿನಲ್ಲಿ 10, 600 ಚೀಲಗಳು ತಯಾರಾದವು. ಪ್ರತಿ ಚೀಲಗಳ ಮೇಲೆ ‘ಪ್ಲಾಸ್ಟಿಕ್ ನಿಷೇಧಿಸಿ ಜೀವ ಸಂಕುಲ ಉಳಿಸಿ’ ಎಂಬ ಘೋಷವಾಕ್ಯವಿದ್ದು, ಪ್ಲಾಸ್ಟಿಕ್ ಮುಕ್ತ ಗ್ರಾಮದ ನವ ಚಿಂತನೆಗೆ ಸುತ್ತಮುತ್ತಲಿನ ಗ್ರಾಮದ ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಸಹ ತಮ್ಮ ಟ್ವೀಟರ್ ಖಾತೆ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಹೇಗೆ ಮಾಡಿದ್ದು?

ಪ್ರತಿ ಮನೆಯಿಂದ ಹಳೆಯ ಬಟ್ಟೆಗಳನ್ನು ಸಂಗ್ರಹಿಸಿ ಅವುಗಳನ್ನು ಸ್ವಚ್ಛವಾಗಿ ತೊಳೆದು ನಂತರ ಅವುಗಳಿಗೆ ಬಣ್ಣ ಹಾಕಲಾಗುತ್ತದೆ. ಬಟ್ಟೆಗಳನ್ನು ಒಣಗಿಸಿ ಅವುಗಳ ಮೇಲೆ ಅಕ್ಷರ ಹಾಗೂ ಚಿಹ್ನೆಗಳನ್ನು ಮೂಡಿಸಿ ಒಣಗಿಸಲಾಗುತ್ತದೆ. ನಂತರ ಬಟ್ಟೆಗಳನ್ನು ಬೇಕಾದ ಆಕಾರದಲ್ಲಿ ಚೀಲ ರೂಪದಲ್ಲಿ ಹೊಲೆಯಲಾಗುತ್ತದೆ.

2 ರೂಪಾಯಿಗೊಂದು ಕೈ ಚೀಲ

ಬಟ್ಟೆ ಬಣ್ಣ ಹಾಕಿದವರಿಗೆ ಹಾಗೂ ಹೊಲೆಯುವವರಿಗೆ ತಗಲುವ ವೆಚ್ಚವನ್ನು ಸರಿ ತೂಗಿಸಲು ಹಾಗೂ ಪ್ರತಿ ಅಂಗಡಿಗಳಲ್ಲಿ ಹಾಗೂ ತರಕಾರಿ ಗೂಡಂಗಡಿಗಳಲ್ಲಿ ಮಾರಾಟ ಮಾಡಲು ರೂ. 2 ಅನ್ನು ನಿಗದಿ ಮಾಡಲಾಗಿದೆ. ಎಲ್ಲ ಅಂಗಡಿಗಳಲ್ಲಿ ಬಟ್ಟೆ ಚೀಲಗಳನ್ನು ಇಟ್ಟು, ಪ್ಲಾಸ್ಟಿಕ್ ಮುಕ್ತ ಗ್ರಾಮ ಮಾಡಲಾಗಿದೆ.

ಈ ವಿನೂತನ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯೋತ್ಸವದ ದಿನದಂದು ಆರಂಭಿಸಲಾಗಿದ್ದು, ನಂತರ ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಿಟ್ಟು ಬಟ್ಟೆ ಚೀಲಗಳನ್ನೇ ಬಳಸುತ್ತಿದ್ದಾರೆ. ಇವರನ್ನು ನೋಡಿ ಸುತ್ತಮುತ್ತಲಿನ ಹಳ್ಳಿಗಳಲ್ಲೂ ಇದೇ ರೀತಿ ಪ್ಲಾಸ್ಟಿಕ್ ಆಂದೋಲನ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂಬುದು ಸಂತಸದ ಸಂಗತಿ.

ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಕಳಕಪ್ಪ ಬಿಲ್ಲ ಅವರ ಪ್ರಕಾರ, “ನಾವು ಪ್ಲಾಸ್ಟಿಕ್ ಮುಕ್ತ ವೆಂದರೂ ಅದು ಅಷ್ಟು ಸುಲಭವಲ್ಲ ಎಂದು ಗೊತ್ತಿತ್ತು. ಅದಕ್ಕೆಂದೇ ಸಭೆ ನಡೆಸಿ ಮಹಿಳಾ ಒಕ್ಕೂಟದ ಸಹಾಯದಿಂದ ಹಾಗೂ ಮುಖ್ಯವಾಗಿ ಗ್ರಾಮಸ್ಥರ ಸಹಕಾರದಿಂದ ಇಂದು ಅಬ್ಬಿಗೇರಿ ಪ್ಲಾಸ್ಟಿಕ್ ಮುಕ್ತವಾಗಿದೆ, ಪ್ಲಾಸ್ಟಿಕ್ ಬದಲು ಬಟ್ಟೆ ಚೀಲಗಳನ್ನು ಬಳಸಿದರೆ ಪರಿಸರಕ್ಕೂ ಅನುಕೂಲ ಹಾಗೂ ಉತ್ತಮ ಆರೋಗ್ಯವೂ ಲಭಿಸುತ್ತದೆ”.

ಸಿಕಂದರ ಅರಿ, ಬರಹಗಾರರು ಹಾಗೂ ಪತ್ರಕರ್ತರ ಪ್ರಕಾರ, “ನಾವೂ ಈಗಲೇ ಪ್ಲಾಸ್ಟಿಕ್ ಮುಕ್ತ ಮಾಡುವುದು ಎಂದರೆ ನಮ್ಮ ಮುಂದಿನ ಪೀಳಿಗೆಗೆ ಕೊಡುಗೆಯನ್ನು ಕೊಟ್ಟಂತೆ. ಈಗಾಗಲೇ ಭೂಮಿ ಪ್ಲಾಸ್ಟಿಕ್ ತ್ಯಾಜ್ಯದಿಂದ ತಹತಹಿಸುತ್ತಿದ್ದು, ಇನ್ನಾದರೂ ನಾವು ಆಂದೋಲನ ಮಾಡಲೇ ಬೇಕಿದೆ. ಈ ನಿಟ್ಟಿನಲ್ಲಿ ಅಬ್ಬಿಗೇರಿ ಗ್ರಾಮ ಪಂಚಾಯಿತಿ ಹಾಗೂ ಅಶ್ವಿನಿ ಮಹಿಳಾಕೂಟದ ಎಲ್ಲರೂ ಅಭಿನಂದನಾರ್ಹರು.

ಗ್ರಾಮ ಪಂಚಾಯಿತಿಯ ಪಿಡಿಓ ಶಿವನಗೌಡ ಮೆಣಸಗಿ ಹೇಳಿದ್ದು ಹೀಗೆ, “ನಮ್ಮ ಈ ಪ್ಲಾಸ್ಟಿಕ್ ಮುಕ್ತದ ನೂತನ ಆಂದೋಲನ ಬಹು ಮೆಚ್ಚುಗೆ ಪಡೆದಿದೆ. ನಮ್ಮ ಈ ಆಂದೋಲನ ನಿರಂತರವಾಗಿರಲಿದೆ. ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಸಂಘ ಸಂಸ್ಥೆಗಳು ಹಾಗೂ ಸಮುದಾಯದ ಸಹಕಾರದ ಅವಶ್ಯಕತೆಯಿದೆ. ಎಲ್ಲರ ಸಹಕಾರದಿಂದ ನಮ್ಮ ಕಾರ್ಯ ಈಡೆರಿದೆ. ನಮ್ಮ ಗ್ರಾಮಕ್ಕೆ ಇನ್ನು ಪ್ಲಾಸ್ಟಿಕ್ ಕಾಲಿಡಬಾರದು ಹಾಗೂ ಇದು ಎಲ್ಲರಿಗೂ ಮಾದರಿಯಾಗಬೇಕು ಎಂಬುದೇ ನಮ್ಮ ಸದಿಚ್ಛೆ”.

ಮುಖ್ಯಮಂತ್ರಿಗಳು ಏನು ಹೇಳಿದರು?

ಟ್ವಿಟರ್ ನಲ್ಲಿ ಮುಖ್ಯಮಂತ್ರಿಗಳು ಹೇಳಿದ್ದು ಹೀಗೆ:

“ನಮ್ಮ ಪ್ರಧಾನ ಮಂತ್ರಿ ಮೋದಿ ಅವರ ಪ್ಲಾಸ್ಟಿಕ್ ಮುಕ್ತ ಭಾರತದ ಕನಸು ಮಾಡುವ ನಿಟ್ಟಿನಲ್ಲಿ ಅಬ್ಬಿಗೆರೆ ಗ್ರಾಮ ಪಂಚಾಯಿತಿ ರೂಪಿಸಿರುವ ಯೋಜನೆ ಶ್ಲಾಘನೀಯ. ಹಳೇ ಬಟ್ಟೆಯಿಂದ ಹೊಸ ಕೈಚೀಲ ತಯಾರಿಸಿ, ಕಡಿಮೆ ದರದಲ್ಲಿ ಪ್ರತಿ ಮನೆಗಳಿಗೆ ತಲುಪಿಸುವ ಪ್ರಯತ್ನ ಅನುಕರಣೀಯ.

ಸುತ್ತಮುತ್ತಲಿನ ಗ್ರಾಮದ ಜನರಿಂದ ಅಭಿನಂದನೆ:

ಪ್ಲಾಸ್ಟಿಕ್ ಮುಕ್ತ ನೂತನ ಆಂದೋಲನದ ಯಶಸ್ಸಿಗೆ ಸುತ್ತಮುತ್ತಲಿನ ಗ್ರಾಮದ ಜನರು ಅಭಿನಂದಿಸಿದ್ದಾರೆ. ಪ್ರತಿ ಗ್ರಾಮದಲ್ಲೂ ಈ ರೀತಿ ಹಳೆ ಬಟ್ಟೆಗಳಿಗೆ ಹೊಸ ರೂಪ ಕೊಟ್ಟು, ನಿರುಪಯುಕ್ತ ವಸ್ತುಗಳನ್ನು ಬಳಸುವುದರಿಂದ ಪರಿಸರ ಉಳಿಸಿದಂತಾಗುತ್ತದೆ. ಪ್ರತಿ ಗ್ರಾಮದವರು ಈ ರೀತಿ ಮಾಡಿದರೆ ಪ್ಲಾಸ್ಟಿಕ್ ಮುಕ್ತ ಕರ್ನಾಟಕ ಮಾಡಬಹುದು ಎಂದು ಎಲ್ಲರೂ ಅಭಿನಂದಿಸಿದ್ದಾರೆ.

RS 500
RS 1500

SCAN HERE

don't miss it !

ಝೀ ಟಿವಿ ತೊರೆದ ಸುಧೀರ್ ಚೌಧರಿ ರಾಜೀನಾಮೆ: ಹೊಸ ಸಂಸ್ಥೆ ಸ್ಥಾಪನೆ?
ದೇಶ

ಝೀ ಟಿವಿ ತೊರೆದ ಸುಧೀರ್ ಚೌಧರಿ ರಾಜೀನಾಮೆ: ಹೊಸ ಸಂಸ್ಥೆ ಸ್ಥಾಪನೆ?

by ಪ್ರತಿಧ್ವನಿ
July 1, 2022
ಚಾರ್ಲಿಗೆ ಈಗ ಎಲ್ಲಿಲ್ಲದ ಡಿಮ್ಯಾಂಡ್‌ : ಬೇರೆ ಭಾಷೆಯಲ್ಲೂ ಮಿಂಚಲಿದೆಯ ಚಾರ್ಲಿ?
ಕರ್ನಾಟಕ

ಚಾರ್ಲಿಗೆ ಈಗ ಎಲ್ಲಿಲ್ಲದ ಡಿಮ್ಯಾಂಡ್‌ : ಬೇರೆ ಭಾಷೆಯಲ್ಲೂ ಮಿಂಚಲಿದೆಯ ಚಾರ್ಲಿ?

by ಪ್ರತಿಧ್ವನಿ
July 3, 2022
ಪೌರಕಾರ್ಮಿಕರು  ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನಕ್ಕೆ : ಇನ್ನೂ ಈಡೇರದ ಬೇಡಿಕೆ!
ಕರ್ನಾಟಕ

ಪೌರಕಾರ್ಮಿಕರು  ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನಕ್ಕೆ : ಇನ್ನೂ ಈಡೇರದ ಬೇಡಿಕೆ!

by ಪ್ರತಿಧ್ವನಿ
July 4, 2022
ಉದಯಪುರ ಹತ್ಯೆ ಆರೋಪಿಗಳಿಗೆ ಬಿಜೆಪಿ ಸದಸ್ಯರೊಂದಿಗೆ ಸಂಬಂಧ.! : ಇಂಡಿಯಾ ಟುಡೆ ತನಿಖಾ ವರದಿ
ದೇಶ

ಉದಯಪುರ ಹತ್ಯೆ ಆರೋಪಿಗಳಿಗೆ ಬಿಜೆಪಿ ಸದಸ್ಯರೊಂದಿಗೆ ಸಂಬಂಧ.! : ಇಂಡಿಯಾ ಟುಡೆ ತನಿಖಾ ವರದಿ

by ಪ್ರತಿಧ್ವನಿ
July 2, 2022
ಶಸ್ತ್ರಚಿಕಿತ್ಸೆ ಬಳಿಕ ಮೊದಲಬಾರಿ ಅಭಿಮಾನಿಗಳ ಮುಂದೆ ಬಂದ ದೂದ್ ಪೇಡ ದಿಗಂತ್
ಸಿನಿಮಾ

ಶಸ್ತ್ರಚಿಕಿತ್ಸೆ ಬಳಿಕ ಮೊದಲಬಾರಿ ಅಭಿಮಾನಿಗಳ ಮುಂದೆ ಬಂದ ದೂದ್ ಪೇಡ ದಿಗಂತ್

by ಪ್ರತಿಧ್ವನಿ
July 3, 2022
Next Post
“ಫೇಸ್ ಬುಕ್

“ಫೇಸ್ ಬುಕ್, ವಾಟ್ಸ್ ಆಪ್ ಯಾರಿಗೆ? ನಮ್ಮ ಸ್ಕೂಲ್ ರೇಡಿಯೋ ನಮ್ಗೆ, ನಿಮ್ಗೆ”  

ಅದಾನಿ ಪರ ಸುಪ್ರೀಂ ತೀರ್ಪು ಕುರಿತು ದುಶ್ಯಂತ್ ದವೆ ಪ್ರಶ್ನೆಗಳೇನು?

ಅದಾನಿ ಪರ ಸುಪ್ರೀಂ ತೀರ್ಪು ಕುರಿತು ದುಶ್ಯಂತ್ ದವೆ ಪ್ರಶ್ನೆಗಳೇನು?

ಚುನಾವಣಾ ಆಯೋಗದ ಸ್ವಾಯತ್ತೆಗೆ ಪುನರ್ಜನ್ಮ ನೀಡಿದ ಶೇಷನ್

ಚುನಾವಣಾ ಆಯೋಗದ ಸ್ವಾಯತ್ತೆಗೆ ಪುನರ್ಜನ್ಮ ನೀಡಿದ ಶೇಷನ್

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist