• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಬೀಫ್ ಸಾಗಾಟ ಆರೋಪ: ಪೋಲಿಸರ ಸಮ್ಮುಖದಲ್ಲೇ ವ್ಯಕ್ತಿಗೆ ಸುತ್ತಿಗೆಯಿಂದ ಹಲ್ಲೆ

by
August 1, 2020
in ದೇಶ
0
ಬೀಫ್ ಸಾಗಾಟ ಆರೋಪ: ಪೋಲಿಸರ ಸಮ್ಮುಖದಲ್ಲೇ ವ್ಯಕ್ತಿಗೆ ಸುತ್ತಿಗೆಯಿಂದ ಹಲ್ಲೆ
Share on WhatsAppShare on FacebookShare on Telegram

ಗೋಮಾಂಸ ಸಾಗಾಟ ಮಾಡುತ್ತಿದ್ದಾರೆಂಬ ಆರೋಪದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದೆ. ಪೋಲಿಸರ ಸಮ್ಮುಖದಲ್ಲೇ ನಡೆದ ಹಲ್ಲೆಯಲ್ಲಿ ದುಷ್ಕರ್ಮಿಗಳು ಸುತ್ತುವರೆದು ಸುತ್ತಿಗೆ ಮೂಲಕ ಸಂತ್ರಸ್ತರ ಮೇಲೆ ದಾರುಣವಾಗಿ ದಾಳಿ ನಡೆಸಿದ್ದಾರೆ. ಓರ್ವ ವ್ಯಕ್ತಿಯನ್ನು ಕ್ರೂರವಾಗಿ ಥಳಿಸುತ್ತಿರುವಾಗಲೂ ಪೋಲಿಸರು ಹಾಗೂ ಸುತ್ತಲಿರುವ ಜನ ಮೂಕ ಪ್ರೇಕ್ಷಕರಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಲ್ಲೆಕೋರರ ಹಾಗೂ ಪೋಲಿಸರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ADVERTISEMENT

ಹಲ್ಲೆಗೊಳಗಾದ ವ್ಯಕ್ತಿಯನ್ನು, ಲುಕ್ಮಾನ್‌ ಎಂದು ಗುರುತಿಸಿದ್ದು, ಕಳೆದ ಹಲವಾರು ವರ್ಷಗಳಿಂದ ಲುಕ್ಮಾನ್ ಪಿಕಪ್‌ ಚಾಲಕರಾಗಿ ದುಡಿಯುತ್ತಿದ್ದರು ಎನ್ನಲಾಗಿದೆ.

ಶುಕ್ರವಾರ ಬೆಳಗಿನ ಹೊತ್ತು ಹಲ್ಲೆ ನಡೆದಿದೆಯೆಂದು NDTV ವರದಿ ಮಾಡಿದೆ. 8 ಕಿಮೀ ದೂರದಿಂದ ಬೆನ್ನಟ್ಟಿ ಬಂದ ದುಷ್ಕರ್ಮಿಗಳ ತಂಡ ಗುರ್ಗಾಂವ್‌ನ ಬಹುರಾಷ್ಟ್ರೀಯ ಸಾಫ್ಟ್‌ವೇರ್‌ ಕಂಪೆನಿಗಳ ಕಟ್ಟಡ ಸಮೀಪ ಲುಕ್ಮಾನ್‌ ಚಲಾಯಿಸಿಕೊಂಡು ಬರುತ್ತಿದ್ದ ಪಿಕಪ್‌ಗೆ ಅಡ್ಡಗಟ್ಟಿ ಚಾಲಕ ಸೀಟಿನಿಂದ ಹೊರಗೆಳೆದು ಭೀಕರವಾಗಿ ಹಲ್ಲೆ ನಡೆಸಿದೆ. ಜೀವಚ್ಛವವಾಗಿದ್ದ ಲುಕ್ಮಾನ್‌ರನ್ನು ಮತ್ತೆ ಪಿಕಪ್‌ನಲ್ಲಿ ಕಟ್ಟಿ ಗುರ್ಗಾಂವ್‌ನ ಬಾದ್‌ಷಾಪುರ್‌ ಗ್ರಾಮಕ್ಕೆ ಕರೆದೊಯ್ಯಲಾಗಿದೆ ಅಲ್ಲಿ ಮತ್ತೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಲ್ಲಿ ಹೇಳಿದೆ.

2015 ರಲ್ಲಿ ದಾದ್ರಿಯಲ್ಲಿ ನಡೆದ ಗುಂಪು ಹಲ್ಲೆಯನ್ನು ನೆನಪಿಸುವಂತೆ ಗುರ್ಗಾಂವ್‌ನಲ್ಲೂ ಗುಂಪು ಹಲ್ಲೆ ನಡೆದಿದೆ. ದಾದ್ರಿಯಂತೆ ಪೋಲಿಸರು ಹಲ್ಲೆಕೋರರನ್ನು ಬಂಧಿಸುವುದಕ್ಕಿಂತಲೂ ಮಾಂಸ ಯಾವುದೆಂದು ಪತ್ತೆಹಚ್ಚಲು ಉತ್ಸುಕರಾಗಿದ್ದರು ಎಂದು NDTV ವರದಿ ಮಾಡಿದೆ.

ಘಟನೆ ಸಂಬಂಧ ಓರ್ವ ಹಲ್ಲೆಕೋರನನ್ನು ಬಂಧಿಸಲಾಗಿದೆ. ವೀಡಿಯೋದಲ್ಲಿ ಹಲ್ಲೆ ನಡೆಸುವವರನ್ನು ಪತ್ತೆಹಚ್ಚುತ್ತಿದ್ದೇವೆ ಎಂದು ಗುರ್ಗಾಂವ್‌ ಅಡಿಷನಲ್‌ ಪೋಲಿಸ್ ಕಮಿಷನರ್‌ ಪ್ರಿತ್‌ಪಾಲ್‌ ಸಿಂಗ್‌ ಹೇಳಿದ್ದಾರೆ. ಅದಾಗ್ಯೂ, ಆಸ್ಪತ್ರೆಯಲ್ಲಿ ಲುಕ್ಮಾನ್‌ ಬಳಿಯಿಂದ ದೂರು ಪಡೆದ ಪೋಲಿಸರು “ಅಪರಿಚಿತ ಆರೋಪಿಗಳʼ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಪೋಲಿಸರ ಉಪಸ್ಥಿತಿಯಲ್ಲೇ ಹಲ್ಲೆಕೋರರು ನಿರ್ಭೀತವಾಗಿ ಹಲ್ಲೆ ನಡೆಸುವುದು ವೀಡಿಯೋಗಳಲ್ಲಿ ದಾಖಲಾಗಿದೆ. ಹಲ್ಲೆಕೋರರನ್ನು ನಿಯಂತ್ರಿಸಲು ಪೋಲಿಸರು ವಿಫಲರಾಗಿರುವುದು ಸಂಪೂರ್ಣ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ತೋರಿಸುತ್ತದೆ.

Also Read: ತ್ರಿವಳಿ ತಲಾಖ್ ಗೆ ತೋರಿದ ಧಾವಂತ ಗುಂಪು ಹತ್ಯೆ ನಿಷೇಧಕ್ಕೆಯಾಕಿಲ್ಲ?

Previous Post

ಬಿಜೆಪಿ ರಾಜ್ಯ ಘಟಕ ಪುನರ್ ರಚನೆ: ವಿಜಯೇಂದ್ರಗೆ ನಿಜಕ್ಕೂ ಸಿಕ್ಕಿದ್ದು ಬಡ್ತಿಯೇ?

Next Post

ಹೈಕಮಾಂಡ್ ಕ್ಷಮಿಸಿದರೆ ಬಂಡಾಯ ಶಾಸಕರ ಮರಳುವಿಕೆಗೆ ಸ್ವಾಗತ- ಗೆಹ್ಲೋಟ್

Related Posts

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!
Top Story

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

by ಪ್ರತಿಧ್ವನಿ
April 14, 2026
0

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. https://youtu.be/jc4uNwRML78?si=OFDsWjRgGzT4buqt ಇಂದು...

Read moreDetails
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

April 14, 2026
Next Post
ಹೈಕಮಾಂಡ್ ಕ್ಷಮಿಸಿದರೆ ಬಂಡಾಯ ಶಾಸಕರ ಮರಳುವಿಕೆಗೆ ಸ್ವಾಗತ- ಗೆಹ್ಲೋಟ್

ಹೈಕಮಾಂಡ್ ಕ್ಷಮಿಸಿದರೆ ಬಂಡಾಯ ಶಾಸಕರ ಮರಳುವಿಕೆಗೆ ಸ್ವಾಗತ- ಗೆಹ್ಲೋಟ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada