Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಬಾಟಲ್‌ ಪುನರ್‌ಬಳಕೆ ಮಾಡದ ಕೋಕ್‌, ಪೆಪ್ಸಿ ಕಂಪನಿ ವಿರುದ್ಧ ಮೊಕದ್ದಮೆ

ಬಾಟಲ್‌ ಪುನರ್‌ಬಳಕೆ ಮಾಡದ ಕೋಕ್‌, ಪೆಪ್ಸಿ ಕಂಪನಿ ವಿರುದ್ಧ ಮೊಕದ್ದಮೆ
ಬಾಟಲ್‌ ಪುನರ್‌ಬಳಕೆ ಮಾಡದ ಕೋಕ್‌

February 28, 2020
Share on FacebookShare on Twitter

ವಿಶ್ವದ ದೈತ್ಯ ತಂಪುಪಾನೀಯ ಕಂಪನಿಗಳಾದ ಪೆಪ್ಸಿ, ಕೋಕ್‌ ಹಾಗೂ ನೆಸ್ಲೆ ವಿರುದ್ಧ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲಿನ ಪರಿಸರವಾದಿಗಳ ತಂಡ ಈ ಕಂಪನಿಗಳು ಬೇಕಾಬಿಟ್ಟಿ ಪ್ಲಾಸ್ಟಿಕ್‌ ಬಾಟಲ್‌ ಉತ್ಪಾದನೆ ಮಾಡುವುದರ ಜೊತೆ, ಬಾಟಲ್‌ ಮೇಲೆ ಪುನರ್‌ಬಳಕೆ ಮಾಡಬಹುದೆಂದು ಹೇಳಿ ಗ್ರಾಹಕರಿಗೆ ತಪ್ಪು ಸಂದೇಶ ನೀಡಿವೆ ಎಂದು ದೂರಿದೆ.

ಹೆಚ್ಚು ಓದಿದ ಸ್ಟೋರಿಗಳು

ಬಿರುಗಾಳಿಯಾಗಿರುವ ರಾಹುಲ್ ಗಾಂಧಿ ಸುನಾಮಿ ಆಗುಬಲ್ಲರೆ?

ಯಾರಾದರೂ ಒಳಗೆ ಬಂದರೆ ಅಟ್ಟಾಡಿಸಿ ಹೊಡಿರಿ, ಮಿಕ್ಕಿದ್ದು ನಾನು ನೋಡಿಕೊಳ್ಳುತ್ತೇನೆ’ : ಸಚಿವ ಮುನಿರತ್ನ ವಿವಾದಾತ್ಮಕ ಹೇಳಿಕೆ

ನಂದಿನಿ ಮೊಸರು ಪ್ಯಾಕೆಟ್‌ ಮೇಲೆ ‘ದಹಿ’ ಮುದ್ರಣ ಆದೇಶ ಹಿಂಪಡೆದ FSSAI.. ಕನ್ನಡಿಗರು ಟೀಕೆ ಬೆನ್ನಲ್ಲೇ ನಿರ್ಧಾರ..!

ಬುಧವಾರ ಕ್ಯಾಲಿಫೋರ್ನಿಯಾದ ಸ್ಯಾನ್‌ ಮಾಟಿಯೋದ ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆಗೆ ಬಂದಿತ್ತು. ಪ್ರಕರಣ ದಾಖಲಿಸಿದ ಅರ್ಥ್‌ ಐಲ್ಯಾಂಡ್‌ ಸಂಸ್ಥೆಯ ಸ್ವಯಂಸೇವಕರು ನ್ಯಾಯಾಧೀಶರ ಮುಂದೆ ವಾದಿಸಿ, ಈ ಕಂಪನಿಗಳಿಂದ ದಿನಕ್ಕೆ ಲಕ್ಷಾಂತರ ಬಾಟಲ್‌ಗಳನ್ನ ತಯಾರಿಸುತ್ತದೆ, ಇವೆಲ್ಲ ಸಾಗರ-ಸಮುದ್ರದಂಚಿನಲ್ಲಿ ರಾಶಿ ರಾಶಿ ಬಿದ್ದಿರುತ್ತವೆ. ಪರಿಸರ ಹಾಳುಗೆಡವಲು ಈ ಕಂಪನಿಗಳ ಪಾತ್ರವೇ ಹೆಚ್ಚು, ನಾವ್ಯಾಕೆ ಈ ಕಂಪನಿಗಳನ್ನ ಪರಿಸರ ವಿನಾಶಕ್ಕೆ ಕಾರಣೀಭೂತರು ಎಂದು ಪರಿಗಣಿಸಬಾರದು ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡಿದೆ. ಅರ್ಥ್‌ ಐಲ್ಯಾಂಡ್‌ ಕಾರ್ಯಕರ್ತರು ಮುಂದುವರಿದು, ತಮ್ಮ ಮೊಕದ್ದಮೆಯಲ್ಲಿ ಈ ಕಂಪನಿಗಳು ಪರಿಸರ ಹಾನಿ ನಷ್ಟ ಭರಿಸಬೇಕು ಹಾಗೂ ಈ ಬಾಟಲ್‌ಗಳನ್ನ ಪುನರ್‌ಬಳಕೆ ಮಾಡಲು ಯಾವುದೇ ಆಸಕ್ತಿ ತೋರದೇ ಬಾಟಲ್‌ ಮೇಲೆ ಪುನರ್‌ಬಳಕೆ ಮಾಡಬಹುದು ಎಂದು ಮುದ್ರಿಸುತ್ತಿವೆ, ಈ ಪೊಳ್ಳು ಜಾಹಿರಾತನ್ನೂ ನಿಲ್ಲಿಸಲಿ ಎಂದು ತಾಕೀತು ಮಾಡಿವೆ.

ದಿ ಗಾರ್ಡಿಯನ್‌ ಈ ಸುದ್ದಿಯನ್ನ ಬಿತ್ತರಿಸಿದ್ದು ಅರ್ಥ್‌ ಐಲ್ಯಾಂಡ್‌ನ ಡೇವಿಡ್‌ ಫಿಲಿಪ್‌ ಎಂಬಾತನ ಹೇಳಿಕೆಯನ್ನ ದಾಖಲಿಸಿದೆ. ಫಿಲಿಪ್‌ ಪ್ರಕಾರ ಯೆಥೇಚ್ಚವಾಗಿ ಈ ಕಂಪನಿಗಳು ಪ್ಲಾಸ್ಟಿಕ್‌ ಬಾಟಲ್‌ಗಳನ್ನ ತಯಾರು ಮಾಡುವುದರಿಂದ ಇವುಗಳನ್ನ ಹೊಣೆ ಮಾಡಬೇಕು, ಆ ಕಂಪನಿಗಳಿಗೂ ಈ ಬಾಟೆಲ್‌ಗಳು ಮರುಬಳಕೆಯಾಗುವುದಿಲ್ಲ ಎಂಬ ಕಟು ಸತ್ಯ ಗೊತ್ತಿದೆ. ಆದರೆ, ಯಾರೂ ಈ ಬಾಟಲ್‌ಗಳನ್ನ ಸಂಗ್ರಹಿಸುವುದಿಲ್ಲ, ಅಂತಹ ಕೆಲಸಕ್ಕೆ ಈ ಸಂಸ್ಥೆಗಳಿಂದಲೂ ಯಾವುದೇ ನೆರವು ಇಲ್ಲ. ಆದರೂ ಬಾಟಲ್‌ ಲೇಬಲ್‌ ಮೇಲೆ ಪುನರ್‌ ಬಳಕೆ ಮಾಡಬಹುದು ಎಂದು ಮುದ್ರಿಸುತ್ತವೆ, ಮೊದಲು ಆ ಜಾಹೀರಾತನ್ನೂ ನಿಲ್ಲಿಸಬೇಕು. ಯಾಕೆಂದರೆ, ಜನರ ಮನಸ್ಸಿನಲ್ಲಿ ಈ ಬಾಟಲ್‌ಗಳು ಪುನರ್‌ ಬಳಕೆಯಾಗುತ್ತವೆ ಎಂಬ ಭಾವನೆ ಬರುತ್ತೆ, ಎನ್ನುತ್ತಾರೆ ಫಿಲಿಪ್‌.

ಕಳೆದ ವರ್ಷ ಸುಮಾರು ಎಪ್ಪತ್ತೆರಡು ಸಾವಿರ ಸ್ವಯಂಸೇವಕರ ತಂಡ ವಿಶ್ವದೆಲ್ಲೆಡೆ ಸಾಗರ ಸಮುದ್ರದ ಕಿನಾರೆಯಲ್ಲಿ ಬಿದ್ದಿರುವ ಬಾಟಲ್‌ಗಳನ್ನ ಸಂಗ್ರಹಿಸಿದಾಗ ವಿಶ್ವದ ಹತ್ತು ಪ್ರತಿಷ್ಠಿತ ತಂಪು ಪಾನೀಯ ಕಂಪನಿಗಳ ಬಾಟಲ್‌ಗಳೇ ಹೆಚ್ಚಿದ್ದವು, ಅದರಲ್ಲಿ ಪೆಪ್ಸಿ, ಕೋಕ್‌ ಹಾಗೂ ನೆಸ್ಲೇ ಮೊದಲ ಮೂರು ಸ್ಥಾನದಲ್ಲಿದ್ದವು. ಸದ್ಯ ಮೊಕದ್ದಮೆ ಹೇರಿಕೊಂಡಿರುವ ಈ ಕಂಪನಿಗಳು ಇನ್ನೂ ಪ್ರಕರಣದ ಗಹನತೆಯನ್ನ ವಿಶ್ಲೇಷಣೆ ಮಾಡುತ್ತಿವೆ. ವಿಶ್ವದೆಲ್ಲೆಡೆ ಶೇ. 10ರಷ್ಟು ಮಾತ್ರ ಈ ಬಾಟಲ್‌ಗಳು ಮರುಬಳಕೆಯಾಗುತ್ತವೆ ಅಂದರೆ ಅದೆಷ್ಟರ ಮಟ್ಟಿಗೆ ಬಾಟೆಲ್‌ಗಳು ಪರಿಸರಕ್ಕೆ ಸುರಿಯುತ್ತಿರಬಹುದು ಯೋಚಿಸಿ. ಅದೂ ಕಾನೂನುಗಳನ್ನ ಪಾಲನೆ ಮಾಡುವ ಅಮೆರಿಕದಲ್ಲೇ ಹೀಗಾದರೆ ಭಾರತದಲ್ಲಿ ಇದರ ಪರಿಣಾಮ ಎಷ್ಟರಮಟ್ಟಿಗಿದೆ ಎಂಬುದನ್ನ ಯೋಚಿಸಿದರೆ ಸ್ವಲ್ಪ ವರ್ಷಗಳಲ್ಲಿ ಕಾಲಿಟ್ಟಲ್ಲೆಲ್ಲಾ ಪ್ಲಾಸ್ಟಿಕ್‌ ಬಾಟಲ್‌ಗಳೇ ತುಂಬಿ ಹೋಗುತ್ತವೆ.

ಭಾರತದಂತಹ ರಾಷ್ಟ್ರದಲ್ಲಿ ಏನೂ ಬೇಕಾದರೂ ಮಾಡಬಹುದು, ಇಲ್ಲಿನ ಕಂಪನಿಗಳಿಗೆ ಕಾನೂನಿನ ಹೆದರಿಕೆ ಇಲ್ಲ, ಸರ್ಕಾರಗಳಿಗೆ ಈ ಬಗ್ಗೆ ಕಾಳಜಿ ಇಲ್ಲ. ಪ್ರಸಿದ್ಧ ಪ್ರವಾಸಿ ತಾಣಗಳಲ್ಲೊಮ್ಮೆ ನೋಡಿ ರಾಶಿ ರಾಶಿ ಪ್ಲಾಸ್ಟಿಕ್‌ ಬಾಟಲ್‌ ಬಿದ್ದಿರುತ್ತವೆ, ಹೆದ್ದಾರಿಯಲ್ಲಂತೂ ಹತ್ತು ಅಡಿ ಅಂತರದಲ್ಲೊಂದು ಬಾಟಲ್‌ ಬಿದ್ದಿರುತ್ತದೆ. ಗಿರಿಧಾಮ, ಜಲಪಾತ, ದೇವಸ್ಥಾನದ ಸುತ್ತಮುತ್ತಲೆಲ್ಲಾ ಬಾಟಲ್‌ಗಳದ್ದೇ ರಾಶಿ, ನಮ್ಮ ದೇಶದಲ್ಲೂ ಇಂತಹ ಪ್ರಕರಣಗಳನ್ನೇಕೆ ದಾಖಲಿಸುವುದಿಲ್ಲ? ಪರಿಸರ ಪರ ಹೋರಾಟಗಳು ಪರಿಣಾಮಕಾರಿಯಾಗಿಲ್ಲವೇ? ಅಥವಾ ನ್ಯಾಯಾಲಯಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುತ್ತಿಲ್ಲವೇ?

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸಚಿವ ಮುನಿರತ್ನಂ‌ ಬೆಂಬಲಿಗರ ಗೂಂಡಾಗಿರಿ..!
Top Story

ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸಚಿವ ಮುನಿರತ್ನಂ‌ ಬೆಂಬಲಿಗರ ಗೂಂಡಾಗಿರಿ..!

by ಪ್ರತಿಧ್ವನಿ
March 27, 2023
ರಶ್ಮಿಕಾ ಬೋಲ್ಡ್‌ ಲುಕ್‌ಗೆ ಅಭಿಮಾನಿಗಳು ಫಿದಾ..!
ಸಿನಿಮಾ

ರಶ್ಮಿಕಾ ಬೋಲ್ಡ್‌ ಲುಕ್‌ಗೆ ಅಭಿಮಾನಿಗಳು ಫಿದಾ..!

by ಪ್ರತಿಧ್ವನಿ
March 28, 2023
ಸಾಮಾಜಿಕ ಬಹಿಷ್ಕಾರ ಅಸ್ಪೃಶ್ಯತೆಯ ಮತ್ತೊಂದು ಆಯಾಮ..ಮುಟ್ಟಬಹುದು-ಕೂಡದು ಎಂಬ ಸಾಮಾಜಿಕ ನಿರ್ಬಂಧ ನಮ್ಮ ಮನೆಗಳೊಳಗಿನಿಂದಲೇ ಆರಂಭವಾಗುತ್ತದೆ
ಅಂಕಣ

ಸಾಮಾಜಿಕ ಬಹಿಷ್ಕಾರ ಅಸ್ಪೃಶ್ಯತೆಯ ಮತ್ತೊಂದು ಆಯಾಮ..ಮುಟ್ಟಬಹುದು-ಕೂಡದು ಎಂಬ ಸಾಮಾಜಿಕ ನಿರ್ಬಂಧ ನಮ್ಮ ಮನೆಗಳೊಳಗಿನಿಂದಲೇ ಆರಂಭವಾಗುತ್ತದೆ

by ನಾ ದಿವಾಕರ
March 30, 2023
ಕಲ್ಲು ತೂರಾಟದ ಹಿಂದೆ ಕಾಂಗ್ರೆಸ್ ಪಾತ್ರವಿಲ್ಲ;  ಕಾಂಗ್ರೆಸ್ ಮುಖಂಡ ನಾಗರಾಜಗೌಡ ಸ್ಪಷ್ಟನೆ
Top Story

ಕಲ್ಲು ತೂರಾಟದ ಹಿಂದೆ ಕಾಂಗ್ರೆಸ್ ಪಾತ್ರವಿಲ್ಲ; ಕಾಂಗ್ರೆಸ್ ಮುಖಂಡ ನಾಗರಾಜಗೌಡ ಸ್ಪಷ್ಟನೆ

by ಪ್ರತಿಧ್ವನಿ
March 28, 2023
ಅಮ್ಮನಿಗೆ ಟಿಕೆಟ್‌ ಇಲ್ಲಾಂದ್ರೆ ರಾಜಿನಾಮೆ: ಪ್ರಜ್ವಲ್‌ ಬೆದರಿಕೆಗೆ ಹೆಚ್‌ಡಿಕೆ ಕೊಟ್ರು ಖಡಕ್‌ ಉತ್ತರ
Top Story

ಅಮ್ಮನಿಗೆ ಟಿಕೆಟ್‌ ಇಲ್ಲಾಂದ್ರೆ ರಾಜಿನಾಮೆ: ಪ್ರಜ್ವಲ್‌ ಬೆದರಿಕೆಗೆ ಹೆಚ್‌ಡಿಕೆ ಕೊಟ್ರು ಖಡಕ್‌ ಉತ್ತರ

by ಪ್ರತಿಧ್ವನಿ
March 30, 2023
Next Post
ಕಳಸಾ-ಬಂಡೂರಿ ಯೋಜನೆಯಲ್ಲಿರುವ ಸವಾಲು ಮೆಟ್ಟಿನಿಲ್ಲಬೇಕಿದೆ ಸರ್ಕಾರ

ಕಳಸಾ-ಬಂಡೂರಿ ಯೋಜನೆಯಲ್ಲಿರುವ ಸವಾಲು ಮೆಟ್ಟಿನಿಲ್ಲಬೇಕಿದೆ ಸರ್ಕಾರ

ದೆಹಲಿ ಗಲಭೆ: ತನಿಖೆಯಲ್ಲಿ ನಡೆಯುತ್ತಿದೆಯೇ ತಾರತಮ್ಯ? 

ದೆಹಲಿ ಗಲಭೆ: ತನಿಖೆಯಲ್ಲಿ ನಡೆಯುತ್ತಿದೆಯೇ ತಾರತಮ್ಯ? 

ಆರ್ಥಿಕತೆಯಲ್ಲಿ ಚೇತರಿಕೆ! 7 ವರ್ಷದ ಹಿಂದಿನ ಸ್ಥಿತಿಯಲ್ಲಿ ಭಾರತ!

ಆರ್ಥಿಕತೆಯಲ್ಲಿ ಚೇತರಿಕೆ! 7 ವರ್ಷದ ಹಿಂದಿನ ಸ್ಥಿತಿಯಲ್ಲಿ ಭಾರತ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist