Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಭಾರತದ ಅಧಿಕಾರಸ್ಥರಿಗೆ ಫೇಕ್ ನ್ಯೂಸ್ ತಾಣಗಳ ಸಾಥ್!

ಭಾರತದ ಅಧಿಕಾರಸ್ಥರಿಗೆ ಫೇಕ್ ನ್ಯೂಸ್ ತಾಣಗಳ ಸಾಥ್!
ಭಾರತದ ಅಧಿಕಾರಸ್ಥರಿಗೆ ಫೇಕ್ ನ್ಯೂಸ್ ತಾಣಗಳ ಸಾಥ್!
Pratidhvani Dhvani

Pratidhvani Dhvani

November 15, 2019
Share on FacebookShare on Twitter

ಭಾರತದಲ್ಲಿ ಅಧಿಕಾರದಲ್ಲಿರುವವರ ಹಿತಾಸಕ್ತಿಗಾಗಿಯೇ ಜಗತ್ತಿನಲ್ಲಿ ನೂರಾರು ನಕಲಿ ಜಾಲತಾಣಗಳು ಸೃಷ್ಟಿಯಾಗಿವೆಯಂತೆ!ಹೌದು ಇದನ್ನು ನಂಬಲೇಬೇಕು. ಅಧಿಕಾರ ಹಿಡಿಯುವವರು ಭಾರತದಲ್ಲಿಯಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿ ತಮಗೆ ಬೇಕಾದುದನ್ನು ಬರೆಸಿಕೊಂಡು ಹಿಂಬಾಗಿಲ ಮೂಲಕ ಹೇಗೆ ಜನಪ್ರಿಯತೆಯನ್ನು ಗಳಿಸಲು ಹೇಗೆ ಹಾತೊರೆಯುತ್ತವೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

ಸಂಪುಟ ಸಭೆಯಲ್ಲಿ ಅಗಲಿದ ಮಕ್ಕಳನ್ನು ನೆನೆದು ಕಣ್ಣೀರಿಟ್ಟ ಸಿಎಂ ಏಕನಾಥ್ ಶಿಂಧೆ

ಸಿಎಂ ಕೇಜ್ರಿವಾಲ್ ನಿವಾಸ ಧ್ವಂಸ ಪ್ರಕರಣ : ಸತತ 2 ಗಂಟೆಗಳ ಕಾಲ ವಿಚಾರಣೆ ಎದುರಿಸಿದ ತೇಜಸ್ವಿ ಸೂರ್ಯ!

ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಮಾತ್ರ PSI ಹಗರಣ ಬಗ್ಗೆ ನಿಷ್ಪಕ್ಷಪಾತ ತನಿಖೆ ಸಾಧ್ಯ : ರಾಹುಲ್‌ ಗಾಂಧಿ

ಅಂದಹಾಗೆ ಜಗತ್ತಿನಾದ್ಯಂತ ಭಾರತದ ಅಧಿಕಾರಸ್ಥರ ಪರವಾಗಿ ಸುದ್ದಿಗಳನ್ನು ಮತ್ತು ನಕಲಿ ಸುದ್ದಿಗಳನ್ನು ಪ್ರಸಾರ ಮಾಡಲೆಂದೇ ಬರೋಬ್ಬರಿ 265 ನಕಲಿ ನ್ಯೂಸ್ ಮಾಧ್ಯಮ ತಾಣಗಳು ಕಾರ್ಯನಿರತವಾಗಿವೆ. ಈ ಮಾಧ್ಯಮ ಜಾಲತಾಣಗಳು ಭಾರತದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರ ಹಿತಾಸಕ್ತಿಗಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಣೆ ಮಾಡುತ್ತಿವೆ. ಇದನ್ನು ಭಾರತದಲ್ಲಿಯೇ ಕುಳಿತು ಮ್ಯಾನೇಜ್ ಮಾಡಲಾಗುತ್ತಿದೆ. ಹೀಗೆ ವಿಶ್ವದ 65 ದೇಶಗಳಲ್ಲಿ ಈ ಫೇಕ್ ನ್ಯೂಸ್ ಮೀಡಿಯಾ ಹೌಸ್ ಗಳು ಪತ್ತೆಯಾಗಿರುವ ಕರ್ಮಕಾಂಡವನ್ನು ಬ್ರುಸೆಲ್ಸ್ ಮೂಲದ ಇಯು ಡಿಸ್ಇನ್ಫೋ ಲ್ಯಾಬ್ ಎಂಬ ಸಂಸ್ಥೆ ಬಯಲು ಮಾಡಿದೆ.

ಮೂಲಗಳ ಪ್ರಕಾರ ಬಹುತೇಕ ಈ ಎಲ್ಲಾ ಫೇಕ್ ನ್ಯೂಸ್ ಮೀಡಿಯಾ ಹೌಸ್ ಗಳು ದೆಹಲಿ ಕೇಂದ್ರಿತ ಮಾಧ್ಯಮ ಸಂಸ್ಥೆಯೊಂದರ ಮೂಗಿನಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ನಕಲಿ ನ್ಯೂಸ್ ಹೌಸ್ ಗಳ ಕರ್ಮಕಾಂಡದ ಜಾಡನ್ನು ಹಿಡಿದು ತನಿಖೆ ನಡೆಸಲು ಹೊರಟ ಡಿಸ್ಇನ್ಫೋ ಲ್ಯಾಬ್ ನ ತಂಡಕ್ಕೆ ಒಂದೊಂದೇ ಕರಾಳ ಮುಖಗಳು ಕಾಣಿಸಿಕೊಳ್ಳತೊಡಗಿದವು.

ಈ ನಕಲಿ ನ್ಯೂಸ್ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದ ಸುದ್ದಿಯ ಪುಂಜಗಳನ್ನು ಎಳೆಎಳೆಯಾಗಿ ಬಿಡಿಸುತ್ತಾ ಹೋದಾಗ ಅವುಗಳ ಹಿಂದಿನ ದುರುದ್ದೇಶ ಬಯಲಾಗತೊಡಗಿದೆ. ಅಂದರೆ ಈ ಜಾಲತಾಣಗಳು ಭಾರತ ಸರ್ಕಾರದ ಪರವಾಗಿ ಯೂರೋಪಿಯನ್ ಯೂನಿಯನ್ ಮತ್ತು ವಿಶ್ವಸಂಸ್ಥೆಯ ಮೇಲೆ ಪ್ರಭಾವ ಬೀರುವಂತಹ ಮತ್ತು ಅಭಿಪ್ರಾಯವನ್ನು ಮೂಡಿಸುವಂತಹ ಸುದ್ದಿಗಳನ್ನೇ ಹೆಚ್ಚು ಪ್ರಸಾರ ಮಾಡುತ್ತಿದ್ದವು. ಇಷ್ಟೇ ಅಲ್ಲದೇ ನಮ್ಮ ದೇಶದಲ್ಲಿರುವ ಕೆಲವು ಸರ್ಕಾರದ ಮುಖವಾಣಿಯಂತಿರುವ ಮಾಧ್ಯಮ ಸಂಸ್ಥೆಗಳ ರೀತಿಯಲ್ಲಿ ಪಾಕಿಸ್ತಾನವನ್ನು ಟೀಕಿಸುವ ರೀತಿಯಲ್ಲಿನ ಲೇಖನಗಳು, ಟಿಪ್ಪಣಿಗಳನ್ನು ಹೆಚ್ಚಾಗಿ ಪ್ರಕಟಿಸುತ್ತಿದ್ದವು. ಈ ಮೂಲಕ ವಿಶ್ವಸಂಸ್ಥೆ ಮತ್ತು ಯೂರೋಪಿಯನ್ ಯೂನಿಯನ್ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಸುತ್ತಿದ್ದವು ಎಂದು ಸಂಸ್ಥೆ ಹೇಳಿದೆ.

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಅಧಿಕಾರಸ್ಥರ ಪರವಾಗಿ ಸುದ್ದಿಗಳನ್ನು ಬಿತ್ತರ ಮಾಡುತ್ತಿದ್ದ ಈ ಜಾಲತಾಣಗಳನ್ನು ಭಾರತದ ಸುದ್ದಿ ಮಾಧ್ಯಮವೊಂದು ಹಿಡಿತದಲ್ಲಿಟ್ಟುಕೊಂಡಿದೆ. ಇತ್ತೀಚಿಗೆ ಯೂರೋಪಿಯನ್ ಸಂಸದರನ್ನು ಕಾಶ್ಮೀರಕ್ಕೆ ಆಹ್ವಾನಿಸಲಾಗಿತ್ತು. ಈ ಭೇಟಿಯನ್ನು ಆಯೋಜಿಸಿದ್ದು ನ್ಯೂಡೆಲ್ಲಿ ಟೈಮ್ಸ್ ಮತ್ತು ಶ್ರೀವಾಸ್ತವ ಗ್ರೂಪ್ ನೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿರುವ Non-Aligned Studies ಎಂಬ ಸಂಸ್ಥೆ. ತನಿಖೆ ನಡೆಸಿದ ಸಂಸ್ಥೆಯ ಪ್ರತಿನಿಧಿಗಳಿಗೆ ಮೂಡಿದ್ದ ಅನುಮಾನಗಳು ಗಟ್ಟಿಯಾಗಿದ್ದು ನ್ಯೂಡೆಲ್ಲಿ ಟೈಮ್ಸ್ ಮತ್ತು ಶ್ರೀವಾಸ್ತವ ಗ್ರೂಪಿನ ಐಪಿ ವಿಳಾಸ ಒಂದೇ ಎಂಬುದು ತಿಳಿದಾಗ.

ಇನ್ನು ಯೂರೋಪಿಯನ್ ಸಂಸದರು ಕಾಶ್ಮೀರಕ್ಕೆ ಭೇಟಿ ನೀಡಿದಾಗ ಈ ಎಲ್ಲಾ ಫೇಕ್ ನ್ಯೂಸ್ ಸಂಸ್ಥೆಗಳು ಎಲ್ಲಿಲ್ಲದ ಆಸಕ್ತಿ ತೋರಿಸಿ ಸಕ್ರಿಯವಾಗಿದ್ದವು.

ಇಯು ಡಿಸ್ಇನ್ಫೋ ಲ್ಯಾಬ್ ನ ತನಿಖಾ ತಂಡವು ನ್ಯೂಯಾರ್ಕ್ ಮಾರ್ನಿಂಗ್ ಟೆಲಿಗ್ರಾಫ್, ದಿ ಡಬ್ಲಿನ್ ಗೆಜೆಟ್ ಹಾಗೂ ಟೈಮ್ಸ್ ಆಫ್ ಪೋರ್ಚುಗಲ್ ಎಂಬ ಸುದ್ದಿ ಜಾಲತಾಣಗಳಲ್ಲಿ ಬರುತ್ತಿದ್ದ ಸುದ್ದಿಗಳನ್ನು ಆಳವಾಗಿ ಅಧ್ಯಯನಕ್ಕೆ ಒಳಪಡಿಸಿದೆ. ಆಗಲೇ ಗೊತ್ತಾದದ್ದು ಈ ಮೂರು ಜಾಲತಾಣಗಳು ಭಾರತ ಸರ್ಕಾರದ ಪರವಾದ ಸುದ್ದಿಗಳನ್ನು ಹೆಚ್ಚಾಗಿ ಪ್ರಸಾರ ಮಾಡುತ್ತಿವೆ ಎಂಬುದು. ಇವುಗಳು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಭಾರತ ಸರ್ಕಾರ ಮತ್ತು ಸರ್ಕಾರದ ಮುಂದಾಳತ್ವ ವಹಿಸಿರುವವರ ಪರವಾಗಿ ಸುದ್ದಿಗಳನ್ನು ಬಿತ್ತರಿಸುವ ಮೂಲಕ ಯೂರೋಪಿಯನ್ ಯೂನಿಯನ್ ದೇಶಗಳಿಂದ ಒಳ್ಳೆಯ ಅಭಿಪ್ರಾಯಗಳು ಬರುವಂತೆ ನೋಡಿಕೊಳ್ಳುತ್ತಿದ್ದವು.

ಈ ನಕಲಿ ಸುದ್ದಿ ಜಾಲತಾಣಗಳು ಇಷ್ಟಕ್ಕೇ ಸೀಮಿತವಾಗಿಲ್ಲ. ಯೂರೋಪಿನ ಪಾರ್ಲಿಮೆಂಟ್ ಹೆಸರನ್ನೂ ತಮ್ಮ ಸುದ್ದಿ ಬಿತ್ತರಕ್ಕೆ ದುರ್ಬಳಕೆ ಮಾಡಿಕೊಂಡಿವೆ. ಯೂರೋಪಿಯನ್ ಪಾರ್ಲಿಮೆಂಟ್ ಮ್ಯಾಗಜಿನ್ ಎಂದು ಸ್ವಘೋಷಣೆ ಮಾಡಿಕೊಂಡ EP Today ಎಂಬ ಜಾಲತಾಣವು ಭಾರತ ಸರ್ಕಾರದ ಮುಖವಾಣಿಯಂತೆ ಕಾರ್ಯನಿರ್ವಹಿಸುತ್ತಿತ್ತು.

EP Today ಯ ತುಂಬೆಲ್ಲಾ ಇದ್ದ ಹೆಚ್ಚು ಲೇಖನಗಳೆಂದರೆ ಪಾಕಿಸ್ತಾನಿ ವಿರೋಧಿಯವು ಮತ್ತು ಭಾರತ ಸರ್ಕಾರ ಅಂದರೆ ಬಿಜೆಪಿ ಸರ್ಕಾರವನ್ನು ಹೊಗಳುವ ಲೇಖನಗಳು.

EP Today ಸುಮಾರು ಒಂದೂವರೆ ಲಕ್ಷದಷ್ಟು ಫೇಸ್ ಬುಕ್ ಫ್ಯಾನ್ ಗಳನ್ನು ಹೊಂದಿದೆಯಾದರೂ, ಇದರಲ್ಲಿ ಪ್ರಕಟವಾಗುವ ಲೇಖನಗಳಲ್ಲಿ ಬಹುತೇಕ ಲೇಖನಗಳು ಅಮೇರಿಕಾದ ಜಾಲತಾಣಗಳು ಮತ್ತು rt.comನಿಂದ ಎರವಲು ಪಡೆದ ಲೇಖನಗಳಾಗಿರುತ್ತವೆ.

RS 500
RS 1500

SCAN HERE

don't miss it !

ಮುಂದಿನ 24 ಗಂಟೆಗಳ ಕಾಲ ಕರಾವಳಿ ಜಿಲ್ಲೆಗಳಿಗೆ ಹೈ ಅಲರ್ಟ್ : ಹವಾಮಾನ ಇಲಾಖೆ
ಕರ್ನಾಟಕ

ಮುಂದಿನ 24 ಗಂಟೆಗಳ ಕಾಲ ಕರಾವಳಿ ಜಿಲ್ಲೆಗಳಿಗೆ ಹೈ ಅಲರ್ಟ್ : ಹವಾಮಾನ ಇಲಾಖೆ

by ಕರ್ಣ
July 1, 2022
ಡಿವೋರ್ಸ್ ಪಡೆದ ವೃದ್ಧ ದಂಪತಿ 52 ವರ್ಷ ನಂತರ ಮತ್ತೆ ಒಂದಾದರು!
ಫೀಚರ್ಸ್

ಡಿವೋರ್ಸ್ ಪಡೆದ ವೃದ್ಧ ದಂಪತಿ 52 ವರ್ಷ ನಂತರ ಮತ್ತೆ ಒಂದಾದರು!

by ಪ್ರತಿಧ್ವನಿ
June 28, 2022
ರಸ್ತೆ ಮೇಲೆ ಮಳೆ ನೀರು ತಡೆಗಟ್ಟಲು ಕ್ರಾಸ್ ಕಲ್ವರ್ಟ್ಸ್ ಅಳವಡಿಕೆ : BBMP ಕಮಿಷನರ್ ತುಷಾರ್ ಗಿರಿನಾಥ್ !
ಕರ್ನಾಟಕ

ರಸ್ತೆ ಮೇಲೆ ಮಳೆ ನೀರು ತಡೆಗಟ್ಟಲು ಕ್ರಾಸ್ ಕಲ್ವರ್ಟ್ಸ್ ಅಳವಡಿಕೆ : BBMP ಕಮಿಷನರ್ ತುಷಾರ್ ಗಿರಿನಾಥ್ !

by ಕರ್ಣ
July 2, 2022
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಬಸ್ ಪಾಸ್ ಅವಧಿ ವಿಸ್ತರಿಸಿದ KSRTC
ಕರ್ನಾಟಕ

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಬಸ್ ಪಾಸ್ ಅವಧಿ ವಿಸ್ತರಿಸಿದ KSRTC

by ಪ್ರತಿಧ್ವನಿ
June 30, 2022
ಬೈರಾಗಿ 2 ಬರುತ್ತೆ! : ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಹೇಳಿದ್ಧೇನು?
ಸಿನಿಮಾ

ಬೈರಾಗಿ 2 ಬರುತ್ತೆ! : ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಹೇಳಿದ್ಧೇನು?

by ಪ್ರತಿಧ್ವನಿ
July 3, 2022
Next Post
ದಿಕ್ಕಿಲ್ಲದ ಭಗವತಿ

ದಿಕ್ಕಿಲ್ಲದ ಭಗವತಿ, ಸಮುದ್ರ ತಳ ಸೇರಿದ ತ್ರಿದೇವ್, ಸಾಲದಲ್ಲಿ ಬಿದ್ದ ಕಂಪೆನಿ

ಜಿಡಿಪಿ ಶೇ.4.2 ಕ್ಕೆ ಕುಸಿಯುವ ಆತಂಕ; ಇಲ್ಲಿವೆ ನೋಡಿ ಹನ್ನೆರಡು ಕಾರಣಗಳು!

ಜಿಡಿಪಿ ಶೇ.4.2 ಕ್ಕೆ ಕುಸಿಯುವ ಆತಂಕ; ಇಲ್ಲಿವೆ ನೋಡಿ ಹನ್ನೆರಡು ಕಾರಣಗಳು!

ರಫೇಲ್ ತೀರ್ಪು: ಅರೆಜೀವದ ಹಾವು ಮತ್ತು ಮೆತ್ತಗಾದ ಕೋಲು!

ರಫೇಲ್ ತೀರ್ಪು: ಅರೆಜೀವದ ಹಾವು ಮತ್ತು ಮೆತ್ತಗಾದ ಕೋಲು!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist