Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಮಹಿಳಾ ಸುರಕ್ಷತೆಗೊಂದು `ವಾಣಿ’

ಮಹಿಳಾ ಸುರಕ್ಷತೆಗೊಂದು `ವಾಣಿ’
ಮಹಿಳಾ ಸುರಕ್ಷತೆಗೊಂದು `ವಾಣಿ’
Pratidhvani Dhvani

Pratidhvani Dhvani

December 15, 2019
Share on FacebookShare on Twitter

ಮಹಿಳಾ ಸುರಕ್ಷತೆಗೆ ಈಗಾಗಲೇ ಕರ್ನಾಟಕದಾದ್ಯಂತ ಪೊಲೀಸ್ ಇಲಾಖೆ ಚೆನ್ನಮ್ಮ ಪಡೆ, ಓಬವ್ವ ಪಡೆ ಹೀಗೆ ಹಲವು ಹೆಸರುಗಳಲ್ಲಿ ತರಬೇತಿ ನೀಡಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿದ್ದಾರೆ. ಆದರೆ ಒಂಟಿ ಮಹಿಳೆಗೆ ಸುರಕ್ಷತಾ ಭಾವ ನೀಡಲು ಹಾಗೂ ನಿಮ್ಮ ಸಹೋದರರು ನಾವಿದ್ದೇವೆ ಎಂಬ ಬೆಚ್ಚಗಿನ ಭಾವ ನೀಡಲು, ಸುರಕ್ಷತೆ ನೀಡಲು ಗದಗ್ ಪೊಲೀಸರು ಮುಂದಾಗಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ರಾಜಕಾಲುವೆ ಮೇಲೆ ಕಟ್ಟಿದ ಅರಮನೆ, ಮಾಲ್‌ʼಗಳ ಮೇಲೆ ಬುಲ್ಡೋಜರ್‌ ಹೋಗಲ್ಲ; ಬಡವರ ಮನೆಗಳ ಮೇಲೆ ಹರಿಯುತ್ತದೆ

ಸರ್ಕಾರದ ಆಸ್ತಿ ಕಾಪಾಡಬೇಕಾದ BMTF ನಿಂದಲೇ ಭೂಗಳ್ಳರ ರಕ್ಷಣೆ ಆಗ್ತಿದ್ಯಾ.!?

ಚಾರ್ಲಿಗೆ ಈಗ ಎಲ್ಲಿಲ್ಲದ ಡಿಮ್ಯಾಂಡ್‌ : ಬೇರೆ ಭಾಷೆಯಲ್ಲೂ ಮಿಂಚಲಿದೆಯ ಚಾರ್ಲಿ?

ಗದಗ್ ಹೊಸ ಬಸ್ ನಿಲ್ದಾಣಕ್ಕೆ ಮಹಿಳೆಯರು ರಾತ್ರಿ 10ರ ನಂತರ ಹಾಗೂ ಬೆಳಿಗ್ಗೆ 6 ಗಂಟೆಯ ಒಳಗಡೆ ಬಂದರೆ, ಪೊಲೀಸ್ ಸಿಬ್ಬಂದಿಗಳೇ ಅವರ ಹತ್ತಿರ ಹೋಗಿ, ಅವರ ಜೊತೆಗೆ ನಿಲ್ಲುತ್ತಾರೆ. ಸಂಬಂಧಿಕರು ಹಾಗೂ ಕುಟುಂಬದವರು ಬರುವ ತನಕ ಕಾಯುತ್ತಾರೆ. ಮಹಿಳೆಯರಷ್ಟೇ ಇದ್ದರೆ ಅವರ ವಿಳಾಸ ಪಡೆದುಕೊಂಡು ಅಟೋ ರಿಕ್ಷಾವನ್ನು ಕರೆದು ಕಡಿಮೆ ದರದಲ್ಲಿ ಅವರಿಗೆ ಮನೆಗೆ ಬಿಟ್ಟು ಬರುವಂತೆ ಸೂಚಿಸುತ್ತಾರೆ. ಜೊತೆಗೆ ಆ ರಿಕ್ಷಾದ ನಂಬರ್ ಬರೆದುಕೊಂಡು , ವೇಳೆಯನ್ನು ಬರೆದುಕೊಂಡು, ಆ ರಿಕ್ಷಾದವರಿಗೆ ಮನೆಗೆ ಬಿಟ್ಟು ಸುರಕ್ಷಿತ ವಾಗಿ ತಲುಪಿದರೆಂದು ಖಚಿತಗೊಂಡ ನಂತರ ವಾಪಸ್ಸು ಬಂದು ತಿಳಿಸಬೇಕು ಎಂದು ಸೂಚಿಸುತ್ತಾರೆ.

ಹೊಸ ಸಹಾಯ ವಾಣಿ:

ಈಗಾಗಲೇ 100, 112 ಸಹಾಯವಾಣಿ ಚಾಲ್ತಿಯಲ್ಲಿದೆ. ಅದರ ಜೊತೆಗೆ ಗದಗ್ ಪೊಲೀಸರು ಇನ್ನೊಂದು ಸಹಾಯ ವಾಣಿ ಆರಂಭಿಸಿದ್ದಾರೆ. ಅದರ ನಂಬರ್ 94808-04400. ಈ ನಂಬರ್ ಫೋನ್ ಮಾಡಿದ ಕೆಲವೇ ಕ್ಷಣಗಳಲ್ಲಿ ಪೊಲೀಸರು ನಿಮ್ಮ ಮುಂದಿರುತ್ತಾರೆ. ಇದೊಂದು ನೂತನ ಸಹಾಯವಾಣಿಯಾಗಿದ್ದು, ಗದಗ್ ನಲ್ಲಿ ಮೊದಲು ಪ್ರಾರಂಭಿಸಲಾಗಿದೆ. ಮಹಿಳೆಯರು ಈ ನಂಬರ್ ತಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳಲು ತಿಳಿಸಲಾಗಿದೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಗದಗ್ ಎಸ್ ಪಿ ಶ್ರೀನಾಥ ಜೋಶಿಯವರ ಹೇಳಿಕೆ ಜೊತೆಗೆ ಸಂದೇಶ ಇರುವ ಚಿತ್ರಗಳನ್ನು ಹರಿಬಿಡಲಾಗಿದ್ದು ಇದೀಗ ಎಲ್ಲೆಡೆ ವೈರಲ್ ಆಗಿದೆ. ಇದನ್ನು ಓದಿ ಹಲವು ಮಹಿಳೆಯರು ಪೊಲೀಸರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ ಹಾಗೂ ಈ ವಿನೂತನ ಕಾರ್ಯಕ್ಕೆ ಶ್ಲಾಘಿಸುತ್ತಿದ್ದಾರೆ.

ಏನಿದು? ಹೇಗೆ ಸಹಾಯ ಮಾಡುತ್ತಾರೆ?

ಒಂದು ವೇಳೆ ಮಹಿಳೆ ಒಬ್ಬಂಟಿಯಾಗಿ ಗದಗ್ ಗೆ ರಾತ್ರಿ 10 ಗಂಟೆಯ ಮೇಲೆ ಬಂದರೆ ಒಂದು ರಕ್ಷಣೆ ಪ್ರಶ್ನೆ ಹಾಗೂ ಇನ್ನೊಂದು ಅಟೋ ದವರು ಎದ್ವಾ ತದ್ವಾ ಹಣ ಪೀಕುವ ಭಯ. ಒಬ್ಬರೇ ಬಂದರೆ ಬಸ್ ನಿಲ್ದಾಣದಲ್ಲಿ ಸ್ನೇಹಿತರು ಅಥವಾ ಸಂಬಂಧಿಗಳು ಬರುವ ತನಕ ಕಾಯುವ ಚಿಂತೆ. ಒಬ್ಬರೇ ಹೊರಗಡೆ ಹೋದರೆ ರಾತ್ರಿ ಏನಾದರೂ ಆದೀತು ಎಂಬ ಹೆದರಿಕೆ. ಇದಕ್ಕೆಂದೇ ಪೊಲೀಸ್ ಸಿಬ್ಬಂದಿಗಳು ಇಲ್ಲಿ ಬೀಡು ಬಿಟ್ಟಿದ್ದಾರೆ. ಒಬ್ಬರೆ ಮಹಿಳೇಯರು ಇದ್ದರೆ ಅವರತ್ತ ಪೊಲೀಸ್ ವಾಹನ ಬಂದು ನಿಲ್ಲುತ್ತದೆ. ಅವರನ್ನು ವಿಚಾರಿಸುತ್ತದೆ. ಯಾರಾದರು ಒಬ್ಬರು ಬರುವವರೆಗೂ ಅವರ ಜೊತೆಗೆ ನಿಲ್ಲುತ್ತಾರೆ.

ಅಟೋ ದಲ್ಲಿ ಹೋಗಬೇಕೆಂದರೆ ಪೊಲೀಸರೇ ಅಟೋ ಕರೆಯುತ್ತಾರೆ ಹಾಗೂ ಸೂಕ್ತ ದರ ನಿಗದಿಪಡಿಸಿ ಅಟೋ ಚಾಲಕರಿಗೆ ಸುರಕ್ಷಿತವಾಗಿ ಮನೆಗೆ ಬಿಟ್ಟು ಅವರು ಒಳಗೆ ಹೋಗಿ ಬಾಗಿಲು ಹಾಕಿಕೊಳ್ಳುವವರೆಗೆ ಕಾದು ನಂತರ ಬನ್ನಿ ಎಂದು ತಿಳಿಸುತ್ತಾರೆ. ಅಟೋ ನಂಬರ್ ಹಾಗೂ ಚಾಲಕರ ವಿವರಗಳನ್ನು ಬರೆದುಕೊಳ್ಳುತ್ತಾರೆ.

ಪಾರ್ವತಿ ಎಸ್. ಬೆಟಗೇರಿ ಮಹಿಳೆಯೊಬ್ಬರ ಅಭಿಪ್ರಾಯ, “ಮೊನ್ನೆ ನಾನು ಗದುಗಿಗೆ ಲೇಟಾಗಿ ಬಂದೆ. ಬಸ್ ನಿಂದ ಇಳಿದಾಗ ರಾತ್ರಿ ಒಂದು ಗಂಟೆ. ಮಗನಿಗೆ ಬಾ ಎಂದು ಹೇಳಿದ್ದೆ. ಅವನು ಬರುವ ತನಕ ಕಾಯಬೇಕಲ್ಲಾ ಎಂಬ ಭಯ. ಅಷ್ಟರಲ್ಲೇ ಪೊಲೀಸ್ ವಾಹನ ನನ್ನ ಕಡೆಗೆ ಬಂತು. ಯಾಕಪ್ಪಾ ಪೊಲೀಸರು ನನ್ನ ಹತ್ತಿರ ಬರುತ್ತಿದ್ದಾರೆ ಎಂದು ಕೊಂಚ ವಿಚಲಿತಳಾದೆ. ತಕ್ಷಣ ಒಬ್ಬ ಸಿಬ್ಬಂದಿ ನನ್ನ ಕಡೆಗೆ ಬಂದು ನನಗೆ ಅವರ ಹೊಸ ಸಹಾಯವಾಣಿ ಬಗ್ಗೆ ತಿಳಿಸಿ, ಮಗ ಬರುವ ತನಕ ನನ್ನ ಜೊತೆಗೆ ನಿಂತು ನಂತರ ಕಳುಹಿಸಿಕೊಟ್ಟರು. ವಾವ್ ಅದ್ಭುತ ಎನಿಸಿತು. ಪೊಲೀಸರು ನಮ್ಮವರು. ಗದಗ್ ಇನ್ನ ಮೇಲೆ ಸೇಫ್”.

ಗದುಗಿನ ಸಾಮಾಜಿಕ ಕಾರ್ಯಕರ್ತ ಮುತ್ತಣ್ಣ ಭರಡಿ ಹೇಳಿದರು, “ಪೊಲೀಸರ ಈ ಕಾರ್ಯ ಸ್ತುತ್ಯಾರ್ಹ. ಮಹಿಳೆಯರಿಗೆ ಹಾಗೂ ರಾತ್ರಿ ಒಡಾಡುವವರಿಗೆ ಇದು ನಿಜಕ್ಕೂ ಸಹಾಯವಾಗುತ್ತದೆ. ಸಹಾಯವಾಣಿಗೆ ಅದ್ಭುತ ಸ್ಪಂದನೆ ದೊರೆತಿದೆ. ಇದರಿಂದ ಬಹುತೇಕ ಕಿಡಿಗೇಡಿಗಳು ಭಯಭೀತರಾಗಿದ್ದಾರೆ”.

ಗದಗ್ ಎಸ್ ಪಿ ಶ್ರೀನಾಥ ಜೋಶಿ ಪ್ರತಿಧ್ವನಿ ತಂಡದೊಂದಿಗೆ ಮಾತನಾಡಿದರು, “ಮಹಿಳೆಯರ ಸುರಕ್ಷತೆ ನಮ್ಮೆಲ್ಲರ ಕರ್ತವ್ಯ. ಈಗಾಗಲೇ ಸಹಾಯವಾಣಿ ಇದ್ದು ಅದು ಜನರಿಗೆ ಸ್ಪಂದನೆ ನೀಡುತ್ತಿದೆ. ನಾವು ನೂತನ ಸಹಾಯವಾಣಿ ಆರಂಭಿಸಿದ್ದು, ಯಾರಾದರೂ ತೊಂದರೆ ಎದುರಾಗುತ್ತದೆ ಎನಿಸಿದಾಗ ಈ ನಂಬರ್ ಗೆ ಕರೆ ಮಾಡಿದಾಗ ತಕ್ಷಣ ನಮ್ಮ ಸಿಬ್ಬಂದಿ ಕೆಲವೇ ನಿಮಿಷಗಳಲ್ಲಿ ಅವರ ಕಡೆಗೆ ಬರುತ್ತಾರೆ. ಈ ಯೋಜನೆಯ ಬಗ್ಗೆ ನನಗೆ ನಂಬಿಕೆ ಇತ್ತು ಹಾಗೂ ನಾಲ್ಕೈದು ದಿನಗಳಿಂದ ಚೆನ್ನಾಗಿ ನಡೆಯುತ್ತಿದೆ. ಮಹಿಳೆಯರಿಗೆ ಉಪಯೋಗವೂ ಆಗುತ್ತಿದೆ”.

RS 500
RS 1500

SCAN HERE

don't miss it !

ಡಾ ಎಸ್.ಎಲ್. ಭೈರಪ್ಪನವರ ಮಾತಿನಲ್ಲಿ ರಾಜಕೀಯ ದುರ್ನಾತ ಬರುತ್ತಿದೆ : ಹೆಚ್.ವಿಶ್ವನಾಥ್ ಕಿಡಿ
ಕರ್ನಾಟಕ

ಡಾ ಎಸ್.ಎಲ್. ಭೈರಪ್ಪನವರ ಮಾತಿನಲ್ಲಿ ರಾಜಕೀಯ ದುರ್ನಾತ ಬರುತ್ತಿದೆ : ಹೆಚ್.ವಿಶ್ವನಾಥ್ ಕಿಡಿ

by ಪ್ರತಿಧ್ವನಿ
June 27, 2022
ನಿರಂತರ ಮಳೆ; ಭಾಗಮಂಡಲ – ನಾಪೋಕ್ಲು ಸಂಚಾರ ಸ್ಥಗಿತ
ಕರ್ನಾಟಕ

ನಿರಂತರ ಮಳೆ; ಭಾಗಮಂಡಲ – ನಾಪೋಕ್ಲು ಸಂಚಾರ ಸ್ಥಗಿತ

by ಪ್ರತಿಧ್ವನಿ
July 3, 2022
ಕರ್ನಾಟಕದ ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ 16 ಅಕ್ರಮ ರೆಸಾರ್ಟ್‌!
ಕರ್ನಾಟಕ

ಕರ್ನಾಟಕದ ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ 16 ಅಕ್ರಮ ರೆಸಾರ್ಟ್‌!

by ಪ್ರತಿಧ್ವನಿ
June 29, 2022
ದಕ್ಷಿಣದತ್ತ ದೃಷ್ಟಿ ನೆಟ್ಟ ಕಮಲ ಪಡೆ
ದೇಶ

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ; ನಿರ್ಣಯ ಮಂಡಿಸಲಿರುವ ಮೋದಿ – ಅಮಿತ್ ಶಾ

by ಮಂಜುನಾಥ ಬಿ
July 3, 2022
ಅಭಿಮಾನಿ ಹಾಗು ಹಿತೈಷಿಗಳಿಂದ ಸಿದ್ದರಾಮೋತ್ಸವ : ಹೆಚ್.ಸಿ.ಮಹದೇವಪ್ಪ
ಕರ್ನಾಟಕ

ಅಭಿಮಾನಿ ಹಾಗು ಹಿತೈಷಿಗಳಿಂದ ಸಿದ್ದರಾಮೋತ್ಸವ : ಹೆಚ್.ಸಿ.ಮಹದೇವಪ್ಪ

by ಪ್ರತಿಧ್ವನಿ
June 29, 2022
Next Post
ವಿಮಾ ಯೋಜನೆ ನಿಯಮಗಳ ಸಡಿಲಿಕೆ; ನಿಮಗೆಷ್ಟು ಅನುಕೂಲ ಆಗಲಿದೆ?

ವಿಮಾ ಯೋಜನೆ ನಿಯಮಗಳ ಸಡಿಲಿಕೆ; ನಿಮಗೆಷ್ಟು ಅನುಕೂಲ ಆಗಲಿದೆ?

CAB: ಹಿಂಸಾಚಾರವೂ

CAB: ಹಿಂಸಾಚಾರವೂ, ಹಠಮಾರಿ ಕೇಂದ್ರವೂ!

15 ಆನೆಗಳ ಜಾಗದಲ್ಲಿ 25 ಆನೆ

15 ಆನೆಗಳ ಜಾಗದಲ್ಲಿ 25 ಆನೆ, ಸಕ್ರೆಬೈಲ್‌ ಬಿಡಾರದ ಕಣ್ಣೀರ ಕಥೆ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist