Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಮಸೀದಿಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ವೈಖರಿ – ಮೂಡಿಸಿತು ಅಚ್ಚರಿ….

ಮಸೀದಿಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ವೈಖರಿ – ಮೂಡಿಸಿತು ಅಚ್ಚರಿ....
ಮಸೀದಿಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ವೈಖರಿ – ಮೂಡಿಸಿತು ಅಚ್ಚರಿ....

January 11, 2020
Share on FacebookShare on Twitter

ಇತ್ತೀಚಿನ ದಿನಗಳಲ್ಲಿ ಕೋಮು ಸೌಹಾರ್ದತೆ ಕದಡುವಂತಹ, ಜಾತಿ – ಧರ್ಮಗಳ, ಮಂದಿರ ಮಸೀದಿಗಳ ವಿಚಾರವಾಗಿ ಗಲಾಟೆಯಾಗುವ ಸಾಕಷ್ಟು ಗಲಭೆಗಳು ನಡೆಯುತ್ತಿದ್ದು, ಇದಕ್ಕೆ ವಿರುದ್ಧ ಎನ್ನುವಂತೆ ಗದಗ್ ನಲ್ಲಿ ಒಂದು ಅಪರೂಪದ ಪೂಜೆ ನಡೆದಿದೆ. ಇಲ್ಲಿ ನಿಮಗೆ ಮಸೀದಿಯಲ್ಲಿ ಘಂಟಾನಾದ ಮೊಳಗುವ ಸದ್ದು ಕೇಳಿತು. ಅಲ್ಲಿ ನೂರಾರು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಕುಳಿತಿದ್ದರು. ಹಿರಿಯ ಸ್ವಾಮಿಗಳಾದ ಟಿ ಎನ್ ಗುರುಸ್ವಾಮಿಯವರು ಮಸೀದಿಯಲ್ಲಿ ಅಯ್ಯಪ್ಪ ಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದರು. ಇದು ನಡೆದಿದ್ದು ಗದುಗಿನ ಖಾನತೋಟ ಪ್ರದೇಶದ ಇಮಾಮ್ ಖಾಸಿಮ್ ಪಂಜದ್ ಮಸೀದಿಯಲ್ಲಿ.

ಹೆಚ್ಚು ಓದಿದ ಸ್ಟೋರಿಗಳು

10 ತಿಂಗಳ ನಂತ್ರ ನವಜೋತ್‌ ಸಿಂಗ್‌ ಸಿಧು ಜೈಲಿನಿಂದ ಬಿಡುಗಡೆ..!

ಜೆಡಿಎಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದ ಎ.ಟಿ.ರಾಮಸ್ವಾಮಿ ..!

ಚುನಾವಣೆ ಘೋಷಣೆ : ಜೆಡಿಎಸ್ ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ..!

ಅಂದಹಾಗೆ ಈ ಪೂಜೆ ನಡೆದದಿದ್ದು 4 ಘಂಟೆಗಳ ಕಾಲ. ಬೆಳಿಗ್ಗೆ 6-00 ಗಂಟೆಗೆ ಗಂಗಾಪೂರ ಪೇಟೆಯ ಶ್ರೀ ದುರ್ಗಾದೇವಿ ದೇವಸ್ಥಾನದಿಂದ ನೂರಾರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳನ್ನು ಮತ್ತು ಗುರುಸ್ವಾಮಿಗಳನ್ನು ವಾದ್ಯಗಳೊಂದಿಗೆ ಮೆರವಣಿಗೆಯ ಮೂಲಕ ಖಾನತೋಟ ಇಮಾಮಕಾಸೀಮ ಪಂಜದ ಮಸೂತಿಗೆ ಬರಮಾಡಿಕೊಳ್ಳಲಾಯಿತು. ಇಲ್ಲಿ ಅಯ್ಯಪ್ಪನಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಭಜನೆಯೊಂದಿಗೆ ವಿಧಿ, ವಿಧಾನಗಳಂತೆ ಮಹಾಪೂಜೆ ನೆರವೇರಿಸುವುದರೊಂದಿಗೆ ಗೋಡೆಗಳಿಗೆ ಅಂಟಿಸಿದ ವಿವಿಧ ಪಂಜದ ಮಸೂತಿಗಳ ಭಾವಚಿತ್ರಗಳಿಗೂ ಆರತಿ ಬೆಳಗಿ ಭಕ್ತಿಯಿಂದ ನೆರವೇರಿಸಲಾಯಿತು. ಅಲ್ಲಿ ಗುರುಸ್ವಾಮಿಗಳ ಜೊತೆಗೆ ಪೂಜೆಯನ್ನು ಆರಂಭಿಸಿದವರು ಅಬ್ದುಲ್ ಮುನಾಫ್ ಮುಲ್ಲಾ. ಈ ಪೂಜೆ ನಡೆದಿದ್ದು ಜನವರಿ ಮೊದಲನೇಯ ವಾರದಲ್ಲಿ. ನಂತರ ಅಯ್ಯಪ್ಪ ಮಾಲಾಧಾರಿಗಳಿಗೆ ಶಬರಿ ಮಲೈ ಅಯ್ಯಪ್ಪ ಸನ್ನಿಧಾನಕ್ಕೆ ತೆರಳಲು ಬಿಳ್ಕೊಡುವ ಸಮಾರಂಭ ನಡೆಯಿತು.

ಈ ಬಗ್ಗೆ ಅಬ್ದುಲ್ ಅವರನ್ನು ಮಾತನಾಡಿಸಿದಾಗ ಅವರು ಹೇಳಿದ್ದು ಹೀಗೆ, “ಜಾತಿ, ಮತ, ಎಲ್ಲಾ ದೇವರನ್ನು ಒಂದೇ ಎಂದು ನಂಬಿದ್ದೇನೆ. ಉಪಜೀವನಕ್ಕೆ ಸೆಂಟ್ರಿಂಗ್ ಪ್ಲೇಟ್ಸ್ ಭಾಡಿಗೆ ಕೊಡುತ್ತೇನೆ. ಅದರಂತೆ ನಮ್ಮ ಇಮಾಮ ಕಾಸೀಮ ಪಂಜದ ಮಸೂತಿಯಲ್ಲೇ ಅಯ್ಯಪ್ಪ ಸ್ವಾಮಿ ಮಹಾಪೂಜೆ ನೆರವೇರಿಸಬೇಕು ಎಂಬ ನನ್ನ ಇಂಗಿತಕ್ಕೆ ಮನೆಯವರು, ಬಳಗದವರು ಒಪ್ಪಿದರು”.

ಅವರು ತಮ್ಮ ಮುಲ್ಲಾ ಕುಟಂಬದವರಿಂದ ಅಲಾಯಿ ದೇವರ ಸನ್ನಿಧಿಯಲ್ಲಿ ಅಯ್ಯಪ್ಪನ ಆರಾಧನೆ ಅನ್ನಸಂತರ್ಪಣೆ ಹಾಗೂ ಸನ್ಮಾನ, ಧಾರ್ಮಿಕ ಸೌಹಾರ್ದ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿ ಕಳೆದ ವರ್ಷದಂತೆ ಈ ಸಲ ಎರಡನೇಯ ವರ್ಷದ ಅಯ್ಯಪ್ಪನ ಮಹಾಪೂಜೆಗೆ ಅಗತ್ಯ ಪೂಜಾ ಸಾಮಗ್ರಿಗಳನ್ನು ನೀಡಿ ಮಹಾಪೂಜೆ ನೆರವೇರಿಸಿದ್ದು ಖುಷಿ ಮತ್ತು ನೆಮ್ಮದಿ ತಂದಿದೆ ಎಂದರು.

ಪ್ರತಿಧ್ವನಿ ತಂಡದೊಂದಿಗೆ ಮಾತನಾಡಿದ ಶಿವರೆಡ್ಡಿ (ಟಿ.ಎನ್) ಗುರುಸ್ವಾಮಿಗಳು, “ವಿವಿಧ ಸಂಘಟನೆಗಳು ಸೇರಿದಂತೆ ಮುಸ್ಲಿಂ ಸಂಘಟನೆಯಿಂದ ಸಾರ್ವಜನಿಕ ಅಯ್ಯಪ್ಪ ಪೂಜೆ ಏರ್ಪಡಿಸಲಾಗುತ್ತದೆ. ಆದರೆ ಇಮಾಮ ಕಾಸೀಂ ಪಂಜದ ಮಸೂತಿಯಲ್ಲಿ ಅಯ್ಯಪ್ಪ ಪೂಜೆ ನೇರವೇರಿಸಿರುವುದು ಎರಡನೇ ಸಲ ಇಂತಹ ಆಚರಣೆಗಳಿಂದ ಜನರಲ್ಲಿನ ಧಾರ್ಮಿಕ ವೈರುಧ್ಯ ಭಾವನೆಗಳು ಬದಲಾಗಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅತೀವ ಸಂತಸವೆನಿಸುತ್ತದೆ”. ಎಂದರು.

ಗದಗ ಜಿಲ್ಲಾ ವಾಲ್ಮೀಕಿ ನಾಯಕ ಸೇವಾ ಸಂಘದ ಜಿಲ್ಲಾಧ್ಯಕ್ಷರಾದ ಬಸವರಾಜ ಮೈಲಾರಪ್ಪ ಬೆಳಧಡಿಯವರ ಪ್ರಕಾರ, “ನಗರದ ಜುಮ್ಮಾ ಮಸೂತಿ (ಮಸೀದಿ), ವೀರನಾರಾಯಣ ದೇವಸ್ಥಾನ, ತ್ರಿಕೂಟೇಶ್ವರ ದೇವಸ್ಥಾನಗಳಿಗೆ ಇಂದಿಗೂ ಒಂದೇ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿವೆ. ಇಲ್ಲಿನ ಸೌಹಾರ್ದ ದೇಶಕ್ಕೆ ಮಾದರಿ ಅದರಂತೆ ಇಲ್ಲಿನ ಖಾನತೋಟದ ಇಮಾಮಕಾಸೀಮ ಪಂಜದ ಮಸೂತಿಯಲ್ಲಿ ಸ್ವಾಮಿ ಅಯ್ಯಪ್ಪನ ಮಹಾಪೂಜೆ ನೆರವೇರಿಸಿ ಸಾವಿರಾರು ಭಕ್ತರಿಗೆ ಅನ್ನದಾಸೋಹ ನೀಡಿ ಗುರುಸ್ವಾಮಿಗಳಿಗೆ ಮತ್ತು ದೀಕ್ಷೆ ತೆಗೆದುಕೊಂಡ ಗುರುಸ್ವಾಮಿಗಳಿಗೆ ಸತ್ಕರಿಸಿ ಕಾಣಿಕೆ ನೀಡಿ ನೂರಾರು ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳ ಪಾದಗಳಿಗೆ ಸಾಷ್ಟಾಂಗ ನಮಸ್ಕರಿಸುವ ಮೂಲಕ ಇಮಾಮಕಾಸೀಮ ಪಂಜದ ಮಸೂತಿಯ ಹೊಣೆ ಹೊತ್ತಿರುವ ಅಬ್ದುಲ ಮುನಾಫ ಮುಲ್ಲಾರವರ ಕುಟುಂಬ ಸೌರ್ಹಾದತೆ ಸಾರಿದೆ”.

ಈ ಪೂಜೆಯ ಕುರಿತು ಹರ್ಷ ವ್ಯಕ್ತಪಡಿಸಿದ ನಾಗರೀಕರು ಇಂತಹ ಕೋಮು ಸೌಹಾರ್ದತಾ ಕಾರ್ಯಗಳು ನಡೆದು ಎಲ್ಲರೂ ದ್ವೇಷ ಬಿಟ್ಟು ಪ್ರೀತಿಯಿಂದ ಸಹಬಾಳ್ವೆ ನಡೆಸಬೇಕು. ಅಂದಿಗೆ ನಾವೊಂದು ಸುಂದರ ದೇಶವನ್ನು ಕಾಣಬಹುದು. ಈ ಕಾರ್ಯ ನಡೆಸಿದ ಎಲ್ಲರಿಗೂ ವಂದನೆಗಳನ್ನು ಅರ್ಪಿಸಿದರು.

ಅಬ್ದುಲ್ ಮುನಾಫ್ ಅವರ ಕುಟುಂಬ ಹಾಗೂ ಮಸೀದಿಯ ಎಲ್ಲ ಸದಸ್ಯರು ಮುಂದೆ ಬಂದಿ ಇಂತಹ ಕಾರ್ಯಗಳು ಇತರರಿಗು ಮಾದರಿಯಾಗಲಿ…ಅಲ್ಲವೇ….?

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಮೀಸಲಾತಿಯ ಅಸಂವಿಧಾನಿಕ ಪರಿಷ್ಕರಣೆ ; ಕೂಡಲೇ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು : ಸಿದ್ದರಾಮಯ್ಯ
Top Story

ಮೀಸಲಾತಿಯ ಅಸಂವಿಧಾನಿಕ ಪರಿಷ್ಕರಣೆ ; ಕೂಡಲೇ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು : ಸಿದ್ದರಾಮಯ್ಯ

by ಪ್ರತಿಧ್ವನಿ
March 26, 2023
ಯಾರೇ ಹಣ ಕೊಟ್ರು ತಗೋರಿ ಆದ್ರೆ.. ವೋಟ್‌ ಮಾತ್ರ ಎಎಪಿ ಹಾಕಿ : ನಟ ಟೆನ್ನಿಸ್‌ ಕೃಷ್ಣ
Top Story

ಯಾರೇ ಹಣ ಕೊಟ್ರು ತಗೋರಿ ಆದ್ರೆ.. ವೋಟ್‌ ಮಾತ್ರ ಎಎಪಿ ಹಾಕಿ : ನಟ ಟೆನ್ನಿಸ್‌ ಕೃಷ್ಣ

by ಪ್ರತಿಧ್ವನಿ
March 28, 2023
ವರುಣ ಕ್ಷೇತ್ರದಲ್ಲೇ  ಸಿದ್ದರಾಮಯ್ಯರನ್ನು ಕಟ್ಟಿ ಹಾಕಲು ಬಿಜೆಪಿ ಮಾಸ್ಟರ್ ಪ್ಲ್ಯಾನ್
Top Story

ವರುಣ ಕ್ಷೇತ್ರದಲ್ಲೇ ಸಿದ್ದರಾಮಯ್ಯರನ್ನು ಕಟ್ಟಿ ಹಾಕಲು ಬಿಜೆಪಿ ಮಾಸ್ಟರ್ ಪ್ಲ್ಯಾನ್

by ಪ್ರತಿಧ್ವನಿ
March 31, 2023
ಒಂದು ಕಡೆ ಲಕ್ಷ.. ಕೋಟಿಗೆ ರೇಟು ಫಿಕ್ಸ್ ಮಾಡ್ತಾರೆ.. ಇನ್ನೊಂದು ಕಡೆ ಮೀಸಲಾತಿ ಅಂತಾರೆ : ಬಿಜೆಪಿ ವಿರುದ್ಧ ಹೆಚ್‌ಡಿಕೆ ಕಿಡಿ
Top Story

ಒಂದು ಕಡೆ ಲಕ್ಷ.. ಕೋಟಿಗೆ ರೇಟು ಫಿಕ್ಸ್ ಮಾಡ್ತಾರೆ.. ಇನ್ನೊಂದು ಕಡೆ ಮೀಸಲಾತಿ ಅಂತಾರೆ : ಬಿಜೆಪಿ ವಿರುದ್ಧ ಹೆಚ್‌ಡಿಕೆ ಕಿಡಿ

by ಪ್ರತಿಧ್ವನಿ
March 28, 2023
ಬಿಜೆಪಿ ಮೀಸಲಾತಿ ನೀಡಿದ್ದನ್ನು ನೋಡಿ ಕಾಂಗ್ರೆಸ್​ಗೆ ಹೊಟ್ಟೆಯುರಿ : ಗೋವಿಂದ ಕಾರಜೋಳ ವ್ಯಂಗ್ಯ
ಕರ್ನಾಟಕ

ಬಿಜೆಪಿ ಮೀಸಲಾತಿ ನೀಡಿದ್ದನ್ನು ನೋಡಿ ಕಾಂಗ್ರೆಸ್​ಗೆ ಹೊಟ್ಟೆಯುರಿ : ಗೋವಿಂದ ಕಾರಜೋಳ ವ್ಯಂಗ್ಯ

by ಮಂಜುನಾಥ ಬಿ
March 27, 2023
Next Post
ಬಿಜೆಪಿ ಸರ್ಕಾರಕ್ಕೂ ಲೋಕಾಯುಕ್ತಕ್ಕಿಂತ ಎಸಿಬಿಯೇ ಮುಖ್ಯವಾಯಿತೇ?

ಬಿಜೆಪಿ ಸರ್ಕಾರಕ್ಕೂ ಲೋಕಾಯುಕ್ತಕ್ಕಿಂತ ಎಸಿಬಿಯೇ ಮುಖ್ಯವಾಯಿತೇ?

ಕೊಡಗಿನಲ್ಲಿ ವಿವಿಧ ಇಲಾಖೆಗಳಲ್ಲಿ ಅರ್ಧಕ್ಕರ್ಧ ಹುದ್ದೆಗಳು ಖಾಲಿ ಖಾಲಿ

ಕೊಡಗಿನಲ್ಲಿ ವಿವಿಧ ಇಲಾಖೆಗಳಲ್ಲಿ ಅರ್ಧಕ್ಕರ್ಧ ಹುದ್ದೆಗಳು ಖಾಲಿ ಖಾಲಿ

ಕಾಶ್ಮೀರದ ಬಗ್ಗೆ ಸಿಟ್ಟಾಗಿದ್ದರೂ ಮಲೇಷ್ಯಾದಿಂದ ಅಧಿಕ ಪ್ರವಾಸಿಗರ ಭೇಟಿ!

ಕಾಶ್ಮೀರದ ಬಗ್ಗೆ ಸಿಟ್ಟಾಗಿದ್ದರೂ ಮಲೇಷ್ಯಾದಿಂದ ಅಧಿಕ ಪ್ರವಾಸಿಗರ ಭೇಟಿ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist