Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಪುಲ್ವಾಮಾ ದಾಳಿಗೆ ಒಂದು ವರ್ಷ

ಪುಲ್ವಾಮಾ ದಾಳಿಗೆ ಒಂದು ವರ್ಷ
ಪುಲ್ವಾಮಾ ದಾಳಿಗೆ ಒಂದು ವರ್ಷ

February 14, 2020
Share on FacebookShare on Twitter

ಫೆಬ್ರವರಿ 14, 2019, ಸಿಆರ್‌ಪಿಎಫ್ ಯೋಧರ ಮೇಲೆ ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹತ್ಯಾ ಬಾಂಬರ್ ನಡೆಸಿದ ದಾಳಿ ನಿಜಕ್ಕೂ ಇಡೀ ದೇಶವನ್ನೇ ಭೀತಿಗೊಳಿಸಿತ್ತು. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯಾದ ಜೈಷ್ ಎ ಮೊಹಮದ್ಗೆ ಸೇರಿದ ಆದಿಲ್ ಅಹ್ಮದ್ ದಾರ್ ಎಂಬಾತ, ಸ್ಫೋಟಕ ತುಂಬಿದ ವಾಹನವನ್ನು ಸಿಆರ್‌ಪಿಎಫ್ ವಾಹನಕ್ಕೆ ಡಿಕ್ಕಿ ಹೊಡೆಸಿ, ಸ್ಫೋಟ ಮಾಡಲಾಗಿತ್ತು. 40 ಭಾರತೀಯ ಸೇನಾ ಯೋಧರು ಹುತಾತ್ಮರಾಗಿದ್ದರು. ಕಳೆದ ಒಂದು ವರ್ಷದಿಂದಲೂ ರಾಷ್ಟ್ರೀಯ ತನಿಖಾ ದಳ ಪುಲ್ವಾಮಾ ಬಾಂಬ್ ದಾಳಿ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತಿದೆ. ಆದರೆ ಇಲ್ಲೀವರೆಗೂ ಯಾವುದೇ ಪ್ರಗತಿ ಕಾಣಿಸಿಲ್ಲ. ಕನಿಷ್ಟ ಪಕ್ಷ ಉಗ್ರ ಆದಿಲ್ ಆಹ್ಮದ್ ದಾರ್, ಕಾರ್‌ನಲ್ಲಿ ಅಷ್ಟೊಂದು ದೊಡ್ಡ ಪ್ರಮಾಣದ ಸ್ಫೋಟಕವನ್ನು ತುಂಬಿಕೊಂಡು ಬರಲು ಸಾಧ್ಯವಾಗಿದ್ದು ಹೇಗೆ ಎನ್ನುವ ಪ್ರಶ್ನೆಗೆ ಇನ್ನು ಕೂಡ ಉತ್ತರ ಸಿಕ್ಕಿಲ್ಲ.

ಹೆಚ್ಚು ಓದಿದ ಸ್ಟೋರಿಗಳು

ಸರ್ದಾರ್ ಪಟೇಲ್ vs ಸಾವರ್ಕರ್: ಏನು ಹೇಳುತ್ತೆ ಇತಿಹಾಸ?

ಉದ್ಯಮಿ ಗೌತಮ್ ಅದಾನಿಗೆ Z ಶ್ರೇಣಿ ಭದ್ರತೆ

ರಾಜಕೀಯ ಪಕ್ಷಗಳು ನೀಡುವ ಭರವಸೆಗಳನ್ನು ತಡೆಯಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಪುಲ್ವಾಮಾ ಉಗ್ರ ದಾಳಿಗೆ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಬಳಿಕ ದೇಶದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಆದರೆ ಮೋಸದ ದಾಳಿಗೆ ಬಲಿಯಾದ ಯೋಧರ ವಿಚಾರದಲ್ಲಿ ಯಾವುದೇ ಪ್ರಗತಿ ಕಾಣದಿರುವುದು ನೊಂದ ಕುಟುಂಬಗಳ ದುಃಖ ಇಮ್ಮಡಿಸುವಂತೆ ಮಾಡಿದೆ. ಪುಲ್ವಾಮಾ ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾದ ಶಂಕಿತ ಉಗ್ರರು ಯಾರೂ ಬದುಕಿಲ್ಲದ ಕಾರಣಕ್ಕೆ ಯಾರ ಮೇಲೂ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗ್ತಿದೆ. ಆದರೆ ಇಷ್ಟೊಂದು ದೊಡ್ಡ ಪ್ರಮಾಣದ ಸ್ಫೋಟಕವನ್ನು ಅಂಗಡಿಯಿಂದ ಖರೀದಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ ಹಿರಿಯ ಸೇನಾ ಅಧಿಕಾರಿ. ಜೊತೆಗೆ ಯುದ್ಧದಲ್ಲಿ ಬಳಕೆಯಾಗಿರುವ ಅಮ್ಯುನೇಷನ್ ಅನ್ನು ಮಿಲಿಟರಿ ಸ್ಟೋರ್‌ಗಳಲ್ಲಿ ಶೇಖರಣೆ ಮಾಡಲಾಗಿತ್ತದೆ. ಫಾರೆನ್ಸಿಕ್ ರಿಪೋರ್ಟ್ ಹೊರಬಿದ್ದಿದ್ದು, 25 ಕೆಜಿ ಪ್ಲಾಸ್ಟಿಕ್ ಸ್ಫೋಟಕ ತುಂಬಿದ್ದರು ಎನ್ನುವುದು ಪತ್ತೆಯಾಗಿದೆ.

ಪುಲ್ವಾಮಾ ದಾಳಿಗೂ ಮೊದಲ 10 ದಿನಗಳ ಮುಂಚೆ ಈ ಕಾರ್ ಖರೀದಿ ಮಾಡಿದ್ದರು ಎನ್ನುವು ಅಂಶ ಬಯಲಾಗಿದೆ. ಆದರೆ ಸರ್ಕಾರ, ತನಿಖಾ ಸಂಸ್ಥೆ ನಿಖರ ಸಾಕ್ಷಿ, ಉದ್ದೆಶ ಪತ್ತೆ ಹಚ್ಚುವಲ್ಲಿ ವಿಫಲವಾಗಿದೆ. ಆದರೆ 40 ಸೈನಿಕರು ಹುತಾತ್ಮರಾದ ನೆನಪಿಗಾಗಿ ಇಂದು ಸ್ಮಾರಕ ಉದ್ಘಾಟನೆ ಮಾಡಲಾಗುತ್ತಿದೆ. ಲೆತ್ಪೋರಾ ಕ್ಯಾಂಪ್ನಲ್ಲಿ ಉದ್ಘಾಟನೆ ಮಾಡಲಾಗುತ್ತಿದೆ. ಈ ಮೂಲಕ ನಾವು ಕಳೆದುಕೊಂಡ ಯೋಧರನ್ನು ಸ್ಮರಿಸಲಾಗುತ್ತಿದೆ ಎಂದು ಸಿಆರ್‌ಪಿಎಫ್ ಅಡಿಷನಲ್ ಡೈರೆಕ್ಟರ್ ಜನರಲ್ ಜುಲ್ಫಿಕರ್ ಹಸನ್ ತಿಳಿಸಿದ್ದಾರೆ. ಈ ಸ್ಮಾರಕದಲ್ಲಿ 40 ಮಂದಿ ಹುತಾತ್ಮರಾದ ಯೋಧರ ಹೆಸರಿನ ಜೊತೆ ಅವರ ಫೋಟೋ ಕೂಡ ಹಾಕಲಾಗಿದೆ. ಹುತಾತ್ಮ ಸ್ಮಾರಕಕ್ಕೆ ಸೆವಾ ಮತ್ತು ನಿಶ್ಟಾ ಎಂದು ನಾಮಕರಣ ಮಾಡಲಾಗಿದೆ. ಈ ಸ್ಥಳ ಘಟನೆ ನಡೆದ ಸ್ಥಳದಿಂದ ಕೇವಲ 2 ಕಿಲೋ ಮೀಟರ್ ದೂರವಿದ್ದು, 185 ಬೆಟಾಲಿಯನ್ ಯೋಧರಿಂದ ಗೌರ ಸಲ್ಲಿಸಲಾಗುತ್ತದೆ.

ಪುಲ್ವಾಮಾ ದಾಳಿ ಬಳಿಕ ಭಾರತೀಯ ಸೇನೆ ಬಾಲಾಕೋಟ್ ಮೇಲೆ ನಡೆಸಿದ ವಾಯುದಾಳಿ ಪಾಕಿಸ್ತಾನದಲ್ಲಿ ಅದೆಷ್ಟು ಜನರನ್ನು ಬಲಿ ಪಡೆಯಿತು ಎನ್ನುವ ಮಾಹಿತಿ ಕೂಡ ಬರಲಿಲ್ಲ. ಆದರೆ ಅದೇ ಪುಲ್ವಾಮಾ ದಾಳಿ 2019ರ ಲೋಕಸಭಾ ಚುನಾವಣೆಯಲ್ಲಿ ಹಾಟ್ ಕೇಕ್ ರೀತಿ ಸೇಲಾಯ್ತು. ಪುಲ್ವಾಮಾ ದಾಳಿ ಬಳಿಕ ಬಾಲಕೋಟ್ ಏರ್ಸ್ಟ್ರೈಕ್ ಜನರನ್ನು ಬಿಜೆಪಿಯತ್ತ ವಾಲುವಂತೆ ಮಾಡಿತ್ತು. ಅದೇ ಬಿಸಿಯಲ್ಲಿ ದೇಶಪ್ರೇಮದ ರಾಜಕಾರಣ ಮಾಡಿದ್ದ ಬಿಜೆಪಿ ನಾಯಕರು ಪುಲ್ವಾಮಾ ದಾಳಿಯ ಲಾಭ ಪಡೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. ಇನ್ನು ಮುಂದಾದರೂ ನಾವು ಕಳೆದುಕೊಂಡ ಯೋಧರ ಆತ್ಮಕ್ಕೆ ಶಾಂತಿ ಸಿಗುವಂತಾಗಬೇಕಿದೆ. ಕೇವಲ ರಾಜಕೀಯ ಪಡೆದುಕೊಂಡು ಸುಮ್ಮನಾದರೆ ದೇವರು ಕೂಡ ಮೆಚ್ಚುವುದಿಲ್ಲ ಎನಿಸುತ್ತದೆ.

RS 500
RS 1500

SCAN HERE

[elfsight_youtube_gallery id="4"]

don't miss it !

ಗಣೇಶ ಹಬ್ಬಕ್ಕೆ ನಿರ್ಬಂಧ ಹೇರಿದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ :  ಪ್ರಮೋದ್ ಮುತಾಲಿಕ್
ಕರ್ನಾಟಕ

ಸರ್ಕಾರದ ಹೊಣೆಗೇಡಿತನವೇ ವೀರಸಾರ್ವಕರ್‌ ಅವಮಾನಕ್ಕೆ ಕಾರಣ : ಪ್ರಮೋದ್‌ ಮುತಾಲಿಕ್‌

by ಪ್ರತಿಧ್ವನಿ
August 17, 2022
ಮಾಸ್ಕ್‌ ಧರಿಸುವ ವಿಷಯದಲ್ಲಿ ಉದಾಸೀನ ಬೇಡ: ಸಚಿವ ಸುಧಾಕರ್
ಕರ್ನಾಟಕ

ಮಾಸ್ಕ್‌ ಧರಿಸುವ ವಿಷಯದಲ್ಲಿ ಉದಾಸೀನ ಬೇಡ: ಸಚಿವ ಸುಧಾಕರ್

by ಪ್ರತಿಧ್ವನಿ
August 11, 2022
ಸಿಎಂ ಬದಲಾವಣೆ ಇಲ್ಲ, ರಾಜ್ಯಾಧ್ಯಕ್ಷರು ಬದಲಾಗಬಹುದು : ಬಿ.ಎಸ್‌.ಯಡಿಯೂರಪ್ಪ
ಕರ್ನಾಟಕ

ಯಾವುದೇ ಕಾರಣಕ್ಕೂ ಬೇರೆ ಪಕ್ಷ ಅಧಿಕಾರಕ್ಕೆ ಬರಲು ಬಿಡಲ್ಲ : ಬಿ.ಎಸ್‌ ಯಡಿಯೂರಪ್ಪ

by ಪ್ರತಿಧ್ವನಿ
August 17, 2022
ಸಿಬಿಐ ಕಚೇರಿಯನ್ನು ನನ್ನ ಮನೆಯಲ್ಲೇ ನಿರ್ಮಿಸಲಿ: ಕೇಂದ್ರ ಸರ್ಕಾರದ ವಿರುದ್ಧ ತೇಜಸ್ವಿ ಯಾದವ್‌ ವ್ಯಂಗ್ಯ
ದೇಶ

ಸಿಬಿಐ ಕಚೇರಿಯನ್ನು ನನ್ನ ಮನೆಯಲ್ಲೇ ನಿರ್ಮಿಸಲಿ: ಕೇಂದ್ರ ಸರ್ಕಾರದ ವಿರುದ್ಧ ತೇಜಸ್ವಿ ಯಾದವ್‌ ವ್ಯಂಗ್ಯ

by ಪ್ರತಿಧ್ವನಿ
August 12, 2022
ಪಕ್ಷದಲ್ಲಿ ತುರ್ತು ಬದಲಾವಣೆ ಅಗತ್ಯ: ಸೋನಿಯಾ ಗಾಂಧಿ
ದೇಶ

ಸೋನಿಯಾ ಗಾಂಧಿಗೆ ಮತ್ತೆ ಕೊರೊನಾ ಪಾಸಿಟಿವ್!‌

by ಪ್ರತಿಧ್ವನಿ
August 13, 2022
Next Post
ಎರಡು ನಾಪತ್ತೆ ಪ್ರಕರಣ ಭೇದಿಸಲಾಗದ ಅಮಿತ್ ಶಾ ಉಕ್ಕಿನ ಮನುಷ್ಯ ಪಟೇಲರಿಗೆ ಸಮವೇ? 

ಎರಡು ನಾಪತ್ತೆ ಪ್ರಕರಣ ಭೇದಿಸಲಾಗದ ಅಮಿತ್ ಶಾ ಉಕ್ಕಿನ ಮನುಷ್ಯ ಪಟೇಲರಿಗೆ ಸಮವೇ? 

ಟ್ರೋಲಿಂಗ್ ಓಕೆ

ಟ್ರೋಲಿಂಗ್ ಓಕೆ, ಆದರೆ ಸಭ್ಯತೆಯ ಗೆರೆ ದಾಟುವುದು ಯಾಕೆ?

ಕೊಡಗಿನಲ್ಲಿ  ಭೂ ಪರಿವರ್ತನೆಗೆ  ಅಸ್ತು ಎಂದ ಸರ್ಕಾರ ; ಪರಿಣಾಮವೇನು ಗೊತ್ತೇ?

ಕೊಡಗಿನಲ್ಲಿ  ಭೂ ಪರಿವರ್ತನೆಗೆ  ಅಸ್ತು ಎಂದ ಸರ್ಕಾರ ; ಪರಿಣಾಮವೇನು ಗೊತ್ತೇ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist